<p><strong>ಹುಬ್ಬಳ್ಳಿ:</strong> ಎಲ್ಲ ಗೊಂದಲಗಳೂ ಮಾಯವಾಗಿ ಜಗದೀಶ ಶೆಟ್ಟರ್ ಗುರುವಾರ ರಾಜ್ಯದ 21ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದು ಖಚಿತವಾಗಿರುವುದರಿಂದ ಅವಳಿನಗರವೂ ಸೇರಿದಂತೆ ಅಖಂಡ ಧಾರವಾಡ (ಹಾವೇರಿ ಮತ್ತು ಗದಗ ಸೇರಿ) ಜಿಲ್ಲೆಯಿಂದ 20,000ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಬುಧವಾರ ರಾತ್ರಿ ರಾಜಧಾನಿಯತ್ತ ಹೊರಟಿದ್ದಾರೆ.<br /> <br /> ಹುಬ್ಬಳ್ಳಿ-ಧಾರವಾಡದಲ್ಲಿ ಪ್ರತಿ ವಾರ್ಡ್ಗೆ ಎರಡರಂತೆ ಒಟ್ಟಾರೆ 130 ಬಸ್ಸುಗಳು ಹೊರಟವು. ಅದೇ ರೀತಿ ನೂರಾರು ಖಾಸಗಿ ವಾಹನಗಳೂ ರಾಜಧಾನಿಗೆ ತೆರಳಿದವು. ಬೆಂಗಳೂರಿಗೆ ಹೊರಡುವ ಎಲ್ಲ ರೈಲುಗಳೂ ಬಿಜೆಪಿ ಕಾರ್ಯಕರ್ತರನ್ನೇ ಹೆಚ್ಚಿನ ಪ್ರಮಾಣದಲ್ಲಿ ತುಂಬಿಕೊಂಡಿದ್ದವು.<br /> <br /> `ಹುಬ್ಬಳ್ಳಿ ಕಡೆಯಿಂದ ಹೋಗುವ ಎಲ್ಲ ಕಾರ್ಯಕರ್ತರಿಗೆ ತುಮಕೂರಿನಲ್ಲಿ ಸ್ನಾನಾದಿಗಳಿಗೆ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ಎಲ್ಲ ಬಸ್ಸುಗಳು ನೇರವಾಗಿ ಅರಮನೆ ಅಂಗಳದ ಗಾಯತ್ರಿ ವಿಹಾರಕ್ಕೆ ತೆರಳಲಿವೆ. ಅಲ್ಲಿಯೇ ಬಂದವರಿಗೆಲ್ಲ ಉಪಾಹಾರ-ಊಟ ವ್ಯವಸ್ಥೆ ಮಾಡಲಾಗಿದೆ. ಗಾಯತ್ರಿ ವಿಹಾರದಲ್ಲೇ ಬೃಹತ್ ಸ್ಕ್ರೀನ್ ಅಳವಡಿಸಿದ್ದು, ಪ್ರಮಾಣ ವಚನ ಸ್ವೀಕಾರ ಸಮಾರಂಭದ ನೇರ ಪ್ರಸಾರವನ್ನು ಕಾರ್ಯಕರ್ತರು ಅಲ್ಲಿಯೇ ವೀಕ್ಷಿಸಲಿದ್ದಾರೆ~ ಎಂದು ಮಹಾನಗರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಮಹೇಶ ಟೆಂಗಿನಕಾಯಿ `ಪ್ರಜಾವಾಣಿ~ಗೆ ತಿಳಿಸಿದರು.<br /> <br /> `ಪ್ರಮಾಣವಚನ ಸ್ವೀಕಾರ ಸಮಾರಂಭ ಮುಗಿದ ಬಳಿಕ ಗಾಯತ್ರಿ ವಿಹಾರಕ್ಕೆ ಆಗಮಿಸುವ ಶೆಟ್ಟರ್, ಕಾರ್ಯಕರ್ತರ ಅಭಿನಂದನೆ ಸ್ವೀಕರಿಸಲಿದ್ದಾರೆ~ ಎಂದೂ ಅವರು ಮಾಹಿತಿ ನೀಡಿದರು. `ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಶೆಟ್ಟರ್ ತವರಿಗೆ 21ರಂದು ಆಗಮಿಸುವ ಸಾಧ್ಯತೆ ಇದೆ. ಬೆಂಗಳೂರಿನಿಂದ ವಾಪಸ್ಸಾದ ನಂತರ ಸ್ವಾಗತಕ್ಕೆ ಸಿದ್ಧತೆ ನಡೆಸಲಾಗುವುದು ಎಂದು ಅವರು ಹೇಳಿದರು.