<p><strong>ತೋಂಟಾಪುರ (ತಾ.ಸಿಂದಗಿ): </strong>ಆಲಮೇಲದಿಂದ ಎಂಟು ಕಿ.ಮೀ. ದೂರದ ತೋಂಟಾಪುರ ಗ್ರಾಮದಲ್ಲಿ ಜನರು ನೀರಿಗಾಗಿ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.<br /> <br /> ಇಲ್ಲಿ ಎರಡು ಬೋರ್ವೆಲ್ಗಳಿದ್ದು, ಅದರಲ್ಲಿ ಒಂದು ಕೆಟ್ಟಿದೆ. ನಾಲ್ಕೈದು ತಿಂಗಳಿನಿಂದ ದುರಸ್ತಿ ಕಂಡಿಲ್ಲ. ಇರುವ ಇನ್ನೊಂದು ಬೋರ್ವೆಲ್ನಿಂದ ನೀರು ಪಂಪ್ ಮಾಡಲು ಇಲ್ಲಿಯ ಜನ ಭಗೀರಥ ಪ್ರಯತ್ನ ಮಾಡುತ್ತಿದ್ದಾರೆ.<br /> `ಬೋರ್ವೆಲ್ನಿಂದ ಒಂದು ಕೊಡ ನೀರು ಹೊರತೆಗೆಯಲು ಕನಿಷ್ಟ 15 ನಿಮಿಷ ಸಮಯ ಹಿಡಿಯುತ್ತದೆ. ಸಲೀಸಾಗಿ ನೀರು ಬರುವುದಿಲ್ಲ. ಹನಿಹನಿಯಾಗಿ ನೀರು ಹೊರಬಂದು ಒಂದು ಕೊಡ ತುಂಬಿದರೆ ಪಂಪ್ಮಾಡಿ ಮಾಡಿ ಕೈ ಸೋತು ಹೋಗುತ್ತವೆ~ ಎಂದು ಅಂಗೈ ತೋರಿಸುತ್ತಾರೆ ಜನ.<br /> <br /> `ಯಪ್ಪಾ ನೀರು ಭೂಮಿಯೊಳಗ ಅದಾವ. ಆದ್ರ, ಇಲ್ಲಿಯ ಬೋರ್ವೆಲ್ ರಿಪೇರಿ ಮಾಡಿಸಿಕೊಡ್ರಿ ಅಂತಾ ಹೇಳಿ ಸುಸ್ತಾಗಿವಿ. ಆದ್ರೂ ಅವರು ಬಂದು ರಿಪೇರಿ ಮಾಡಾಕ ತಯಾರಿಲ್ಲ. ನೀವರ ಹೇಳಿ ನಮ್ಮ ಈ ತಾಪತ್ರಯ ತಪ್ಪಸ್ರೀ~ ಎಂದು ಶಾರದಾಬಾಯಿ ಬಡಿಗೇರ ಗೋಗೆದರು.<br /> <br /> `ಊರಾಗಿನ ಈ ಒಂದು ಬೋರ್ವೆಲ್ ಬಿಟ್ರ ಅಡವಿ ಅಡವಿ, ಮೆಟಗಿ ತಿರುಗ್ಯಾಡಿ ನೀರ ತರಬೇಕ್ರಿ ,ಆ ತ್ರಾಸಕ್ಕಿಂತ ಇಲ್ಲೇ ಈ ಬೋರ್ವೆಲ್ನಿಂದ ಪಂಪ್ ಹೊಡೆದು ನೀರು ತರಾಕ ಹತ್ತೀವಿ~ ಎಂದು ದೋಳವ್ವ ಅಚ್ಚಿಗಾಂವ ಸೋತ ಕೈಗಳನ್ನು ದಿಟ್ಟಿಸುತ್ತ ಹೇಳಿದರು.<br /> <br /> ಇನ್ನೊಂದು ಕಡೆ ಬೋರ್ವೆಲ್ನ ಹ್ಯಾಂಡ್ ಮುರಿದು ತಿಂಗಳು ಗತಿಸಿದ್ದರೂ ಅದಕ್ಕೆ ಒಂದು ಹ್ಯಾಂಡ್ ಅಳವಡಿಸಿಲ್ಲ. ಆದ್ದರಿಂದ ಇಲ್ಲಿನ ಮಹಿಳೆಯರು ಕಬ್ಬಿಣದ ಹ್ಯಾಂಡಲ್ ತರಹ ಕಟ್ಟಿಗೆಯನ್ನು ಬೋರ್ವೆಲ್ಗೆ ಹಾಕಿ ಪಂಪ್ಮಾಡಿ ನೀರು ತೆಗೆಯುತ್ತಿದ್ದ ದೃಶ್ಯ ಕಂಡು ಬಂತು.