<p>ರಿಪ್ಪನ್ಪೇಟೆ: ಇಲ್ಲಿನ ಗ್ರಾಮ ಪಂಚಾಯ್ತಿಯಲ್ಲಿ ಪೂರ್ವಭಾವಿ ತಯಾರಿ ಇಲ್ಲದೇ ಪಂಚಾಯ್ತಿ ಸದಸ್ಯರಿಗೂ ತಿಳಿವಳಿಕೆ ನೀಡದೇ ಕೇವಲ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರೇ ಫೋಟೊ ಇಟ್ಟು ವಾಲ್ಮೀಕಿ ಜಯಂತಿಯನ್ನು ಕಾಟಾಚಾರಕ್ಕೆ ಎಂಬಂತೆ ಅಚರಣೆ ಮಾಡಿದರು. <br /> <br /> <strong>ಗಾಳಿ-ಮಳೆಗೆ ಹಾನಿ</strong><br /> ಎರಡು ದಿನಗಳಿಂದ ಸಂಜೆವೇಳೆ ಗುಡುಗು ಸಿಡಿಲಿನ ಅರ್ಭಟದಿಂದ ಸುರಿದ ಗಾಳಿ- ಮಳೆಗೆ ಕೆಲವೆಡೆ ಮನೆಯ ಹೆಂಚುಗಳು ಹಾರಿ ಹೋಗಿವೆ ಹಾಗೂ ವಿದ್ಯುತ್ ದೂರವಾಣಿ ಸಂಪರ್ಕಗಳು ಕಡಿತಗೊಂಡಿವೆ.<br /> <br /> ರಸ್ತೆ ಪಕ್ಕದಲ್ಲಿ ಹೊಸ ಮಣ್ಣು ಹಾಕಿದ ಪರಿಣಾಮ ಸೂಡೂರು ಗೇಟ್ಬಳಿ ಖಾಸಗಿ ಬಸ್ಸೊಂದು ವಾಹನ ಹಿಂದಿಕ್ಕುವ ಬರದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ರಸ್ತೆ ಪಕ್ಕದ ಧರೆಗೆ ಸರಿದಿತ್ತು.<br /> <br /> ಹಿರೇಜೇನಿಯಲ್ಲಿ ಸುಲೋಕ ಕುಮಾರ್ ಎಂಬುವವರ ಮನೆ ಮುಂದಿನ ತೆಂಗಿನ ಮರವೊಂದು ಗಾಳಿಗೆ ಉರುಳಿ ಮನೆ ಮೇಲೆ ಬಿದ್ದು, ಸುಮಾರು ್ಙ 10 ಸಾವಿರ ನಷ್ಟವಾಗಿದೆ. <br /> <br /> ಕಳೆದ 15 ದಿನಗಳಿಂದ ಮಳೆ ಇಲ್ಲದೇ ಬಿರುಕು ಬಿಟ್ಟ ಭೂ-ತಾಯಿಯ ಒಡಲ ನೋಡಿ ಕಂಗಾಲಾಗಿದ್ದ ರೈತರಿಗೆ ಈ ಮಳೆ ಜೀವದಾನ ನೀಡಿದೆ. <br /> <br /> <strong>ಭೂಮಿ ಹುಣ್ಣಿಮೆ </strong><br /> ಬಸಿರುಹೊತ್ತ ಭೂ ತಾಯಿಯ ಮಡಿಲು ತುಂಬುವ ಹಬ್ಬವಾದ ಭೂ ಹುಣ್ಣಿಮೆ ಆಚರಣೆ ಮಂಗಳವಾರ ನಡೆಯಿತು.<br /> <br /> ಒಬ್ಬಟ್ಟು, ಕರಿಗಡಬು, ತರಹೇವಾರಿ ಕಾಯಿಪಲ್ಲೆ, ಕೊಟ್ಟೆಕಡುಬು ಹಾಗೂ ಅಚ್ಚಂಬಲಿ (ತಳುಬಾನ ) ಮುಂಜಾನೆ ಕಾಗೆ ಹೊರ ಹೋಗುವ ಮುನ್ನ ಕಳಸ , ಬೂಮಣ್ಣಿ-ಕುಕ್ಕೆ ಹೊತ್ತಿಕೊಂಡು ಹೋಗಿ ರೈತರು ಚರಗ ಬೀಸುವ ಮುನ್ನ `ಅಚ್ಚಂಬಲಿ - ಅಳಿಯಂಬ್ಲಿ ಮುಚ್ಚೆತಿನ್ನು ಭೂಮಿತಾಯಿ ಬಾ~ ಎಂದು ಹೇಳುತ್ತಾ ಹಬ್ಬದ ಊಟ ಉಣ ಬಡಿಸಿ ನಂತರ ತಾವೂ ಕುಳಿತು ಸಹ ಭೋಜನ ಸವಿದು ಹೊರಬರುವ ನೋಟ ಸೊಗಸಾಗಿತ್ತು.