<p><strong>ನವದೆಹಲಿ(ಪಿಟಿಐ):</strong> ಭ್ರಷ್ಟ ಸರ್ಕಾರಿ ನೌಕರರು, ಜನಪ್ರತಿನಿಧಿಗಳ ವಿರುದ್ಧ ಕಾನೂನುಕ್ರಮ ಜರುಗಿಸುವ ಲೋಕಪಾಲ ಸ್ಥಾಪನೆಗೆ ದಾರಿಮಾಡಿಕೊಡುವ ಐತಿಹಾಸಿಕ ಲೋಕಪಾಲ ಮಸೂದೆ ಮಂಗಳವಾರ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದೆ.<br /> <br /> ಐದು ತಾಸುಗಳ ಗಂಭೀರ ಚರ್ಚೆಯ ನಂತರ ರಾಜ್ಯಸಭೆಯಲ್ಲಿ ಈ ಮಸೂದೆಗೆ ಧ್ವನಿಮತದ ಅಂಗೀಕಾರ ದೊರೆತಿದ್ದು, ಬುಧವಾರ ಲೋಕಸಭೆಯಲ್ಲಿ ಚರ್ಚೆಗೆ ಬರಲಿದೆ.<br /> <br /> ಮಸೂದೆಗೆ ಸಮಾಜವಾದಿ ಪಕ್ಷ ಹೊರತುಪಡಿಸಿ ಉಳಿದೆಲ್ಲ ಪಕ್ಷಗಳು ಬೆಂಬಲ ವ್ಯಕ್ತಪಡಿಸಿದ ಕಾರಣ ಲೋಕಸಭೆಯಲ್ಲೂ ಬುಧವಾರ ಮಸೂದೆ ಅಂಗೀಕಾರವಾಗುವ ಎಲ್ಲ ಸಾಧ್ಯತೆ ಇದೆ.<br /> <br /> ಸಂಸತ್ತಿನ ಉಭಯಸದನಗಳಲ್ಲಿ ಮಸೂದೆ ಅಂಗೀಕಾರಗೊಂಡು ಲೋಕಪಾಲ ಸ್ಥಾಪನೆಯಾದಲ್ಲಿ ಅದು ಭ್ರಷ್ಟಾಚಾರ ದೂರುಗಳ ಸಾರ್ವಜನಿಕ ತನಿಖಾಧಿಕಾರಿಯಾಗಿ (ಒಂಬುಡ್ಸ್ಮನ್) ಕೆಲಸ ಮಾಡಲಿದೆ.<br /> <br /> <strong>ಅಣ್ಣಾ ಆರೋಗ್ಯ ಏರುಪೇರು:</strong> ಈ ನಡುವೆ, ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ರಾಳೆಗಣಸಿದ್ದಿಯಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ 10ನೇ ದಿನ ಪೂರೈಸಿದ್ದು, ಅಣ್ಣಾ ಆರೋಗ್ಯ ಬಿಗಡಾಯಿಸಿದೆ.</p>.<p>ರಾಜ್ಯಸಭೆಯಲ್ಲಿ ಮಸೂದೆಗೆ ಅಂಗೀಕಾರ ದೊರೆತ ತಕ್ಷಣವೇ ರಾಳೆಗಣಸಿದ್ದಿಯಲ್ಲಿ ಸಂಭ್ರಮಾಚರಣೆ ನಡೆಯಿತು.<br /> <br /> ‘ಲೋಕಪಾಲ ಮತ್ತು ಲೋಕಾಯುಕ್ತ ಮಸೂದೆ –2011’ ಲೋಕಸಭೆಯಲ್ಲಿ ಅಂಗೀಕಾರಗೊಂಡರೂ, ಎರಡು ವರ್ಷಗಳಿಂದ ರಾಜ್ಯಸಭೆಯಲ್ಲಿ ಅಂಗೀಕಾರ ಪಡೆಯದೆ ಉಳಿದುಕೊಂಡಿತ್ತು.