<br /> <br /> ಶಿಲ್ಪಾ ಶೆಟ್ಟರ್ ಅವರ ಮಹಿಳಾ ಸಂಘಟನೆಗಳ ಪ್ರತಿನಿಧಿಗಳನ್ನು ಕರೆದೊಯ್ಯಲು ಬಾದಾಮಿಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ನಿತ್ಯ ತಮ್ಮ ಜೊತೆ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದ ಶಿಲ್ಪಾ ಅವರ ಜೀವನದ ಅವಿಸ್ಮರಣೀಯ ಘಟನೆಗೆ ಸಾಕ್ಷಿಯಾಗಲು ಈ ಗೆಳೆತಿಯರು ಹೊರಟಿದ್ದಾರೆ. ಶೆಟ್ಟರ್ ಸಿ.ಎಂ ಆಗುವುದನ್ನು ಖಚಿತಪಡಿಸಿಕೊಂಡ ಪೊಲೀಸ್ ಆಯುಕ್ತ ಡಾ.ಕೆ.ರಾಮಚಂದ್ರರಾವ್ ಬುಧವಾರ ಅವರ ಮನೆ ಹಾಗೂ ಸುತ್ತಲಿನ ರಸ್ತೆಗಳಲ್ಲಿ ರಕ್ಷಣಾ ವ್ಯವಸ್ಥೆ ಪರಿಶೀಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ಎಲ್ಲ ಗೊಂದಲಗಳೂ ಮಾಯವಾಗಿ ಜಗದೀಶ ಶೆಟ್ಟರ್ ಗುರುವಾರ ರಾಜ್ಯದ 21ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದು ಖಚಿತವಾಗಿರುವುದರಿಂದ ಅವಳಿನಗರವೂ ಸೇರಿದಂತೆ ಅಖಂಡ ಧಾರವಾಡ (ಹಾವೇರಿ ಮತ್ತು ಗದಗ ಸೇರಿ) ಜಿಲ್ಲೆಯಿಂದ 20,000ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಬುಧವಾರ ರಾತ್ರಿ ರಾಜಧಾನಿಯತ್ತ ಹೊರಟಿದ್ದಾರೆ.<br /> <br /> ಹುಬ್ಬಳ್ಳಿ-ಧಾರವಾಡದಲ್ಲಿ ಪ್ರತಿ ವಾರ್ಡ್ಗೆ ಎರಡರಂತೆ ಒಟ್ಟಾರೆ 130 ಬಸ್ಸುಗಳು ಹೊರಟವು. ಅದೇ ರೀತಿ ನೂರಾರು ಖಾಸಗಿ ವಾಹನಗಳೂ ರಾಜಧಾನಿಗೆ ತೆರಳಿದವು. ಬೆಂಗಳೂರಿಗೆ ಹೊರಡುವ ಎಲ್ಲ ರೈಲುಗಳೂ ಬಿಜೆಪಿ ಕಾರ್ಯಕರ್ತರನ್ನೇ ಹೆಚ್ಚಿನ ಪ್ರಮಾಣದಲ್ಲಿ ತುಂಬಿಕೊಂಡಿದ್ದವು.