<p>ಆಲಮೇಲ: ಮಾಡಿದ ಸಾಲ ಸದುಪಯೋಗವಾಗಿ ರೈತರ ಆರ್ಥಿಕ ಮತ್ತು ಸಾಮಾಜಿಕ ಬದುಕು ಉತ್ತಮಗೊಂಡರೆ ಉದ್ದೇಶ ಸಾರ್ಥಕವಾಗುತ್ತದೆ ಎಂದು ಗ್ರಾಮದ ಹಿರಿಯರಾದ ಕೇಶವ ಜೋಶಿ ಹೇಳೀದರು.<br /> <br /> ಸಮೀಪದ ದೇವಣಗಾಂವ ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಹಮ್ಮಿಕೊಂಡಿದ್ದ ಗ್ರಾಮ ವಿಕಾಸ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದರು.<br /> <br /> ಕೋಲಿ ಸಮಾಜದ ರಾಜ್ಯ ಘಟಕದ ಉಪಾಧ್ಯಕ್ಷ ಶರಣಪ್ಪ ಕಣ್ಮೇಶ್ವರ ಮಾತನಾಡಿ ಬ್ಯಾಂಕುಗಳು ಗ್ರಾಹಕರ ಮತ್ತು ರೈತರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಕೆಲಸ ಮಾಡಬೇಕು ಎಂದರು.<br /> <br /> ಬ್ಯಾಂಕಿನ ವ್ಯವಸ್ಥಾಪಕ ಎಸ್.ಎಸ್. ಜಾಗೀರದಾರ ಮಾತನಾಡಿ, ಸಭೆಯ ಉದ್ದೇಶ ಸಾಲದ ಯೋಜನೆಗಳು ಗ್ರಾಹಕರ ಅನುಕೂಲತೆಗಳ ಬಗ್ಗೆ ತಿಳಿಹೇಳಿದರು.<br /> <br /> ಗ್ರಾ.ಪಂ. ಅಧ್ಯಕ್ಷೆ ಶಾಂತಾಬಾಯಿ ಹರಗೋಲ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯ ಕಾಶೀನಾಥ ಗಂಗನಳ್ಳಿ, ಗ್ರಾ ಪಂ ಉಪಾಧ್ಯಕ್ಷ ರಾಜೇಂದ್ರ ಕಣ್ಮೇಶ್ವರ, ಗಾ ್ರ.ಪಂ. ಮಾಜಿ ಅಧ್ಯಕ್ಷ ಶಂಕರಲಿಂಗ ಕಡ್ಲೇವಾಡ, ಪ್ರಕಾಶ ಭೂಸನೂರ, ರಮೇಶ ಬುಡ್ಡರ, ಡಾ. ನುರ್ಜಿ ಶೇಖಜಿ, ರಘುವೀರ ಬೀಳಗಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಆಲಮೇಲ: ಮಾಡಿದ ಸಾಲ ಸದುಪಯೋಗವಾಗಿ ರೈತರ ಆರ್ಥಿಕ ಮತ್ತು ಸಾಮಾಜಿಕ ಬದುಕು ಉತ್ತಮಗೊಂಡರೆ ಉದ್ದೇಶ ಸಾರ್ಥಕವಾಗುತ್ತದೆ ಎಂದು ಗ್ರಾಮದ ಹಿರಿಯರಾದ ಕೇಶವ ಜೋಶಿ ಹೇಳೀದರು.<br /> <br /> ಸಮೀಪದ ದೇವಣಗಾಂವ ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಹಮ್ಮಿಕೊಂಡಿದ್ದ ಗ್ರಾಮ ವಿಕಾಸ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದರು.<br /> <br /> ಕೋಲಿ ಸಮಾಜದ ರಾಜ್ಯ ಘಟಕದ ಉಪಾಧ್ಯಕ್ಷ ಶರಣಪ್ಪ ಕಣ್ಮೇಶ್ವರ ಮಾತನಾಡಿ ಬ್ಯಾಂಕುಗಳು ಗ್ರಾಹಕರ ಮತ್ತು ರೈತರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಕೆಲಸ ಮಾಡಬೇಕು ಎಂದರು.<br /> <br /> ಬ್ಯಾಂಕಿನ ವ್ಯವಸ್ಥಾಪಕ ಎಸ್.ಎಸ್. ಜಾಗೀರದಾರ ಮಾತನಾಡಿ, ಸಭೆಯ ಉದ್ದೇಶ ಸಾಲದ ಯೋಜನೆಗಳು ಗ್ರಾಹಕರ ಅನುಕೂಲತೆಗಳ ಬಗ್ಗೆ ತಿಳಿಹೇಳಿದರು.<br /> <br /> ಗ್ರಾ.ಪಂ. ಅಧ್ಯಕ್ಷೆ ಶಾಂತಾಬಾಯಿ ಹರಗೋಲ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯ ಕಾಶೀನಾಥ ಗಂಗನಳ್ಳಿ, ಗ್ರಾ ಪಂ ಉಪಾಧ್ಯಕ್ಷ ರಾಜೇಂದ್ರ ಕಣ್ಮೇಶ್ವರ, ಗಾ ್ರ.ಪಂ. ಮಾಜಿ ಅಧ್ಯಕ್ಷ ಶಂಕರಲಿಂಗ ಕಡ್ಲೇವಾಡ, ಪ್ರಕಾಶ ಭೂಸನೂರ, ರಮೇಶ ಬುಡ್ಡರ, ಡಾ. ನುರ್ಜಿ ಶೇಖಜಿ, ರಘುವೀರ ಬೀಳಗಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>