<p><strong>ಬೆಂಗಳೂರು: </strong>ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ನೀಡುವ ‘ಯುಎಎಸ್ಬಿ ಇ–ಕೃಷಿ’ ವೆಬ್ಸೈಟನ್ನು ಶೀಘ್ರದಲ್ಲೇ ರಾಜ್ಯದ ರೈತರಿಗೆ ಸಮರ್ಪಿಸಲಿದೆ. <br /> <br /> ಒಂದು ಲಕ್ಷ ಪುಟಗಳನ್ನು ಹೊಂದಿರುವ ಈ ವೆಬ್ಸೈಟ್ನಲ್ಲಿ ಆಹಾರ ಧಾನ್ಯ, ವಾಣಿಜ್ಯ ಬೆಳೆಗಳು, ಹಣ್ಣು ತರಕಾರಿ ಸೇರಿದಂತೆ ಎಲ್ಲ ರೀತಿಯ ಬೆಳೆಗಳ ಬಗ್ಗೆ ಮಾಹಿತಿ ಇದೆ.<br /> <br /> ರೈತರು ಈ ವೆಬ್ಸೈಟ್ನಿಂದ ಮಾಹಿತಿ ಪಡೆಯುವುದಲ್ಲದೆ, ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನೂ ಕಂಡುಕೊಳ್ಳಬಹುದು. ರೈತರು ಎದುರಿಸುವ ಸಮಸ್ಯೆಗಳನ್ನು ವಿವರಗಳೊಂದಿಗೆ ಈ ವೆಬ್ಸೈಟ್ ವಿಳಾಸಕ್ಕೆ ಕಳುಹಿಸಿದರೆ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಅದಕ್ಕೆ ಪರಿಹಾರ ಸೂಚಿಸುತ್ತಾರೆ. ಬೆಳೆಗಳಿಗೆ ರೋಗ ತಗುಲಿದಾಗ ಮೊಬೈಲ್ನಲ್ಲಿ ಅದರ ಚಿತ್ರಗಳನ್ನು ತೆಗೆದು ಕಳುಹಿಸಿದರೆ, ವಿಜ್ಞಾನಿಗಳು ತಕ್ಷಣವೇ ಆನ್ಲೈನ್ನಲ್ಲಿ ಉತ್ತರಿಸುತ್ತಾರೆ.<br /> <br /> ವೆಬ್ಸೈಟ್ನಲ್ಲಿನ ಮಾಹಿತಿಗಳು ಕನ್ನಡ ಹಾಗೂ ಇಂಗ್ಲಿಷ್ನಲ್ಲಿ ಲಭ್ಯವಾಗಲಿವೆ. ಇದರಿಂದಾಗಿ ಇಂಟರ್ನೆಟ್ ಸಂಪರ್ಕ ಹೊಂದಿರುವ ರೈತರು ಮೊಬೈಲ್ನಲ್ಲೇ ಎಲ್ಲ ಮಾಹಿತಿಗಳನ್ನು ಪಡೆಯಬಹುದು. ಅಂದಾಜು ₨2ಕೋಟಿ ವೆಚ್ಚದ ಈ ವೆಬ್ಸೈಟ್ಗೆ ‘ನ್ಯಾಷನಲ್ ಇನ್ಫರ್ಮ್ಯಾಟಿಕ್ ಸೆಂಟರ್ ’ ತಾಂತ್ರಿಕ ನೆರವನ್ನು ಒದಗಿಸಿದೆ. ಸದ್ಯಕ್ಕೆ 10–12 ಸಿಬ್ಬಂದಿಗಳು ಈ ಕಾರ್ಯದಲ್ಲಿ ತೊಡಗಿದ್ದಾರೆ.<br /> <br /> ವೆಬ್ಸೈಟ್ ಪ್ರಾರಂಭವಾದ ನಂತರ ಇಬ್ಬರು ತಾಂತ್ರಿಕ ಸಿಬ್ಬಂದಿ ಹಾಗೂ ನಾಲ್ಕು ಮಂದಿ ವಿಜ್ಞಾನಿಗಳು ಬೆಳಿಗ್ಗೆ 6ರಿಂದ ರಾತ್ರಿ 8ರವರೆಗೆ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ವಿಭಾಗದ ನಿರ್ದೇಶಕ ಡಾ. ಎನ್.