<p>ಮಂಗಳೂರು: `ವಿಶೇಷ ಮಕ್ಕಳು ಹಾಗೂ ಅಂಗವಿಕಲರಿಗಾಗಿ ಈಗಾಗಲೇ ನಗರದಲ್ಲಿ ಉದ್ಯಾನವನವಿದ್ದು, ಪ್ರತ್ಯೇಕ ಕ್ರೀಡಾಂಗಣ ನಿರ್ಮಿಸಲಾಗುವುದು~ ಎಂದು ಮೇಯರ್ ಪ್ರವೀಣ್ ಅಂಚನ್ ತಿಳಿಸಿದರು.<br /> <br /> ಅಶಕ್ತ ಮಕ್ಕಳ ಮತ್ತು ಪೋಷಕರ ವೇದಿಕೆ ಆಶಾ ಜ್ಯೋತಿ ಆಶ್ರಯದಲ್ಲಿ ನಗರದ ಡೊಂಗರಕೇರಿ ಕೆನರಾ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶಿಷ್ಟರಿಗಾಗಿ ವಿಶಿಷ್ಟ ಮೇಳ 2012~ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.<br /> <br /> ಕಾರ್ಯಕ್ರಮ ಉದ್ಘಾಟಿಸಿದ ಕಾರ್ಪೊರೇಶನ್ ಬ್ಯಾಂಕ್ ಪ್ರಬಂಧ ನಿರ್ದೇಶಕ ಅಜಯ್ ಕುಮಾರ್ ಮಾತನಾಡಿ, `ಅಂಗವಿಕಲರಲ್ಲಿ ವಿಶೇಷ ಪ್ರತಿಭೆ ಇರುತ್ತದೆ. ಅವರಿಗೆ ಎಲ್ಲರಂತೆ ಬದುಕಲು ಅವಕಾಶ ಕಲ್ಪಿಸುವ ಹೊಣೆ ನಮ್ಮೆಲ್ಲರ ಮೇಲಿದೆ~ ಎಂದರು.<br /> <br /> ದ.ಕ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಭಟ್ ಮಾತನಾಡಿ, `ವಿಶೇಷ ಮಕ್ಕಳಿಗೆ ಅನುಕಂಪದ ಬದಲು ಪ್ರೀತಿ ತೋರಿಸಬೇಕು~ ಎಂದರು. ಎರಡೂ ಕೈಗಳಿಲ್ಲದ ಹೊರತಾಗಿಯೂ ಶೈಕ್ಷ ಣಿಕವಾಗಿ ಉತ್ತಮ ಸಾಧನೆ ಮಾಡಿದ ಸಬಿತಾ ಮೋನಿಸ್ ಅವರನ್ನು ಸನ್ಮಾನಿಸ ಲಾಯಿತು. ಸನ್ಮಾನಿತರಿಗೆ ಕಾರ್ಪ್ ಬ್ಯಾಂಕ್ ವತಿಯಿಂದ ತಲಾ 5 ಸಾವಿರ ರೂಪಾಯಿ ನೀಡಲಾಯಿತು.<br /> <br /> ವಿಶೇಷ ಮಕ್ಕಳ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಧನ್ಯಾ ರಾವ್, ಅನಿಲ್ ಮೆಂಡೋನ್ಸ, ರಾಯ್ಸ ಪಿಂಟೊ, ಪ್ರಮೀಳಾ ಪಿಂಟೊ, ತರಬೇತುದಾರರಾದ ಮಹೇಶ್, ಲಕ್ಷ್ಮಿನಾರಾ ಯಣ, ನಾರಾಯಣ ಅವರನ್ನು ಸನ್ಮಾನಿಸಲಾಯಿತು.<br /> ಮಹೇಶ್ ಬದಲು ಪುತ್ರಿ ಶರಣ್ಯಾ ಗೌರವ ಸ್ವೀಕರಿಸಿದರು.<br /> <br /> ಇನ್ನರ್ವ್ಹೀಲ್ ಜಿಲ್ಲಾ ಘಟಕದ ಅಧ್ಯಕ್ಷೆ ಸ್ವರ್ಣಾ ಚಿತ್ತರಂಜನ್, ಸೇವಾಭಾರತಿ ವಿಶ್ವಸ್ಥ ಯು.ವಿ.ಶೆಣೈ, ಆಶಾ ಜ್ಯೋತಿ ಸಂಸ್ಥೆಯ ಅಧ್ಯಕ್ಷ ಡಿ.ಶ್ರೀನಿವಾಸ ರಾವ್ ಹಾಗೂ ಮುರಳೀಧರ ನಾಯಕ್ ಇದ್ದರು.</p>.<p>ಮೇಳಕ್ಕೆ ಸಚಿವರ ಭೇಟಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಿ.ಸಿ.ಪಾಟಿಲ್ ವಿಶೇಷ ಮಕ್ಕಳಿಗಾಗಿ ನಡೆದ ಮೇಳಕ್ಕೆ ಭೇಟಿ ನೀಡಿದರು. ವಿಧಾನಸಭಾ ಉಪಸಭಾಧ್ಯಕ್ಷ ಎನ್.