<p><strong>ಚನ್ನಪಟ್ಟಣ:</strong> ವಿಜ್ಞಾನದ ಆವಿಷ್ಕಾರದಿಂದ ವಿದ್ಯಾಕ್ಷೇತ್ರದಲ್ಲಿ ಗಣನೀಯ ಪ್ರಗತಿಯಾಗುತ್ತಿದ್ದು ಇದನ್ನು ಇಂದಿನ ಯುವ ಪೀಳಿಗೆ ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಮಹತ್ವವಾದುದನ್ನು ಸಾಧಿಸಬೇಕಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ಪ ತಿಳಿಸಿದ್ದಾರೆ.ಕಣ್ವ-ಅರ್ಕಾವತಿ ಟ್ರಸ್ಟ್, ಚನ್ನಾಂಬಿಕ ಸಮೂಹ ಸಂಸ್ಥೆಗಳು ವಂದಾರಗುಪ್ಪೆಯ ಆಕ್ಸ್ಫರ್ಡ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ನಲ್ಲಿ ಆರಂಭಿಸಿರುವ ಎಜುಕಾಮ್ ಸ್ಮಾರ್ಟ್ ಕ್ಲಾಸ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.<br /> <br /> ವಿಜ್ಞಾನ ಬೆಳೆದಂತೆಲ್ಲ ಸ್ಪರ್ಧೆಗಳು ಹೆಚ್ಚುತ್ತಿವೆ. ಇದರ ಗುಂಗಿನಲ್ಲಿ ಓದುವ ಹಾಗೂ ಹಾಗೂ ಬರೆಯುವ ಹವ್ಯಾಸ ಕ್ಷೀಣಿಸುತ್ತಿದೆ ಎಂದು ಅವರು ತಿಳಿಸಿದರು.ಎಜುಕಾಮ್ ಸ್ಮಾರ್ಟ್ ತರಗತಿಯಿಂದ ವಿದ್ಯಾರ್ಥಿಗಳಲ್ಲಿ ಹೆಚ್ಚು ಜ್ಞಾನಾಭಿವೃದ್ಧಿಯಾಗಲಿದೆ. ಈ ತಂತ್ರಗಾರಿಕೆಯನ್ನು ತಾಲ್ಲೂಕಿನ ಇತರ ಪ್ರೌಢಶಾಲೆಗಳು ಅಳವಡಿಸಿಕೊಳ್ಳಬೇಕೆಂದು ಅವರು ಹೇಳಿದರು.<br /> ಉದ್ಘಾಟನೆ ನೆರವೇರಿಸಿದ ನಿಸರ್ಗ ಸಾಂಸ್ಕೃತಿಕ ಸ್ನೇಹ ಬಳಗದ ಅಧ್ಯಕ್ಷ ಎಂ. ಶಿವಮಾದು ನೂತನ ತಂತ್ರಗಾರಿಕೆಯನ್ನು ಶಿಕ್ಷಣ ಕ್ಷೇತ್ರದಲ್ಲಿ ಅಳವಡಿಸುವುದು ಪ್ರಗತಿಯ ಸಂಕೇತವಾಗಿದೆ ಎಂದರು.<br /> <br /> ಜೆಡಿಎಸ್ ಮುಖಂಡ ಬೋರ್ವೆಲ್ ರಾಮಚಂದ್ರು ಮಾತನಾಡಿ ನಾಗಾಲೋಟದ ಯುಗದಲ್ಲಿ ಅದೇ ವೇಗದಲ್ಲಿ ಮುನ್ನುಗ್ಗುವ ಛಲಗಾರಿಕೆಯನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡು ಯಶಸ್ವಿಯಾಗಬೇಕೆಂದು ಹೇಳಿದರು.