ನಾಗರಾಜ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ನೀಡುವ ‘ಯುಎಎಸ್ಬಿ ಇ–ಕೃಷಿ’ ವೆಬ್ಸೈಟನ್ನು ಶೀಘ್ರದಲ್ಲೇ ರಾಜ್ಯದ ರೈತರಿಗೆ ಸಮರ್ಪಿಸಲಿದೆ. <br /> <br /> ಒಂದು ಲಕ್ಷ ಪುಟಗಳನ್ನು ಹೊಂದಿರುವ ಈ ವೆಬ್ಸೈಟ್ನಲ್ಲಿ ಆಹಾರ ಧಾನ್ಯ, ವಾಣಿಜ್ಯ ಬೆಳೆಗಳು, ಹಣ್ಣು ತರಕಾರಿ ಸೇರಿದಂತೆ ಎಲ್ಲ ರೀತಿಯ ಬೆಳೆಗಳ ಬಗ್ಗೆ ಮಾಹಿತಿ ಇದೆ.<br /> <br /> ರೈತರು ಈ ವೆಬ್ಸೈಟ್ನಿಂದ ಮಾಹಿತಿ ಪಡೆಯುವುದಲ್ಲದೆ, ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನೂ ಕಂಡುಕೊಳ್ಳಬಹುದು. ರೈತರು ಎದುರಿಸುವ ಸಮಸ್ಯೆಗಳನ್ನು ವಿವರಗಳೊಂದಿಗೆ ಈ ವೆಬ್ಸೈಟ್ ವಿಳಾಸಕ್ಕೆ ಕಳುಹಿಸಿದರೆ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಅದಕ್ಕೆ ಪರಿಹಾರ ಸೂಚಿಸುತ್ತಾರೆ. ಬೆಳೆಗಳಿಗೆ ರೋಗ ತಗುಲಿದಾಗ ಮೊಬೈಲ್ನಲ್ಲಿ ಅದರ ಚಿತ್ರಗಳನ್ನು ತೆಗೆದು ಕಳುಹಿಸಿದರೆ, ವಿಜ್ಞಾನಿಗಳು ತಕ್ಷಣವೇ ಆನ್ಲೈನ್ನಲ್ಲಿ ಉತ್ತರಿಸುತ್ತಾರೆ.<br /> <br /> ವೆಬ್ಸೈಟ್ನಲ್ಲಿನ ಮಾಹಿತಿಗಳು ಕನ್ನಡ ಹಾಗೂ ಇಂಗ್ಲಿಷ್ನಲ್ಲಿ ಲಭ್ಯವಾಗಲಿವೆ. ಇದರಿಂದಾಗಿ ಇಂಟರ್ನೆಟ್ ಸಂಪರ್ಕ ಹೊಂದಿರುವ ರೈತರು ಮೊಬೈಲ್ನಲ್ಲೇ ಎಲ್ಲ ಮಾಹಿತಿಗಳನ್ನು ಪಡೆಯಬಹುದು. ಅಂದಾಜು ₨2ಕೋಟಿ ವೆಚ್ಚದ ಈ ವೆಬ್ಸೈಟ್ಗೆ ‘ನ್ಯಾಷನಲ್ ಇನ್ಫರ್ಮ್ಯಾಟಿಕ್ ಸೆಂಟರ್ ’ ತಾಂತ್ರಿಕ ನೆರವನ್ನು ಒದಗಿಸಿದೆ. ಸದ್ಯಕ್ಕೆ 10–12 ಸಿಬ್ಬಂದಿಗಳು ಈ ಕಾರ್ಯದಲ್ಲಿ ತೊಡಗಿದ್ದಾರೆ.<br /> <br /> ವೆಬ್ಸೈಟ್ ಪ್ರಾರಂಭವಾದ ನಂತರ ಇಬ್ಬರು ತಾಂತ್ರಿಕ ಸಿಬ್ಬಂದಿ ಹಾಗೂ ನಾಲ್ಕು ಮಂದಿ ವಿಜ್ಞಾನಿಗಳು ಬೆಳಿಗ್ಗೆ 6ರಿಂದ ರಾತ್ರಿ 8ರವರೆಗೆ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ವಿಭಾಗದ ನಿರ್ದೇಶಕ ಡಾ. ಎನ್.ನಾಗರಾಜ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>