<p><strong>ಬಸವಕಲ್ಯಾಣ:</strong> ಲಾರಿ ಹಾಗೂ ಇತರೆ ಸರಕು ಸಾಗಾಣಿಕೆ ವಾಹನದ ಮಾಲೀಕರ ಹಿತರಕ್ಷಣೆಗೆ ಕಟಿಬದ್ಧವಾಗಿದ್ದೇವೆ ಎಂದು ಇಂಡಿಯನ್ ಆಯಿಲ್ ಕಾರ್ಪೋರೆಷನ್ನ ವಿಭಾಗೀಯ ವ್ಯವಸ್ಥಾಪಕ ಟಿ.ಪಳಿನಿಕುಮಾರ ಹೇಳಿದರು.<br /> <br /> ಕಾರ್ಪೋರೆಷನ್ನ ಬಳ್ಳಾರಿ ವಿಭಾಗೀಯ ಕಚೇರಿಯಿಂದ ಶನಿವಾರ ಇಲ್ಲಿನ ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ ಸಭಾಂಗಣದಲ್ಲಿ ಹಮ್ಮಿಕೊಂಡ ಸರಕು ಸಾಗಾಣಿಕೆದಾರರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.<br /> <br /> ಬಸವಕಲ್ಯಾಣದಲ್ಲಿ ಈ ಭಾಗದಲ್ಲಿಯೇ ಹೆಚ್ಚಿನ ಲಾರಿಗಳಿವೆ. ಆದ್ದರಿಂದ ವಿವಿಧ ಯೋಜನೆಗಳ ಬಗ್ಗೆ ಲಾರಿ ಮಾಲೀಕರಿಗೆ ಮತ್ತು ಚಾಲಕರಿಗೆ ಮಾಹಿತಿ ಇರುವುದು ಅವಶ್ಯಕವಾಗಿದೆ ಎಂದರು.<br /> <br /> ಕಾರ್ಪೋರೇಷನ್ನ ರಾಜ್ಯ ಘಟಕದ ವ್ಯವ್ಥಾಪಕ ಬಿ.ಆರ್.ಬಾಲಕೃಷ್ಣ ಮಾತನಾಡಿ, ಉತ್ಕೃಷ್ಟ ಸೇವೆ ಒದಗಿಸಿದರೂ ಅದನ್ನು ಪಡೆಯುವವರು ಬೇಕು ಎಂದರು. ವಾಹನ ಮಾಲೀಕರ ಹಿತಕ್ಕಾಗಿ ಎಕ್ಸಟ್ರಾ ಫ್ಲೀಟ್ ಕಾರ್ಡ್ ಯೋಜನೆ ಆರಂಭಿಸಲಾಗಿದೆ. ಇದರ ನೆರವಿನಿಂದ ವಿಮಾ ಸೌಲಭ್ಯ ಸಹ ಪಡೆಯಬಹುದು ಎಂದು ತಿಳಿಸಿದರು.<br /> <br /> ತಾಲ್ಲೂಕು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಅಜರ ಅಲಿ ನವರಂಗ ಮಾತನಾಡಿ ಸರಕು ಸಾಗಾಣಿಕೆ ಉದ್ಯಮದ ಬೆಳವಣಿಗೆಗೆ ಕಾರ್ಪೋರೆಷನ್ನವರು ವಿವಿಧ ಸೌಲಭ್ಯಗಳನ್ನು ಒದಗಿಸಬೇಕು ಎಂದು ಕೇಳಿಕೊಂಡರು.<br /> <br /> ಸುಂದರಂ ಫೈನಾನ್ಸ್ ವ್ಯವಸ್ಥಾಪಕ ರಾಮಲಿಂಗಂ, ವಕೀಲ ಅಲೀಮ್ ಅಂಜುಮ್ ಮಾತನಾಡಿದರು.<br /> ಹೆಚ್ಚಿನ ವಹಿವಾಟು ನಡೆಸಿದ ದಯಾನಂದ ಶಾಶೆಟ್ಟೆ, ಸುಭಾಷ ಹೊಳಕುಂದೆ, ಪಂಡಿತರಾವ ಬಿರಾದಾರ ಅವರನ್ನು ಸನ್ಮಾನಿಸಲಾಯಿತು.<br /> <br /> ಮಲ್ಲಿಕಾರ್ಜುನ ಹೊಳಕುಂದೆ, ಯಶ್ರಬ್ ಅಲಿ ಖಾದ್ರಿ, ಗಿರೀಶ ಹೊಳಕುಂದೆ, ಚನ್ನಬಸವ ನರಶೆಟ್ಟೆ, ಅಲ್ಲಮಪ್ರಭು ಹೊಳಕುಂದೆ, ಸೈಯದ್ ಅಲ್ತಾಫ್, ವೆಂಕಟೇಶ ಇದ್ದರು. ಶಿವಕುಮಾರ ಸ್ವಾಗತಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಕಲ್ಯಾಣ:</strong> ಲಾರಿ ಹಾಗೂ ಇತರೆ ಸರಕು ಸಾಗಾಣಿಕೆ ವಾಹನದ ಮಾಲೀಕರ ಹಿತರಕ್ಷಣೆಗೆ ಕಟಿಬದ್ಧವಾಗಿದ್ದೇವೆ ಎಂದು ಇಂಡಿಯನ್ ಆಯಿಲ್ ಕಾರ್ಪೋರೆಷನ್ನ ವಿಭಾಗೀಯ ವ್ಯವಸ್ಥಾಪಕ ಟಿ.