<p>ಬೆಂಗಳೂರು: ಅಕ್ರಮ ಗಣಿಗಾರಿಕೆ ಆರೋಪಕ್ಕೆ ಸಿಲುಕಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಹೈಕೋರ್ಟ್ಗೆ ಸಲ್ಲಿಸಿರುವ ಅರ್ಜಿಯನ್ನು ವಜಾ ಮಾಡುವಂತೆ ಕೋರಿ ಕೋರ್ಟ್ಗೆ ಸಿಬಿಐ ಬುಧವಾರ ಆಕ್ಷೇಪಣಾ ಹೇಳಿಕೆ ಸಲ್ಲಿಸಿದೆ.<br /> <br /> ಹೆಚ್ಚಿನ ತನಿಖೆಗಾಗಿ ತಮ್ಮನ್ನು ಸಿಬಿಐ ಪೊಲೀಸರ ವಶಕ್ಕೆ ಒಪ್ಪಿಸಿರುವ ಸಿಬಿಐ ವಿಶೇಷ ನ್ಯಾಯಾಲಯದ ಆದೇಶವನ್ನು ರದ್ದು ಮಾಡುವಂತೆ ಜನಾರ್ದನ ರೆಡ್ಡಿ ಅರ್ಜಿ ಸಲ್ಲಿಸಿದ್ದಾರೆ. <br /> <br /> ಮಾರ್ಚ್ 12ರವರೆಗೆ ರೆಡ್ಡಿ ಅವರನ್ನು ಸಿಬಿಐ ವಶಕ್ಕೆ ಒಪ್ಪಿಸಿ ವಿಶೇಷ ಕೋರ್ಟ್ ಆದೇಶಿಸಿತ್ತು. ಬಂಧನದ ಅವಧಿ ಈಗಾಗಲೇ ಮುಗಿದಿರುವ ಹಿನ್ನೆಲೆಯಲ್ಲಿ ಈ ಮನವಿಗೆ ಮಾನ್ಯತೆ ಇಲ್ಲ ಎಂದು ಸಿಬಿಐ ತಿಳಿಸಿದೆ.<br /> <br /> ಕ್ರಿಮಿನಲ್ ದಂಡ ಪ್ರಕ್ರಿಯಾ ಸಂಹಿತೆಯ 269 (ಸಿ) ಕಲಮಿನ ಅನ್ವಯ ಮಾರ್ಚ್ 7ರ ನಂತರ ತಮ್ಮನ್ನು ಪೊಲೀಸರ ವಶಕ್ಕೆ ನೀಡುವಂತಿಲ್ಲ. ಆದರೂ 12ರವರೆಗೆ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಈ ಬಗ್ಗೆ ತಾವು ಆಕ್ಷೇಪಣೆ ಸಲ್ಲಿಸಿದರೂ ಅದನ್ನು ನ್ಯಾಯಾಧೀಶರು ಗಮನಕ್ಕೆ ತೆಗೆದುಕೊಳ್ಳಲಿಲ್ಲ ಎಂಬುದು ರೆಡ್ಡಿ ವಾದ. <br /> <br /> ಅದನ್ನು ಸಿಬಿಐ ಅಲ್ಲಗಳೆದಿದೆ. ವಿಚಾರಣೆ ನಡೆಸುವ ಸಂಬಂಧ ಯಾರನ್ನೇ ಆದರೂ ಪೊಲೀಸರ ವಶಕ್ಕೆ ಒಪ್ಪಿಸುವ ಅಧಿಕಾರ ತಮಗೆ ಇದೆ ಎಂದು ಅದು ತಿಳಿಸಿದೆ. <br /> <br /> ಇದೇ ಆರೋಪಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಪೊಲೀಸರು ತಮ್ಮನ್ನು ವಿಚಾರಣೆಗೆ ಒಳಪಡಿಸಿರುವಾಗ ಕರ್ನಾಟಕದ ಪೊಲೀಸರಿಗೆ ಆ ಅಧಿಕಾರ ಇಲ್ಲ ಎಂಬ ರೆಡ್ಡಿ ವಾದಕ್ಕೂ ಸಿಬಿಐ ಆಕ್ಷೇಪಣೆ ಎತ್ತಿದೆ. <br /> <br /> `ಆರೋಪ ಒಂದೇ ಆಗಿದ್ದರೂ ಸಂಬಂಧಿತ ರಾಜ್ಯಗಳ ಪೊಲೀಸರು ಆ ಪ್ರಕರಣದ ವಿಚಾರಣೆ ನಡೆಸಬಹುದಾಗಿದೆ. ರೆಡ್ಡಿ ಅವರು ಅರ್ಜಿಯಲ್ಲಿ ಮಾಡಿರುವ ವಾದಗಳಿಗೆ ಯಾವುದೇ ಹುರುಳು ಇಲ್ಲ. <br /> <br /> ಆದುದರಿಂದ ಅವರ ಅರ್ಜಿಯನ್ನು ವಜಾಗೊಳಿಸಬೇಕು~ ಎಂದು ಅದು ಕೋರಿದೆ. ನ್ಯಾಯಮೂರ್ತಿ ಎನ್.