<br /> <br /> <strong>ಪ್ರತಿಭಟನೆ</strong><br /> ಹೊಳೆಹೊನ್ನೂರು: ಪಟ್ಟಣದ ನೃಪತುಂಗ ಸರ್ಕಲ್ನಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಮಂಗಳವಾರ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಜಾರಿಗೆ ತರಲು ಹೊರಟಿರುವ ಮತೀಯ ನಿರ್ದೇಶಿತ ಹಿಂಸಾಚಾರ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸಿತು. <br /> <br /> ಪ್ರತಿಭಟನೆ ನೇತೃತ್ವವನ್ನು ಬಿಜೆಪಿ ಹಿರಿಯ ಮುಖಂಡ ರಂಗಪ್ಪ,ಮಾಜಿ ಗ್ರಾ.ಪಂ. ಅಧ್ಯಕ್ಷ ಸಿದ್ದಪ್ಪ, ಸಾವಯವ ಕೃಷಿಯ ಭದ್ರಾವತಿತಾಲ್ಲೂಕು ಕಾರ್ಯದರ್ಶಿ ರಾಮಕೃಷ್ಣ ಮೇಸ್ತ, ಶ್ರೀನಿವಾಸ್, ಕಲ್ಲಜ್ಜನಾಳ್ ಮಂಜುನಾಥ್, ಲೋಕೇಶ್, ಹಾಲಸ್ವಾಮಿ, ಶಿವಾಜಿರಾವ್ ಮತ್ತಿತರರು ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಿಪ್ಪನ್ಪೇಟೆ: ಇಲ್ಲಿನ ಗ್ರಾಮ ಪಂಚಾಯ್ತಿಯಲ್ಲಿ ಪೂರ್ವಭಾವಿ ತಯಾರಿ ಇಲ್ಲದೇ ಪಂಚಾಯ್ತಿ ಸದಸ್ಯರಿಗೂ ತಿಳಿವಳಿಕೆ ನೀಡದೇ ಕೇವಲ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರೇ ಫೋಟೊ ಇಟ್ಟು ವಾಲ್ಮೀಕಿ ಜಯಂತಿಯನ್ನು ಕಾಟಾಚಾರಕ್ಕೆ ಎಂಬಂತೆ ಅಚರಣೆ ಮಾಡಿದರು. <br /> <br /> <strong>ಗಾಳಿ-ಮಳೆಗೆ ಹಾನಿ</strong><br /> ಎರಡು ದಿನಗಳಿಂದ ಸಂಜೆವೇಳೆ ಗುಡುಗು ಸಿಡಿಲಿನ ಅರ್ಭಟದಿಂದ ಸುರಿದ ಗಾಳಿ- ಮಳೆಗೆ ಕೆಲವೆಡೆ ಮನೆಯ ಹೆಂಚುಗಳು ಹಾರಿ ಹೋಗಿವೆ ಹಾಗೂ ವಿದ್ಯುತ್ ದೂರವಾಣಿ ಸಂಪರ್ಕಗಳು ಕಡಿತಗೊಂಡಿವೆ.<br /> <br /> ರಸ್ತೆ ಪಕ್ಕದಲ್ಲಿ ಹೊಸ ಮಣ್ಣು ಹಾಕಿದ ಪರಿಣಾಮ ಸೂಡೂರು ಗೇಟ್ಬಳಿ ಖಾಸಗಿ ಬಸ್ಸೊಂದು ವಾಹನ ಹಿಂದಿಕ್ಕುವ ಬರದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ರಸ್ತೆ ಪಕ್ಕದ ಧರೆಗೆ ಸರಿದಿತ್ತು.