<p>ನವದೆಹಲಿ (ಪಿಟಿಐ): ಮುಂಬರುವ ಸಾರ್ವತ್ರಿಕ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರ ಬಲಿಷ್ಠ ಲೋಕಪಾಲ ಮಸೂದೆ ಜಾರಿಗೆ ತರದಿದ್ದಲ್ಲಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಎಚ್ಚರಿಕೆ ನಿಡಿದರು. ಈ ವಿಷಯದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.<br /> <br /> ದಕ್ಷಿಣ ದೆಹಲಿಯ ಸರ್ವೋದಯ ಎನ್ಕ್ಲೆವ್ನಲ್ಲಿ ರಾಜಕೀಯೇತರ ಚಳವಳಿಗಾಗಿ ಸ್ಥಾಪಿಸಿರುವ ನೂತನ ಕಚೇರಿಯನ್ನು ಭಾನುವಾರ ಉದ್ಘಾಟಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ನಾಯಕರಿಗೇನೂ ಕೊರತೆಯಿಲ್ಲ. ಆದರೆ ಈ ಎಲ್ಲ ಮುಖಂಡರು 2ಜಿ ತರಂಗಾಂತರ ಮತ್ತು ಕಲ್ಲಿದ್ದ ಗಣಿ ಹಂಚಿಕೆ ಹಗರಣದಲ್ಲಿ ಶಾಮೀಲಾಗಿರುವುದು ಸಮಸ್ಯೆ ಎಂದರು. <br /> <br /> ದೇಶದಲ್ಲಿ ಬದಲಾವಣೆ ಉಂಟು ಮಾಡಬೇಕು ಎಂದು ಯಾರಾದರು ಬಯಸಿದ್ದರೆ ಮೊದಲು ಅವರು ಗ್ರಾಮದಲ್ಲಿ ಬದಲಾವಣೆ ತರಬೇಕು. ಕೇವಲ ಸರ್ಕಾರ ನೀಡುವ ಅನುದಾನದಿಂದ ಮಾತ್ರ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ಹೇಳಿದರು. `ದೀರ್ಘ ಸಮಯದ ಹಿಂದೆಯೇ ಟಾಟಾ ಮತ್ತು ಬಿರ್ಲಾ ದೇಶದಲ್ಲಿ ಬದಲಾವಣೆ ತಂದಿದ್ದಾರೆ. ನಮಗೆ ನಾಯಕರ ಕೊರತೆ ಇಲ್ಲ. ಆದರೆ, ಈಗಿನ ನಾಯಕರು ಕಲ್ಲಿದ್ದಲು ಗಣಿ ಹಂಚಿಕೆ, 2ಜಿ ಹಗರಣದಲ್ಲಿ ಶಾಮಿಲಾಗಿದ್ದಾರೆ. ಮಾತಿಗೆ ತಕ್ಕಂತೆ ನಡೆದುಕೊಳ್ಳುವ ನಾಯಕರ ಅಗತ್ಯ ದೇಶಕ್ಕಿದೆ~ ಎಂದು ಹೇಳಿದರು.<br /> <br /> `ಲೋಕಪಾಲ ಮಸೂದೆಗೆ ಹೊರತುಪಡಿಸಿ ಬೇರಾವುದೇ ಬೇಡಿಕೆಗೆ ಒತ್ತಾಯಿಸಿ ಮತ್ತೆ ಉಪವಾಸ ನಡೆಸುವುದಿಲ್ಲ. ಆದರೆ, ಸರ್ಕಾರ 2014ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೂ ಪೂರ್ವದಲ್ಲಿ ಮಸೂದೆ ಜಾರಿಗೊಳಿಸದಿದ್ದಲ್ಲಿ ನನ್ನ ಮಾತಿನಿಂದ ಹಿಂದೆ ಸರಿಯುತ್ತೇನೆ. ಈ ಬಾರಿ ನಾನು ರಾಮಲೀಲಾ ಮೈದಾನದಲ್ಲಿ ಉಪವಾಸ ನಡೆಸುತ್ತೇನೆ~ ಎಂದರು. ಜನಲೋಕಪಾಲ ಮಸೂದೆಯಲ್ಲಿ ತಮ್ಮ ಬೇಡಿಕೆಗಳನ್ನು ಸೇರಿಸಲು ನಿರ್ಣಯ ಅಂಗೀಕರಿಸುವುದಾಗಿ ಪ್ರಧಾನಿ ಭರವಸೆ ನೀಡಿದ್ದರು. ಆದರೆ, ಅದನ್ನು ಈಡೇರಿಸದೇ ಮೋಸ ಮಾಡಿದ್ದಾರೆ ಎಂದು ಕಳೆದ ಆಗಸ್ಟ್ನಲ್ಲಿ ನಡೆಸಿದ್ದ 13 ದಿನಗಳ ಉಪವಾಸ ಸತ್ಯಾಗ್ರಹವನ್ನು ಉಲ್ಲೇಖಿಸಿ ಹೇಳಿದರು. `ಆ ಸಂದರ್ಭದಲ್ಲಿ ಪ್ರಧಾನಿ ಭರವಸೆ ನೀಡದಿದ್ದಲ್ಲಿ ಉಪವಾಸ ಕೈಬಿಡುತ್ತಿರಲಿಲ್ಲ. ಯಾವುದೇ ಕಾರಣಕ್ಕೂ ನಾವು ಲೋಕಪಾಲಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿಲುವನ್ನು ನಾವೆಂದೂ ಬೆಂಬಲಿಸುವುದಿಲ್ಲ~ ಎಂದು ತಿಳಿಸಿದರು.<br /> <br /> ಎದುರಾಳಿಗಳ ಜತೆ ಜಗಳಕ್ಕೆ ಇಳಿಯದಂತೆ ಅರವಿಂದ್ ಕೇಜ್ರಿವಾಲ್ ಅವರ ಹೆಸರು ಉಲ್ಲೇಖಿಸದೇ ಕಾರ್ಯಕರ್ತರಿಗೆ ಕರೆ ನೀಡಿದರು.<br /> <br /> `ಹೌದು, ನಮ್ಮ ತಂಡ ಇಬ್ಭಾಗವಾಗಿದೆ. ಎರಡೂ ಮಾರ್ಗಗಳು ಅಗತ್ಯ. ಆದರೆ, ರಾಜಕೀಯ ನಮ್ಮ ಮಾರ್ಗವಲ್ಲ. ಪ್ರತಿಯೊಬ್ಬ ಕಾರ್ಯಕರ್ತರು ತಮ್ಮದೇ ಆದ ಮಾರ್ಗ ಕಂಡುಕೊಳ್ಳಬಹುದು. ಈ ವಿಚಾರದಲ್ಲಿ ಅವರು ಸಂಪೂರ್ಣ ಸ್ವತಂತ್ರರು. ಆದರೆ, ಪದೇ ಪದೇ ಮನಸ್ಸು ಬದಲಾಯಿಸಬಾರದು~ ಎಂದು ಹೇಳಿದರು.<br /> <br /> `ಇಲ್ಲಿಯವರೆಗೆ ನಾವು ಕೇವಲ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತ ಬಂದಿದ್ದೇವೆ. ಆದರೆ, ಸಂಪೂರ್ಣ ವ್ಯವಸ್ಥೆಯ ಬದಲಾವಣೆ ವಿರುದ್ಧ ಹೋರಾಟ ನಡೆಸುವ ಸಮಯ ಬಂದಿದೆ~ ಎಂದರು.</p>.<table align="center" border="1" cellpadding="1" cellspacing="1" width="450"> <tbody> <tr> <td><strong>ಕಾಂಗ್ರೆಸ್ಸಿಗನ ಮನೆಯಲ್ಲಿ ಅಣ್ಣಾ ಕಚೇರಿ</strong></td> </tr> <tr> <td>ಅಣ್ಣಾ ಹಜಾರೆ ಅವರು ದಕ್ಷಿಣ ದೆಹಲಿಯ ಸರ್ವೋದಯ ಎನ್ಕ್ಲೆವ್ನಲ್ಲಿ ತೆರೆದಿರುವ ನೂತನ ಕಚೇರಿ ಕಾಂಗ್ರೆಸ್ ಕಾರ್ಯಕರ್ತನಿಗೆ ಸೇರಿದ ಮನೆ ಎಂದು ವರದಿಯಾಗಿದೆ. ಆದರೆ ಇದನ್ನು ಅಣ್ಣಾ ತಂಡ ಅಲ್ಲಗಳೆದಿದೆ.