ವೇದಿಕೆಯಲ್ಲಿ ಎಜುಕಾಮ್ನ ಪ್ರದೇಶಿಕ ಮುಖ್ಯಸ್ಥರಾದ ಸುಮಿತ್ ಮರ್ವಾ, ವಿನೋದ್, ಪ್ರಾಂಶುಪಾಲ ವನರಾಜು, ಮೆಹಬೂಬ್, ರಾಮಸ್ವಾಮಿ, ಜೆಡಿಎಸ್ ಮುಖಂಡ ನಾಗವಾರ ರಂಗಸ್ವಾಮಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಪಟ್ಟಣ:</strong> ವಿಜ್ಞಾನದ ಆವಿಷ್ಕಾರದಿಂದ ವಿದ್ಯಾಕ್ಷೇತ್ರದಲ್ಲಿ ಗಣನೀಯ ಪ್ರಗತಿಯಾಗುತ್ತಿದ್ದು ಇದನ್ನು ಇಂದಿನ ಯುವ ಪೀಳಿಗೆ ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಮಹತ್ವವಾದುದನ್ನು ಸಾಧಿಸಬೇಕಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ಪ ತಿಳಿಸಿದ್ದಾರೆ.ಕಣ್ವ-ಅರ್ಕಾವತಿ ಟ್ರಸ್ಟ್, ಚನ್ನಾಂಬಿಕ ಸಮೂಹ ಸಂಸ್ಥೆಗಳು ವಂದಾರಗುಪ್ಪೆಯ ಆಕ್ಸ್ಫರ್ಡ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ನಲ್ಲಿ ಆರಂಭಿಸಿರುವ ಎಜುಕಾಮ್ ಸ್ಮಾರ್ಟ್ ಕ್ಲಾಸ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.<br /> <br /> ವಿಜ್ಞಾನ ಬೆಳೆದಂತೆಲ್ಲ ಸ್ಪರ್ಧೆಗಳು ಹೆಚ್ಚುತ್ತಿವೆ. ಇದರ ಗುಂಗಿನಲ್ಲಿ ಓದುವ ಹಾಗೂ ಹಾಗೂ ಬರೆಯುವ ಹವ್ಯಾಸ ಕ್ಷೀಣಿಸುತ್ತಿದೆ ಎಂದು ಅವರು ತಿಳಿಸಿದರು.ಎಜುಕಾಮ್ ಸ್ಮಾರ್ಟ್ ತರಗತಿಯಿಂದ ವಿದ್ಯಾರ್ಥಿಗಳಲ್ಲಿ ಹೆಚ್ಚು ಜ್ಞಾನಾಭಿವೃದ್ಧಿಯಾಗಲಿದೆ. ಈ ತಂತ್ರಗಾರಿಕೆಯನ್ನು ತಾಲ್ಲೂಕಿನ ಇತರ ಪ್ರೌಢಶಾಲೆಗಳು ಅಳವಡಿಸಿಕೊಳ್ಳಬೇಕೆಂದು ಅವರು ಹೇಳಿದರು.<br /> ಉದ್ಘಾಟನೆ ನೆರವೇರಿಸಿದ ನಿಸರ್ಗ ಸಾಂಸ್ಕೃತಿಕ ಸ್ನೇಹ ಬಳಗದ ಅಧ್ಯಕ್ಷ ಎಂ. ಶಿವಮಾದು ನೂತನ ತಂತ್ರಗಾರಿಕೆಯನ್ನು ಶಿಕ್ಷಣ ಕ್ಷೇತ್ರದಲ್ಲಿ ಅಳವಡಿಸುವುದು ಪ್ರಗತಿಯ ಸಂಕೇತವಾಗಿದೆ ಎಂದರು.<br /> <br /> ಜೆಡಿಎಸ್ ಮುಖಂಡ ಬೋರ್ವೆಲ್ ರಾಮಚಂದ್ರು ಮಾತನಾಡಿ ನಾಗಾಲೋಟದ ಯುಗದಲ್ಲಿ ಅದೇ ವೇಗದಲ್ಲಿ ಮುನ್ನುಗ್ಗುವ ಛಲಗಾರಿಕೆಯನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡು ಯಶಸ್ವಿಯಾಗಬೇಕೆಂದು ಹೇಳಿದರು.ವೇದಿಕೆಯಲ್ಲಿ ಎಜುಕಾಮ್ನ ಪ್ರದೇಶಿಕ ಮುಖ್ಯಸ್ಥರಾದ ಸುಮಿತ್ ಮರ್ವಾ, ವಿನೋದ್, ಪ್ರಾಂಶುಪಾಲ ವನರಾಜು, ಮೆಹಬೂಬ್, ರಾಮಸ್ವಾಮಿ, ಜೆಡಿಎಸ್ ಮುಖಂಡ ನಾಗವಾರ ರಂಗಸ್ವಾಮಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>