<p><strong>ಭಾರತಕ್ಕೆ ಮಲೇಷ್ಯಾ ಮುಖಂಡ <br /> ಕ್ವಾಲಾಲಂಪುರ (ಪಿಟಿಐ): </strong>ಮಲೇಷ್ಯಾ ವಿರೋಧ ಪಕ್ಷದ ನಾಯಕ ಅನ್ವರ್ ಇಬ್ರಾಹಿಂ ಇದೇ ವಾರ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಅಸಹಜ ಲೈಂಗಿಕ ಕ್ರಿಯೆ ನಡೆಸಿದ ಆರೋಪ ಎದುರಿಸುತ್ತಿದ್ದ ಇವರನ್ನು ಕ್ವಾಲಾಲಂಪುರದ ಹೈಕೋರ್ಟ್ ಸೋಮವಾರ ದೋಷಮುಕ್ತಗೊಳಿಸಿದೆ.<br /> <br /> ತೀರ್ಪು ಪ್ರಕಟವಾದ ಬಳಿಕ ನ್ಯಾಯಾಲಯದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅನ್ವರ್, ಕೋರ್ಟ್ ತಮ್ಮನ್ನು ಆರೋಪಮುಕ್ತಗೊಳಿಸಿದ್ದಕ್ಕೆ ದೇವರಿಗೆ ಕೃತಜ್ಞತೆ ಸಲ್ಲಿಸುತ್ತಿರುವುದಾಗಿ ಹೇಳಿದರಲ್ಲದೆ, ಆರು ದಿನಗಳ ಒಳಗೆ ಭಾರತಕ್ಕೆ ಭೇಟಿ ನೀಡಲಿರುವುದಾಗಿಯೂ ತಿಳಿಸಿದರು. <br /> <br /> <strong>ಜಿಹಾದ್ ಪ್ರಚಾರಕ್ಕೆ ಉರ್ದು ಮಾಸಿಕ<br /> ಇಸ್ಲಾಮಾಬಾದ್ (ಪಿಟಿಐ) :</strong> `ಜಿಹಾದ್~ ಅನ್ನು ಪ್ರತಿಪಾದಿಸುವ ಬರಹಗಳನ್ನು ಒಳಗೊಂಡ `ಹೈ ತೀನ್~ ಹೆಸರಿನ ಉರ್ದು ಮಾಸಿಕವೊಂದನ್ನು ಈಗ ಪಾಕಿಸ್ತಾನದಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗುತ್ತಿದೆ. 200 ಪುಟಗಳ ಈ ನಿಯತಕಾಲಿಕೆಯನ್ನು ಅಂಚೆ ಮೂಲಕ ದಿಯೊಬಂದ್ ಗುಂಪಿನ ಪ್ರಮುಖರಿಗೆ, ಅಲ್ಖೈದಾ ಸಿದ್ಧಾಂತದ ಅನುಯಾಯಿಗಳಿಗೆ ತಲುಪಿಸಲಾಗುತ್ತಿದೆ ಎಂದು `ಎಕ್ಸ್ಪ್ರೆಸ್ ಟ್ರಿಬ್ಯೂನ್~ ವರದಿ ಮಾಡಿದೆ.<br /> <br /> ಒಸಾಮ ಬಿನ್ ಲಾಡೆನ್ ಹತ್ಯೆಯ ಬಳಿಕ ಈ ಮಾಸಿಕವನ್ನು ಆರಂಭಿಸಲಾಗಿದೆ. ಆಫ್ಘಾನಿಸ್ತಾನದ ತಾಲಿಬಾನ್ ಕಮಾಂಡರ್ ಮುಲ್ಲಾ ಒಮರ್ ಹಾಗೂ ಇತರೆ ಅಲ್ಖೈದಾ ನಾಯಕರ ಹೇಳಿಕೆಗಳು ಹಾಗೂ ಉಗ್ರಗಾಮಿಗಳನ್ನು ಉತ್ತೇಜಿಸುವ ಬರಹಗಳನ್ನು ಒಳಗೊಂಡ ಈ ನಿಯತಕಾಲಿಕೆ ಪ್ರತಿಕ್ರಿಯೆಗಾಗಿ ಎರಡು ಇ ಮೇಲ್ ವಿಳಾಸಗಳನ್ನು ಮಾತ್ರವೇ ಹೊಂದಿದೆ. ಸಂಪಾದಕ, ಪ್ರಕಾಶಕ ಹಾಗೂ ಮುದ್ರಕರ ಹೆಸರುಗಳನ್ನು ಹೊಂದಿಲ್ಲ.<br /> <br /> <strong>ಪಾಕ್ಗೆ ಮರಳಲಿರುವ ಮುಷರಫ್<br /> ಕರಾಚಿ (ಪಿಟಿಐ):</strong> ಅಲ್ ಪಾಕಿಸ್ತಾನಿ ಮುಸ್ಲಿಂ ಲೀಗ್ ಪಕ್ಷಕ್ಕೆ ಕಸುವು ತುಂಬುವ ನಿಟ್ಟಿನಲ್ಲಿ ಇದೇ ತಿಂಗಳಾಂತ್ಯಕ್ಕೆ ತಾವು ಸ್ವದೇಶಕ್ಕೆ ಮರಳುವುದಾಗಿ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ತಿಳಿಸಿದ್ದಾರೆ.