<br /> <br /> <strong>ವಿರೋಧ</strong>: ರಾಜ್ಯಗಳು ಲೋಕಾಯುಕ್ತ ಹುದ್ದೆಯನ್ನು ಕಡ್ಡಾಯವಾಗಿ ಸೃಷ್ಟಿಸಬೇಕು ಎಂಬ ಅಂಶವನ್ನು ಹಲವು ಪಕ್ಷಗಳು ವಿರೋಧಿಸಿದ್ದವು.<br /> ಎಲ್ಲ ಪಕ್ಷಗಳು ಮಸೂದೆಯನ್ನು ಸರ್ವಸಮ್ಮತವಾಗಿ ಒಪ್ಪಿಕೊಳ್ಳುವಂತೆ ಮಾಡಲು ಸಂಸದೀಯ ಆಯ್ಕೆ ಸಮಿತಿ ಹಲವು ತಿದ್ದುಪಡಿಗಳನ್ನು ಸೂಚಿಸಿತ್ತು. ರಾಜ್ಯಸಭೆಯಲ್ಲಿ ಮಂಡನೆಯಾದ ಮಸೂದೆಯಲ್ಲಿ ಈ ತಿದ್ದುಪಡಿಗಳನ್ನು ಅಳವಡಿಸಿಕೊಳ್ಳಲಾಗಿದೆ.<br /> <br /> ಮಸೂದೆಗೆ ಹಲವು ತಿದ್ದುಪಡಿಗಳನ್ನು ಮಾಡಿರುವ ಕಾರಣ ಈಗ ಮತ್ತೆ ಲೋಕಸಭೆಯ ಒಪ್ಪಿಗೆ ಪಡೆಯಬೇಕಾಗಿದೆ.<br /> <br /> ಲೋಕಪಾಲ ಮಸೂದೆಯ ಚರ್ಚೆ ಬೆಳಿಗ್ಗೆ ಆರಂಭವಾದ ತಕ್ಷಣವೇ ಯುಪಿಎ ಮಿತ್ರಪಕ್ಷ ಸಮಾಜವಾದಿ ಪಕ್ಷ ವಿರೋಧ ವ್ಯಕ್ತಪಡಿಸಿತು. ಅಲ್ಲದೇ ಎಸ್ಪಿಯ ಸಂಸದರು ಪ್ರತಿಭಟನೆ ನಡೆಸಿ ಕಲಾಪ ಬಹಿಷ್ಕರಿಸಿ ಹೊರನಡೆದರು.<br /> <br /> <strong>ಐತಿಹಾಸಿಕ ದಿನ</strong>: ರಾಜ್ಯಸಭೆಯಲ್ಲಿ ಲೋಕಪಾಲ ಮಸೂದೆಗೆ ಧ್ವನಿಮತದ ಅಂಗೀಕಾರ ದೊರೆತಿರುವುದನ್ನು ಐತಿಹಾಸಿಕ ದಿನ ಎಂದು ಬಣ್ಣಿಸಿರುವ ಕಾನೂನು ಸಚಿವ ಕಪಿಲ್ ಸಿಬಲ್, ಲೋಕಪಾಲದ ಮಾದರಿಯಲ್ಲಿಯೇ ರಾಜ್ಯಗಳು ಲೋಕಾಯುಕ್ತ ಆರಂಭಿಸುವ ಭರವಸೆ ವ್ಯಕ್ತಪಡಿಸಿದರು.<br /> <br /> ಪ್ರಧಾನಿಯವರನ್ನೂ ಲೋಕಪಾಲದ ವ್ಯಾಪ್ತಿಗೆ ತರಬೇಕೆಂಬ ವಿಷಯದ ಕುರಿತು ಮಾತನಾಡಿದ ಸಚಿವರು, ಈ ಸಂಬಂಧ ಹೆಚ್ಚಿನವರ ಒಮ್ಮತಾಭಿ ಪ್ರಾಯ ಇದೆ. ಆದರೆ ಕೆಲವರು ಮಾತ್ರ ತಮ್ಮದೇ ಅಭಿಪ್ರಾಯ ಹೊಂದಿದ್ದಾರೆ ಎಂದು ಅವರು ಹೇಳಿದರು.