<p>ನಟ ದರ್ಶನ್ ಮತ್ತವರ ಪತ್ನಿ ವಿಜಯಲಕ್ಷ್ಮೀ ಅವರ `ಗೃಹಕಲಹ~ ಒಂದು ಪ್ರಹಸನ. ಒಂದೇ ದಿನದಲ್ಲಿ `ಶೂಟಿಂಗ್~ ಆಗಿ ಅದೇ ದಿನ ಪ್ರದರ್ಶನ ಕಂಡು ಸಿಹಿ-ಕಹಿ ಮನರಂಜನೆ ನೀಡಿದ್ದು ವಿಪರ್ಯಾಸ! ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಮನಸ್ತಾಪ, ಜಗಳ, ಹಲ್ಲೆ, ಚಿಕಿತ್ಸೆ, ಬಂಧನ, ದೂರು ವಾಪಸಾತಿ ಎಲ್ಲವೂ ನಾಟಕೀಯ.<br /> <br /> ದರ್ಶನ್ ಅವರನ್ನು ಬಂಧಿಸಿದಾಗ ಪೊಲೀಸ್ ಠಾಣೆ ಎದುರು ಅಭಿಮಾನಿಗಳ ಘೋಷಣೆ, ಕೂಗಾಟ, ಬಿ.ಎಂ.ಟಿ.ಸಿ. ಬಸ್ ಮೇಲೆ ಕಲ್ಲೆಸೆತ! ಮಂಡ್ಯದ ಮಹಿಳಾ ಮಣಿಗಳಿಗಂತೂ ದರ್ಶನ್ ಅವರ ಭವಿಷ್ಯ ಕುರಿತೇ ಚಿಂತೆ. <br /> <br /> ಮಹಿಳಾ ಸಬಲೀಕರಣ-ಸಂಘಟನೆ ಸಾರ್ಥಕವಾಯಿತು! ಟಿ.ವಿಗಳಲ್ಲಿ ಪ್ರಸಾರವಾದ ವರದಿಯನ್ವಯ ತಕ್ಷಣ ಸ್ಪಂದಿಸಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಅವರ ಕಾರ್ಯವೈಖರಿ ಅಭಿನಂದನೀಯ. ಆದರೆ ಇಷ್ಟೊಂದು ಹುಯಿಲೆದ್ದರೂ ರಾಜ್ಯ ಮಾನವ ಹಕ್ಕುಗಳ ಆಯೋಗದ ದರ್ಶನವೇ ಇಲ್ಲ!<br /> <br /> ಅಬಲೆಯರ ಪರ ಯಾವ ಮಹಿಳಾ ಸಂಘಗಳೂ ನಿಲ್ಲುವುದಿರಲಿ. ವಿಜಯಲಕ್ಷ್ಮಿಯ ಹಿತಾಸಕ್ತಿಗೆ ವಿರೋಧವಾಗಿ ವರ್ತಿಸಿ `ದರ್ಶನ~ ಪಡೆಯಲು ಆಗ್ರಹ. ಕುಟುಂಬದ ಬಗ್ಗೆ ಏನೇನೂ ಅರಿಯದೆ, ಪೂರ್ವಗ್ರಹಪೀಡಿತರಾಗಿ ಅಂಧ ಅಭಿಮಾನದ `ಪ್ರದರ್ಶನ~. <br /> <br /> ಎಲ್ಲವೂ ನಿಚ್ಚಳ. ಹಣ, ತೋಳ್ಬಲ, ಪ್ರಭಾವದ ಗುಂಪುಗಾರಿಕೆ ಪರ ಕೆಲವು ಆಸಕ್ತ ಜನರ ಒಲವು-ನಿಲುವು ಕಂಡು ಬೆಚ್ಚಿದ ಹರಿಣಿ ವಿಜಯಲಕ್ಷ್ಮಿ ಆತ್ಮವಂಚನೆಗೊಳಗಾಗಿ (ಅ)ನ್ಯಾಯದ ಪರ ರಾಜಿಯಾದದ್ದು ಸಹಜ! <br /> <br /> ಒಂದು ವೇಳೆ ಪೊಲೀಸರು ಅಗತ್ಯ ಕ್ರಮಕೈಗೊಳ್ಳದಿದ್ದರೆ ಅಧಿಕಾರಸ್ಥರ ಪ್ರಭಾವಕ್ಕೊಳಗಾಗಿದ್ದಾರೆ ಎಂಬ ಆರೋಪ ಹೊರಬೇಕಾದ ದುಃಸ್ಥಿತಿ. ಎಲ್ಲಿದೆ ನ್ಯಾಯ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಟ ದರ್ಶನ್ ಮತ್ತವರ ಪತ್ನಿ ವಿಜಯಲಕ್ಷ್ಮೀ ಅವರ `ಗೃಹಕಲಹ~ ಒಂದು ಪ್ರಹಸನ. ಒಂದೇ ದಿನದಲ್ಲಿ `ಶೂಟಿಂಗ್~ ಆಗಿ ಅದೇ ದಿನ ಪ್ರದರ್ಶನ ಕಂಡು ಸಿಹಿ-ಕಹಿ ಮನರಂಜನೆ ನೀಡಿದ್ದು ವಿಪರ್ಯಾಸ! ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಮನಸ್ತಾಪ, ಜಗಳ, ಹಲ್ಲೆ, ಚಿಕಿತ್ಸೆ, ಬಂಧನ, ದೂರು ವಾಪಸಾತಿ ಎಲ್ಲವೂ ನಾಟಕೀಯ.<br /> <br /> ದರ್ಶನ್ ಅವರನ್ನು ಬಂಧಿಸಿದಾಗ ಪೊಲೀಸ್ ಠಾಣೆ ಎದುರು ಅಭಿಮಾನಿಗಳ ಘೋಷಣೆ, ಕೂಗಾಟ, ಬಿ.ಎಂ.ಟಿ.ಸಿ. ಬಸ್ ಮೇಲೆ ಕಲ್ಲೆಸೆತ! ಮಂಡ್ಯದ ಮಹಿಳಾ ಮಣಿಗಳಿಗಂತೂ ದರ್ಶನ್ ಅವರ ಭವಿಷ್ಯ ಕುರಿತೇ ಚಿಂತೆ. <br /> <br /> ಮಹಿಳಾ ಸಬಲೀಕರಣ-ಸಂಘಟನೆ ಸಾರ್ಥಕವಾಯಿತು! ಟಿ.ವಿಗಳಲ್ಲಿ ಪ್ರಸಾರವಾದ ವರದಿಯನ್ವಯ ತಕ್ಷಣ ಸ್ಪಂದಿಸಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಅವರ ಕಾರ್ಯವೈಖರಿ ಅಭಿನಂದನೀಯ. ಆದರೆ ಇಷ್ಟೊಂದು ಹುಯಿಲೆದ್ದರೂ ರಾಜ್ಯ ಮಾನವ ಹಕ್ಕುಗಳ ಆಯೋಗದ ದರ್ಶನವೇ ಇಲ್ಲ!<br /> <br /> ಅಬಲೆಯರ ಪರ ಯಾವ ಮಹಿಳಾ ಸಂಘಗಳೂ ನಿಲ್ಲುವುದಿರಲಿ. ವಿಜಯಲಕ್ಷ್ಮಿಯ ಹಿತಾಸಕ್ತಿಗೆ ವಿರೋಧವಾಗಿ ವರ್ತಿಸಿ `ದರ್ಶನ~ ಪಡೆಯಲು ಆಗ್ರಹ. ಕುಟುಂಬದ ಬಗ್ಗೆ ಏನೇನೂ ಅರಿಯದೆ, ಪೂರ್ವಗ್ರಹಪೀಡಿತರಾಗಿ ಅಂಧ ಅಭಿಮಾನದ `ಪ್ರದರ್ಶನ~. <br /> <br /> ಎಲ್ಲವೂ ನಿಚ್ಚಳ. ಹಣ, ತೋಳ್ಬಲ, ಪ್ರಭಾವದ ಗುಂಪುಗಾರಿಕೆ ಪರ ಕೆಲವು ಆಸಕ್ತ ಜನರ ಒಲವು-ನಿಲುವು ಕಂಡು ಬೆಚ್ಚಿದ ಹರಿಣಿ ವಿಜಯಲಕ್ಷ್ಮಿ ಆತ್ಮವಂಚನೆಗೊಳಗಾಗಿ (ಅ)ನ್ಯಾಯದ ಪರ ರಾಜಿಯಾದದ್ದು ಸಹಜ! <br /> <br /> ಒಂದು ವೇಳೆ ಪೊಲೀಸರು ಅಗತ್ಯ ಕ್ರಮಕೈಗೊಳ್ಳದಿದ್ದರೆ ಅಧಿಕಾರಸ್ಥರ ಪ್ರಭಾವಕ್ಕೊಳಗಾಗಿದ್ದಾರೆ ಎಂಬ ಆರೋಪ ಹೊರಬೇಕಾದ ದುಃಸ್ಥಿತಿ. ಎಲ್ಲಿದೆ ನ್ಯಾಯ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>