<br /> <br /> `ಸರ್ವೋದಯ ಎನ್ಕ್ಲೆವ್ನಲ್ಲಿ ಬಿ-18 ಸಂಖ್ಯೆಯ ಮನೆ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತ ಮಹೇಶ್ ಶರ್ಮಾ ಅವರಿಗೆ ಸೇರಿದೆ. ಕಳೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವರು ಕಾಂಗ್ರೆಸ್ನಿಂದ ಟಿಕೆಟ್ ಯಾಚಿಸಿದ್ದರು~ ಎಂದು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ (ಆರ್ಡಬ್ಲ್ಯುಎ) ಉಪಾಧ್ಯಕ್ಷೆ ಪಾಯಲ್ ಅಗರ್ವಾಲ್ ತಿಳಿಸಿದ್ದಾರೆ.<br /> <br /> `ನಾವು ಚಳವಳಿಯನ್ನು ಬೆಂಬಲಿಸುತ್ತೇವೆ. ಆದರೆ, ರಾಜಕೀಯ ಪಕ್ಷವೊಂದರ ಕಾರ್ಯಕರ್ತನ ಮನೆ ಬಾಡಿಗೆ ಪಡೆದುಕೊಂಡಿರುವುದನ್ನು ಖಂಡಿಸುತ್ತೇವೆ. ನಾವೂ ಸಹ ಚಳವಳಿಯ ಭಾಗವಾಗಲು ಬಯಸಿದ್ದೇವೆ. ಆದರೆ, ಈ ವಿಷಯ ತಿಳಿದ ಬಳಿಕ ನಾವು ಅದರಲ್ಲಿ ಪಾಲ್ಗೊಳ್ಳುವುದಿಲ್ಲ~ ಎಂದಿದ್ದಾರೆ. <br /> <br /> `ನಾನು ನನ್ನ ಮನೆಯನ್ನು ಅವರಿಗೆ ಬಾಡಿಗೆಗೆ ನೀಡಿದ್ದೇನೆ. ಯಾರೇ ಬಾಡಿಗೆಗೆ ಕೇಳಿದರೆ ಅವರಿಗೆ ಕೊಡುತ್ತೇನೆ. ಯಾವುದೇ ರಾಜಕೀಯ ಪಕ್ಷದ ಸದಸ್ಯನಾಗಿಲ್ಲ~ ಎಂದು ತಮ್ಮ ವಿರುದ್ಧದ ಆರೋಪವನ್ನು ಶರ್ಮಾ ತಳ್ಳಿ ಹಾಕಿದ್ದಾರೆ. `ಶರ್ಮಾ ಕಾಂಗ್ರೆಸ್ ಪಕ್ಷದವರಾಗಿದ್ದರೆ ಮತ್ತು ಆ ಪಕ್ಷದ ಪರ ಮತ ಚಲಾಯಿಸುವವರಾಗಿದ್ದರೆ ನಮ್ಮ ಚಳವಳಿ ಮೇಲೆ ಅದು ಹೇಗೆ? ಪ್ರಭಾವ ಬೀರುತ್ತದೆ. ಏಕೆಂದರೆ ಮನೆಯನ್ನು ಬಾಡಿಗೆ ಮೇಲೆ ಪಡೆಯಲಾಗಿದೆ~ ಎಂದು ಅಣ್ಣಾ ತಂಡದ ಸದಸ್ಯ ಶಿವೇಂದ್ರ ಸಿಂಗ್ ಚೌಹಾಣ್ ಹೇಳಿದ್ದಾರೆ. ಮನೆಯನ್ನು ಪ್ರತಿ ತಿಂಗಳು 50 ಸಾವಿರ ರೂಪಾಯಿ ಬಾಡಿಗೆ ಮೇಲೆ ಅಣ್ಣಾ ತಂಡ ಪಡೆದುಕೊಂಡಿದೆ.