<br /> <br /> ಭ್ರಷ್ಟಾಚಾರ ತಡೆ ಕಾಯಿದೆ ಸೇರಿದಂತೆ ಇನ್ನಷ್ಟು ಕಾಯಿದೆಯನ್ನು ಸರ್ಕಾರ ಜಾರಿಗೊಳಿಸಲು ಆಸಕ್ತಿ ಹೊಂದಿದೆ. ಆದರೆ ಇದಕ್ಕೆ ಸಂಸತ್ತಿನ ಉಭಯ ಸದನಗಳು ಸುಸೂತ್ರವಾಗಿ ನಡೆಯಬೇಕು ಎಂದು ಸಿಬಲ್ ಹೇಳಿದರು.<br /> <br /> ಸರ್ಕಾರ ಹಾಗೂ ಖಾಸಗಿ ಪಾಲುದಾರಿಕೆಯ ಯೋಜನೆಗಳನ್ನು ಲೋಕಪಾಲದ ವ್ಯಾಪ್ತಿಗೆ ತರಬೇಕು ಎಂಬ ಸೀತಾರಾಂ ಯೆಚೂರಿ ಮಂಡಿಸಿದ ತಿದ್ದುಪಡಿಗೆ ಕೇವಲ 19 ಮತ ದೊರೆತ ಕಾರಣ ಬಿದ್ದುಹೋಯಿತು.<br /> <br /> <strong>50 ವರ್ಷಗಳ ಹಿಂದಿನ ಪರಿಕಲ್ಪನೆ</strong></p>.<p>ಭ್ರಷ್ಟರನ್ನು ನಿಗ್ರಹ ಮಾಡುವ ಲೋಕಪಾಲ ಸ್ಥಾಪನೆಯ ಪರಿಕಲ್ಪನೆಯ ಆರಂಭವಾಗಿದ್ದು 1960 ರ ಸುಮಾರಿಗೆ. ಲೋಕಪಾಲ ಪದವನ್ನು ಮೂರನೇ ಲೋಕಸಭೆ ಸದಸ್ಯರಾಗಿದ್ದ ಎಲ್.ಎಂ.ಸಿಂಘ್ವಿ ಹುಟ್ಟು ಹಾಕಿದರು. <br /> <br /> 1960ರಲ್ಲಿ ಕಾನೂನು ಸಚಿವರಾಗಿದ್ದ ಅಶೋಕ್ ಕುಮಾರ್ ಸೇನ್ ಲೋಕಪಾಲ ಸ್ಥಾಪನೆಯ ಪ್ರಸ್ತಾವ ಮಾಡಿದ್ದರು. ಮೊದಲ ಬಾರಿಗೆ ಜನ ಲೋಕಪಾಲ ಮಸೂದೆಯನ್ನು 1968ರಲ್ಲಿ ಶಾಂತಿಭೂಷಣ್ ಅವರು ಪ್ರಸ್ತಾಪಿಸಿದ್ದರು. 1969ರಲ್ಲಿ ಅದು ಲೋಕಸಭೆಯಲ್ಲಿ ಅಂಗೀಕಾರವಾಯಿತು. ಆದರೆ ಅದು ರಾಜ್ಯಸಭೆಯಲ್ಲಿ ಅಂಗೀಕಾರವಾಗಿರಲಿಲ್ಲ.<br /> <br /> ಆನಂತರ ಲೋಕಪಾಲ ಮಸೂದೆಯನ್ನು ಕಾಂಗ್ರೆಸ್ ಸರ್ಕಾರ ಇದ್ದಾಗ 1971,1977,1985ರಲ್ಲಿ ಕಾನೂನು ಸಚಿವ ಅಶೋಕ್ ಕುಮಾರ್ ಸೇನ್ ಅವರೇ ಮಂಡಿಸಿದ್ದರು.<br /> <br /> ಹಲವು ಸರ್ಕಾರಗಳ ಅವಧಿಯಲ್ಲಿ 1989,1996,1998,2001 ಹಾಗೂ 2005ರಲ್ಲಿ ಮಂಡಿಸಲಾಗಿದ್ದರೂ ಅಂಗೀಕಾರವಾಗಿರಲಿಲ್ಲ.<br /> <br /> <strong>ಮೂರು ಶಿಫಾರಸುಗಳಿಗೆ ಒಪ್ಪಿಗೆ</strong></p>.