<p> <strong>ಸಾಹಿಬ್ ಗಂಜ್/ ಗುವಾಹಟಿ, (ಪಿಟಿಐ): </strong>ಇಲ್ಲಿಂದ 25 ಕಿ.ಮೀ ದೂರದ ಜಾರ್ಖಂಡ್ ನ ಸಾಹಿಬ್ ಗಂಜ್ ನಲ್ಲಿ ನಿಂತಿದ್ದ ಸರಕು ಸಾಗಾಣಿಕಾ ರೈಲಿಗೆ ದಿಬ್ರೂಗಢ್ ದಿಂದ ದೆಹಲಿಯತ್ತ ಹೊರಟಿದ್ದ ಭ್ರಹ್ಮಪುತ್ರ ಮೇಲ್ ರೈಲು ಬುಧವಾರ ನಸುಕಿನಲ್ಲಿ ಡಿಕ್ಕಿ ಹೊಡೆದ ಪರಿಣಾಮ ಐವರು ಮೃತಪಟ್ಟಿದ್ದಾರೆ, ಜೊತೆಗೆ ಮಗುವೂ ಸೇರಿದಂತೆ ಒಂಬತ್ತು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.</p>.<p>ಪೂರ್ವ ರೈಲ್ವೆಯ ಮಾಲ್ದಾ ವಿಭಾಗದ ಕರೋನ್ಪುರಟೋ ರೈಲು ನಿಲ್ದಾಣದಲ್ಲಿ ಹಾಯ್ದುಹೋಗುವಾಗ, ಹಳಿಯ ಮೇಲೆ ನಿಂತಿದ್ದ ಸರಕು ಸಾಗಾಣಿಕಾ ರೈಲು ಹಿಂದಕ್ಕೆ ಚಲಿಸತೊಡಗಿತು. ರಭಸದಿಂದ ಓಡುತ್ತಿದ್ದ ಭ್ರಹ್ಮಪುತ್ರ ಮೇಲ್ ರೈಲು ಡಿಕ್ಕಿ ಹೊಡೆದಾಗ, ಸರಕು ಸಾಗಾಣಿಕಾ ರೈಲಿನ ಗಾರ್ಡ್ ಬೋಗಿಯು ಎಸ್ 9 ಬೊಗಿಯನ್ನು ಹತ್ತಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.</p>.<p>ಈ ಅಪಘಾತದಲ್ಲಿನ ಸಾವಿಗೆ ಕಂಬಿನಿ ಮಿಡಿದಿರುವ ರೈಲ್ವೆ ಸಚಿವ ದಿನೇಶ್ ತ್ರವೇದಿ ಅವರು, ಮೃತರ ಕುಟುಂಬಕ್ಕೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಜೊತೆಗೆ ತೀವ್ರವಾಗಿ ಗಾಯಗೊಂಡವರಿಗೆ ತಲಾ 50,000 ರೂಪಾಯಿ ಮತ್ತು ಸಣ್ಣಪುಟ್ಟ ಗಾಯಗಳಾಗಿರುವವರಿಗೆ 10,000 ರೂಪಾಯಿ ಘೋಷಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p> <strong>ಸಾಹಿಬ್ ಗಂಜ್/ ಗುವಾಹಟಿ, (ಪಿಟಿಐ): </strong>ಇಲ್ಲಿಂದ 25 ಕಿ.ಮೀ ದೂರದ ಜಾರ್ಖಂಡ್ ನ ಸಾಹಿಬ್ ಗಂಜ್ ನಲ್ಲಿ ನಿಂತಿದ್ದ ಸರಕು ಸಾಗಾಣಿಕಾ ರೈಲಿಗೆ ದಿಬ್ರೂಗಢ್ ದಿಂದ ದೆಹಲಿಯತ್ತ ಹೊರಟಿದ್ದ ಭ್ರಹ್ಮಪುತ್ರ ಮೇಲ್ ರೈಲು ಬುಧವಾರ ನಸುಕಿನಲ್ಲಿ ಡಿಕ್ಕಿ ಹೊಡೆದ ಪರಿಣಾಮ ಐವರು ಮೃತಪಟ್ಟಿದ್ದಾರೆ, ಜೊತೆಗೆ ಮಗುವೂ ಸೇರಿದಂತೆ ಒಂಬತ್ತು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.</p>.<p>ಪೂರ್ವ ರೈಲ್ವೆಯ ಮಾಲ್ದಾ ವಿಭಾಗದ ಕರೋನ್ಪುರಟೋ ರೈಲು ನಿಲ್ದಾಣದಲ್ಲಿ ಹಾಯ್ದುಹೋಗುವಾಗ, ಹಳಿಯ ಮೇಲೆ ನಿಂತಿದ್ದ ಸರಕು ಸಾಗಾಣಿಕಾ ರೈಲು ಹಿಂದಕ್ಕೆ ಚಲಿಸತೊಡಗಿತು. ರಭಸದಿಂದ ಓಡುತ್ತಿದ್ದ ಭ್ರಹ್ಮಪುತ್ರ ಮೇಲ್ ರೈಲು ಡಿಕ್ಕಿ ಹೊಡೆದಾಗ, ಸರಕು ಸಾಗಾಣಿಕಾ ರೈಲಿನ ಗಾರ್ಡ್ ಬೋಗಿಯು ಎಸ್ 9 ಬೊಗಿಯನ್ನು ಹತ್ತಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.</p>.<p>ಈ ಅಪಘಾತದಲ್ಲಿನ ಸಾವಿಗೆ ಕಂಬಿನಿ ಮಿಡಿದಿರುವ ರೈಲ್ವೆ ಸಚಿವ ದಿನೇಶ್ ತ್ರವೇದಿ ಅವರು, ಮೃತರ ಕುಟುಂಬಕ್ಕೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಜೊತೆಗೆ ತೀವ್ರವಾಗಿ ಗಾಯಗೊಂಡವರಿಗೆ ತಲಾ 50,000 ರೂಪಾಯಿ ಮತ್ತು ಸಣ್ಣಪುಟ್ಟ ಗಾಯಗಳಾಗಿರುವವರಿಗೆ 10,000 ರೂಪಾಯಿ ಘೋಷಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>