</td> </tr> <tr> <td><strong>`ಐಎಸಿ ಹೆಸರು ಬಳಸುವುದಿಲ್ಲ~</strong></td> </tr> <tr> <td>ನವದೆಹಲಿ (ಪಿಟಿಐ): ತಮ್ಮ ಸಂಘಟನೆಗೆ ` ಇಂಡಿಯಾ ಅಗೆನೆಸ್ಟ್ ಕರಪ್ಷನ್~ (ಐಎಸಿ) ಹೆಸರು ಇಡುವುದಿಲ್ಲ ಎಂದು ಅರವಿಂದ್ ಕೇಜ್ರಿವಾಲ್ ಭಾನುವಾರ ಹೇಳಿದ್ದಾರೆ.<br /> <br /> ` ಹಜಾರೆ ಅವರು ನನ್ನ ಗುರು. ಐಎಸಿ ಹೆಸರು ಬಳಸಬಾರದು ಎಂದರೆ ಅವರು ಹೇಳಿದರೆ ನಾನು ಅದನ್ನು ಒಪ್ಪಿಕೊಳ್ಳುತ್ತೇನೆ~ ಎಂದು ಅವರು ಸ್ಪಷ್ಟಪಡಿಸಿದ್ದಾರೆ.<br /> <br /> ಕಟಕ್ ವರದಿ: ಕಪ್ಪು ಹಣದ ಬಗ್ಗೆ ಐಎಸಿ ಕಾರ್ಯಕರ್ತ ಅರವಿಂದ್ ಕೇಜ್ರಿವಾಲ್ ಅವರು ಮಾಡಿರುವ ಆರೋಪವನ್ನು ತನಿಖೆಗೊಳಪಡಿಸಬೇಕೆಂದು ಬಿಜೆಪಿ ಹಿರಿಯ ಮುಖಂಡ ರವಿ ಶಂಕರ್ ಪ್ರಸಾದ್ ಭಾನುವಾರ ಆಗ್ರಹಿಸಿದ್ದಾರೆ.</td> </tr> </tbody> </table>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ (ಪಿಟಿಐ): ಮುಂಬರುವ ಸಾರ್ವತ್ರಿಕ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರ ಬಲಿಷ್ಠ ಲೋಕಪಾಲ ಮಸೂದೆ ಜಾರಿಗೆ ತರದಿದ್ದಲ್ಲಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಎಚ್ಚರಿಕೆ ನಿಡಿದರು. ಈ ವಿಷಯದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.<br /> <br /> ದಕ್ಷಿಣ ದೆಹಲಿಯ ಸರ್ವೋದಯ ಎನ್ಕ್ಲೆವ್ನಲ್ಲಿ ರಾಜಕೀಯೇತರ ಚಳವಳಿಗಾಗಿ ಸ್ಥಾಪಿಸಿರುವ ನೂತನ ಕಚೇರಿಯನ್ನು ಭಾನುವಾರ ಉದ್ಘಾಟಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ನಾಯಕರಿಗೇನೂ ಕೊರತೆಯಿಲ್ಲ. ಆದರೆ ಈ ಎಲ್ಲ ಮುಖಂಡರು 2ಜಿ ತರಂಗಾಂತರ ಮತ್ತು ಕಲ್ಲಿದ್ದ ಗಣಿ ಹಂಚಿಕೆ ಹಗರಣದಲ್ಲಿ ಶಾಮೀಲಾಗಿರುವುದು ಸಮಸ್ಯೆ ಎಂದರು. <br /> <br /> ದೇಶದಲ್ಲಿ ಬದಲಾವಣೆ ಉಂಟು ಮಾಡಬೇಕು ಎಂದು