<p>ಮಸೂದೆಗೆ ಸಂಬಂಧಿಸಿದಂತೆ ಆಯ್ಕೆ ಸಮಿತಿಯ ಮೂರು ಶಿಫಾರಸುಗಳನ್ನು ಸರ್ಕಾರ ಒಪ್ಪಿಕೊಂಡಿದೆ. ಲೋಕಪಾಲ ತನಿಖೆ ನಡೆಸಲು ಸೂಚಿಸಿದ ಪ್ರಕರಣದ ಸಿಬಿಐ ತನಿಖಾಧಿಕಾರಿಯನ್ನು ವರ್ಗಾವಣೆ ಮಾಡದೇ ಇರುವುದು.<br /> <br /> ಲೋಕಪಾಲರ ಆಯ್ಕೆ ಪ್ರಕ್ರಿಯೆಯಲ್ಲೂ ಬದಲಾವಣೆ ಮಾಡಲಾಗಿದೆ. ಆಯ್ಕೆ ಸಮಿತಿಯಲ್ಲಿ ಪ್ರಧಾನಿ, ಲೋಕಸಭಾ ಸ್ಪೀಕರ್, ಲೋಕಸಭೆಯ ವಿರೋಧಪಕ್ಷದ ನಾಯಕ ಮತ್ತು ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳೊಂದಿಗೆ ರಾಷ್ಟ್ರಪತಿಗಳು ಹೆಸರು ಸೂಚಿಸಿದ ಗಣ್ಯರೊಬ್ಬರು ಇರುತ್ತಾರೆ.<br /> <br /> ಆಪಾದಿತ ಸರ್ಕಾರಿ ನೌಕರನ ವಿರುದ್ಧ ತನಿಖೆ ಆರಂಭದಲ್ಲಿ ಆತನ ಅಭಿಪ್ರಾಯ ಮಂಡಿಸಲು ಅವಕಾಶ ನೀಡಬಾರದು ಎಂಬ ಶಿಫಾರಸನ್ನು ಸರ್ಕಾರ ಒಪ್ಪಿಕೊಂಡಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ(ಪಿಟಿಐ):</strong> ಭ್ರಷ್ಟ ಸರ್ಕಾರಿ ನೌಕರರು, ಜನಪ್ರತಿನಿಧಿಗಳ ವಿರುದ್ಧ ಕಾನೂನುಕ್ರಮ ಜರುಗಿಸುವ ಲೋಕಪಾಲ ಸ್ಥಾಪನೆಗೆ ದಾರಿಮಾಡಿಕೊಡುವ ಐತಿಹಾಸಿಕ ಲೋಕಪಾಲ ಮಸೂದೆ ಮಂಗಳವಾರ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದೆ.<br /> <br /> ಐದು ತಾಸುಗಳ ಗಂಭೀರ ಚರ್ಚೆಯ ನಂತರ ರಾಜ್ಯಸಭೆಯಲ್ಲಿ ಈ ಮಸೂದೆಗೆ ಧ್ವನಿಮತದ ಅಂಗೀಕಾರ ದೊರೆತಿದ್ದು, ಬುಧವಾರ ಲೋಕಸಭೆಯಲ್ಲಿ ಚರ್ಚೆಗೆ ಬರಲಿದೆ.<br /> <br /> ಮಸೂದೆಗೆ ಸಮಾಜವಾದಿ ಪಕ್ಷ ಹೊರತುಪಡಿಸಿ ಉಳಿದೆಲ್ಲ ಪಕ್ಷಗಳು ಬೆಂಬಲ ವ್ಯಕ್ತಪಡಿಸಿದ ಕಾರಣ ಲೋಕಸಭೆಯಲ್ಲೂ ಬುಧವಾರ ಮಸೂದೆ ಅಂಗೀಕಾರವಾಗುವ ಎಲ್ಲ ಸಾಧ್ಯತೆ ಇದೆ.