<p><strong>ಕಾರವಾರ: </strong>ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಪ್ರಕೃತಿ ಚಿಕಿತ್ಸೆ ಯೋಗ, ಯುನಾನಿ ಹಾಗೂ ಹೋಮಿಯೋಪಥಿ ವಿಭಾಗ ಆರಂಭವಾಗಿದೆ. ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿರುವರು ಪ್ರಕೃತಿ, ಯುನಾನಿ ಹಾಗೂ ಹೊಮಿಯೊಪಥಿ ಚಿಕಿತ್ಸೆಗಾಗಿ ಇಲ್ಲಿಯ ವೈದ್ಯರನ್ನು ಸಂಪರ್ಕಿಸಬಹುದು.<br /> <br /> ಆಸ್ಪತ್ರೆಯಲ್ಲಿ ಮೂವರು ವೈದ್ಯರಿದ್ದು ಪ್ರಕೃತಿ ಚಿಕಿತ್ಸೆಗೆ ಡಾ. ಪ್ರಕಾಶ ಎ.ಜೆ., ಯುನಾನಿ ವೈದ್ಯ ಪದ್ಧತಿಗೆ ಡಾ. ಮಲ್ಲಿಕಾರ್ಜುನ ಹಿರೇಮಠ ಮತ್ತು ಡಾ. ಶ್ರೀದೇವಿ ಹೋಮಿಯೋಪಥಿ ಚಿಕಿತ್ಸೆ ಅವರನ್ನು ಸಂಪರ್ಕ ಮಾಡಬಹುದು.<br /> <br /> ನೀರಿನ ಚಿಕಿತ್ಸೆ(ಹೈಡ್ರೊ ಥೆರಪಿ), ಆಯಸ್ಕಾಂತ ಚಿಕಿತ್ಸೆ (ಮೆಗ್ನೆಟೊ ಥೆರಪಿ), ಮರ್ದನ ಚಿಕಿತ್ಸೆ ( ಮಸಾಜ್), ಸೂರ್ಯಕಿರಣ ಮತ್ತು ಬಣ್ಣಗಳ ಚಿಕಿತ್ಸೆ (ಸನ್ ಅಂಡ ಕಲರ್ ಥೆರಪಿ), ಉಪವಾಸ ಮತ್ತು ಆಹಾರ ಚಿಕಿತ್ಸೆಗಳು (ಪಾಸ್ಟಿಂಗ್ ಅಂಡ್ ಫುಡ್ ಥೆರಪಿ), ಯೋಗ ಮತ್ತು ವ್ಯಾಯಾಮ ಚಿಕಿತ್ಸೆಗಳು, ಸೂಜಿ ಚಿಕಿತ್ಸೆ, ಬಿಂದೊತ್ತಡ ಮತ್ತು ಪಿಸಿಯೊ ಥೆರಪಿ ಪ್ರಕೃತಿ ಚಿಕಿತ್ಸೆ ಆಸ್ಪತ್ರೆಯಲ್ಲಿ ಲಭ್ಯವಿದೆ.<br /> <br /> ದೀರ್ಘಕಾಲದ ರೋಗಗಳಿಗೆ ಯುನಾನಿ ಪದ್ಧತಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ನರಗಳಿಗೆ ಸಂಬಂಧಪಟ್ಟ ರೋಗ, ವೃದ್ಧಾಪ್ಯದಲ್ಲಿ ಬರುವ ರೋಗ ಮತ್ತು ಚರ್ಮ ರೋಗಗಳಿಗೆ ಅನುಗುಣವಾದ ಯುನಾನಿ ಪದ್ಧತಿಯ ಚಿಕಿತ್ಸೆಯನ್ನು ಇಲ್ಲಿ ನೀಡಲಾಗುತ್ತದೆ.