ಯಾರಾದರು ಬಯಸಿದ್ದರೆ ಮೊದಲು ಅವರು ಗ್ರಾಮದಲ್ಲಿ ಬದಲಾವಣೆ ತರಬೇಕು. ಕೇವಲ ಸರ್ಕಾರ ನೀಡುವ ಅನುದಾನದಿಂದ ಮಾತ್ರ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ಹೇಳಿದರು. `ದೀರ್ಘ ಸಮಯದ ಹಿಂದೆಯೇ ಟಾಟಾ ಮತ್ತು ಬಿರ್ಲಾ ದೇಶದಲ್ಲಿ ಬದಲಾವಣೆ ತಂದಿದ್ದಾರೆ. ನಮಗೆ ನಾಯಕರ ಕೊರತೆ ಇಲ್ಲ. ಆದರೆ, ಈಗಿನ ನಾಯಕರು ಕಲ್ಲಿದ್ದಲು ಗಣಿ ಹಂಚಿಕೆ, 2ಜಿ ಹಗರಣದಲ್ಲಿ ಶಾಮಿಲಾಗಿದ್ದಾರೆ. ಮಾತಿಗೆ ತಕ್ಕಂತೆ ನಡೆದುಕೊಳ್ಳುವ ನಾಯಕರ ಅಗತ್ಯ ದೇಶಕ್ಕಿದೆ~ ಎಂದು ಹೇಳಿದರು.<br /> <br /> `ಲೋಕಪಾಲ ಮಸೂದೆಗೆ ಹೊರತುಪಡಿಸಿ ಬೇರಾವುದೇ ಬೇಡಿಕೆಗೆ ಒತ್ತಾಯಿಸಿ ಮತ್ತೆ ಉಪವಾಸ ನಡೆಸುವುದಿಲ್ಲ. ಆದರೆ, ಸರ್ಕಾರ 2014ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೂ ಪೂರ್ವದಲ್ಲಿ ಮಸೂದೆ ಜಾರಿಗೊಳಿಸದಿದ್ದಲ್ಲಿ ನನ್ನ ಮಾತಿನಿಂದ ಹಿಂದೆ ಸರಿಯುತ್ತೇನೆ. ಈ ಬಾರಿ ನಾನು ರಾಮಲೀಲಾ ಮೈದಾನದಲ್ಲಿ ಉಪವಾಸ ನಡೆಸುತ್ತೇನೆ~ ಎಂದರು. ಜನಲೋಕಪಾಲ ಮಸೂದೆಯಲ್ಲಿ ತಮ್ಮ ಬೇಡಿಕೆಗಳನ್ನು ಸೇರಿಸಲು ನಿರ್ಣಯ ಅಂಗೀಕರಿಸುವುದಾಗಿ ಪ್ರಧಾನಿ ಭರವಸೆ ನೀಡಿದ್ದರು. ಆದರೆ, ಅದನ್ನು ಈಡೇರಿಸದೇ ಮೋಸ ಮಾಡಿದ್ದಾರೆ ಎಂದು ಕಳೆದ ಆಗಸ್ಟ್ನಲ್ಲಿ ನಡೆಸಿದ್ದ 13 ದಿನಗಳ ಉಪವಾಸ ಸತ್ಯಾಗ್ರಹವನ್ನು ಉಲ್ಲೇಖಿಸಿ ಹೇಳಿದರು. `ಆ ಸಂದರ್ಭದಲ್ಲಿ ಪ್ರಧಾನಿ ಭರವಸೆ ನೀಡದಿದ್ದಲ್ಲಿ ಉಪವಾಸ ಕೈಬಿಡುತ್ತಿರಲಿಲ್ಲ. ಯಾವುದೇ ಕಾರಣಕ್ಕೂ ನಾವು ಲೋಕಪಾಲಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿಲುವನ್ನು ನಾವೆಂದೂ ಬೆಂಬಲಿಸುವುದಿಲ್ಲ~ ಎಂದು ತಿಳಿಸಿದರು.<br /> <br /> ಎದುರಾಳಿಗಳ ಜತೆ ಜಗಳಕ್ಕೆ ಇಳಿಯದಂತೆ ಅರವಿಂದ್ ಕೇಜ್ರಿವಾಲ್ ಅವರ ಹೆಸರು ಉಲ್ಲೇಖಿಸದೇ ಕಾರ್ಯಕರ್ತರಿಗೆ ಕರೆ ನೀಡಿದರು.