<br /> <br /> ಹಿರೇಜೇನಿಯಲ್ಲಿ ಸುಲೋಕ ಕುಮಾರ್ ಎಂಬುವವರ ಮನೆ ಮುಂದಿನ ತೆಂಗಿನ ಮರವೊಂದು ಗಾಳಿಗೆ ಉರುಳಿ ಮನೆ ಮೇಲೆ ಬಿದ್ದು, ಸುಮಾರು ್ಙ 10 ಸಾವಿರ ನಷ್ಟವಾಗಿದೆ. <br /> <br /> ಕಳೆದ 15 ದಿನಗಳಿಂದ ಮಳೆ ಇಲ್ಲದೇ ಬಿರುಕು ಬಿಟ್ಟ ಭೂ-ತಾಯಿಯ ಒಡಲ ನೋಡಿ ಕಂಗಾಲಾಗಿದ್ದ ರೈತರಿಗೆ ಈ ಮಳೆ ಜೀವದಾನ ನೀಡಿದೆ. <br /> <br /> <strong>ಭೂಮಿ ಹುಣ್ಣಿಮೆ </strong><br /> ಬಸಿರುಹೊತ್ತ ಭೂ ತಾಯಿಯ ಮಡಿಲು ತುಂಬುವ ಹಬ್ಬವಾದ ಭೂ ಹುಣ್ಣಿಮೆ ಆಚರಣೆ ಮಂಗಳವಾರ ನಡೆಯಿತು.<br /> <br /> ಒಬ್ಬಟ್ಟು, ಕರಿಗಡಬು, ತರಹೇವಾರಿ ಕಾಯಿಪಲ್ಲೆ, ಕೊಟ್ಟೆಕಡುಬು ಹಾಗೂ ಅಚ್ಚಂಬಲಿ (ತಳುಬಾನ ) ಮುಂಜಾನೆ ಕಾಗೆ ಹೊರ ಹೋಗುವ ಮುನ್ನ ಕಳಸ , ಬೂಮಣ್ಣಿ-ಕುಕ್ಕೆ ಹೊತ್ತಿಕೊಂಡು ಹೋಗಿ ರೈತರು ಚರಗ ಬೀಸುವ ಮುನ್ನ `ಅಚ್ಚಂಬಲಿ - ಅಳಿಯಂಬ್ಲಿ ಮುಚ್ಚೆತಿನ್ನು ಭೂಮಿತಾಯಿ ಬಾ~ ಎಂದು ಹೇಳುತ್ತಾ ಹಬ್ಬದ ಊಟ ಉಣ ಬಡಿಸಿ ನಂತರ ತಾವೂ ಕುಳಿತು ಸಹ ಭೋಜನ ಸವಿದು ಹೊರಬರುವ ನೋಟ ಸೊಗಸಾಗಿತ್ತು.<br /> <br /> <strong>ಪ್ರತಿಭಟನೆ</strong><br /> ಹೊಳೆಹೊನ್ನೂರು: ಪಟ್ಟಣದ ನೃಪತುಂಗ ಸರ್ಕಲ್ನಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಮಂಗಳವಾರ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಜಾರಿಗೆ ತರಲು ಹೊರಟಿರುವ ಮತೀಯ ನಿರ್ದೇಶಿತ ಹಿಂಸಾಚಾರ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸಿತು. <br /> <br /> ಪ್ರತಿಭಟನೆ ನೇತೃತ್ವವನ್ನು ಬಿಜೆಪಿ ಹಿರಿಯ ಮುಖಂಡ ರಂಗಪ್ಪ,ಮಾಜಿ ಗ್ರಾ.ಪಂ. ಅಧ್ಯಕ್ಷ ಸಿದ್ದಪ್ಪ, ಸಾವಯವ ಕೃಷಿಯ ಭದ್ರಾವತಿತಾಲ್ಲೂಕು ಕಾರ್ಯದರ್ಶಿ ರಾಮಕೃಷ್ಣ ಮೇಸ್ತ, ಶ್ರೀನಿವಾಸ್, ಕಲ್ಲಜ್ಜನಾಳ್ ಮಂಜುನಾಥ್, ಲೋಕೇಶ್, ಹಾಲಸ್ವಾಮಿ, ಶಿವಾಜಿರಾವ್ ಮತ್ತಿತರರು ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>