<p><strong>ಬೆಂಗಳೂರು</strong>: ಟಿಬೆಟನ್ ಯೂತ್ ಕಾಂಗ್ರೆಸ್ ವತಿಯಿಂದ ನಗರದ ಬನಪ್ಪ ಉದ್ಯಾನದಲ್ಲಿ ಸೋಮವಾರ 55ನೇ ರಾಷ್ಟ್ರೀಯ ಟಿಬೆಟನ್ ಬಂಡಾಯ ದಿನಾಚರಣೆಯನ್ನು ಆಚರಿಸಲಾಯಿತು.<br /> <br /> ಈ ಕುರಿತು ಮಾತನಾಡಿದ ಯೂತ್ ಕಾಂಗ್ರೆಸ್ ಸಂಘಟನೆಯ ಸಂಚಾಲಕಿ ತೀನ್ಲೆ ಚುಕ್ಕಿ, ‘ಚೀನಿಯರ ದಬ್ಬಾಳಿಕೆ, ಚಿತ್ರಹಿಂಸೆ, ಸೆರೆಮನೆವಾಸ ಹಾಗೂ ಮರಣ ದಂಡನೆಯಂತಹ ಹೇಯ ಕೃತ್ಯದಿಂದಾಗಿ 1.2 ಮಿಲಿಯನ್ಗಿಂತಲೂ ಹೆಚ್ಚು ಟಿಬೆಟನ್ರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.<br /> <br /> ಇಲ್ಲಿಯವರೆಗೆ ಸುಮಾರು 7 ಸಾವಿರಕ್ಕೂ ಹೆಚ್ಚು ಟಿಬೆಟನ್ ಧರ್ಮಕೇಂದ್ರಗಳು ನಾಶಗೊಂಡಿವೆ. ಇದಲ್ಲದೇ ಚೀನಿಯರ ಅತಿಯಾದ ಗಣಿಗಾರಿಕೆ, ಅರಣ್ಯನಾಶ, ಸೇನಾನೆಲೆ ಹಾಗೂ ರಸ್ತೆ ನಿರ್ಮಾಣದಂತಹ ಕೃತ್ಯಗಳಿಂದಾಗಿ ಅಲ್ಲಿನ ಶ್ರೀಮಂತ ಪರಿಸರ ನಾಶವಾಗಿದೆ’ ಎಂದರು.<br /> <br /> ‘ಚೀನಾ- ಟಿಬೆಟ್ ನಡುವಿನ ಈ ಸಂಘರ್ಷಮಯ ವಾತಾವರಣ ತಿಳಿಗೊಳ್ಳಬೇಕು. ಟಿಬೆಟನ್ನರು ಚೀನಾದ ಧೋರಣೆಯನ್ನು ಖಂಡಿಸುತ್ತೇವೆ. ನ್ಯಾಯದ ಪರ ನಿಂತಿರುವ ವಿಶ್ವದ ಶಾಂತಿಪ್ರಿಯ ದೇಶಗಳು, ಸಂಘಟನೆಗಳು ಚೀನಾ ಆಡಳಿತದ ಮೇಲೆ ಒತ್ತಡ ಹೇರಬೇಕು.<br /> ಟಿಬೆಟನ್ರ ಮೂಲ ಮಾನವ ಹಕ್ಕುಗಳನ್ನು ಗೌರವಿಸಬೇಕು, ಎಲ್ಲಾ ಟಿಬೆಟನ್ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಬೇಕು ಹಾಗೂ ಟಿಬೆಟನ್ಗಳ ಸಮಸ್ಯೆ ಬಗೆಹರಿಸಲು ಧರ್ಮಗುರು ದಲೈಲಾಮಾ ಅವರ ಪ್ರಸ್ತಾವನೆಯನ್ನು ಚೀನಾ ಆಡಳಿತ ಸ್ವೀಕರಿಸಬೇಕು’ ಎಂದು ಯೂತ್ ಕಾಂಗ್ರೆಸ್ ಸಂಘಟನೆ ಸಂಚಾಲಕಿ ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಟಿಬೆಟನ್ ಯೂತ್ ಕಾಂಗ್ರೆಸ್ ವತಿಯಿಂದ ನಗರದ ಬನಪ್ಪ ಉದ್ಯಾನದಲ್ಲಿ ಸೋಮವಾರ 55ನೇ ರಾಷ್ಟ್ರೀಯ ಟಿಬೆಟನ್ ಬಂಡಾಯ ದಿನಾಚರಣೆಯನ್ನು ಆಚರಿಸಲಾಯಿತು.