<p>`ವಿಷ್ಣು~ ಹೆಸರಿನೊಂದಿಗೆ ತಳುಕು ಹಾಕಿಕೊಂಡ ಸುದ್ದಿಗಳು ಮತ್ತೊಮ್ಮೆ ಚಾಲ್ತಿಯಲ್ಲಿದೆ. ಅಂದಹಾಗೆ, ಇದು `ಆಪ್ತರಕ್ಷಕ~ ಚಿತ್ರದ ಅಭಿನಯಕ್ಕಾಗಿ ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಿದ್ದಕ್ಕೆ ಸಂಬಂಧಿಸಿದ ವಾದ - ವಿವಾದವಲ್ಲ! ಹೊಸ ಸಿನಿಮಾಕ್ಕೆ ಸಂಬಂಧಿಸಿದ ಸುದ್ದಿಗಳಿವು.<br /> <br /> ನಟ ಅಭಿಜಿತ್ ಅವರ ಕನಸಿನ ಕೂಸು ಈ `ವಿಷ್ಣು~. ನಟ ಎಂದರಷ್ಟೇ ಸಾಲದು, ಈ ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ಕೂಡ ಅವರೇನೇ. `ವಿಷ್ಣು~ ಮೂಲಕ ಅವರದ್ದು ತ್ರಿಪಾತ್ರ ನಿರ್ವಹಣೆ. ಸದ್ಯ ಸಿನಿಮಾದ ಮೊದಲ ಪ್ರತಿ ಬಗಲಲ್ಲಿಟ್ಟುಕೊಂಡಿರುವ ಅವರು ಕನ್ನಡ ಮಾಸ ನವೆಂಬರ್ನ ಮೂರನೇ ವಾರದಲ್ಲಿ ತಮ್ಮ ಕೂಸನ್ನು ಚಿತ್ರಮಂದಿರಗಳಿಗೆ ಒಪ್ಪಿಸಲು ಉದ್ದೇಶಿಸಿದ್ದಾರೆ.<br /> <br /> ಕಳೆದ ವಾರ `ವಿಷ್ಣು~ ಚಿತ್ರದ ಗೀತೆಗಳ ಧ್ವನಿಮುದ್ರಿಕೆಯ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅಭಿಜಿತ್ ತಮ್ಮ ಕನಸು ಕನವರಿಕೆಗಳನ್ನು ಹಂಚಿಕೊಂಡರು. ತೆರೆಗೆ ಸಿದ್ಧವಾಗಿರುವ ಸಿನಿಮಾಗಳ ಉಬ್ಬರ ನವೆಂಬರ್ ಮಧ್ಯದ ವೇಳೆಗೆ ಒಂದು ಹದಕ್ಕೆ ಬರಬಹುದು. ಆಗ ತಮ್ಮ ಚಿತ್ರದ ಬಿಡುಗಡೆ ಸುರಳೀತವಾಗಬಹುದು ಎನ್ನುವ ಲೆಕ್ಕಾಚಾರ ಅವರದ್ದು.<br /> <br /> ಈ ಚಿತ್ರ ಅವರ ಆತ್ಮವಿಶ್ವಾಸವನ್ನು ಇಮ್ಮಡಿ ಮುಮ್ಮಡಿಗೊಳಿಸಿದ್ದು, ಇನ್ನುಮುಂದೆ ವರ್ಷಕ್ಕೊಂದು ಚಿತ್ರ ನಿರ್ಮಿಸುವ ಸಂಕಲ್ಪಕ್ಕೆ ಕಾರಣವಾಗಿದೆಯಂತೆ. ಹಾಂ, ಅವರ ಮುಂದಿನ ಪ್ರಯತ್ನ `ಕಲಾತ್ಮಕ ಚಿತ್ರ~ವಂತೆ!<br /> <br /> ಅತಿಥಿಯಾಗಿ ಧ್ವನಿಮುದ್ರಿಕೆ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ನಿರ್ಮಾಪಕ ಬಿ.