ಪಳಿನಿಕುಮಾರ ಹೇಳಿದರು.<br /> <br /> ಕಾರ್ಪೋರೆಷನ್ನ ಬಳ್ಳಾರಿ ವಿಭಾಗೀಯ ಕಚೇರಿಯಿಂದ ಶನಿವಾರ ಇಲ್ಲಿನ ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ ಸಭಾಂಗಣದಲ್ಲಿ ಹಮ್ಮಿಕೊಂಡ ಸರಕು ಸಾಗಾಣಿಕೆದಾರರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.<br /> <br /> ಬಸವಕಲ್ಯಾಣದಲ್ಲಿ ಈ ಭಾಗದಲ್ಲಿಯೇ ಹೆಚ್ಚಿನ ಲಾರಿಗಳಿವೆ. ಆದ್ದರಿಂದ ವಿವಿಧ ಯೋಜನೆಗಳ ಬಗ್ಗೆ ಲಾರಿ ಮಾಲೀಕರಿಗೆ ಮತ್ತು ಚಾಲಕರಿಗೆ ಮಾಹಿತಿ ಇರುವುದು ಅವಶ್ಯಕವಾಗಿದೆ ಎಂದರು.<br /> <br /> ಕಾರ್ಪೋರೇಷನ್ನ ರಾಜ್ಯ ಘಟಕದ ವ್ಯವ್ಥಾಪಕ ಬಿ.ಆರ್.ಬಾಲಕೃಷ್ಣ ಮಾತನಾಡಿ, ಉತ್ಕೃಷ್ಟ ಸೇವೆ ಒದಗಿಸಿದರೂ ಅದನ್ನು ಪಡೆಯುವವರು ಬೇಕು ಎಂದರು. ವಾಹನ ಮಾಲೀಕರ ಹಿತಕ್ಕಾಗಿ ಎಕ್ಸಟ್ರಾ ಫ್ಲೀಟ್ ಕಾರ್ಡ್ ಯೋಜನೆ ಆರಂಭಿಸಲಾಗಿದೆ. ಇದರ ನೆರವಿನಿಂದ ವಿಮಾ ಸೌಲಭ್ಯ ಸಹ ಪಡೆಯಬಹುದು ಎಂದು ತಿಳಿಸಿದರು.<br /> <br /> ತಾಲ್ಲೂಕು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಅಜರ ಅಲಿ ನವರಂಗ ಮಾತನಾಡಿ ಸರಕು ಸಾಗಾಣಿಕೆ ಉದ್ಯಮದ ಬೆಳವಣಿಗೆಗೆ ಕಾರ್ಪೋರೆಷನ್ನವರು ವಿವಿಧ ಸೌಲಭ್ಯಗಳನ್ನು ಒದಗಿಸಬೇಕು ಎಂದು ಕೇಳಿಕೊಂಡರು.<br /> <br /> ಸುಂದರಂ ಫೈನಾನ್ಸ್ ವ್ಯವಸ್ಥಾಪಕ ರಾಮಲಿಂಗಂ, ವಕೀಲ ಅಲೀಮ್ ಅಂಜುಮ್ ಮಾತನಾಡಿದರು.<br /> ಹೆಚ್ಚಿನ ವಹಿವಾಟು ನಡೆಸಿದ ದಯಾನಂದ ಶಾಶೆಟ್ಟೆ, ಸುಭಾಷ ಹೊಳಕುಂದೆ, ಪಂಡಿತರಾವ ಬಿರಾದಾರ ಅವರನ್ನು ಸನ್ಮಾನಿಸಲಾಯಿತು.<br /> <br /> ಮಲ್ಲಿಕಾರ್ಜುನ ಹೊಳಕುಂದೆ, ಯಶ್ರಬ್ ಅಲಿ ಖಾದ್ರಿ, ಗಿರೀಶ ಹೊಳಕುಂದೆ, ಚನ್ನಬಸವ ನರಶೆಟ್ಟೆ, ಅಲ್ಲಮಪ್ರಭು ಹೊಳಕುಂದೆ, ಸೈಯದ್ ಅಲ್ತಾಫ್, ವೆಂಕಟೇಶ ಇದ್ದರು. ಶಿವಕುಮಾರ ಸ್ವಾಗತಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>