<br /> <br /> ಸಂಸತ್ತಿನ ಉಭಯಸದನಗಳಲ್ಲಿ ಮಸೂದೆ ಅಂಗೀಕಾರಗೊಂಡು ಲೋಕಪಾಲ ಸ್ಥಾಪನೆಯಾದಲ್ಲಿ ಅದು ಭ್ರಷ್ಟಾಚಾರ ದೂರುಗಳ ಸಾರ್ವಜನಿಕ ತನಿಖಾಧಿಕಾರಿಯಾಗಿ (ಒಂಬುಡ್ಸ್ಮನ್) ಕೆಲಸ ಮಾಡಲಿದೆ.<br /> <br /> <strong>ಅಣ್ಣಾ ಆರೋಗ್ಯ ಏರುಪೇರು:</strong> ಈ ನಡುವೆ, ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ರಾಳೆಗಣಸಿದ್ದಿಯಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ 10ನೇ ದಿನ ಪೂರೈಸಿದ್ದು, ಅಣ್ಣಾ ಆರೋಗ್ಯ ಬಿಗಡಾಯಿಸಿದೆ.</p>.<p>ರಾಜ್ಯಸಭೆಯಲ್ಲಿ ಮಸೂದೆಗೆ ಅಂಗೀಕಾರ ದೊರೆತ ತಕ್ಷಣವೇ ರಾಳೆಗಣಸಿದ್ದಿಯಲ್ಲಿ ಸಂಭ್ರಮಾಚರಣೆ ನಡೆಯಿತು.<br /> <br /> ‘ಲೋಕಪಾಲ ಮತ್ತು ಲೋಕಾಯುಕ್ತ ಮಸೂದೆ –2011’ ಲೋಕಸಭೆಯಲ್ಲಿ ಅಂಗೀಕಾರಗೊಂಡರೂ, ಎರಡು ವರ್ಷಗಳಿಂದ ರಾಜ್ಯಸಭೆಯಲ್ಲಿ ಅಂಗೀಕಾರ ಪಡೆಯದೆ ಉಳಿದುಕೊಂಡಿತ್ತು.<br /> <br /> <strong>ವಿರೋಧ</strong>: ರಾಜ್ಯಗಳು ಲೋಕಾಯುಕ್ತ ಹುದ್ದೆಯನ್ನು ಕಡ್ಡಾಯವಾಗಿ ಸೃಷ್ಟಿಸಬೇಕು ಎಂಬ ಅಂಶವನ್ನು ಹಲವು ಪಕ್ಷಗಳು ವಿರೋಧಿಸಿದ್ದವು.<br /> ಎಲ್ಲ ಪಕ್ಷಗಳು ಮಸೂದೆಯನ್ನು ಸರ್ವಸಮ್ಮತವಾಗಿ ಒಪ್ಪಿಕೊಳ್ಳುವಂತೆ ಮಾಡಲು ಸಂಸದೀಯ ಆಯ್ಕೆ ಸಮಿತಿ ಹಲವು ತಿದ್ದುಪಡಿಗಳನ್ನು ಸೂಚಿಸಿತ್ತು. ರಾಜ್ಯಸಭೆಯಲ್ಲಿ ಮಂಡನೆಯಾದ ಮಸೂದೆಯಲ್ಲಿ ಈ ತಿದ್ದುಪಡಿಗಳನ್ನು ಅಳವಡಿಸಿಕೊಳ್ಳಲಾಗಿದೆ.<br /> <br /> ಮಸೂದೆಗೆ ಹಲವು ತಿದ್ದುಪಡಿಗಳನ್ನು ಮಾಡಿರುವ ಕಾರಣ ಈಗ ಮತ್ತೆ ಲೋಕಸಭೆಯ ಒಪ್ಪಿಗೆ ಪಡೆಯಬೇಕಾಗಿದೆ.<br /> <br /> ಲೋಕಪಾಲ ಮಸೂದೆಯ ಚರ್ಚೆ ಬೆಳಿಗ್ಗೆ ಆರಂಭವಾದ ತಕ್ಷಣವೇ ಯುಪಿಎ ಮಿತ್ರಪಕ್ಷ ಸಮಾಜವಾದಿ ಪಕ್ಷ ವಿರೋಧ ವ್ಯಕ್ತಪಡಿಸಿತು. ಅಲ್ಲದೇ ಎಸ್ಪಿಯ ಸಂಸದರು ಪ್ರತಿಭಟನೆ ನಡೆಸಿ ಕಲಾಪ ಬಹಿಷ್ಕರಿಸಿ ಹೊರನಡೆದರು.