ಯೋಗೀಶ್ ಭಟ್ ಜತೆಯಲ್ಲಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಂಗಳೂರು: `ವಿಶೇಷ ಮಕ್ಕಳು ಹಾಗೂ ಅಂಗವಿಕಲರಿಗಾಗಿ ಈಗಾಗಲೇ ನಗರದಲ್ಲಿ ಉದ್ಯಾನವನವಿದ್ದು, ಪ್ರತ್ಯೇಕ ಕ್ರೀಡಾಂಗಣ ನಿರ್ಮಿಸಲಾಗುವುದು~ ಎಂದು ಮೇಯರ್ ಪ್ರವೀಣ್ ಅಂಚನ್ ತಿಳಿಸಿದರು.<br /> <br /> ಅಶಕ್ತ ಮಕ್ಕಳ ಮತ್ತು ಪೋಷಕರ ವೇದಿಕೆ ಆಶಾ ಜ್ಯೋತಿ ಆಶ್ರಯದಲ್ಲಿ ನಗರದ ಡೊಂಗರಕೇರಿ ಕೆನರಾ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶಿಷ್ಟರಿಗಾಗಿ ವಿಶಿಷ್ಟ ಮೇಳ 2012~ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.<br /> <br /> ಕಾರ್ಯಕ್ರಮ ಉದ್ಘಾಟಿಸಿದ ಕಾರ್ಪೊರೇಶನ್ ಬ್ಯಾಂಕ್ ಪ್ರಬಂಧ ನಿರ್ದೇಶಕ ಅಜಯ್ ಕುಮಾರ್ ಮಾತನಾಡಿ, `ಅಂಗವಿಕಲರಲ್ಲಿ ವಿಶೇಷ ಪ್ರತಿಭೆ ಇರುತ್ತದೆ. ಅವರಿಗೆ ಎಲ್ಲರಂತೆ ಬದುಕಲು ಅವಕಾಶ ಕಲ್ಪಿಸುವ ಹೊಣೆ ನಮ್ಮೆಲ್ಲರ ಮೇಲಿದೆ~ ಎಂದರು.<br /> <br /> ದ.ಕ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಭಟ್ ಮಾತನಾಡಿ, `ವಿಶೇಷ ಮಕ್ಕಳಿಗೆ ಅನುಕಂಪದ ಬದಲು ಪ್ರೀತಿ ತೋರಿಸಬೇಕು~ ಎಂದರು. ಎರಡೂ ಕೈಗಳಿಲ್ಲದ ಹೊರತಾಗಿಯೂ ಶೈಕ್ಷ ಣಿಕವಾಗಿ ಉತ್ತಮ ಸಾಧನೆ ಮಾಡಿದ ಸಬಿತಾ ಮೋನಿಸ್ ಅವರನ್ನು ಸನ್ಮಾನಿಸ ಲಾಯಿತು. ಸನ್ಮಾನಿತರಿಗೆ ಕಾರ್ಪ್ ಬ್ಯಾಂಕ್ ವತಿಯಿಂದ ತಲಾ 5 ಸಾವಿರ ರೂಪಾಯಿ ನೀಡಲಾಯಿತು.<br /> <br /> ವಿಶೇಷ ಮಕ್ಕಳ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಧನ್ಯಾ ರಾವ್, ಅನಿಲ್ ಮೆಂಡೋನ್ಸ, ರಾಯ್ಸ ಪಿಂಟೊ, ಪ್ರಮೀಳಾ ಪಿಂಟೊ, ತರಬೇತುದಾರರಾದ ಮಹೇಶ್, ಲಕ್ಷ್ಮಿನಾರಾ ಯಣ, ನಾರಾಯಣ ಅವರನ್ನು ಸನ್ಮಾನಿಸಲಾಯಿತು.<br /> ಮಹೇಶ್ ಬದಲು ಪುತ್ರಿ ಶರಣ್ಯಾ ಗೌರವ ಸ್ವೀಕರಿಸಿದರು.<br /> <br /> ಇನ್ನರ್ವ್ಹೀಲ್ ಜಿಲ್ಲಾ ಘಟಕದ ಅಧ್ಯಕ್ಷೆ ಸ್ವರ್ಣಾ ಚಿತ್ತರಂಜನ್, ಸೇವಾಭಾರತಿ ವಿಶ್ವಸ್ಥ ಯು.ವಿ.ಶೆಣೈ, ಆಶಾ ಜ್ಯೋತಿ ಸಂಸ್ಥೆಯ ಅಧ್ಯಕ್ಷ ಡಿ.ಶ್ರೀನಿವಾಸ ರಾವ್ ಹಾಗೂ ಮುರಳೀಧರ ನಾಯಕ್ ಇದ್ದರು.</p>.<p>ಮೇಳಕ್ಕೆ ಸಚಿವರ ಭೇಟಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಿ.ಸಿ.ಪಾಟಿಲ್ ವಿಶೇಷ ಮಕ್ಕಳಿಗಾಗಿ ನಡೆದ ಮೇಳಕ್ಕೆ ಭೇಟಿ ನೀಡಿದರು. ವಿಧಾನಸಭಾ ಉಪಸಭಾಧ್ಯಕ್ಷ ಎನ್.ಯೋಗೀಶ್ ಭಟ್ ಜತೆಯಲ್ಲಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>