<br /> <br /> `ಪರಿಸ್ಥಿತಿಗಳನ್ನು ಎದುರಿಸಲು ನನಗೆ ಯಾವುದೇ ಭಯವಿಲ್ಲ. ದೇಶ ಬದಲಾವಣೆಗಾಗಿ ಕಾಯುತ್ತಿದೆ. ಮುಂದಿನ ಮಹಾಚುನಾವಣೆಗಳಲ್ಲಿ ನಾನು ಖೈಬರ್ ಕಣಿವೆಯ ಫಖ್ತೂನ್ಖ್ವಾ ಪ್ರಾಂತ್ಯದ ಚಿತ್ರಾಲ್ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ~ ಎಂದು ಮುಷರಫ್ ಹೇಳಿದ್ದಾರೆ.<br /> <br /> <strong>ಚೆಚನ್ಯಾದಲ್ಲಿ ಘರ್ಷಣೆ: ಎಂಟು ಸಾವು<br /> ರೊಸ್ತಾವ್ ದಾನ್, ರಷ್ಯ(ಎಪಿ):</strong> ಚೆಚನ್ಯಾದ ದಕ್ಷಿಣ ಭಾಗದ ಗುಡ್ಡಗಾಡು ಪ್ರದೇಶದಲ್ಲಿ ಉಗ್ರರು ಹಾಗೂ ಸೇನೆಯ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಅಧಿಕಾರಿಗಳು ಸೇರಿದಂತೆ ಎಂಟು ಮಂದಿ ಸತ್ತು, 18ಮಂದಿ ಗಾಯಗೊಂಡಿದ್ದಾರೆ. ಎಂದು ರಷ್ಯ ಒಳಾಡಳಿತ ಸಚಿವಾಲಯದ ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಾರತಕ್ಕೆ ಮಲೇಷ್ಯಾ ಮುಖಂಡ <br /> ಕ್ವಾಲಾಲಂಪುರ (ಪಿಟಿಐ): </strong>ಮಲೇಷ್ಯಾ ವಿರೋಧ ಪಕ್ಷದ ನಾಯಕ ಅನ್ವರ್ ಇಬ್ರಾಹಿಂ ಇದೇ ವಾರ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಅಸಹಜ ಲೈಂಗಿಕ ಕ್ರಿಯೆ ನಡೆಸಿದ ಆರೋಪ ಎದುರಿಸುತ್ತಿದ್ದ ಇವರನ್ನು ಕ್ವಾಲಾಲಂಪುರದ ಹೈಕೋರ್ಟ್ ಸೋಮವಾರ ದೋಷಮುಕ್ತಗೊಳಿಸಿದೆ.<br /> <br /> ತೀರ್ಪು ಪ್ರಕಟವಾದ ಬಳಿಕ ನ್ಯಾಯಾಲಯದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅನ್ವರ್, ಕೋರ್ಟ್ ತಮ್ಮನ್ನು ಆರೋಪಮುಕ್ತಗೊಳಿಸಿದ್ದಕ್ಕೆ ದೇವರಿಗೆ ಕೃತಜ್ಞತೆ ಸಲ್ಲಿಸುತ್ತಿರುವುದಾಗಿ ಹೇಳಿದರಲ್ಲದೆ, ಆರು ದಿನಗಳ ಒಳಗೆ ಭಾರತಕ್ಕೆ ಭೇಟಿ ನೀಡಲಿರುವುದಾಗಿಯೂ ತಿಳಿಸಿದರು. <br /> <br /> <strong>ಜಿಹಾದ್ ಪ್ರಚಾರಕ್ಕೆ ಉರ್ದು ಮಾಸಿಕ<br /> ಇಸ್ಲಾಮಾಬಾದ್ (ಪಿಟಿಐ) :</strong> `ಜಿಹಾದ್~ ಅನ್ನು ಪ್ರತಿಪಾದಿಸುವ ಬರಹಗಳನ್ನು ಒಳಗೊಂಡ `ಹೈ ತೀನ್~ ಹೆಸರಿನ ಉರ್ದು ಮಾಸಿಕವೊಂದನ್ನು ಈಗ ಪಾಕಿಸ್ತಾನದಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗುತ್ತಿದೆ. 