<br /> <br /> `ಹೌದು, ನಮ್ಮ ತಂಡ ಇಬ್ಭಾಗವಾಗಿದೆ. ಎರಡೂ ಮಾರ್ಗಗಳು ಅಗತ್ಯ. ಆದರೆ, ರಾಜಕೀಯ ನಮ್ಮ ಮಾರ್ಗವಲ್ಲ. ಪ್ರತಿಯೊಬ್ಬ ಕಾರ್ಯಕರ್ತರು ತಮ್ಮದೇ ಆದ ಮಾರ್ಗ ಕಂಡುಕೊಳ್ಳಬಹುದು. ಈ ವಿಚಾರದಲ್ಲಿ ಅವರು ಸಂಪೂರ್ಣ ಸ್ವತಂತ್ರರು. ಆದರೆ, ಪದೇ ಪದೇ ಮನಸ್ಸು ಬದಲಾಯಿಸಬಾರದು~ ಎಂದು ಹೇಳಿದರು.<br /> <br /> `ಇಲ್ಲಿಯವರೆಗೆ ನಾವು ಕೇವಲ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತ ಬಂದಿದ್ದೇವೆ. ಆದರೆ, ಸಂಪೂರ್ಣ ವ್ಯವಸ್ಥೆಯ ಬದಲಾವಣೆ ವಿರುದ್ಧ ಹೋರಾಟ ನಡೆಸುವ ಸಮಯ ಬಂದಿದೆ~ ಎಂದರು.</p>.<table align="center" border="1" cellpadding="1" cellspacing="1" width="450"> <tbody> <tr> <td><strong>ಕಾಂಗ್ರೆಸ್ಸಿಗನ ಮನೆಯಲ್ಲಿ ಅಣ್ಣಾ ಕಚೇರಿ</strong></td> </tr> <tr> <td>ಅಣ್ಣಾ ಹಜಾರೆ ಅವರು ದಕ್ಷಿಣ ದೆಹಲಿಯ ಸರ್ವೋದಯ ಎನ್ಕ್ಲೆವ್ನಲ್ಲಿ ತೆರೆದಿರುವ ನೂತನ ಕಚೇರಿ ಕಾಂಗ್ರೆಸ್ ಕಾರ್ಯಕರ್ತನಿಗೆ ಸೇರಿದ ಮನೆ ಎಂದು ವರದಿಯಾಗಿದೆ. ಆದರೆ ಇದನ್ನು ಅಣ್ಣಾ ತಂಡ ಅಲ್ಲಗಳೆದಿದೆ.<br /> <br /> `ಸರ್ವೋದಯ ಎನ್ಕ್ಲೆವ್ನಲ್ಲಿ ಬಿ-18 ಸಂಖ್ಯೆಯ ಮನೆ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತ ಮಹೇಶ್ ಶರ್ಮಾ ಅವರಿಗೆ ಸೇರಿದೆ. ಕಳೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವರು ಕಾಂಗ್ರೆಸ್ನಿಂದ ಟಿಕೆಟ್ ಯಾಚಿಸಿದ್ದರು~ ಎಂದು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ (ಆರ್ಡಬ್ಲ್ಯುಎ) ಉಪಾಧ್ಯಕ್ಷೆ ಪಾಯಲ್ ಅಗರ್ವಾಲ್ ತಿಳಿಸಿದ್ದಾರೆ.