ಆನಂದ ವಿಚಾರಣೆ ಮುಂದೂಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಅಕ್ರಮ ಗಣಿಗಾರಿಕೆ ಆರೋಪಕ್ಕೆ ಸಿಲುಕಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಹೈಕೋರ್ಟ್ಗೆ ಸಲ್ಲಿಸಿರುವ ಅರ್ಜಿಯನ್ನು ವಜಾ ಮಾಡುವಂತೆ ಕೋರಿ ಕೋರ್ಟ್ಗೆ ಸಿಬಿಐ ಬುಧವಾರ ಆಕ್ಷೇಪಣಾ ಹೇಳಿಕೆ ಸಲ್ಲಿಸಿದೆ.<br /> <br /> ಹೆಚ್ಚಿನ ತನಿಖೆಗಾಗಿ ತಮ್ಮನ್ನು ಸಿಬಿಐ ಪೊಲೀಸರ ವಶಕ್ಕೆ ಒಪ್ಪಿಸಿರುವ ಸಿಬಿಐ ವಿಶೇಷ ನ್ಯಾಯಾಲಯದ ಆದೇಶವನ್ನು ರದ್ದು ಮಾಡುವಂತೆ ಜನಾರ್ದನ ರೆಡ್ಡಿ ಅರ್ಜಿ ಸಲ್ಲಿಸಿದ್ದಾರೆ. <br /> <br /> ಮಾರ್ಚ್ 12ರವರೆಗೆ ರೆಡ್ಡಿ ಅವರನ್ನು ಸಿಬಿಐ ವಶಕ್ಕೆ ಒಪ್ಪಿಸಿ ವಿಶೇಷ ಕೋರ್ಟ್ ಆದೇಶಿಸಿತ್ತು. ಬಂಧನದ ಅವಧಿ ಈಗಾಗಲೇ ಮುಗಿದಿರುವ ಹಿನ್ನೆಲೆಯಲ್ಲಿ ಈ ಮನವಿಗೆ ಮಾನ್ಯತೆ ಇಲ್ಲ ಎಂದು ಸಿಬಿಐ ತಿಳಿಸಿದೆ.<br /> <br /> ಕ್ರಿಮಿನಲ್ ದಂಡ ಪ್ರಕ್ರಿಯಾ ಸಂಹಿತೆಯ 269 (ಸಿ) ಕಲಮಿನ ಅನ್ವಯ ಮಾರ್ಚ್ 7ರ ನಂತರ ತಮ್ಮನ್ನು ಪೊಲೀಸರ ವಶಕ್ಕೆ ನೀಡುವಂತಿಲ್ಲ. ಆದರೂ 12ರವರೆಗೆ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಈ ಬಗ್ಗೆ ತಾವು ಆಕ್ಷೇಪಣೆ ಸಲ್ಲಿಸಿದರೂ ಅದನ್ನು ನ್ಯಾಯಾಧೀಶರು ಗಮನಕ್ಕೆ ತೆಗೆದುಕೊಳ್ಳಲಿಲ್ಲ ಎಂಬುದು ರೆಡ್ಡಿ ವಾದ. <br /> <br /> ಅದನ್ನು ಸಿಬಿಐ ಅಲ್ಲಗಳೆದಿದೆ. ವಿಚಾರಣೆ ನಡೆಸುವ ಸಂಬಂಧ ಯಾರನ್ನೇ ಆದರೂ ಪೊಲೀಸರ ವಶಕ್ಕೆ ಒಪ್ಪಿಸುವ ಅಧಿಕಾರ ತಮಗೆ ಇದೆ ಎಂದು ಅದು ತಿಳಿಸಿದೆ. <br /> <br /> ಇದೇ ಆರೋಪಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಪೊಲೀಸರು ತಮ್ಮನ್ನು ವಿಚಾರಣೆಗೆ ಒಳಪಡಿಸಿರುವಾಗ ಕರ್ನಾಟಕದ ಪೊಲೀಸರಿಗೆ ಆ ಅಧಿಕಾರ ಇಲ್ಲ ಎಂಬ ರೆಡ್ಡಿ ವಾದಕ್ಕೂ ಸಿಬಿಐ ಆಕ್ಷೇಪಣೆ ಎತ್ತಿದೆ. <br /> <br /> `ಆರೋಪ ಒಂದೇ ಆಗಿದ್ದರೂ ಸಂಬಂಧಿತ ರಾಜ್ಯಗಳ ಪೊಲೀಸರು ಆ ಪ್ರಕರಣದ ವಿಚಾರಣೆ ನಡೆಸಬಹುದಾಗಿದೆ. ರೆಡ್ಡಿ ಅವರು ಅರ್ಜಿಯಲ್ಲಿ ಮಾಡಿರುವ ವಾದಗಳಿಗೆ ಯಾವುದೇ ಹುರುಳು ಇಲ್ಲ. <br /> <br /> ಆದುದರಿಂದ ಅವರ ಅರ್ಜಿಯನ್ನು ವಜಾಗೊಳಿಸಬೇಕು~ ಎಂದು ಅದು ಕೋರಿದೆ. ನ್ಯಾಯಮೂರ್ತಿ ಎನ್.ಆನಂದ ವಿಚಾರಣೆ ಮುಂದೂಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>