<br /> <br /> `ಹುಬ್ಬಳ್ಳಿ ಕಡೆಯಿಂದ ಹೋಗುವ ಎಲ್ಲ ಕಾರ್ಯಕರ್ತರಿಗೆ ತುಮಕೂರಿನಲ್ಲಿ ಸ್ನಾನಾದಿಗಳಿಗೆ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ಎಲ್ಲ ಬಸ್ಸುಗಳು ನೇರವಾಗಿ ಅರಮನೆ ಅಂಗಳದ ಗಾಯತ್ರಿ ವಿಹಾರಕ್ಕೆ ತೆರಳಲಿವೆ. ಅಲ್ಲಿಯೇ ಬಂದವರಿಗೆಲ್ಲ ಉಪಾಹಾರ-ಊಟ ವ್ಯವಸ್ಥೆ ಮಾಡಲಾಗಿದೆ. ಗಾಯತ್ರಿ ವಿಹಾರದಲ್ಲೇ ಬೃಹತ್ ಸ್ಕ್ರೀನ್ ಅಳವಡಿಸಿದ್ದು, ಪ್ರಮಾಣ ವಚನ ಸ್ವೀಕಾರ ಸಮಾರಂಭದ ನೇರ ಪ್ರಸಾರವನ್ನು ಕಾರ್ಯಕರ್ತರು ಅಲ್ಲಿಯೇ ವೀಕ್ಷಿಸಲಿದ್ದಾರೆ~ ಎಂದು ಮಹಾನಗರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಮಹೇಶ ಟೆಂಗಿನಕಾಯಿ `ಪ್ರಜಾವಾಣಿ~ಗೆ ತಿಳಿಸಿದರು.<br /> <br /> `ಪ್ರಮಾಣವಚನ ಸ್ವೀಕಾರ ಸಮಾರಂಭ ಮುಗಿದ ಬಳಿಕ ಗಾಯತ್ರಿ ವಿಹಾರಕ್ಕೆ ಆಗಮಿಸುವ ಶೆಟ್ಟರ್, ಕಾರ್ಯಕರ್ತರ ಅಭಿನಂದನೆ ಸ್ವೀಕರಿಸಲಿದ್ದಾರೆ~ ಎಂದೂ ಅವರು ಮಾಹಿತಿ ನೀಡಿದರು. `ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಶೆಟ್ಟರ್ ತವರಿಗೆ 21ರಂದು ಆಗಮಿಸುವ ಸಾಧ್ಯತೆ ಇದೆ. ಬೆಂಗಳೂರಿನಿಂದ ವಾಪಸ್ಸಾದ ನಂತರ ಸ್ವಾಗತಕ್ಕೆ ಸಿದ್ಧತೆ ನಡೆಸಲಾಗುವುದು ಎಂದು ಅವರು ಹೇಳಿದರು.<br /> <br /> ಶಿಲ್ಪಾ ಶೆಟ್ಟರ್ ಅವರ ಮಹಿಳಾ ಸಂಘಟನೆಗಳ ಪ್ರತಿನಿಧಿಗಳನ್ನು ಕರೆದೊಯ್ಯಲು ಬಾದಾಮಿಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ನಿತ್ಯ ತಮ್ಮ ಜೊತೆ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದ ಶಿಲ್ಪಾ ಅವರ ಜೀವನದ ಅವಿಸ್ಮರಣೀಯ ಘಟನೆಗೆ ಸಾಕ್ಷಿಯಾಗಲು ಈ ಗೆಳೆತಿಯರು ಹೊರಟಿದ್ದಾರೆ. ಶೆಟ್ಟರ್ ಸಿ.ಎಂ ಆಗುವುದನ್ನು ಖಚಿತಪಡಿಸಿಕೊಂಡ ಪೊಲೀಸ್ ಆಯುಕ್ತ ಡಾ.ಕೆ.ರಾಮಚಂದ್ರರಾವ್ ಬುಧವಾರ ಅವರ ಮನೆ ಹಾಗೂ ಸುತ್ತಲಿನ ರಸ್ತೆಗಳಲ್ಲಿ ರಕ್ಷಣಾ ವ್ಯವಸ್ಥೆ ಪರಿಶೀಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>