<br /> <br /> `ಈ ಪುಟ್ಟ ಗ್ರಾಮದಲ್ಲಿ ಸಾವಿರ ಜನಸಂಖ್ಯೆ ಇದೆ. ಈ ಎರಡು ಬೋರ್ವೆಲ್ ಸುವ್ಯವಸ್ಥಿತ ಸ್ಥಿತಿಯಲ್ಲಿಟ್ಟರೆ ನಮ್ಮ ಊರಿಗೆ ನೀರು ಸಾಕಾಗುತ್ತೆ. ಆದರೆ, ಎಷ್ಟು ಮನವಿ ಕೊಟ್ಟರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ~ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಂಕರ ತೋಂಟಾಪೂರ ದೂರಿದರು.<br /> <br /> ಇಲ್ಲಿಂದ ಒಂದು ಕಿ.ಮೀ. ದೂರದಲ್ಲಿ ಪಂಚಾಯಿತಿಯಿಂದ ಬೋರ್ವೆಲ್ ಹಾಕಿ ಪೈಪ್ಲೈನ್ ಮೂಲಕ ನೀರು ತರುವ ಯೋಜನೆ ರೂಪಿಸಲಾಗಿದೆ. ಅಲ್ಲಿ ಬೋರ್ವೆಲ್ ಕೊರೆಸಿ, ಅದಕ್ಕೆ ಮೋಟಾರ್ ಅಳವಡಿಸಿ ಎಂಟು ವರ್ಷಗಳೇ ಗತಿಸಿವೆ. ಆದರೆ, ಇಲ್ಲಿಂದ ಗ್ರಾಮದವರೆಗೆ ಪೈಪ್ಲೈನ್ ಇನ್ನೂ ಅಳವಡಿಸಿಲ್ಲ. ಈ ಯೋಜನೆ ಅನುಷ್ಠಾನಗೊಂಡರೆ ನಮ್ಮೂರಿಗೆ ನೀರಿನ ಕೊರತೆ ಎದುರಾಗದು ಎನ್ನುತ್ತಾರೆ ಅವರು.<br /> <br /> `ನಮ್ಮೂರಲ್ಲಿ ಅಂತರ್ಜಲ ಕೊರತೆ ಇಲ್ಲ. ಇಲ್ಲಿ ಇನ್ನೆರಡು ಬೋರ್ವೆಲ್ ಕೊರೆಸಿ ನೀರಿನ ಸಮಸ್ಯೆ ಪರಿಹರಿಸಬೇಕು~ ಎಂದು ಗ್ರಾಮ ಪಂಚಾಯಿತಿ ಸದಸ್ಯೆ ರೇಣುಕಾ ತೋಂಟಾಪೂರ, ಸ್ಥಳೀಯರಾದ ಕಾಂತಪ್ಪ ಬಡಿಗೇರ, ಲಕ್ಷ್ಮಣ ಗೂಗದೊಡ್ಡಿ, ಶಿವಪ್ಪ ಬಿರಾದಾರ, ನಿಂಗಪ್ಪ ಬಿರಾದಾರ, ಮಾಳಪ್ಪ ಬಿರಾದಾರ ಮೊದಲಾದವರು ಮನವಿ ಮಾಡಿದರು.<br /> <br /> ರಾಮನಹಳ್ಳಿ: ಇನ್ನು ಸಮೀಪದ ರಾಮನಹಳ್ಳಿ ಗ್ರಾಮದಲ್ಲೂ ಸಿಹಿ ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ಈ ಗ್ರಾಮದಲ್ಲಿ ಎರಡು ಸಾವಿರ ಜನಸಂಖ್ಯೆ ಇದ್ದು, ಇಡೀ ಗ್ರಾಮಕ್ಕೇ ಇರಡು ಬೋರ್ವೆಲ್ಗಳಿವೆ. ಗ್ರಾಮದಲ್ಲಿ ನೀರು ವಿತರಣಾ ವ್ಯವಸ್ಥೆ ಇದೆ. ಆದರೆ, ವಿದ್ಯುತ್ ಸಮಸ್ಯೆಯಿಂದ ನಲ್ಲಿ ನೀರು ಬರುತ್ತಿಲ್ಲ.<br /> <br /> ಸಿಹಿ ನೀರು ಪಡೆಯಲು ಇಲ್ಲಿಯ ಜನ ಗ್ರಾಮದಿಂದ ಒಂದು ಕಿ.