<p><span style="font-size: 26px;"><strong>ಚಡಚಣ:</strong> ಇಂಡಿ ತಾಲ್ಲೂಕಿನಲ್ಲಿ ಕೆಲ ದಶಕದ ಹಿಂದೆ ಕೃಷ್ಣಾ ಕಾಲುವೆ ನಿರ್ಮಾಣದ ಯೋಜನೆ ಆರಂಭಗೊಂಡಾಗ ರೈತರ ಮೊಗದಲ್ಲಿ ಆಶಾಭಾವನೆ ಮೂಡಿತ್ತು. ಆದರೆ ಈ ಯೋಜನೆ ಅಧಿಕಾರಿಗಳ ನಿರ್ಲಕ್ಷ್ಯ, ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದಾಗಿ ವಿಫಲವಾಗಿದೆ.</span><br /> <br /> ಕೃಷ್ಣಾ ಅಣೆಕಟ್ಟಿನಿಂದ ನಾರಾಯಣಪುರ ಡ್ಯಾಂ ಮೂಲಕ ಇಂಡಿ ತಾಲ್ಲೂಕಿನಲ್ಲಿ ಸಾತಲಾಂವ ಸಾಲುಟಗಿ, ಲಚ್ಯಾಣ, ಹಿರಸಂಗ ಚಿಕ್ಕ ಲೋಣಿ, ಹಲಸಂಗಿ ಮಣಂಕಲಗಿ, ತದ್ದೇವಾಡಿ, ಹತ್ತಳ್ಳಿ ರೇವತಗಾಂವ ಮೂಲಕ ಭೀಮಾ ನದಿ ತೀರದಲ್ಲಿರುವ ದಸೂರ ಗ್ರಾಮಕ್ಕೆ ಬಂದು ತಲುಪುವ ಈ ಕಾಲುವೆಗಳಲ್ಲಿ ನೀರು ಹರಿಯುವುದೇ ದುಸ್ತರ.<br /> <br /> ಕಳಪೆ ಕಾಮಗಾರಿಯಿಂದಾಗಿ ಎಲ್ಲೆಂದರಲ್ಲಿ ಉದುರಿ ಬೀಳುವ ಸಿಮೆಂಟ್, ಕಾಲುವೆಗಳಲ್ಲಿನ ಬಿರುಕುಗಳು, ತುಂಬಿ ನಿಂತ ಹೂಳು, ಕಿತ್ತು ಹೋದ ಗೇಟ್ಗಳು ಕಾಣಿಸುತ್ತಿವೆ.<br /> <br /> ಕಾಲುವೆಯಲ್ಲಿ ನೀರು ಸಮತಟ್ಟಾಗಿ ಹರಿಯುವ ಬದಲು, ಒಂದೇ ಬದಿಗೆ ಹರಿದು, ಹಳ್ಳ ಕೊಳ್ಳಗಳಲ್ಲಿ ನೀರು ಹರಿದು ಹೋಗಿ ಕಾಲುವೆಯ ಕೊನೆಯ ಜಮೀನಿಗೆ ಮುಟ್ಟುವುದಿಲ್ಲ. ಕೃಷ್ಣಾ ಕಾಲುವೆಯಿಂದ ಹಲಸಂಗಿಯವರೆಗೆ ಅಲ್ಪ ಸ್ವಲ್ಪ ನೀರು ಹರಿದು ಹಳ್ಳಕ್ಕೆ ಕೂಡುತ್ತಿದೆ.<br /> <br /> ಈ ಗ್ರಾಮದಿಂದ ಮುಂದಿನ ಗ್ರಾಮಗಳಾದ ಏಳಗಿ, ಮಣಂಕಲಗಿ ಮೂಲಕ ದಸೂರ ವರೆಗೆ ನೀರು ಹರಿಯುವುದೇ ಇಲ್ಲ. ಪ್ರತಿ ವರ್ಷ ಲಕ್ಷಾಂತರ ಹಣ ವ್ಯಯಿಸಿ ಕಾಲುವೆಯಲ್ಲಿನ ಹೂಳು ತೆಗೆದರೂ ರೈತರ ಹೊಲಗಾಲುವೆಗಳಿಗೆ ನೀರು ಹರಿಯುವದು ಮಾತ್ರ ಮರೀಚಿಕೆಯಾಗಿದೆ.<br /> <br /> ಕೋಟ್ಯಂತರ ಹಣ ವ್ಯಯಿಸಿ, ರೈತರ ಜಮೀನುಗಳಿಗೆ ನೀರು ಪೂರೈಸುವ ಸರ್ಕಾರದ ಯೋಜನೆ,ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ, ನಿರ್ವಹಣೆಯ ಕೊರತೆಯಿಂದಾಗಿ ಕೃಷ್ಣಾ ನದಿಯಿಂದ ನೀರು ಹರಿಸುವ ಈ ಯೋಜನೆ ರೈತರಿಗೆ ವರವಾಗದೆ ಮರೀಚಿಕೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 