<p><strong>ಸವದತ್ತಿ: </strong>ಗುರ್ಲಹೊಸೂರಿನ ಹೂಲಿ ಅಜ್ಜನವರ ಗುಡಿಯ ಗೂಳಿಯು ರೈತರ ಎತ್ತುಗಳಿಗೆ ಹಾಯ್ದು ಗಾಯಗೊಳಿಸುತ್ತಿದೆ ಎಂದು ಕೆಲವರು ವಧಾಗಾರರಿಗೆ ಮಾರಲು ಮುಂದಾದಾಗ, ವಿಶ್ವಹಿಂದೂ ಪರಿಷತ್ನ ಸದಸ್ಯರು ಅದನ್ನು ತಪ್ಪಿಸಿ ಬೆಳಗಾವಿ ಹಲಗಾದ ಗೋಶಾಲೆಗೆ ಕಳಿಸಿದ ಘಟನೆ ಬುಧವಾರ ನಡೆದಿದೆ.<br /> <br /> ಈ ಸಂದರ್ಭದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ವಿ.ಹಿ.ಪನ ಜಿಲ್ಲಾ ಸಂಯೋಜಕ ಶಂಕರ ಮನ್ನೂರ, ರೈತ ಬಾಂಧವರು ಕೊಂದು ತಿನ್ನುವ ವ<br /> ರಿಗೆ ಹಣಕ್ಕಾಗಿ ಮಾರುವುದರ ಬದಲು ಗೋಶಾಲೆಗಳಿಗೆ ಕೊಡಿ. ಅದರ ವಂಶ ಬೆಳೆಸಲು ಸಹಕರಿಸಿ ಎಂದರು.<br /> <br /> ಗೋವುಗಳನ್ನು ಮನೆಯ ಸದಸ್ಯನಂ ತೆ ಕಾಣುವುದರ ಜತೆಗೆ ವಯಸ್ಸಾದ ಗೋವುಗಳಿಗೆ ಕಡೆಯ ದಿನಗಳನ್ನು ನೆಮ್ಮದಿಯಿಂದ ಕಳೆಯಲು ಅವಕಾಶ ಮಾಡಿಕೊಡಿ ಎಂದರು. <br /> ಅಲ್ಲಿದ್ದ ಮಹಿಳೆಯರು ‘ ಈ ಗೂಳು ನಿತ್ಯ ನಮ್ಮ ಮನೆಗೆ ಬಂದು ಪೂಜೆ ಮಾಡಿಸಿಕೊಂಡು, ನಾವು ಕೊಟ್ಟ ರೊಟ್ಟಿ ಹಾಗೂ ತರಕಾರಿ ಸೊಪ್ಪುಗಳನ್ನು ತಿಂದು ಹೋಗುತ್ತಿತ್ತು. ಯಾರಿಗೂ ಹಾನಿ ಮಾಡಿಲ್ಲ’ ಎಂದು ಹೇಳಿದರು.ನಂತರ ಆ ಗೂಳಿಯನ್ನು ಹಲಗಾ ಗೋಶಾಲೆಗೆ ಕಳಿಸಿದರು. ಈ ಸಂದರ್ಭದಲ್ಲಿ ಅಲ್ಲಿನ ಹಿರಿಯರು, ವಿಶ್ವ ಹಿಂದೂ ಪರಿಷತ್ನ ಸದಸ್ಯರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸವದತ್ತಿ: </strong>ಗುರ್ಲಹೊಸೂರಿನ ಹೂಲಿ ಅಜ್ಜನವರ ಗುಡಿಯ ಗೂಳಿಯು ರೈತರ ಎತ್ತುಗಳಿಗೆ ಹಾಯ್ದು ಗಾಯಗೊಳಿಸುತ್ತಿದೆ ಎಂದು ಕೆಲವರು ವಧಾಗಾರರಿಗೆ ಮಾರಲು ಮುಂದಾದಾಗ, ವಿಶ್ವಹಿಂದೂ ಪರಿಷತ್ನ ಸದಸ್ಯರು ಅದನ್ನು ತಪ್ಪಿಸಿ ಬೆಳಗಾವಿ ಹಲಗಾದ ಗೋಶಾಲೆಗೆ ಕಳಿಸಿದ ಘಟನೆ ಬುಧವಾರ ನಡೆದಿದೆ.<br /> <br /> ಈ ಸಂದರ್ಭದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ವಿ.ಹಿ.ಪನ ಜಿಲ್ಲಾ ಸಂಯೋಜಕ ಶಂಕರ ಮನ್ನೂರ, ರೈತ ಬಾಂಧವರು ಕೊಂದು ತಿನ್ನುವ ವ<br /> ರಿಗೆ ಹಣಕ್ಕಾಗಿ ಮಾರುವುದರ ಬದಲು ಗೋಶಾಲೆಗಳಿಗೆ ಕೊಡಿ. ಅದರ ವಂಶ ಬೆಳೆಸಲು ಸಹಕರಿಸಿ ಎಂದರು.<br /> <br /> ಗೋವುಗಳನ್ನು ಮನೆಯ ಸದಸ್ಯನಂ ತೆ ಕಾಣುವುದರ ಜತೆಗೆ ವಯಸ್ಸಾದ ಗೋವುಗಳಿಗೆ ಕಡೆಯ ದಿನಗಳನ್ನು ನೆಮ್ಮದಿಯಿಂದ ಕಳೆಯಲು ಅವಕಾಶ ಮಾಡಿಕೊಡಿ ಎಂದರು. <br /> ಅಲ್ಲಿದ್ದ ಮಹಿಳೆಯರು ‘ ಈ ಗೂಳು ನಿತ್ಯ ನಮ್ಮ ಮನೆಗೆ ಬಂದು ಪೂಜೆ ಮಾಡಿಸಿಕೊಂಡು, ನಾವು ಕೊಟ್ಟ ರೊಟ್ಟಿ ಹಾಗೂ ತರಕಾರಿ ಸೊಪ್ಪುಗಳನ್ನು ತಿಂದು ಹೋಗುತ್ತಿತ್ತು. ಯಾರಿಗೂ ಹಾನಿ ಮಾಡಿಲ್ಲ’ ಎಂದು ಹೇಳಿದರು.ನಂತರ ಆ ಗೂಳಿಯನ್ನು ಹಲಗಾ ಗೋಶಾಲೆಗೆ ಕಳಿಸಿದರು. ಈ ಸಂದರ್ಭದಲ್ಲಿ ಅಲ್ಲಿನ ಹಿರಿಯರು, ವಿಶ್ವ ಹಿಂದೂ ಪರಿಷತ್ನ ಸದಸ್ಯರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>