<p><strong>ಹುಬ್ಬಳ್ಳಿ:</strong> ಇದು ವರ್ಷಗಳಿಂದ ನಡೆಸಿ ಕೊಂಡು ಬಂದಿರುವ ಆಚರಣೆ. ಮಳೆ ರಾಯನ ಆಗಮನವಾದರೆ ಈ ಆಚರಣೆಯಲ್ಲಿ ಪಾಲ್ಗೊಂಡವರಿಗೆ ಸಂತಸ. ಮಳೆಯಾಗದಿದ್ದರೆ ವರುಣ ದೇವನ ಆಗಮನಕ್ಕಾಗಿ ಮೊರೆ ಇಡುವುದೇ ಆಚರಣೆಯ ಪ್ರಮುಖ ಉದ್ದೇಶ.</p>.<p>ಈ ಬಾರಿ ಮಳೆ ಇನ್ನೂ ಸರಿಯಾಗಿ ಆರಂಭವಾಗಲಿಲ್ಲ. ಹೀಗಾಗಿ ಸೋಮ ವಾರ ನಡೆದ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದ ಎಲ್ಲರ ಮನದಲ್ಲೂ ಮಳೆಯದ್ದೇ ನೆನಪು; ಅವರ ಪ್ರಾರ್ಥನೆಯಲ್ಲಿ ಸುಭಿಕ್ಷದ ಕುರಿತ ಕಾತರವೇ ತುಂಬಿತ್ತು.</p>.<p>ಇಂಥ ವಿಶೇಷ ಆಚರಣೆ ನಡೆದದ್ದು ಹಳೇಹುಬ್ಬಳ್ಳಿಯ ಜಂಗ್ಲಿಪೇಟೆಯಲ್ಲಿ ರುವ ಬಸವೇಶ್ವರ ದೇವಸ್ಥಾನದ ಆವ ರಣದಲ್ಲಿ. ಕಳೆದ ಏಳು ದಶಕಗಳಿಂದ ನಡೆಸಿಕೊಂಡು ಬರಲಾಗುತ್ತಿದೆ ಎಂದು ಹೇಳಲಾಗುವ ಆಚರಣೆಯಲ್ಲಿ ಸೋಮವಾರ ಗಮನ ಸೆಳೆದದ್ದು ಅಡ್ಡ ಪಲ್ಲಕ್ಕಿ.</p>.<p>ಜಂಗ್ಲಿಪೇಟೆ, ಅಕ್ಕಿಹೊಂಡ, ಕುರು ಬರ ಓಣಿ, ಸಂಗಮೇಶ್ವರ ನಗರ, ಹಳೇಹುಬ್ಬಳ್ಳಿ ಮುಂತಾದ ಪ್ರದೇಶ ಗಳಿಂದ ಆಗಮಿಸಿದ್ದ ನೂರಾರು ಮಂದಿಯ ಸಮಕ್ಷಮದಲ್ಲಿ ಬೆಳಿಗ್ಗೆ ನಡೆದ ಕಾರ್ಯಕ್ರಮ ಮಧ್ಯಾಹ್ನ ಅನ್ನಸಂತರ್ಪಣೆಯ ಮೂಲಕ ಮುಕ್ತಾಯಗೊಂಡಿತು.</p>.<p>ಬಸವೇಶ್ವರ ದೇವಸ್ಥಾನದಿಂದ ಹೊರಟ ಅಡ್ಡಪಲ್ಲಕ್ಕಿಯನ್ನು ಈಶ್ವರ ನಗರದ ಈಶ್ವರ ದೇವಸ್ಥಾನದಲ್ಲಿ ಇರಿಸಿ ಅಭಿಷೇಕ ಮಾಡಲಾಯಿತು. ಸಮರ್ಪಕ ವಾದ ಮಳೆಯಾದ ನಂತರವೇ ಪಲ್ಲಕ್ಕಿಯನ್ನು ಅಲ್ಲಿಂದ ವಾಪಸ್ ತೆಗೆದುಕೊಂಡು ಬರಲಾಗುವುದು ಎಂದು ಮುಖಂಡರು ತಿಳಿಸಿದರು.</p>.