200 ಪುಟಗಳ ಈ ನಿಯತಕಾಲಿಕೆಯನ್ನು ಅಂಚೆ ಮೂಲಕ ದಿಯೊಬಂದ್ ಗುಂಪಿನ ಪ್ರಮುಖರಿಗೆ, ಅಲ್ಖೈದಾ ಸಿದ್ಧಾಂತದ ಅನುಯಾಯಿಗಳಿಗೆ ತಲುಪಿಸಲಾಗುತ್ತಿದೆ ಎಂದು `ಎಕ್ಸ್ಪ್ರೆಸ್ ಟ್ರಿಬ್ಯೂನ್~ ವರದಿ ಮಾಡಿದೆ.<br /> <br /> ಒಸಾಮ ಬಿನ್ ಲಾಡೆನ್ ಹತ್ಯೆಯ ಬಳಿಕ ಈ ಮಾಸಿಕವನ್ನು ಆರಂಭಿಸಲಾಗಿದೆ. ಆಫ್ಘಾನಿಸ್ತಾನದ ತಾಲಿಬಾನ್ ಕಮಾಂಡರ್ ಮುಲ್ಲಾ ಒಮರ್ ಹಾಗೂ ಇತರೆ ಅಲ್ಖೈದಾ ನಾಯಕರ ಹೇಳಿಕೆಗಳು ಹಾಗೂ ಉಗ್ರಗಾಮಿಗಳನ್ನು ಉತ್ತೇಜಿಸುವ ಬರಹಗಳನ್ನು ಒಳಗೊಂಡ ಈ ನಿಯತಕಾಲಿಕೆ ಪ್ರತಿಕ್ರಿಯೆಗಾಗಿ ಎರಡು ಇ ಮೇಲ್ ವಿಳಾಸಗಳನ್ನು ಮಾತ್ರವೇ ಹೊಂದಿದೆ. ಸಂಪಾದಕ, ಪ್ರಕಾಶಕ ಹಾಗೂ ಮುದ್ರಕರ ಹೆಸರುಗಳನ್ನು ಹೊಂದಿಲ್ಲ.<br /> <br /> <strong>ಪಾಕ್ಗೆ ಮರಳಲಿರುವ ಮುಷರಫ್<br /> ಕರಾಚಿ (ಪಿಟಿಐ):</strong> ಅಲ್ ಪಾಕಿಸ್ತಾನಿ ಮುಸ್ಲಿಂ ಲೀಗ್ ಪಕ್ಷಕ್ಕೆ ಕಸುವು ತುಂಬುವ ನಿಟ್ಟಿನಲ್ಲಿ ಇದೇ ತಿಂಗಳಾಂತ್ಯಕ್ಕೆ ತಾವು ಸ್ವದೇಶಕ್ಕೆ ಮರಳುವುದಾಗಿ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ತಿಳಿಸಿದ್ದಾರೆ.<br /> <br /> `ಪರಿಸ್ಥಿತಿಗಳನ್ನು ಎದುರಿಸಲು ನನಗೆ ಯಾವುದೇ ಭಯವಿಲ್ಲ. ದೇಶ ಬದಲಾವಣೆಗಾಗಿ ಕಾಯುತ್ತಿದೆ. ಮುಂದಿನ ಮಹಾಚುನಾವಣೆಗಳಲ್ಲಿ ನಾನು ಖೈಬರ್ ಕಣಿವೆಯ ಫಖ್ತೂನ್ಖ್ವಾ ಪ್ರಾಂತ್ಯದ ಚಿತ್ರಾಲ್ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ~ ಎಂದು ಮುಷರಫ್ ಹೇಳಿದ್ದಾರೆ.<br /> <br /> <strong>ಚೆಚನ್ಯಾದಲ್ಲಿ ಘರ್ಷಣೆ: ಎಂಟು ಸಾವು<br /> ರೊಸ್ತಾವ್ ದಾನ್, ರಷ್ಯ(ಎಪಿ):</strong> ಚೆಚನ್ಯಾದ ದಕ್ಷಿಣ ಭಾಗದ ಗುಡ್ಡಗಾಡು ಪ್ರದೇಶದಲ್ಲಿ ಉಗ್ರರು ಹಾಗೂ ಸೇನೆಯ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಅಧಿಕಾರಿಗಳು ಸೇರಿದಂತೆ ಎಂಟು ಮಂದಿ ಸತ್ತು, 18ಮಂದಿ ಗಾಯಗೊಂಡಿದ್ದಾರೆ. ಎಂದು ರಷ್ಯ ಒಳಾಡಳಿತ ಸಚಿವಾಲಯದ ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>