<p><strong>ಕುಷ್ಟಗಿ: </strong>ಬಡ ರೈತರಿಗೆ ಸರ್ಕಾರದ ಯೋಜನೆಯಲ್ಲಿ ಜಿಂಕ್ಶೀಟ್ (ಕಬ್ಬಿಣದ ತಗಡು)ಗಳನ್ನು ವಿತರಿಸುವುದಾಗಿ ನಂಬಿಸಿದ ವಂಚಕನೊಬ್ಬ ಪಕ್ಕದ ಯಲಬುರ್ಗಾ ತಾಲ್ಲೂಕಿನ ಗುಳೆ ಗ್ರಾಮದ ರೈತರಿಂದ ಪಡೆದ ಸಾವಿರಾರು ರೂಪಾಯಿ ಜೇಬಿಗಿಳಿಸಿ ಕಾಲ್ಕಿತ್ತ ಘಟನೆ ಶುಕ್ರವಾರ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.<br /> <br /> ಬಸವರಾಜಗೌಡ, ಭೀಮನಗೌಡ ಎಂದು ಹೆಸರು ಹೇಳಿ ಬಸ್ನಲ್ಲಿ ಗ್ರಾಮಕ್ಕೆ ಬಂದಿಳಿದ ಯುವ ವಂಚಕ ತಾನು ಸರ್ಕಾರದ ಪ್ರತಿನಿಧಿ ಎಂದು ಜನರಲ್ಲಿ ವಿಶ್ವಾಸ ಬರುವಂತೆ ಮಾಡಿದ್ದಾನೆ. ಸುಮಾರು ಎಂಟು ಹತ್ತು ಜನ ರೈತರಿಂದ ತಲಾ ರೂ 5 ನೂರರಂತೆ ವಸೂಲಿ ಮಾಡಿ ಪರಾರಿಯಾಗಿದ್ದಾನೆ ಎಂಬುದನ್ನು ಆತನಿಂದ ಪಂಗನಾಮ ಹಾಕಿಸಿಕೊಂಡವ ರೈತರ ಪೈಕಿ ಚಿದಾನಂದಪ್ಪ ಹೊಸಳ್ಳಿ, ಯಮನೂರಪ್ಪ ಮಡಿವಾಳರ `ಪ್ರಜಾವಾಣಿ~ಗೆ ವಿವರ ನೀಡಿದರು.<br /> <br /> ತಗಡುಗಳನ್ನು ವಿತರಿಸುವುದಕ್ಕಾಗಿ ಫಲಾನುಭವಿಗಳ ಪಟ್ಟಿ ತಯಾರಿಸಲು ಮೇಲಧಿಕಾರಿ ಹೇಳಿದ್ದಾರೆ, ತಲಾ 15 ತಗಡು ಹಾಗೂ ಇತರೆ ಸಲಕರಣೆಗಳನ್ನು ಉಚಿತವಾಗಿ ನೀಡಲಾಗುತ್ತದೆ. ಆದರೆ ಸಾಗಾಣಿಕೆ ವೆಚ್ಚವನ್ನು ಫಲಾನುಭವಿಗಳು ಭರಿಸಬೇಕಾಗುತ್ತದೆ, ಮಧ್ಯಾಹ್ನವೇ ಕುಷ್ಟಗಿಕಚೇರಿಯಲ್ಲಿ ತಗಡುಗಳನ್ನು ವಿತರಿಸಲಾಗುತ್ತದೆ ಎಂದು ಪುಸಲಾಯಿಸಿದ್ದಾನೆ. <br /> <br /> ತಕ್ಷಣ ಹಣ ಕಟ್ಟಬೇಕು ಎಂದು ಹೇಳಿದ ಆತನ ಮಾತಿನ `ಮೋಡಿ~ಗೆ ಮರುಳಾದ ರೈತರು ಕಡಿಮೆ ಹಣದಲ್ಲಿ ಹದಿನೈದು ತಗಡುಗಳು ಬರುತ್ತವೆಯಲ್ಲ ಎಂದು ಹಿಂದೆ ಮುಂದೆ ನೋಡದೇ ಸಾವಿರಾರು ರೂಪಾಯಿ ಆತನ ಕೈಗಿಟ್ಟಿದ್ದಾರೆ. ಹಣ ನೀಡಿದ ರೈತರ ಹೆಸರು ಮತ್ತು ಹಣೆ ಪಡೆದ ವಿವರವನ್ನು ಬರೆದ ಒಂದು ನೋಟ್ಬುಕ್ ಅನ್ನೂ ವಂಚಕ ರೈತರಿಗೆ ಕೊಟ್ಟಿದ್ದಾನೆ.<br /> <br /> ನಂತರ ಗ್ರಾಮಸ್ಥರು ಮತ್ತು ರೈತರೊಂದಿಗೆ ದ್ವಿಚಕ್ರ ವಾಹನದಲ್ಲಿ ಪಟ್ಟಣಕ್ಕೆ ಬಂದ ವಂಚಕ ತಮ್ಮ `ಕಚೇರಿಯ ಬೀಗದ ಕೈ ಮರೆತು ಬಂದಿದ್ದು ತರುತ್ತೇನೆ ಇಲ್ಲಿಯೇ ನಿಂತುಕೊಳ್ಳಿ~ ಎಂದು ತಾ.