<br /> <br /> <strong>ಐತಿಹಾಸಿಕ ದಿನ</strong>: ರಾಜ್ಯಸಭೆಯಲ್ಲಿ ಲೋಕಪಾಲ ಮಸೂದೆಗೆ ಧ್ವನಿಮತದ ಅಂಗೀಕಾರ ದೊರೆತಿರುವುದನ್ನು ಐತಿಹಾಸಿಕ ದಿನ ಎಂದು ಬಣ್ಣಿಸಿರುವ ಕಾನೂನು ಸಚಿವ ಕಪಿಲ್ ಸಿಬಲ್, ಲೋಕಪಾಲದ ಮಾದರಿಯಲ್ಲಿಯೇ ರಾಜ್ಯಗಳು ಲೋಕಾಯುಕ್ತ ಆರಂಭಿಸುವ ಭರವಸೆ ವ್ಯಕ್ತಪಡಿಸಿದರು.<br /> <br /> ಪ್ರಧಾನಿಯವರನ್ನೂ ಲೋಕಪಾಲದ ವ್ಯಾಪ್ತಿಗೆ ತರಬೇಕೆಂಬ ವಿಷಯದ ಕುರಿತು ಮಾತನಾಡಿದ ಸಚಿವರು, ಈ ಸಂಬಂಧ ಹೆಚ್ಚಿನವರ ಒಮ್ಮತಾಭಿ ಪ್ರಾಯ ಇದೆ. ಆದರೆ ಕೆಲವರು ಮಾತ್ರ ತಮ್ಮದೇ ಅಭಿಪ್ರಾಯ ಹೊಂದಿದ್ದಾರೆ ಎಂದು ಅವರು ಹೇಳಿದರು.<br /> <br /> ಭ್ರಷ್ಟಾಚಾರ ತಡೆ ಕಾಯಿದೆ ಸೇರಿದಂತೆ ಇನ್ನಷ್ಟು ಕಾಯಿದೆಯನ್ನು ಸರ್ಕಾರ ಜಾರಿಗೊಳಿಸಲು ಆಸಕ್ತಿ ಹೊಂದಿದೆ. ಆದರೆ ಇದಕ್ಕೆ ಸಂಸತ್ತಿನ ಉಭಯ ಸದನಗಳು ಸುಸೂತ್ರವಾಗಿ ನಡೆಯಬೇಕು ಎಂದು ಸಿಬಲ್ ಹೇಳಿದರು.<br /> <br /> ಸರ್ಕಾರ ಹಾಗೂ ಖಾಸಗಿ ಪಾಲುದಾರಿಕೆಯ ಯೋಜನೆಗಳನ್ನು ಲೋಕಪಾಲದ ವ್ಯಾಪ್ತಿಗೆ ತರಬೇಕು ಎಂಬ ಸೀತಾರಾಂ ಯೆಚೂರಿ ಮಂಡಿಸಿದ ತಿದ್ದುಪಡಿಗೆ ಕೇವಲ 19 ಮತ ದೊರೆತ ಕಾರಣ ಬಿದ್ದುಹೋಯಿತು.<br /> <br /> <strong>50 ವರ್ಷಗಳ ಹಿಂದಿನ ಪರಿಕಲ್ಪನೆ</strong></p>.<p>ಭ್ರಷ್ಟರನ್ನು ನಿಗ್ರಹ ಮಾಡುವ ಲೋಕಪಾಲ ಸ್ಥಾಪನೆಯ ಪರಿಕಲ್ಪನೆಯ ಆರಂಭವಾಗಿದ್ದು 1960 ರ ಸುಮಾರಿಗೆ. ಲೋಕಪಾಲ ಪದವನ್ನು ಮೂರನೇ ಲೋಕಸಭೆ ಸದಸ್ಯರಾಗಿದ್ದ ಎಲ್.ಎಂ.