<div> ಬಂಡೀಪುರ, ನಾಗರಹೊಳೆ ಮತ್ತು ಬಿಳಿಗಿರಿರಂಗನ ಬೆಟ್ಟ ಸುತ್ತಮುತ್ತಲಿನ ಕಾಡು ಬಹಳಷ್ಟು ಕ್ಷೀಣಿಸಿದೆ. ನಿತ್ಯಹಸಿರಿನ ಕಾಡು ಬೇಸಿಗೆಯಲ್ಲಿ ಎಲೆ ಉದುರಿಸುವ ಮಟ್ಟಕ್ಕೆ ಬಂದರೆ ಅದು ನಾಶದತ್ತ ಸಾಗುತ್ತಿದೆ ಎಂದೇ ಅರ್ಥ. ಒಂದು ಕಾಲದಲ್ಲಿ ಬಂಡೀಪುರ, ನಾಗರಹೊಳೆ ಅರಣ್ಯ ದಟ್ಟವಾಗಿ ನಿತ್ಯಹಸಿರು ವನವಾಗಿತ್ತು. ಆದರೆ, ಆಳುವ ಸರ್ಕಾರ, ಅಧಿಕಾರಿಗಳು ಮತ್ತು ಕಾಡುಕಳ್ಳರು ಸೇರಿ ಕಾಡನ್ನು ಇಂದಿನ ಸ್ಥಿತಿಗೆ ತಂದಿದ್ದಾರೆ.<br /> <div> ಅದಿರಲಿ. ಮುಂದೆ ಏನು ಮಾಡಬಹುದೆಂದು ಯೋಚಿಸೋಣ. ಮುಂದಿನ ಮಳೆಗಾಲದಲ್ಲಿ ಕಾಡಿನೊಳಗೆ ಸಾವಿರಾರು ಬೀಜ, ಗಿಡಗಳನ್ನು ಹಾಕುವ ಪ್ರಯತ್ನ ನಡೆಯಬೇಕು. ಎಲ್ಲೆಲ್ಲಿ ತೆರೆದ ಜಾಗಗಳಿವೆಯೋ ಅಲ್ಲೆಲ್ಲಾ ಬಿತ್ತನೆಯಾಗಬೇಕು. ಇದಕ್ಕಾಗಿ ಕಾಡುಮರಗಳ ಬೀಜಗಳನ್ನು ಸಂಗ್ರಹಿಸುವ ಕೆಲಸ ಈಗಲೇ ಶುರು ಮಾಡಬೇಕು. ಅರಣ್ಯ ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ.<br /> </div><div> ಗಸ್ತಿನಲ್ಲಿ ತಿರುಗುವ ಅರಣ್ಯ ಸಿಬ್ಬಂದಿ ಜೇಬಿನಲ್ಲಿ ಒಂದಷ್ಟು ಬೀಜಗಳನ್ನು ಇಟ್ಟುಕೊಂಡು ಆಗಲೇ ಈ ಕೆಲಸ ಮಾಡಿದ್ದಿದ್ದರೆ ಈ ಬೆಂಕಿ ಅನಾಹುತ ತಪ್ಪಿಸಬಹುದಿತ್ತು. ಸಾವಿರಾರು ಎಕರೆ ಅರಣ್ಯ ಪ್ರದೇಶ ಸುಟ್ಟು ಬೂದಿಯಾಗಿದ್ದನ್ನು ತಪ್ಪಿಸಿಬಹುದಿತ್ತು.</div><div> ಕಾಡನ್ನು ನಿತ್ಯಹಸಿರು ವನವಾಗಿ ಬದಲಾಯಿಸುವುದೊಂದೇ ಕಾಳ್ಗಿಚಿನಿಂದ ಪಾರಾಗಲು ನಮ್ಮ ಮುಂದಿರುವ ಮಾರ್ಗ. </div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<div> ಬಂಡೀಪುರ, ನಾಗರಹೊಳೆ ಮತ್ತು ಬಿಳಿಗಿರಿರಂಗನ ಬೆಟ್ಟ ಸುತ್ತಮುತ್ತಲಿನ ಕಾಡು ಬಹಳಷ್ಟು ಕ್ಷೀಣಿಸಿದೆ. ನಿತ್ಯಹಸಿರಿನ ಕಾಡು ಬೇಸಿಗೆಯಲ್ಲಿ ಎಲೆ ಉದುರಿಸುವ ಮಟ್ಟಕ್ಕೆ ಬಂದರೆ ಅದು ನಾಶದತ್ತ ಸಾಗುತ್ತಿದೆ ಎಂದೇ ಅರ್ಥ. ಒಂದು ಕಾಲದಲ್ಲಿ ಬಂಡೀಪುರ, ನಾಗರಹೊಳೆ ಅರಣ್ಯ ದಟ್ಟವಾಗಿ ನಿತ್ಯಹಸಿರು ವನವಾಗಿತ್ತು. ಆದರೆ, ಆಳುವ ಸರ್ಕಾರ, ಅಧಿಕಾರಿಗಳು ಮತ್ತು ಕಾಡುಕಳ್ಳರು ಸೇರಿ ಕಾಡನ್ನು ಇಂದಿನ ಸ್ಥಿತಿಗೆ ತಂದಿದ್ದಾರೆ.<br /> <div> ಅದಿರಲಿ. ಮುಂದೆ ಏನು ಮಾಡಬಹುದೆಂದು ಯೋಚಿಸೋಣ. ಮುಂದಿನ ಮಳೆಗಾಲದಲ್ಲಿ ಕಾಡಿನೊಳಗೆ ಸಾವಿರಾರು ಬೀಜ, ಗಿಡಗಳನ್ನು ಹಾಕುವ ಪ್ರಯತ್ನ ನಡೆಯಬೇಕು. ಎಲ್ಲೆಲ್ಲಿ ತೆರೆದ ಜಾಗಗಳಿವೆಯೋ ಅಲ್ಲೆಲ್ಲಾ ಬಿತ್ತನೆಯಾಗಬೇಕು. ಇದಕ್ಕಾಗಿ ಕಾಡುಮರಗಳ ಬೀಜಗಳನ್ನು ಸಂಗ್ರಹಿಸುವ ಕೆಲಸ ಈಗಲೇ ಶುರು ಮಾಡಬೇಕು. ಅರಣ್ಯ ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ.<br /> </div><div> ಗಸ್ತಿನಲ್ಲಿ ತಿರುಗುವ ಅರಣ್ಯ ಸಿಬ್ಬಂದಿ ಜೇಬಿನಲ್ಲಿ ಒಂದಷ್ಟು ಬೀಜಗಳನ್ನು ಇಟ್ಟುಕೊಂಡು ಆಗಲೇ ಈ ಕೆಲಸ ಮಾಡಿದ್ದಿದ್ದರೆ ಈ ಬೆಂಕಿ ಅನಾಹುತ ತಪ್ಪಿಸಬಹುದಿತ್ತು. ಸಾವಿರಾರು ಎಕರೆ ಅರಣ್ಯ ಪ್ರದೇಶ ಸುಟ್ಟು ಬೂದಿಯಾಗಿದ್ದನ್ನು ತಪ್ಪಿಸಿಬಹುದಿತ್ತು.</div><div> ಕಾಡನ್ನು ನಿತ್ಯಹಸಿರು ವನವಾಗಿ ಬದಲಾಯಿಸುವುದೊಂದೇ ಕಾಳ್ಗಿಚಿನಿಂದ ಪಾರಾಗಲು ನಮ್ಮ ಮುಂದಿರುವ ಮಾರ್ಗ. </div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>