ಮೀ. ದೂರದ ಶಾಲೆಯಲ್ಲಿರುವ ಬೋರ್ವೆಲ್ಗೆ ಹೋಗುತ್ತಾರೆ. ಅಲ್ಲಿಂದ ನೀರು ತರುತ್ತಿದ್ದಾರೆ. ಇದು ಗ್ರಾಮದ ಜನತೆಗೆ ತೀವ್ರ ತೊಂದರೆಯಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ವಿಠ್ಠಲ ಕೋಟಿ ಹೇಳುತ್ತಾರೆ.<br /> <br /> <strong>ಮಾಹಿತಿಗೆ ಸಂಪರ್ಕಿಸಿ</strong><br /> ವಿಜಾಪುರ ಜಿಲ್ಲೆಯಲ್ಲಿ ಈಗ ಭೀಕರ ಬರ. ಜೀವಜಲ ಬತ್ತಿ ಬರಿದಾಗುತ್ತಿದೆ. ಜನತೆ ಎದುರಿಸುತ್ತಿರುವ ಸಮಸ್ಯೆಯ ಮೇಲೆ `ಪ್ರಜಾವಾಣಿ~ಯ ಕ್ಷಕಿರಣ `ಬರದ ನಾಡಿನ ಬವಣೆ~ ಅಂಕಣ. ನಿಮ್ಮೂರಿನ ಸಮಸ್ಯೆ ಪರಿಹಾರಕ್ಕೆ ಈ ಅಂಕಣ ಸೂಕ್ತ ವೇದಿಕೆ. <br /> <br /> <strong>ನಮ್ಮ ವಿಳಾಸ</strong>: ಜಿಲ್ಲಾ ವರದಿಗಾರರು, ಪ್ರಜಾವಾಣಿ, ಸಾಂಗ್ಲಿಕರ ಕಾಂಪ್ಲೆಕ್ಸ್, ಸಕಾಫ್ ರೋಜಾ, ಕೇಂದ್ರ ಬಸ್ ನಿಲ್ದಾಣದ ಹತ್ತಿರ. ವಿಜಾಪುರ. ದೂರವಾಣಿ ಸಂಖ್ಯೆ: 08352-221515, ಮೊಬೈಲ್: 9448470153 (ಗಣೇಶ ಚಂದನಶಿವ). <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೋಂಟಾಪುರ (ತಾ.ಸಿಂದಗಿ): </strong>ಆಲಮೇಲದಿಂದ ಎಂಟು ಕಿ.ಮೀ. ದೂರದ ತೋಂಟಾಪುರ ಗ್ರಾಮದಲ್ಲಿ ಜನರು ನೀರಿಗಾಗಿ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.<br /> <br /> ಇಲ್ಲಿ ಎರಡು ಬೋರ್ವೆಲ್ಗಳಿದ್ದು, ಅದರಲ್ಲಿ ಒಂದು ಕೆಟ್ಟಿದೆ. ನಾಲ್ಕೈದು ತಿಂಗಳಿನಿಂದ ದುರಸ್ತಿ ಕಂಡಿಲ್ಲ. ಇರುವ ಇನ್ನೊಂದು ಬೋರ್ವೆಲ್ನಿಂದ ನೀರು ಪಂಪ್ ಮಾಡಲು ಇಲ್ಲಿಯ ಜನ ಭಗೀರಥ ಪ್ರಯತ್ನ ಮಾಡುತ್ತಿದ್ದಾರೆ.<br /> `ಬೋರ್ವೆಲ್ನಿಂದ ಒಂದು ಕೊಡ ನೀರು ಹೊರತೆಗೆಯಲು ಕನಿಷ್ಟ 15 ನಿಮಿಷ ಸಮಯ ಹಿಡಿಯುತ್ತದೆ. ಸಲೀಸಾಗಿ ನೀರು ಬರುವುದಿಲ್ಲ. ಹನಿಹನಿಯಾಗಿ ನೀರು ಹೊರಬಂದು ಒಂದು ಕೊಡ ತುಂಬಿದರೆ ಪಂಪ್ಮಾಡಿ ಮಾಡಿ ಕೈ ಸೋತು ಹೋಗುತ್ತವೆ~ ಎಂದು ಅಂಗೈ ತೋರಿಸುತ್ತಾರೆ ಜನ.