<p>ರಂಗಾಬದ್ದಿ, ಶೇಖಣ್ಣ ಕಳ್ಳಿಮಠ, ಶಿವಾನಂದ ಹೊಸೂರ, ಮಂಜುನಾಥ, ಬಸವರಾಜ ಹೊಸೂರ ಮತ್ತಿತರರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ಇದು ವರ್ಷಗಳಿಂದ ನಡೆಸಿ ಕೊಂಡು ಬಂದಿರುವ ಆಚರಣೆ. ಮಳೆ ರಾಯನ ಆಗಮನವಾದರೆ ಈ ಆಚರಣೆಯಲ್ಲಿ ಪಾಲ್ಗೊಂಡವರಿಗೆ ಸಂತಸ. ಮಳೆಯಾಗದಿದ್ದರೆ ವರುಣ ದೇವನ ಆಗಮನಕ್ಕಾಗಿ ಮೊರೆ ಇಡುವುದೇ ಆಚರಣೆಯ ಪ್ರಮುಖ ಉದ್ದೇಶ.</p>.<p>ಈ ಬಾರಿ ಮಳೆ ಇನ್ನೂ ಸರಿಯಾಗಿ ಆರಂಭವಾಗಲಿಲ್ಲ. ಹೀಗಾಗಿ ಸೋಮ ವಾರ ನಡೆದ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದ ಎಲ್ಲರ ಮನದಲ್ಲೂ ಮಳೆಯದ್ದೇ ನೆನಪು; ಅವರ ಪ್ರಾರ್ಥನೆಯಲ್ಲಿ ಸುಭಿಕ್ಷದ ಕುರಿತ ಕಾತರವೇ ತುಂಬಿತ್ತು.</p>.<p>ಇಂಥ ವಿಶೇಷ ಆಚರಣೆ ನಡೆದದ್ದು ಹಳೇಹುಬ್ಬಳ್ಳಿಯ ಜಂಗ್ಲಿಪೇಟೆಯಲ್ಲಿ ರುವ ಬಸವೇಶ್ವರ ದೇವಸ್ಥಾನದ ಆವ ರಣದಲ್ಲಿ. ಕಳೆದ ಏಳು ದಶಕಗಳಿಂದ ನಡೆಸಿಕೊಂಡು ಬರಲಾಗುತ್ತಿದೆ ಎಂದು ಹೇಳಲಾಗುವ ಆಚರಣೆಯಲ್ಲಿ ಸೋಮವಾರ ಗಮನ ಸೆಳೆದದ್ದು ಅಡ್ಡ ಪಲ್ಲಕ್ಕಿ.</p>.<p>ಜಂಗ್ಲಿಪೇಟೆ, ಅಕ್ಕಿಹೊಂಡ, ಕುರು ಬರ ಓಣಿ, ಸಂಗಮೇಶ್ವರ ನಗರ, ಹಳೇಹುಬ್ಬಳ್ಳಿ ಮುಂತಾದ ಪ್ರದೇಶ ಗಳಿಂದ ಆಗಮಿಸಿದ್ದ ನೂರಾರು ಮಂದಿಯ ಸಮಕ್ಷಮದಲ್ಲಿ ಬೆಳಿಗ್ಗೆ ನಡೆದ ಕಾರ್ಯಕ್ರಮ ಮಧ್ಯಾಹ್ನ ಅನ್ನಸಂತರ್ಪಣೆಯ ಮೂಲಕ ಮುಕ್ತಾಯಗೊಂಡಿತು.</p>.<p>ಬಸವೇಶ್ವರ ದೇವಸ್ಥಾನದಿಂದ ಹೊರಟ ಅಡ್ಡಪಲ್ಲಕ್ಕಿಯನ್ನು ಈಶ್ವರ ನಗರದ ಈಶ್ವರ ದೇವಸ್ಥಾನದಲ್ಲಿ ಇರಿಸಿ ಅಭಿಷೇಕ ಮಾಡಲಾಯಿತು. ಸಮರ್ಪಕ ವಾದ ಮಳೆಯಾದ ನಂತರವೇ ಪಲ್ಲಕ್ಕಿಯನ್ನು ಅಲ್ಲಿಂದ ವಾಪಸ್ ತೆಗೆದುಕೊಂಡು ಬರಲಾಗುವುದು ಎಂದು ಮುಖಂಡರು ತಿಳಿಸಿದರು.</p>.<p>ರಂಗಾಬದ್ದಿ, ಶೇಖಣ್ಣ ಕಳ್ಳಿಮಠ, ಶಿವಾನಂದ ಹೊಸೂರ, ಮಂಜುನಾಥ, ಬಸವರಾಜ ಹೊಸೂರ ಮತ್ತಿತರರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>