ಸಿಂಘ್ವಿ ಹುಟ್ಟು ಹಾಕಿದರು. <br /> <br /> 1960ರಲ್ಲಿ ಕಾನೂನು ಸಚಿವರಾಗಿದ್ದ ಅಶೋಕ್ ಕುಮಾರ್ ಸೇನ್ ಲೋಕಪಾಲ ಸ್ಥಾಪನೆಯ ಪ್ರಸ್ತಾವ ಮಾಡಿದ್ದರು. ಮೊದಲ ಬಾರಿಗೆ ಜನ ಲೋಕಪಾಲ ಮಸೂದೆಯನ್ನು 1968ರಲ್ಲಿ ಶಾಂತಿಭೂಷಣ್ ಅವರು ಪ್ರಸ್ತಾಪಿಸಿದ್ದರು. 1969ರಲ್ಲಿ ಅದು ಲೋಕಸಭೆಯಲ್ಲಿ ಅಂಗೀಕಾರವಾಯಿತು. ಆದರೆ ಅದು ರಾಜ್ಯಸಭೆಯಲ್ಲಿ ಅಂಗೀಕಾರವಾಗಿರಲಿಲ್ಲ.<br /> <br /> ಆನಂತರ ಲೋಕಪಾಲ ಮಸೂದೆಯನ್ನು ಕಾಂಗ್ರೆಸ್ ಸರ್ಕಾರ ಇದ್ದಾಗ 1971,1977,1985ರಲ್ಲಿ ಕಾನೂನು ಸಚಿವ ಅಶೋಕ್ ಕುಮಾರ್ ಸೇನ್ ಅವರೇ ಮಂಡಿಸಿದ್ದರು.<br /> <br /> ಹಲವು ಸರ್ಕಾರಗಳ ಅವಧಿಯಲ್ಲಿ 1989,1996,1998,2001 ಹಾಗೂ 2005ರಲ್ಲಿ ಮಂಡಿಸಲಾಗಿದ್ದರೂ ಅಂಗೀಕಾರವಾಗಿರಲಿಲ್ಲ.<br /> <br /> <strong>ಮೂರು ಶಿಫಾರಸುಗಳಿಗೆ ಒಪ್ಪಿಗೆ</strong></p>.<p>ಮಸೂದೆಗೆ ಸಂಬಂಧಿಸಿದಂತೆ ಆಯ್ಕೆ ಸಮಿತಿಯ ಮೂರು ಶಿಫಾರಸುಗಳನ್ನು ಸರ್ಕಾರ ಒಪ್ಪಿಕೊಂಡಿದೆ. ಲೋಕಪಾಲ ತನಿಖೆ ನಡೆಸಲು ಸೂಚಿಸಿದ ಪ್ರಕರಣದ ಸಿಬಿಐ ತನಿಖಾಧಿಕಾರಿಯನ್ನು ವರ್ಗಾವಣೆ ಮಾಡದೇ ಇರುವುದು.<br /> <br /> ಲೋಕಪಾಲರ ಆಯ್ಕೆ ಪ್ರಕ್ರಿಯೆಯಲ್ಲೂ ಬದಲಾವಣೆ ಮಾಡಲಾಗಿದೆ. ಆಯ್ಕೆ ಸಮಿತಿಯಲ್ಲಿ ಪ್ರಧಾನಿ, ಲೋಕಸಭಾ ಸ್ಪೀಕರ್, ಲೋಕಸಭೆಯ ವಿರೋಧಪಕ್ಷದ ನಾಯಕ ಮತ್ತು ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳೊಂದಿಗೆ ರಾಷ್ಟ್ರಪತಿಗಳು ಹೆಸರು ಸೂಚಿಸಿದ ಗಣ್ಯರೊಬ್ಬರು ಇರುತ್ತಾರೆ.<br /> <br /> ಆಪಾದಿತ ಸರ್ಕಾರಿ ನೌಕರನ ವಿರುದ್ಧ ತನಿಖೆ ಆರಂಭದಲ್ಲಿ ಆತನ ಅಭಿಪ್ರಾಯ ಮಂಡಿಸಲು ಅವಕಾಶ ನೀಡಬಾರದು ಎಂಬ ಶಿಫಾರಸನ್ನು ಸರ್ಕಾರ ಒಪ್ಪಿಕೊಂಡಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>