<br /> <br /> `ಯಪ್ಪಾ ನೀರು ಭೂಮಿಯೊಳಗ ಅದಾವ. ಆದ್ರ, ಇಲ್ಲಿಯ ಬೋರ್ವೆಲ್ ರಿಪೇರಿ ಮಾಡಿಸಿಕೊಡ್ರಿ ಅಂತಾ ಹೇಳಿ ಸುಸ್ತಾಗಿವಿ. ಆದ್ರೂ ಅವರು ಬಂದು ರಿಪೇರಿ ಮಾಡಾಕ ತಯಾರಿಲ್ಲ. ನೀವರ ಹೇಳಿ ನಮ್ಮ ಈ ತಾಪತ್ರಯ ತಪ್ಪಸ್ರೀ~ ಎಂದು ಶಾರದಾಬಾಯಿ ಬಡಿಗೇರ ಗೋಗೆದರು.<br /> <br /> `ಊರಾಗಿನ ಈ ಒಂದು ಬೋರ್ವೆಲ್ ಬಿಟ್ರ ಅಡವಿ ಅಡವಿ, ಮೆಟಗಿ ತಿರುಗ್ಯಾಡಿ ನೀರ ತರಬೇಕ್ರಿ ,ಆ ತ್ರಾಸಕ್ಕಿಂತ ಇಲ್ಲೇ ಈ ಬೋರ್ವೆಲ್ನಿಂದ ಪಂಪ್ ಹೊಡೆದು ನೀರು ತರಾಕ ಹತ್ತೀವಿ~ ಎಂದು ದೋಳವ್ವ ಅಚ್ಚಿಗಾಂವ ಸೋತ ಕೈಗಳನ್ನು ದಿಟ್ಟಿಸುತ್ತ ಹೇಳಿದರು.<br /> <br /> ಇನ್ನೊಂದು ಕಡೆ ಬೋರ್ವೆಲ್ನ ಹ್ಯಾಂಡ್ ಮುರಿದು ತಿಂಗಳು ಗತಿಸಿದ್ದರೂ ಅದಕ್ಕೆ ಒಂದು ಹ್ಯಾಂಡ್ ಅಳವಡಿಸಿಲ್ಲ. ಆದ್ದರಿಂದ ಇಲ್ಲಿನ ಮಹಿಳೆಯರು ಕಬ್ಬಿಣದ ಹ್ಯಾಂಡಲ್ ತರಹ ಕಟ್ಟಿಗೆಯನ್ನು ಬೋರ್ವೆಲ್ಗೆ ಹಾಕಿ ಪಂಪ್ಮಾಡಿ ನೀರು ತೆಗೆಯುತ್ತಿದ್ದ ದೃಶ್ಯ ಕಂಡು ಬಂತು.<br /> <br /> `ಈ ಪುಟ್ಟ ಗ್ರಾಮದಲ್ಲಿ ಸಾವಿರ ಜನಸಂಖ್ಯೆ ಇದೆ. ಈ ಎರಡು ಬೋರ್ವೆಲ್ ಸುವ್ಯವಸ್ಥಿತ ಸ್ಥಿತಿಯಲ್ಲಿಟ್ಟರೆ ನಮ್ಮ ಊರಿಗೆ ನೀರು ಸಾಕಾಗುತ್ತೆ. ಆದರೆ, ಎಷ್ಟು ಮನವಿ ಕೊಟ್ಟರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ~ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಂಕರ ತೋಂಟಾಪೂರ ದೂರಿದರು.<br /> <br /> ಇಲ್ಲಿಂದ ಒಂದು ಕಿ.ಮೀ. ದೂರದಲ್ಲಿ ಪಂಚಾಯಿತಿಯಿಂದ ಬೋರ್ವೆಲ್ ಹಾಕಿ ಪೈಪ್ಲೈನ್ ಮೂಲಕ ನೀರು ತರುವ ಯೋಜನೆ ರೂಪಿಸಲಾಗಿದೆ. ಅಲ್ಲಿ ಬೋರ್ವೆಲ್ ಕೊರೆಸಿ, ಅದಕ್ಕೆ ಮೋಟಾರ್ ಅಳವಡಿಸಿ ಎಂಟು ವರ್ಷಗಳೇ ಗತಿಸಿವೆ. ಆದರೆ, ಇಲ್ಲಿಂದ ಗ್ರಾಮದವರೆಗೆ ಪೈಪ್ಲೈನ್ ಇನ್ನೂ ಅಳವಡಿಸಿಲ್ಲ. ಈ ಯೋಜನೆ ಅನುಷ್ಠಾನಗೊಂಡರೆ ನಮ್ಮೂರಿಗೆ ನೀರಿನ ಕೊರತೆ ಎದುರಾಗದು ಎನ್ನುತ್ತಾರೆ ಅವರು.