<p>ಛಪ್ರಾ/ ಪಟ್ನಾ (ಪಿಟಿಐ): ಬಿಹಾರದ ಸರನ್ ಜಿಲ್ಲೆಯಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ಮಧ್ಯಾಹ್ನದ ಬಿಸಿಯೂಟ ಉಂಡ ಬಳಿಕ ವಿಷಾಹಾರದ ಪರಿಣಾಮವಾಗಿ ಬುಧವಾರ ಇನ್ನೂ 8 ಮಂದಿ ವಿದ್ಯಾರ್ಥಿಗಳು ಅಸು ನೀಗಿದ್ದು ಮೃತರ ಸಂಖ್ಯೆ 20ಕ್ಕೆ ಏರಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.<br /> <br /> ಅಡುಗೆ ಮಾಡುವ ಮಹಿಳೆ ಸೇರಿದಂತೆ ಇತರ 27 ಮಂದಿ ಅಸ್ವಸ್ಥರಾಗಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ. ಅವರನ್ನು ಪಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (ಪಿಎಂಸಿಎಚ್) ಸ್ಥಳಾಂತರಿಸಲಾಗಿದೆ ಎಂದು ಶಿಕ್ಷಣ ಇಲಾಖಾ ಮುಖ್ಯ ಕಾರ್ಯದರ್ಶಿ ಅಮರಜಿತ್ ಸಿನ್ಹ ಪಿಟಿಐಗೆ ತಿಳಿಸಿದ್ದಾರೆ.<br /> <br /> ಒಂದನೇ ತರಗತಿಯಿಂದ 5ನೇ ತರಗತಿವರೆಗಿನ ಹತ್ತು ವರ್ಷಗಳಿಗಿಂತ ಕೆಳಗಿನ 16 ಮಕ್ಕಳು ಛಪ್ರಾದಲ್ಲೇ ಮೃತರಾಗಿದ್ದು, ಇತರ ನಾಲ್ವರನ್ನು ಕಳೆದ ರಾತ್ರಿ ಆಸ್ಪತ್ರೆ ತಲುಪಿದ ಬಳಿಕ ಮೃತರಾಗಿದ್ದಾರೆ ಎಂದು ಘೋಷಿಸಲಾಗಿದೆ ಎಂದು ಸಿನ್ಹ ಹೇಳಿದರು.<br /> <br /> ಅಸ್ವಸ್ಥರನ್ನು ಮಕ್ಕಳ ವಿಭಾಗದ ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಿಸಲಾಗಿದ್ದು, ವೈದ್ಯರು ನಿರಂತರ ನಿಗಾ ಇಟ್ಟಿದ್ದಾರೆ ಎಂದು ಪಿಎಂಸಿಎಚ್ ಸೂಪರಿಂಟೆಂಡೆಂಟ್ ಅಮರಕಾಂತ್ ಆಜಾದ್ ಹೇಳಿದರು.<br /> <br /> ಛಪ್ರಾದಿಂದ 25 ಕಿ.ಮೀ ಹಾಗೂ ರಾಜ್ಯ ರಾಜಧಾನಿಯಿಂದ 60 ಕಿ.ಮೀ.ದೂರದ ಮಶ್ರಕ್ ಬ್ಲಾಕಿನ ದಹ್ರಾಮಸತಿ ಗಂದ್ವಾನ್ ಗ್ರಾಮದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ದುರಂತ ಸಂಭವಿಸಿತ್ತು.<br /> <br /> ಈ ಮಧ್ಯೆ ಮಧ್ಯಾಹ್ನದ ಬಿಸಿಯೂಟ ಸಾವುಗಳ ಹಿನ್ನೆಲೆಯಲ್ಲಿ ನಿತೀಶ್ ಸರ್ಕಾರದ ವಿರುದ್ಧ ಪ್ರತಿಭಟಿಸಿ ಸರನ್ ಬಂದ್ ಆಚರಿಸಲು ವಿರೋಧಿ ಬಿಜೆಪಿ ಈದಿನ ಕರೆ ನೀಡಿದೆ. ಘಟನೆಯನ್ನು ಪ್ರತಿಭಟಿಸಿ ಆರ್ ಜೆಡಿ ಕೂಡಾ ಸರನ್ ಬಂದ್ ಆಚರಿಸುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಛಪ್ರಾ/ ಪಟ್ನಾ (ಪಿಟಿಐ): ಬಿಹಾರದ ಸರನ್ ಜಿಲ್ಲೆಯಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ಮಧ್ಯಾಹ್ನದ ಬಿಸಿಯೂಟ ಉಂಡ ಬಳಿಕ ವಿಷಾಹಾರದ ಪರಿಣಾಮವಾಗಿ ಬುಧವಾರ ಇನ್ನೂ 8 ಮಂದಿ ವಿದ್ಯಾರ್ಥಿಗಳು ಅಸು ನೀಗಿದ್ದು ಮೃತರ ಸಂಖ್ಯೆ 20ಕ್ಕೆ ಏರಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.<br /> <br /> ಅಡುಗೆ ಮಾಡುವ ಮಹಿಳೆ ಸೇರಿದಂತೆ ಇತರ 27 ಮಂದಿ ಅಸ್ವಸ್ಥರಾಗಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ. ಅವರನ್ನು ಪಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (ಪಿಎಂಸಿಎಚ್) ಸ್ಥಳಾಂತರಿಸಲಾಗಿದೆ ಎಂದು ಶಿಕ್ಷಣ ಇಲಾಖಾ ಮುಖ್ಯ ಕಾರ್ಯದರ್ಶಿ ಅಮರಜಿತ್ ಸಿನ್ಹ ಪಿಟಿಐಗೆ ತಿಳಿಸಿದ್ದಾರೆ.<br /> <br /> ಒಂದನೇ ತರಗತಿಯಿಂದ 5ನೇ ತರಗತಿವರೆಗಿನ ಹತ್ತು ವರ್ಷಗಳಿಗಿಂತ ಕೆಳಗಿನ 16 ಮಕ್ಕಳು ಛಪ್ರಾದಲ್ಲೇ ಮೃತರಾಗಿದ್ದು, ಇತರ ನಾಲ್ವರನ್ನು ಕಳೆದ ರಾತ್ರಿ ಆಸ್ಪತ್ರೆ ತಲುಪಿದ ಬಳಿಕ ಮೃತರಾಗಿದ್ದಾರೆ ಎಂದು ಘೋಷಿಸಲಾಗಿದೆ ಎಂದು ಸಿನ್ಹ ಹೇಳಿದರು.<br /> <br /> ಅಸ್ವಸ್ಥರನ್ನು ಮಕ್ಕಳ ವಿಭಾಗದ ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಿಸಲಾಗಿದ್ದು, ವೈದ್ಯರು ನಿರಂತರ ನಿಗಾ ಇಟ್ಟಿದ್ದಾರೆ ಎಂದು ಪಿಎಂಸಿಎಚ್ ಸೂಪರಿಂಟೆಂಡೆಂಟ್ ಅಮರಕಾಂತ್ ಆಜಾದ್ ಹೇಳಿದರು.<br /> <br /> ಛಪ್ರಾದಿಂದ 25 ಕಿ.ಮೀ ಹಾಗೂ ರಾಜ್ಯ ರಾಜಧಾನಿಯಿಂದ 60 ಕಿ.ಮೀ.ದೂರದ ಮಶ್ರಕ್ ಬ್ಲಾಕಿನ ದಹ್ರಾಮಸತಿ ಗಂದ್ವಾನ್ ಗ್ರಾಮದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ದುರಂತ ಸಂಭವಿಸಿತ್ತು.<br /> <br /> ಈ ಮಧ್ಯೆ ಮಧ್ಯಾಹ್ನದ ಬಿಸಿಯೂಟ ಸಾವುಗಳ ಹಿನ್ನೆಲೆಯಲ್ಲಿ ನಿತೀಶ್ ಸರ್ಕಾರದ ವಿರುದ್ಧ ಪ್ರತಿಭಟಿಸಿ ಸರನ್ ಬಂದ್ ಆಚರಿಸಲು ವಿರೋಧಿ ಬಿಜೆಪಿ ಈದಿನ ಕರೆ ನೀಡಿದೆ. ಘಟನೆಯನ್ನು ಪ್ರತಿಭಟಿಸಿ ಆರ್ ಜೆಡಿ ಕೂಡಾ ಸರನ್ ಬಂದ್ ಆಚರಿಸುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>