<p>ಕೆಲವು ಬಾಬಾಗಳು, -ಸ್ವಾಮಿಗಳು ಕಾವಿ ಹೊದ್ದು ಸರ್ವಸಂಗ ಪರಿತ್ಯಾಗಿಗಳೆಂದು ಹೇಳಿಕೊಂಡರೂ ಅವರಿಗೆ ರಾಜಕೀಯ ಸಖ್ಯ ಇರುವುದನ್ನು ಬಹಿರಂಗವಾಗಿ ಅವರೇ ತೋರಿಸಿಕೊಳ್ಳುತ್ತಾರೆ.<br /> <br /> ಅವರಲ್ಲಿ ಪ್ರಮುಖರು ಬಾಬಾ ರಾಮದೇವ್. ಅವರೊಂದಿಗೆ ಇನ್ನೂ ಹಲವರು ಸ್ವಾಮಿಗಳು ಇದ್ದಾರೆ. ಧರ್ಮ ಅಥವಾ ಭಾರತೀಯ ಸಂಸ್ಕೃತಿಯ ಹೆಸರಲ್ಲಿ ನಡೆಸುವ ಮಹೋತ್ಸವ, ರಾಷ್ಟ್ರೀಯತೆ ಜಾಗೃತಿಯ ನೆಪದಲ್ಲಿ ನಡೆಸುವ ಬೃಹತ್ ಸಭೆ ಸಮಾರಂಭಗಳ ಮೇಲೆಯೂ ಚುನಾವಣಾ ಆಯೋಗ ಕಣ್ಣು ಇಡಬೇಕಾದುದು ಅತೀ ಅಗತ್ಯ. <br /> <br /> ರಾಮದೇವ್ ಅಂತೂ ತಮ್ಮ ಪ್ರತೀ ಸಭೆಯಲ್ಲೂ ಕಾಂಗ್ರೆಸ್ಸನ್ನು ನೇರವಾಗಿ ಹಳಿಯುವುದು ಮತ್ತು ಬಿಜೆಪಿ ಯನ್ನು ಹೊಗಳುವುದನ್ನು ಮರೆಯುವುದಿಲ್ಲ. ರಾಮದೇವ್ ಅವರ ‘ಭಾರತ್ ಸ್ವಾಭಿಮಾನ್ ಟ್ರಸ್ಟ್’ನ ಪತ್ರಿಕಾ ಪ್ರಕಟಣೆಯಲ್ಲಿ ಅವರೇ ಹೇಳಿಕೊಂಡಿರುವಂತೆ ಈ ತಿಂಗಳ 17 ರಿಂದ 23ರ ವರೆಗೆ ‘ಯೋಗ - ಸಪ್ತಾಹ ’ ನಡೆಸಿ ಅದರಲ್ಲಿ ಹತ್ತು ಕೋಟಿ ಜನರು ಭಾಗವಹಿಸಿ ನೂತನ ಚರಿತ್ರೆ ನಿರ್ಮಾಣ ಮಾಡಲಿದ್ದಾರಂತೆ.<br /> <br /> ಅವರ ಪತಂಜಲಿ ಯೋಗ ಟ್ರಸ್ಟ್ ಸಹಾ ಇದರಲ್ಲಿ ಪಾಲುಗೊಳ್ಳಲಿದೆ. ಭಾರತ್ ಸ್ವಾಭಿಮಾನ್ ಟ್ರಸ್ಟ್ ಮತ್ತೂ ಪತಂಜಲಿ ಟ್ರಸ್ಟ್ ಇವೆರಡೂ ಬಿಜೆಪಿ ಪರ ಸಹಾನೂಭೂತಿ ಹೊಂದಿರುವಂತಹವೇ ! ಹಾಗಿರುವಾಗ ಲೋಕಸಭೆ ಚುನಾವಣೆ ವೇಳೆ ಇವರ ಬೃಹತ್ ಯೋಗ ಮತ್ತೂ ರಾಷ್ಟ್ರೀಯತೆ ಜಾಗೃತಿ ಸಪ್ತಾಹಗಳನ್ನು ಇಡೀ ದೇಶದಲ್ಲಿ ಆಯೋಜಿಸಿರುವುದು ಬಿಜೆಪಿಯ ಪರೋಕ್ಷ ಪ್ರಚಾರಕ್ಕೆ ಇರಬಹುದೇ? ಸಂಶಯ ಮೂಡುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೆಲವು ಬಾಬಾಗಳು, -ಸ್ವಾಮಿಗಳು ಕಾವಿ ಹೊದ್ದು ಸರ್ವಸಂಗ ಪರಿತ್ಯಾಗಿಗಳೆಂದು ಹೇಳಿಕೊಂಡರೂ ಅವರಿಗೆ ರಾಜಕೀಯ ಸಖ್ಯ ಇರುವುದನ್ನು ಬಹಿರಂಗವಾಗಿ ಅವರೇ ತೋರಿಸಿಕೊಳ್ಳುತ್ತಾರೆ.