<br /> <br /> `ನಮ್ಮೂರಲ್ಲಿ ಅಂತರ್ಜಲ ಕೊರತೆ ಇಲ್ಲ. ಇಲ್ಲಿ ಇನ್ನೆರಡು ಬೋರ್ವೆಲ್ ಕೊರೆಸಿ ನೀರಿನ ಸಮಸ್ಯೆ ಪರಿಹರಿಸಬೇಕು~ ಎಂದು ಗ್ರಾಮ ಪಂಚಾಯಿತಿ ಸದಸ್ಯೆ ರೇಣುಕಾ ತೋಂಟಾಪೂರ, ಸ್ಥಳೀಯರಾದ ಕಾಂತಪ್ಪ ಬಡಿಗೇರ, ಲಕ್ಷ್ಮಣ ಗೂಗದೊಡ್ಡಿ, ಶಿವಪ್ಪ ಬಿರಾದಾರ, ನಿಂಗಪ್ಪ ಬಿರಾದಾರ, ಮಾಳಪ್ಪ ಬಿರಾದಾರ ಮೊದಲಾದವರು ಮನವಿ ಮಾಡಿದರು.<br /> <br /> ರಾಮನಹಳ್ಳಿ: ಇನ್ನು ಸಮೀಪದ ರಾಮನಹಳ್ಳಿ ಗ್ರಾಮದಲ್ಲೂ ಸಿಹಿ ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ಈ ಗ್ರಾಮದಲ್ಲಿ ಎರಡು ಸಾವಿರ ಜನಸಂಖ್ಯೆ ಇದ್ದು, ಇಡೀ ಗ್ರಾಮಕ್ಕೇ ಇರಡು ಬೋರ್ವೆಲ್ಗಳಿವೆ. ಗ್ರಾಮದಲ್ಲಿ ನೀರು ವಿತರಣಾ ವ್ಯವಸ್ಥೆ ಇದೆ. ಆದರೆ, ವಿದ್ಯುತ್ ಸಮಸ್ಯೆಯಿಂದ ನಲ್ಲಿ ನೀರು ಬರುತ್ತಿಲ್ಲ.<br /> <br /> ಸಿಹಿ ನೀರು ಪಡೆಯಲು ಇಲ್ಲಿಯ ಜನ ಗ್ರಾಮದಿಂದ ಒಂದು ಕಿ.ಮೀ. ದೂರದ ಶಾಲೆಯಲ್ಲಿರುವ ಬೋರ್ವೆಲ್ಗೆ ಹೋಗುತ್ತಾರೆ. ಅಲ್ಲಿಂದ ನೀರು ತರುತ್ತಿದ್ದಾರೆ. ಇದು ಗ್ರಾಮದ ಜನತೆಗೆ ತೀವ್ರ ತೊಂದರೆಯಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ವಿಠ್ಠಲ ಕೋಟಿ ಹೇಳುತ್ತಾರೆ.<br /> <br /> <strong>ಮಾಹಿತಿಗೆ ಸಂಪರ್ಕಿಸಿ</strong><br /> ವಿಜಾಪುರ ಜಿಲ್ಲೆಯಲ್ಲಿ ಈಗ ಭೀಕರ ಬರ. ಜೀವಜಲ ಬತ್ತಿ ಬರಿದಾಗುತ್ತಿದೆ. ಜನತೆ ಎದುರಿಸುತ್ತಿರುವ ಸಮಸ್ಯೆಯ ಮೇಲೆ `ಪ್ರಜಾವಾಣಿ~ಯ ಕ್ಷಕಿರಣ `ಬರದ ನಾಡಿನ ಬವಣೆ~ ಅಂಕಣ. ನಿಮ್ಮೂರಿನ ಸಮಸ್ಯೆ ಪರಿಹಾರಕ್ಕೆ ಈ ಅಂಕಣ ಸೂಕ್ತ ವೇದಿಕೆ. <br /> <br /> <strong>ನಮ್ಮ ವಿಳಾಸ</strong>: ಜಿಲ್ಲಾ ವರದಿಗಾರರು, ಪ್ರಜಾವಾಣಿ, ಸಾಂಗ್ಲಿಕರ ಕಾಂಪ್ಲೆಕ್ಸ್, ಸಕಾಫ್ ರೋಜಾ, ಕೇಂದ್ರ ಬಸ್ ನಿಲ್ದಾಣದ ಹತ್ತಿರ. ವಿಜಾಪುರ. ದೂರವಾಣಿ ಸಂಖ್ಯೆ: 08352-221515, ಮೊಬೈಲ್: 9448470153 (ಗಣೇಶ ಚಂದನಶಿವ). <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>