ಪಂ ಕಚೇರಿ ಬಳಿ ನಿಲ್ಲಿಸಿ ಹೋದವ ಸಂಜೆಯಾದರೂ ಮುಖ ತೋರಿಸಲಿಲ್ಲ, ಅಲ್ಲದೇ ಆತ ರೈತರಿಗೆ ನೀಡಿದ ಮೊಬೈಲ್ ಸಂಖ್ಯೆ ಸಹ ನಕಲಿ ಎಂಬುದು ತಿಳಿದಾಗ ತಾವು ಮೋಸಹೋಗಿದ್ದು ರೈತರ ಅರಿವಿಗೆ ಬಂದಿದೆ. `ತಗಡು ಕೊಡಸ್ತೀನಿ ಅಂದಾವ ರೈತರ ತೆಲಿಮ್ಯಾಲೆ ಚಾಪಿ ಎಳ್ದು ಹೋಗ್ಯಾನ್ರಿ~ ಎಂದೆ ಮೋಸಹೋದ ರೈತ ಅಳಲು ತೋಡಿಕೊಂಡರು.<br /> <br /> <strong>ಕುಷ್ಟಗಿಯಲ್ಲಿ ಇಂದು `ಮನೆಯಲ್ಲಿ ಮಹಾಮನೆ~<br /> ಕುಷ್ಟಗಿ: </strong>ಪಟ್ಟಣದ ಬುತ್ತಿಬಸವೇಶ್ವರ ನಗರದ ಬಸವರಾಜ ಗಾಣಿಗೇರ ಅವರ ನಿವಾಸದಲ್ಲಿ ಅ.10ರಂದು ಸಂಜೆ 5.30ಕ್ಕೆ ಬಸವಾದಿ ಶರಣರ ಚಿಂತನೆಗಳನ್ನು ಒಳಗೊಂಡ `ಮನೆಯಲ್ಲಿ ಮಹಾಮನೆ~ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೆ.ನಬಿಸಾಬ್ `ಉರಿಲಿಂಗ ಪೆದ್ದಿ~ಯವರ ಜೀವನ ಮತ್ತು ವಚನ ಸಾಹಿತ್ಯ ಕುರಿತು ಮಾತನಾಡುವರು. ಆಸಕ್ತರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಷ್ಟಗಿ: </strong>ಬಡ ರೈತರಿಗೆ ಸರ್ಕಾರದ ಯೋಜನೆಯಲ್ಲಿ ಜಿಂಕ್ಶೀಟ್ (ಕಬ್ಬಿಣದ ತಗಡು)ಗಳನ್ನು ವಿತರಿಸುವುದಾಗಿ ನಂಬಿಸಿದ ವಂಚಕನೊಬ್ಬ ಪಕ್ಕದ ಯಲಬುರ್ಗಾ ತಾಲ್ಲೂಕಿನ ಗುಳೆ ಗ್ರಾಮದ ರೈತರಿಂದ ಪಡೆದ ಸಾವಿರಾರು ರೂಪಾಯಿ ಜೇಬಿಗಿಳಿಸಿ ಕಾಲ್ಕಿತ್ತ ಘಟನೆ ಶುಕ್ರವಾರ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.<br /> <br /> ಬಸವರಾಜಗೌಡ, ಭೀಮನಗೌಡ ಎಂದು ಹೆಸರು ಹೇಳಿ ಬಸ್ನಲ್ಲಿ ಗ್ರಾಮಕ್ಕೆ ಬಂದಿಳಿದ ಯುವ ವಂಚಕ ತಾನು ಸರ್ಕಾರದ ಪ್ರತಿನಿಧಿ ಎಂದು ಜನರಲ್ಲಿ ವಿಶ್ವಾಸ ಬರುವಂತೆ ಮಾಡಿದ್ದಾನೆ. ಸುಮಾರು ಎಂಟು ಹತ್ತು ಜನ ರೈತರಿಂದ ತಲಾ ರೂ 5 ನೂರರಂತೆ ವಸೂಲಿ ಮಾಡಿ ಪರಾರಿಯಾಗಿದ್ದಾನೆ ಎಂಬುದನ್ನು ಆತನಿಂದ ಪಂಗನಾಮ ಹಾಕಿಸಿಕೊಂಡವ ರೈತರ ಪೈಕಿ ಚಿದಾನಂದಪ್ಪ ಹೊಸಳ್ಳಿ, ಯಮನೂರಪ್ಪ ಮಡಿವಾಳರ `ಪ್ರಜಾವಾಣಿ~ಗೆ ವಿವರ ನೀಡಿದರು.