<br /> <br /> ಅವರಲ್ಲಿ ಪ್ರಮುಖರು ಬಾಬಾ ರಾಮದೇವ್. ಅವರೊಂದಿಗೆ ಇನ್ನೂ ಹಲವರು ಸ್ವಾಮಿಗಳು ಇದ್ದಾರೆ. ಧರ್ಮ ಅಥವಾ ಭಾರತೀಯ ಸಂಸ್ಕೃತಿಯ ಹೆಸರಲ್ಲಿ ನಡೆಸುವ ಮಹೋತ್ಸವ, ರಾಷ್ಟ್ರೀಯತೆ ಜಾಗೃತಿಯ ನೆಪದಲ್ಲಿ ನಡೆಸುವ ಬೃಹತ್ ಸಭೆ ಸಮಾರಂಭಗಳ ಮೇಲೆಯೂ ಚುನಾವಣಾ ಆಯೋಗ ಕಣ್ಣು ಇಡಬೇಕಾದುದು ಅತೀ ಅಗತ್ಯ. <br /> <br /> ರಾಮದೇವ್ ಅಂತೂ ತಮ್ಮ ಪ್ರತೀ ಸಭೆಯಲ್ಲೂ ಕಾಂಗ್ರೆಸ್ಸನ್ನು ನೇರವಾಗಿ ಹಳಿಯುವುದು ಮತ್ತು ಬಿಜೆಪಿ ಯನ್ನು ಹೊಗಳುವುದನ್ನು ಮರೆಯುವುದಿಲ್ಲ. ರಾಮದೇವ್ ಅವರ ‘ಭಾರತ್ ಸ್ವಾಭಿಮಾನ್ ಟ್ರಸ್ಟ್’ನ ಪತ್ರಿಕಾ ಪ್ರಕಟಣೆಯಲ್ಲಿ ಅವರೇ ಹೇಳಿಕೊಂಡಿರುವಂತೆ ಈ ತಿಂಗಳ 17 ರಿಂದ 23ರ ವರೆಗೆ ‘ಯೋಗ - ಸಪ್ತಾಹ ’ ನಡೆಸಿ ಅದರಲ್ಲಿ ಹತ್ತು ಕೋಟಿ ಜನರು ಭಾಗವಹಿಸಿ ನೂತನ ಚರಿತ್ರೆ ನಿರ್ಮಾಣ ಮಾಡಲಿದ್ದಾರಂತೆ.<br /> <br /> ಅವರ ಪತಂಜಲಿ ಯೋಗ ಟ್ರಸ್ಟ್ ಸಹಾ ಇದರಲ್ಲಿ ಪಾಲುಗೊಳ್ಳಲಿದೆ. ಭಾರತ್ ಸ್ವಾಭಿಮಾನ್ ಟ್ರಸ್ಟ್ ಮತ್ತೂ ಪತಂಜಲಿ ಟ್ರಸ್ಟ್ ಇವೆರಡೂ ಬಿಜೆಪಿ ಪರ ಸಹಾನೂಭೂತಿ ಹೊಂದಿರುವಂತಹವೇ ! ಹಾಗಿರುವಾಗ ಲೋಕಸಭೆ ಚುನಾವಣೆ ವೇಳೆ ಇವರ ಬೃಹತ್ ಯೋಗ ಮತ್ತೂ ರಾಷ್ಟ್ರೀಯತೆ ಜಾಗೃತಿ ಸಪ್ತಾಹಗಳನ್ನು ಇಡೀ ದೇಶದಲ್ಲಿ ಆಯೋಜಿಸಿರುವುದು ಬಿಜೆಪಿಯ ಪರೋಕ್ಷ ಪ್ರಚಾರಕ್ಕೆ ಇರಬಹುದೇ? ಸಂಶಯ ಮೂಡುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>