<br /> <br /> `ನಾವು ಚಳವಳಿಯನ್ನು ಬೆಂಬಲಿಸುತ್ತೇವೆ. ಆದರೆ, ರಾಜಕೀಯ ಪಕ್ಷವೊಂದರ ಕಾರ್ಯಕರ್ತನ ಮನೆ ಬಾಡಿಗೆ ಪಡೆದುಕೊಂಡಿರುವುದನ್ನು ಖಂಡಿಸುತ್ತೇವೆ. ನಾವೂ ಸಹ ಚಳವಳಿಯ ಭಾಗವಾಗಲು ಬಯಸಿದ್ದೇವೆ. ಆದರೆ, ಈ ವಿಷಯ ತಿಳಿದ ಬಳಿಕ ನಾವು ಅದರಲ್ಲಿ ಪಾಲ್ಗೊಳ್ಳುವುದಿಲ್ಲ~ ಎಂದಿದ್ದಾರೆ. <br /> <br /> `ನಾನು ನನ್ನ ಮನೆಯನ್ನು ಅವರಿಗೆ ಬಾಡಿಗೆಗೆ ನೀಡಿದ್ದೇನೆ. ಯಾರೇ ಬಾಡಿಗೆಗೆ ಕೇಳಿದರೆ ಅವರಿಗೆ ಕೊಡುತ್ತೇನೆ. ಯಾವುದೇ ರಾಜಕೀಯ ಪಕ್ಷದ ಸದಸ್ಯನಾಗಿಲ್ಲ~ ಎಂದು ತಮ್ಮ ವಿರುದ್ಧದ ಆರೋಪವನ್ನು ಶರ್ಮಾ ತಳ್ಳಿ ಹಾಕಿದ್ದಾರೆ. `ಶರ್ಮಾ ಕಾಂಗ್ರೆಸ್ ಪಕ್ಷದವರಾಗಿದ್ದರೆ ಮತ್ತು ಆ ಪಕ್ಷದ ಪರ ಮತ ಚಲಾಯಿಸುವವರಾಗಿದ್ದರೆ ನಮ್ಮ ಚಳವಳಿ ಮೇಲೆ ಅದು ಹೇಗೆ? ಪ್ರಭಾವ ಬೀರುತ್ತದೆ. ಏಕೆಂದರೆ ಮನೆಯನ್ನು ಬಾಡಿಗೆ ಮೇಲೆ ಪಡೆಯಲಾಗಿದೆ~ ಎಂದು ಅಣ್ಣಾ ತಂಡದ ಸದಸ್ಯ ಶಿವೇಂದ್ರ ಸಿಂಗ್ ಚೌಹಾಣ್ ಹೇಳಿದ್ದಾರೆ. ಮನೆಯನ್ನು ಪ್ರತಿ ತಿಂಗಳು 50 ಸಾವಿರ ರೂಪಾಯಿ ಬಾಡಿಗೆ ಮೇಲೆ ಅಣ್ಣಾ ತಂಡ ಪಡೆದುಕೊಂಡಿದೆ.</td> </tr> <tr> <td><strong>`ಐಎಸಿ ಹೆಸರು ಬಳಸುವುದಿಲ್ಲ~</strong></td> </tr> <tr> <td>ನವದೆಹಲಿ (ಪಿಟಿಐ): ತಮ್ಮ ಸಂಘಟನೆಗೆ ` ಇಂಡಿಯಾ ಅಗೆನೆಸ್ಟ್ ಕರಪ್ಷನ್~ (ಐಎಸಿ) ಹೆಸರು ಇಡುವುದಿಲ್ಲ ಎಂದು ಅರವಿಂದ್ ಕೇಜ್ರಿವಾಲ್ ಭಾನುವಾರ ಹೇಳಿದ್ದಾರೆ.<br /> <br /> ` ಹಜಾರೆ ಅವರು ನನ್ನ ಗುರು. ಐಎಸಿ ಹೆಸರು ಬಳಸಬಾರದು ಎಂದರೆ ಅವರು ಹೇಳಿದರೆ ನಾನು ಅದನ್ನು ಒಪ್ಪಿಕೊಳ್ಳುತ್ತೇನೆ~ ಎಂದು ಅವರು ಸ್ಪಷ್ಟಪಡಿಸಿದ್ದಾರೆ.<br /> <br /> ಕಟಕ್ ವರದಿ: ಕಪ್ಪು ಹಣದ ಬಗ್ಗೆ ಐಎಸಿ ಕಾರ್ಯಕರ್ತ ಅರವಿಂದ್ ಕೇಜ್ರಿವಾಲ್ ಅವರು ಮಾಡಿರುವ ಆರೋಪವನ್ನು ತನಿಖೆಗೊಳಪಡಿಸಬೇಕೆಂದು ಬಿಜೆಪಿ ಹಿರಿಯ ಮುಖಂಡ ರವಿ ಶಂಕರ್ ಪ್ರಸಾದ್ ಭಾನುವಾರ ಆಗ್ರಹಿಸಿದ್ದಾರೆ.</td> </tr> </tbody> </table>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>