<br /> <br /> ನೆಗಡಿ, ಹಲ್ಲುನೋವು, ಕೆಮ್ಮು, ಗಂಟಲು ನೋವು, ವಸಡಿನ ನೋವು, ಅಜೀರ್ಣ, ಮಲಬದ್ಧತೆ, ಅತಿಸಾರ, ಗಾಯ ಮತ್ತು ಹುಣ್ಣು, ಸಕ್ಕರೆ ಕಾಯಿಲೆ ಹಾಗೂ ಉರಿ ಮೂತ್ರಕ್ಕೆ ಸುಲಭ ಮತ್ತು ಸರಳ ಚಿಕಿತ್ಸೆಯೂ ಯುನಾನಿ ಪದ್ಧತಿಯಲ್ಲಿ ಲಭ್ಯವಿದೆ.<br /> <br /> ಪದೇಪದೇ ಬರುವ ಕೆಮ್ಮು, ಗಂಟಲು ನೋವು, ಜ್ವರ. ಮಕ್ಕಳಲ್ಲಿ ಮೂರ್ಚೆ ರೋಗ, ಮಕ್ಕಳು ರಚ್ಚೆ ಹಿಡಿಯುವುದು, ವಾಂತಿ, ಬೇಧಿ, ಅತಿಸಾರ, ಜಂತು ಹುಳುವಿನ ತೊಂದರೆ, ಬುದ್ಧಿಮಾಂದ್ಯ, ಚಂಚಲ ಮನಸ್ಸಿನ ಮಕ್ಕಳಿಗಾಗಿ ಹೋಮಿಯೋಪಥಿ ಚಿಕಿತ್ಸೆ ಇಲ್ಲಿದೆ. ಮಾಹಿತಿಗೆ ಡಾ. ಪ್ರಕಾಶ ಎ.ಜೆ. <br /> (9480790690). ಡಾ ಮಲ್ಲಿಕಾರ್ಜುನ ಹಿರೇಮಠ (9481885134), ಡಾ. ಶ್ರೀದೇವಿ (9480323700) ಇವರನ್ನು ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ: </strong>ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಪ್ರಕೃತಿ ಚಿಕಿತ್ಸೆ ಯೋಗ, ಯುನಾನಿ ಹಾಗೂ ಹೋಮಿಯೋಪಥಿ ವಿಭಾಗ ಆರಂಭವಾಗಿದೆ. ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿರುವರು ಪ್ರಕೃತಿ, ಯುನಾನಿ ಹಾಗೂ ಹೊಮಿಯೊಪಥಿ ಚಿಕಿತ್ಸೆಗಾಗಿ ಇಲ್ಲಿಯ ವೈದ್ಯರನ್ನು ಸಂಪರ್ಕಿಸಬಹುದು.<br /> <br /> ಆಸ್ಪತ್ರೆಯಲ್ಲಿ ಮೂವರು ವೈದ್ಯರಿದ್ದು ಪ್ರಕೃತಿ ಚಿಕಿತ್ಸೆಗೆ ಡಾ. ಪ್ರಕಾಶ ಎ.ಜೆ., ಯುನಾನಿ ವೈದ್ಯ ಪದ್ಧತಿಗೆ ಡಾ. ಮಲ್ಲಿಕಾರ್ಜುನ ಹಿರೇಮಠ ಮತ್ತು ಡಾ. ಶ್ರೀದೇವಿ ಹೋಮಿಯೋಪಥಿ ಚಿಕಿತ್ಸೆ ಅವರನ್ನು ಸಂಪರ್ಕ ಮಾಡಬಹುದು.