<p><strong>ಮುಂಬೈ (ಪಿಟಿಐ):</strong> `ಸಂಸತ್ತಿನಲ್ಲಿ ಲೋಕಪಾಲ ಮಸೂದೆ ಅಂಗೀಕಾರಕ್ಕಾಗಿ ಅಣ್ಣಾ ತಂಡ ಅನುಸರಿಸುತ್ತಿರುವ ಒತ್ತಡ ತಂತ್ರ ಸಂವಿಧಾನ ಬಾಹಿರ~ ಎಂದು ದಲಿತ ಪ್ಯಾಂಥರ್ನ ಹಿರಿಯ ನಾಯಕ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನಾಮದೇವ್ ಧಸಾಲ್ ಹೇಳಿದ್ದಾರೆ.<br /> <br /> `ಅಣ್ಣಾ ತಂಡಕ್ಕೆ ಸಂವಿಧಾನದಲ್ಲಿ ವಿಶ್ವಾಸ ಇಲ್ಲ ಎಂಬುದನ್ನು ಇದು ತೋರಿಸುತ್ತದೆ. ಸಂಸತ್ತಿನಲ್ಲಿ ಮಸೂದೆ ಅಂಗೀಕರಿಸಲು ಅವರು ಬಲವಂತ ಮಾಡುತ್ತಿದ್ದಾರೆ~ ಎಂದು ಅವರು ಹೇಳಿದ್ದಾರೆ.<br /> <br /> ಆದಾಗ್ಯೂ, ಭ್ರಷ್ಟಾಚಾರ ವಿರೋಧಿ ಆಂದೋಲನ ಹುಟ್ಟು ಹಾಕುವಲ್ಲಿ ಅಣ್ಣಾ ಯಾವುದೇ ತಪ್ಪು ಮಾಡಿಲ್ಲ. ಭ್ರಷ್ಟಾಚಾರ ಕೊನೆಗಾಣಿಸುವುದೇ ಎಲ್ಲರ ಆಶಯ. ಆದರೆ ಪ್ರಧಾನ ಮಂತ್ರಿ ಮತ್ತು ಕೆಳ ಹಂತದ ಅಧಿಕಾರಶಾಹಿಯನ್ನು ಲೋಕಪಾಲ ವ್ಯಾಪ್ತಿಗೆ ತರುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾದುದು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.<br /> <br /> `ನಮ್ಮ ನಿಯೋಗವು ರಾಷ್ಟ್ರಪತಿ, ಪ್ರಧಾನಿ ಮತ್ತು ಗೃಹ ಸಚಿವರನ್ನು ಭೇಟಿಯಾಗಿ ಅಣ್ಣಾ ತಂಡದ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಒತ್ತಾಯಿಸಲಿದೆ~ ಎಂದೂ ಅವರು ಪ್ರಕಟಿಸಿದರು.<br /> <br /> ಅಣ್ಣಾ ತಂಡ ಮತ್ತು ಲೋಕಪಾಲ ಮಸೂದೆ ವಿರುದ್ಧ ತಮ್ಮ ಸಂಘಟನೆ ಹೋರಾಟ ಮುಂದುವರಿಸಲಿದ್ದು, ಜನವರಿ 11ರಂದು ಪುಣೆಯಲ್ಲಿ ಬೃಹತ್ ಆಂದೋಲನ ನಡೆಯಲಿದೆ ಎಂದು ನಾಮದೇವ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ (ಪಿಟಿಐ):</strong> `ಸಂಸತ್ತಿನಲ್ಲಿ ಲೋಕಪಾಲ ಮಸೂದೆ ಅಂಗೀಕಾರಕ್ಕಾಗಿ ಅಣ್ಣಾ ತಂಡ ಅನುಸರಿಸುತ್ತಿರುವ ಒತ್ತಡ ತಂತ್ರ ಸಂವಿಧಾನ ಬಾಹಿರ~ ಎಂದು ದಲಿತ ಪ್ಯಾಂಥರ್ನ ಹಿರಿಯ ನಾಯಕ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನಾಮದೇವ್ ಧಸಾಲ್ ಹೇಳಿದ್ದಾರೆ.<br /> <br /> `ಅಣ್ಣಾ ತಂಡಕ್ಕೆ ಸಂವಿಧಾನದಲ್ಲಿ ವಿಶ್ವಾಸ ಇಲ್ಲ ಎಂಬುದನ್ನು ಇದು ತೋರಿಸುತ್ತದೆ. ಸಂಸತ್ತಿನಲ್ಲಿ ಮಸೂದೆ ಅಂಗೀಕರಿಸಲು ಅವರು ಬಲವಂತ ಮಾಡುತ್ತಿದ್ದಾರೆ~ ಎಂದು ಅವರು ಹೇಳಿದ್ದಾರೆ.<br /> <br /> ಆದಾಗ್ಯೂ, ಭ್ರಷ್ಟಾಚಾರ ವಿರೋಧಿ ಆಂದೋಲನ ಹುಟ್ಟು ಹಾಕುವಲ್ಲಿ ಅಣ್ಣಾ ಯಾವುದೇ ತಪ್ಪು ಮಾಡಿಲ್ಲ. ಭ್ರಷ್ಟಾಚಾರ ಕೊನೆಗಾಣಿಸುವುದೇ ಎಲ್ಲರ ಆಶಯ. ಆದರೆ ಪ್ರಧಾನ ಮಂತ್ರಿ ಮತ್ತು ಕೆಳ ಹಂತದ ಅಧಿಕಾರಶಾಹಿಯನ್ನು ಲೋಕಪಾಲ ವ್ಯಾಪ್ತಿಗೆ ತರುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾದುದು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.<br /> <br /> `ನಮ್ಮ ನಿಯೋಗವು ರಾಷ್ಟ್ರಪತಿ, ಪ್ರಧಾನಿ ಮತ್ತು ಗೃಹ ಸಚಿವರನ್ನು ಭೇಟಿಯಾಗಿ ಅಣ್ಣಾ ತಂಡದ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಒತ್ತಾಯಿಸಲಿದೆ~ ಎಂದೂ ಅವರು ಪ್ರಕಟಿಸಿದರು.<br /> <br /> ಅಣ್ಣಾ ತಂಡ ಮತ್ತು ಲೋಕಪಾಲ ಮಸೂದೆ ವಿರುದ್ಧ ತಮ್ಮ ಸಂಘಟನೆ ಹೋರಾಟ ಮುಂದುವರಿಸಲಿದ್ದು, ಜನವರಿ 11ರಂದು ಪುಣೆಯಲ್ಲಿ ಬೃಹತ್ ಆಂದೋಲನ ನಡೆಯಲಿದೆ ಎಂದು ನಾಮದೇವ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>