<br /> <br /> ತಗಡುಗಳನ್ನು ವಿತರಿಸುವುದಕ್ಕಾಗಿ ಫಲಾನುಭವಿಗಳ ಪಟ್ಟಿ ತಯಾರಿಸಲು ಮೇಲಧಿಕಾರಿ ಹೇಳಿದ್ದಾರೆ, ತಲಾ 15 ತಗಡು ಹಾಗೂ ಇತರೆ ಸಲಕರಣೆಗಳನ್ನು ಉಚಿತವಾಗಿ ನೀಡಲಾಗುತ್ತದೆ. ಆದರೆ ಸಾಗಾಣಿಕೆ ವೆಚ್ಚವನ್ನು ಫಲಾನುಭವಿಗಳು ಭರಿಸಬೇಕಾಗುತ್ತದೆ, ಮಧ್ಯಾಹ್ನವೇ ಕುಷ್ಟಗಿಕಚೇರಿಯಲ್ಲಿ ತಗಡುಗಳನ್ನು ವಿತರಿಸಲಾಗುತ್ತದೆ ಎಂದು ಪುಸಲಾಯಿಸಿದ್ದಾನೆ. <br /> <br /> ತಕ್ಷಣ ಹಣ ಕಟ್ಟಬೇಕು ಎಂದು ಹೇಳಿದ ಆತನ ಮಾತಿನ `ಮೋಡಿ~ಗೆ ಮರುಳಾದ ರೈತರು ಕಡಿಮೆ ಹಣದಲ್ಲಿ ಹದಿನೈದು ತಗಡುಗಳು ಬರುತ್ತವೆಯಲ್ಲ ಎಂದು ಹಿಂದೆ ಮುಂದೆ ನೋಡದೇ ಸಾವಿರಾರು ರೂಪಾಯಿ ಆತನ ಕೈಗಿಟ್ಟಿದ್ದಾರೆ. ಹಣ ನೀಡಿದ ರೈತರ ಹೆಸರು ಮತ್ತು ಹಣೆ ಪಡೆದ ವಿವರವನ್ನು ಬರೆದ ಒಂದು ನೋಟ್ಬುಕ್ ಅನ್ನೂ ವಂಚಕ ರೈತರಿಗೆ ಕೊಟ್ಟಿದ್ದಾನೆ.<br /> <br /> ನಂತರ ಗ್ರಾಮಸ್ಥರು ಮತ್ತು ರೈತರೊಂದಿಗೆ ದ್ವಿಚಕ್ರ ವಾಹನದಲ್ಲಿ ಪಟ್ಟಣಕ್ಕೆ ಬಂದ ವಂಚಕ ತಮ್ಮ `ಕಚೇರಿಯ ಬೀಗದ ಕೈ ಮರೆತು ಬಂದಿದ್ದು ತರುತ್ತೇನೆ ಇಲ್ಲಿಯೇ ನಿಂತುಕೊಳ್ಳಿ~ ಎಂದು ತಾ.ಪಂ ಕಚೇರಿ ಬಳಿ ನಿಲ್ಲಿಸಿ ಹೋದವ ಸಂಜೆಯಾದರೂ ಮುಖ ತೋರಿಸಲಿಲ್ಲ, ಅಲ್ಲದೇ ಆತ ರೈತರಿಗೆ ನೀಡಿದ ಮೊಬೈಲ್ ಸಂಖ್ಯೆ ಸಹ ನಕಲಿ ಎಂಬುದು ತಿಳಿದಾಗ ತಾವು ಮೋಸಹೋಗಿದ್ದು ರೈತರ ಅರಿವಿಗೆ ಬಂದಿದೆ. `ತಗಡು ಕೊಡಸ್ತೀನಿ ಅಂದಾವ ರೈತರ ತೆಲಿಮ್ಯಾಲೆ ಚಾಪಿ ಎಳ್ದು ಹೋಗ್ಯಾನ್ರಿ~ ಎಂದೆ ಮೋಸಹೋದ ರೈತ ಅಳಲು ತೋಡಿಕೊಂಡರು.<br /> <br /> <strong>ಕುಷ್ಟಗಿಯಲ್ಲಿ ಇಂದು `ಮನೆಯಲ್ಲಿ ಮಹಾಮನೆ~<br /> ಕುಷ್ಟಗಿ: </strong>ಪಟ್ಟಣದ ಬುತ್ತಿಬಸವೇಶ್ವರ ನಗರದ ಬಸವರಾಜ ಗಾಣಿಗೇರ ಅವರ ನಿವಾಸದಲ್ಲಿ ಅ.10ರಂದು ಸಂಜೆ 5.30ಕ್ಕೆ ಬಸವಾದಿ ಶರಣರ ಚಿಂತನೆಗಳನ್ನು ಒಳಗೊಂಡ `ಮನೆಯಲ್ಲಿ ಮಹಾಮನೆ~ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೆ.ನಬಿಸಾಬ್ `ಉರಿಲಿಂಗ ಪೆದ್ದಿ~ಯವರ ಜೀವನ ಮತ್ತು ವಚನ ಸಾಹಿತ್ಯ ಕುರಿತು ಮಾತನಾಡುವರು. ಆಸಕ್ತರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>