<br /> <br /> ನೀರಿನ ಚಿಕಿತ್ಸೆ(ಹೈಡ್ರೊ ಥೆರಪಿ), ಆಯಸ್ಕಾಂತ ಚಿಕಿತ್ಸೆ (ಮೆಗ್ನೆಟೊ ಥೆರಪಿ), ಮರ್ದನ ಚಿಕಿತ್ಸೆ ( ಮಸಾಜ್), ಸೂರ್ಯಕಿರಣ ಮತ್ತು ಬಣ್ಣಗಳ ಚಿಕಿತ್ಸೆ (ಸನ್ ಅಂಡ ಕಲರ್ ಥೆರಪಿ), ಉಪವಾಸ ಮತ್ತು ಆಹಾರ ಚಿಕಿತ್ಸೆಗಳು (ಪಾಸ್ಟಿಂಗ್ ಅಂಡ್ ಫುಡ್ ಥೆರಪಿ), ಯೋಗ ಮತ್ತು ವ್ಯಾಯಾಮ ಚಿಕಿತ್ಸೆಗಳು, ಸೂಜಿ ಚಿಕಿತ್ಸೆ, ಬಿಂದೊತ್ತಡ ಮತ್ತು ಪಿಸಿಯೊ ಥೆರಪಿ ಪ್ರಕೃತಿ ಚಿಕಿತ್ಸೆ ಆಸ್ಪತ್ರೆಯಲ್ಲಿ ಲಭ್ಯವಿದೆ.<br /> <br /> ದೀರ್ಘಕಾಲದ ರೋಗಗಳಿಗೆ ಯುನಾನಿ ಪದ್ಧತಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ನರಗಳಿಗೆ ಸಂಬಂಧಪಟ್ಟ ರೋಗ, ವೃದ್ಧಾಪ್ಯದಲ್ಲಿ ಬರುವ ರೋಗ ಮತ್ತು ಚರ್ಮ ರೋಗಗಳಿಗೆ ಅನುಗುಣವಾದ ಯುನಾನಿ ಪದ್ಧತಿಯ ಚಿಕಿತ್ಸೆಯನ್ನು ಇಲ್ಲಿ ನೀಡಲಾಗುತ್ತದೆ.<br /> <br /> ನೆಗಡಿ, ಹಲ್ಲುನೋವು, ಕೆಮ್ಮು, ಗಂಟಲು ನೋವು, ವಸಡಿನ ನೋವು, ಅಜೀರ್ಣ, ಮಲಬದ್ಧತೆ, ಅತಿಸಾರ, ಗಾಯ ಮತ್ತು ಹುಣ್ಣು, ಸಕ್ಕರೆ ಕಾಯಿಲೆ ಹಾಗೂ ಉರಿ ಮೂತ್ರಕ್ಕೆ ಸುಲಭ ಮತ್ತು ಸರಳ ಚಿಕಿತ್ಸೆಯೂ ಯುನಾನಿ ಪದ್ಧತಿಯಲ್ಲಿ ಲಭ್ಯವಿದೆ.<br /> <br /> ಪದೇಪದೇ ಬರುವ ಕೆಮ್ಮು, ಗಂಟಲು ನೋವು, ಜ್ವರ. ಮಕ್ಕಳಲ್ಲಿ ಮೂರ್ಚೆ ರೋಗ, ಮಕ್ಕಳು ರಚ್ಚೆ ಹಿಡಿಯುವುದು, ವಾಂತಿ, ಬೇಧಿ, ಅತಿಸಾರ, ಜಂತು ಹುಳುವಿನ ತೊಂದರೆ, ಬುದ್ಧಿಮಾಂದ್ಯ, ಚಂಚಲ ಮನಸ್ಸಿನ ಮಕ್ಕಳಿಗಾಗಿ ಹೋಮಿಯೋಪಥಿ ಚಿಕಿತ್ಸೆ ಇಲ್ಲಿದೆ. ಮಾಹಿತಿಗೆ ಡಾ. ಪ್ರಕಾಶ ಎ.ಜೆ. <br /> (9480790690). ಡಾ ಮಲ್ಲಿಕಾರ್ಜುನ ಹಿರೇಮಠ (9481885134), ಡಾ. ಶ್ರೀದೇವಿ (9480323700) ಇವರನ್ನು ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>