<br /> <br /> ಈ ಕುರಿತು ಮಾತನಾಡಿದ ಯೂತ್ ಕಾಂಗ್ರೆಸ್ ಸಂಘಟನೆಯ ಸಂಚಾಲಕಿ ತೀನ್ಲೆ ಚುಕ್ಕಿ, ‘ಚೀನಿಯರ ದಬ್ಬಾಳಿಕೆ, ಚಿತ್ರಹಿಂಸೆ, ಸೆರೆಮನೆವಾಸ ಹಾಗೂ ಮರಣ ದಂಡನೆಯಂತಹ ಹೇಯ ಕೃತ್ಯದಿಂದಾಗಿ 1.2 ಮಿಲಿಯನ್ಗಿಂತಲೂ ಹೆಚ್ಚು ಟಿಬೆಟನ್ರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.<br /> <br /> ಇಲ್ಲಿಯವರೆಗೆ ಸುಮಾರು 7 ಸಾವಿರಕ್ಕೂ ಹೆಚ್ಚು ಟಿಬೆಟನ್ ಧರ್ಮಕೇಂದ್ರಗಳು ನಾಶಗೊಂಡಿವೆ. ಇದಲ್ಲದೇ ಚೀನಿಯರ ಅತಿಯಾದ ಗಣಿಗಾರಿಕೆ, ಅರಣ್ಯನಾಶ, ಸೇನಾನೆಲೆ ಹಾಗೂ ರಸ್ತೆ ನಿರ್ಮಾಣದಂತಹ ಕೃತ್ಯಗಳಿಂದಾಗಿ ಅಲ್ಲಿನ ಶ್ರೀಮಂತ ಪರಿಸರ ನಾಶವಾಗಿದೆ’ ಎಂದರು.<br /> <br /> ‘ಚೀನಾ- ಟಿಬೆಟ್ ನಡುವಿನ ಈ ಸಂಘರ್ಷಮಯ ವಾತಾವರಣ ತಿಳಿಗೊಳ್ಳಬೇಕು. ಟಿಬೆಟನ್ನರು ಚೀನಾದ ಧೋರಣೆಯನ್ನು ಖಂಡಿಸುತ್ತೇವೆ. ನ್ಯಾಯದ ಪರ ನಿಂತಿರುವ ವಿಶ್ವದ ಶಾಂತಿಪ್ರಿಯ ದೇಶಗಳು, ಸಂಘಟನೆಗಳು ಚೀನಾ ಆಡಳಿತದ ಮೇಲೆ ಒತ್ತಡ ಹೇರಬೇಕು.<br /> ಟಿಬೆಟನ್ರ ಮೂಲ ಮಾನವ ಹಕ್ಕುಗಳನ್ನು ಗೌರವಿಸಬೇಕು, ಎಲ್ಲಾ ಟಿಬೆಟನ್ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಬೇಕು ಹಾಗೂ ಟಿಬೆಟನ್ಗಳ ಸಮಸ್ಯೆ ಬಗೆಹರಿಸಲು ಧರ್ಮಗುರು ದಲೈಲಾಮಾ ಅವರ ಪ್ರಸ್ತಾವನೆಯನ್ನು ಚೀನಾ ಆಡಳಿತ ಸ್ವೀಕರಿಸಬೇಕು’ ಎಂದು ಯೂತ್ ಕಾಂಗ್ರೆಸ್ ಸಂಘಟನೆ ಸಂಚಾಲಕಿ ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>