<p>ಸರ್ವಶಿಕ್ಷಣ ಅಭಿಯಾನ ಯೋಜನೆಯ ಅನುದಾನದಲ್ಲಿ ವೇತನ ಪಡೆಯುತ್ತಿರುವ ಶಿಕ್ಷಕರು ವರ್ಗಾವಣೆಗಾಗಿ ನಡೆಯುವ ಕೌನ್ಸಿಲಿಂಗ್ ಸಮಯದಲ್ಲಿ ಅದೇ ಯೋಜನೆಯ ಖಾಲಿ ಹುದ್ದೆಗೆ ಹೋಗಬೇಕೆಂಬ ನಿಯಮ ಈ ವರ್ಷವೂ ಬದಲಾಗಿಲ್ಲ. ಹಿಂದಿನ ವರ್ಗಾವಣೆಯಲ್ಲೂ ಇದೇ ನಿಯಮ ಇದ್ದ ಕಾರಣ ಸಾಮಾನ್ಯ ಖಾಲಿ ಹುದ್ದೆಗಳಿಗೆ ಹೋಗಲು ಅವಕಾಶ ನಿರಾಕರಿಸಲಾಯಿತು.</p>.<p><br /> ಪತಿ ಪತ್ನಿ ಪ್ರಕರಣ, ತೀವ್ರ ಕಾಯಿಲೆ, ಇನ್ನಿತರ ವಿಶೇಷ ಸಂದರ್ಭದ ಅವಕಾಶ ಎಲ್ಲರಿಗೂ ಲಭ್ಯವಿಲ್ಲ. ದಾವಣಗೆರೆ, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಈ ಹಿಂದಿನ ವರ್ಗಾವಣೆಯಲ್ಲಿ ಸರ್ವಶಿಕ್ಷಣ ಅಭಿಯಾನದ ಒಂದೂ ಹುದ್ದೆಗಳು ಖಾಲಿ ಇರಲಿಲ್ಲ.<br /> <br /> ಎಲ್ಲಾ ಜಿಲ್ಲೆಗಳಲ್ಲಿ ಸರ್ವ ಶಿಕ್ಷಣ ಅಭಿಯಾನ ಯೋಜನೆ ಜಾರಿಯಲ್ಲಿದೆ. ವರ್ಗಾವಣೆಯಾಗಿ ಹೋದ ಶಿಕ್ಷಕರಿಗೆ ಇದೇ ಯೋಜನೆಯ ಅನುದಾನದಲ್ಲಿ ವೇತನ ನೀಡಬಹುದಲ್ಲವೇ? ಈ ನಿಯಮಗಳನ್ನು ಬದಲಾಯಿಸದೇ ಪತಿ ಪತ್ನಿ ಪ್ರಕರಣ ಸೇರಿದಂತೆ ವಿಶೇಷ ಆದ್ಯತೆಯಡಿ ಅರ್ಜಿ ಸಲ್ಲಿಸಿದವರ ಪಾಡೇನು? ಶಿಕ್ಷಣ ಸಚಿವರಿಗೆ ಶಿಕ್ಷಕರ ಕಷ್ಟಗಳೇ ಅರ್ಥವಾಗುವುದಿಲ್ಲವೇ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸರ್ವಶಿಕ್ಷಣ ಅಭಿಯಾನ ಯೋಜನೆಯ ಅನುದಾನದಲ್ಲಿ ವೇತನ ಪಡೆಯುತ್ತಿರುವ ಶಿಕ್ಷಕರು ವರ್ಗಾವಣೆಗಾಗಿ ನಡೆಯುವ ಕೌನ್ಸಿಲಿಂಗ್ ಸಮಯದಲ್ಲಿ ಅದೇ ಯೋಜನೆಯ ಖಾಲಿ ಹುದ್ದೆಗೆ ಹೋಗಬೇಕೆಂಬ ನಿಯಮ ಈ ವರ್ಷವೂ ಬದಲಾಗಿಲ್ಲ. ಹಿಂದಿನ ವರ್ಗಾವಣೆಯಲ್ಲೂ ಇದೇ ನಿಯಮ ಇದ್ದ ಕಾರಣ ಸಾಮಾನ್ಯ ಖಾಲಿ ಹುದ್ದೆಗಳಿಗೆ ಹೋಗಲು ಅವಕಾಶ ನಿರಾಕರಿಸಲಾಯಿತು.</p>.<p><br /> ಪತಿ ಪತ್ನಿ ಪ್ರಕರಣ, ತೀವ್ರ ಕಾಯಿಲೆ, ಇನ್ನಿತರ ವಿಶೇಷ ಸಂದರ್ಭದ ಅವಕಾಶ ಎಲ್ಲರಿಗೂ ಲಭ್ಯವಿಲ್ಲ. ದಾವಣಗೆರೆ, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಈ ಹಿಂದಿನ ವರ್ಗಾವಣೆಯಲ್ಲಿ ಸರ್ವಶಿಕ್ಷಣ ಅಭಿಯಾನದ ಒಂದೂ ಹುದ್ದೆಗಳು ಖಾಲಿ ಇರಲಿಲ್ಲ.<br /> <br /> ಎಲ್ಲಾ ಜಿಲ್ಲೆಗಳಲ್ಲಿ ಸರ್ವ ಶಿಕ್ಷಣ ಅಭಿಯಾನ ಯೋಜನೆ ಜಾರಿಯಲ್ಲಿದೆ. ವರ್ಗಾವಣೆಯಾಗಿ ಹೋದ ಶಿಕ್ಷಕರಿಗೆ ಇದೇ ಯೋಜನೆಯ ಅನುದಾನದಲ್ಲಿ ವೇತನ ನೀಡಬಹುದಲ್ಲವೇ? ಈ ನಿಯಮಗಳನ್ನು ಬದಲಾಯಿಸದೇ ಪತಿ ಪತ್ನಿ ಪ್ರಕರಣ ಸೇರಿದಂತೆ ವಿಶೇಷ ಆದ್ಯತೆಯಡಿ ಅರ್ಜಿ ಸಲ್ಲಿಸಿದವರ ಪಾಡೇನು? ಶಿಕ್ಷಣ ಸಚಿವರಿಗೆ ಶಿಕ್ಷಕರ ಕಷ್ಟಗಳೇ ಅರ್ಥವಾಗುವುದಿಲ್ಲವೇ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>