26px;"><strong>ಚಡಚಣ:</strong> ಇಂಡಿ ತಾಲ್ಲೂಕಿನಲ್ಲಿ ಕೆಲ ದಶಕದ ಹಿಂದೆ ಕೃಷ್ಣಾ ಕಾಲುವೆ ನಿರ್ಮಾಣದ ಯೋಜನೆ ಆರಂಭಗೊಂಡಾಗ ರೈತರ ಮೊಗದಲ್ಲಿ ಆಶಾಭಾವನೆ ಮೂಡಿತ್ತು. ಆದರೆ ಈ ಯೋಜನೆ ಅಧಿಕಾರಿಗಳ ನಿರ್ಲಕ್ಷ್ಯ, ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದಾಗಿ ವಿಫಲವಾಗಿದೆ.</span><br /> <br /> ಕೃಷ್ಣಾ ಅಣೆಕಟ್ಟಿನಿಂದ ನಾರಾಯಣಪುರ ಡ್ಯಾಂ ಮೂಲಕ ಇಂಡಿ ತಾಲ್ಲೂಕಿನಲ್ಲಿ ಸಾತಲಾಂವ ಸಾಲುಟಗಿ, ಲಚ್ಯಾಣ, ಹಿರಸಂಗ ಚಿಕ್ಕ ಲೋಣಿ, ಹಲಸಂಗಿ ಮಣಂಕಲಗಿ, ತದ್ದೇವಾಡಿ, ಹತ್ತಳ್ಳಿ ರೇವತಗಾಂವ ಮೂಲಕ ಭೀಮಾ ನದಿ ತೀರದಲ್ಲಿರುವ ದಸೂರ ಗ್ರಾಮಕ್ಕೆ ಬಂದು ತಲುಪುವ ಈ ಕಾಲುವೆಗಳಲ್ಲಿ ನೀರು ಹರಿಯುವುದೇ ದುಸ್ತರ.<br /> <br /> ಕಳಪೆ ಕಾಮಗಾರಿಯಿಂದಾಗಿ ಎಲ್ಲೆಂದರಲ್ಲಿ ಉದುರಿ ಬೀಳುವ ಸಿಮೆಂಟ್, ಕಾಲುವೆಗಳಲ್ಲಿನ ಬಿರುಕುಗಳು, ತುಂಬಿ ನಿಂತ ಹೂಳು, ಕಿತ್ತು ಹೋದ ಗೇಟ್ಗಳು ಕಾಣಿಸುತ್ತಿವೆ.<br /> <br /> ಕಾಲುವೆಯಲ್ಲಿ ನೀರು ಸಮತಟ್ಟಾಗಿ ಹರಿಯುವ ಬದಲು, ಒಂದೇ ಬದಿಗೆ ಹರಿದು, ಹಳ್ಳ ಕೊಳ್ಳಗಳಲ್ಲಿ ನೀರು ಹರಿದು ಹೋಗಿ ಕಾಲುವೆಯ ಕೊನೆಯ ಜಮೀನಿಗೆ ಮುಟ್ಟುವುದಿಲ್ಲ. ಕೃಷ್ಣಾ ಕಾಲುವೆಯಿಂದ ಹಲಸಂಗಿಯವರೆಗೆ ಅಲ್ಪ ಸ್ವಲ್ಪ ನೀರು ಹರಿದು ಹಳ್ಳಕ್ಕೆ ಕೂಡುತ್ತಿದೆ.<br /> <br /> ಈ ಗ್ರಾಮದಿಂದ ಮುಂದಿನ ಗ್ರಾಮಗಳಾದ ಏಳಗಿ, ಮಣಂಕಲಗಿ ಮೂಲಕ ದಸೂರ ವರೆಗೆ ನೀರು ಹರಿಯುವುದೇ ಇಲ್ಲ. ಪ್ರತಿ ವರ್ಷ ಲಕ್ಷಾಂತರ ಹಣ ವ್ಯಯಿಸಿ ಕಾಲುವೆಯಲ್ಲಿನ ಹೂಳು ತೆಗೆದರೂ ರೈತರ ಹೊಲಗಾಲುವೆಗಳಿಗೆ ನೀರು ಹರಿಯುವದು ಮಾತ್ರ ಮರೀಚಿಕೆಯಾಗಿದೆ.<br /> <br /> ಕೋಟ್ಯಂತರ ಹಣ ವ್ಯಯಿಸಿ, ರೈತರ ಜಮೀನುಗಳಿಗೆ ನೀರು ಪೂರೈಸುವ ಸರ್ಕಾರದ ಯೋಜನೆ,ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ, ನಿರ್ವಹಣೆಯ ಕೊರತೆಯಿಂದಾಗಿ ಕೃಷ್ಣಾ ನದಿಯಿಂದ ನೀರು ಹರಿಸುವ ಈ ಯೋಜನೆ ರೈತರಿಗೆ ವರವಾಗದೆ ಮರೀಚಿಕೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>