ಎನ್. ಗಂಗಾಧರ್ `ವಿಷ್ಣು ಬಳಗ~ಕ್ಕೆ ಶುಭಕೋರಿದರು. ಕನ್ನಡ ಚಿತ್ರಗಳಿಗೆ ಮಾರಕವಾಗಿರುವ ಪರಭಾಷಾ ಚಿತ್ರಗಳ ಮೇಲೆ ನಿಯಂತ್ರಣ ಹೇರಬೇಕು ಎಂದು ಆಗ್ರಹಿಸಿದರು. <br /> <br /> ಚಿತ್ರದ ನಾಯಕಿ ಕ್ಯಾಥರೀನ್ ಅವರಿಗೆ ಒಳ್ಳೆಯ ಚಿತ್ರ ಹಾಗೂ ಚಿತ್ರತಂಡದ ಜೊತೆಗೆ ಭಾಗಿಯಾದ ಖುಷಿ. `ವೃತ್ತಿಜೀವನದಲ್ಲಿ ಇದೊಂದು ಅವಿಸ್ಮರಣೀಯ ಅನುಭವ~ ಎಂದಾಕೆ ಭಾವುಕರಾದರು. <br /> <br /> ಈ ಚಿತ್ರದಲ್ಲಿ ಹೊಸ ಗೀತರಚನೆಕಾರರು ಹಾಗೂ ಸ್ಥಳೀಯ ಗಾಯಕರಿಗೆ ಅವಕಾಶ ನೀಡಿರುವುದಾಗಿ ಸಂಗೀತ ನಿರ್ದೇಶಕ ಎಂ.ಎನ್. ಕೃಪಾಕರ್ ಹೇಳಿದರು. ತಮ್ಮ ಈ ಸಂಗೀತ ಪ್ರಯೋಗ ಕೇಳುಗರಿಗೆ ಇಷ್ಟವಾಗಬಹುದು ಎನ್ನುವುದು ಅವರ ನಂಬಿಕೆ. <br /> <br /> ನಿರ್ಮಾಪಕ ಉಮೇಶ್ ಬಣಕಾರ್, ಅಕ್ಷಯ್ ಆಡಿಯೋದ ಟಿ.ಪಿ.ಸಿದ್ಧರಾಜು, ಛಾಯಾಗ್ರಾಹಕ ಮನೋಹರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. `ವಿಷ್ಣು ಗೆಲ್ಲಲಿ~ ಎನ್ನುವುದು ಎಲ್ಲರ ಹಾರೈಕೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>`ವಿಷ್ಣು~ ಹೆಸರಿನೊಂದಿಗೆ ತಳುಕು ಹಾಕಿಕೊಂಡ ಸುದ್ದಿಗಳು ಮತ್ತೊಮ್ಮೆ ಚಾಲ್ತಿಯಲ್ಲಿದೆ. ಅಂದಹಾಗೆ, ಇದು `ಆಪ್ತರಕ್ಷಕ~ ಚಿತ್ರದ ಅಭಿನಯಕ್ಕಾಗಿ ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಿದ್ದಕ್ಕೆ ಸಂಬಂಧಿಸಿದ ವಾದ - ವಿವಾದವಲ್ಲ! ಹೊಸ ಸಿನಿಮಾಕ್ಕೆ ಸಂಬಂಧಿಸಿದ ಸುದ್ದಿಗಳಿವು.<br /> <br /> ನಟ ಅಭಿಜಿತ್ ಅವರ ಕನಸಿನ ಕೂಸು ಈ `ವಿಷ್ಣು~. ನಟ ಎಂದರಷ್ಟೇ ಸಾಲದು, ಈ ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ಕೂಡ ಅವರೇನೇ. `ವಿಷ್ಣು~ ಮೂಲಕ ಅವರದ್ದು ತ್ರಿಪಾತ್ರ ನಿರ್ವಹಣೆ. ಸದ್ಯ ಸಿನಿಮಾದ ಮೊದಲ ಪ್ರತಿ ಬಗಲಲ್ಲಿಟ್ಟುಕೊಂಡಿರುವ ಅವರು ಕನ್ನಡ ಮಾಸ ನವೆಂಬರ್ನ ಮೂರನೇ ವಾರದಲ್ಲಿ ತಮ್ಮ ಕೂಸನ್ನು ಚಿತ್ರಮಂದಿರಗಳಿಗೆ ಒಪ್ಪಿಸಲು ಉದ್ದೇಶಿಸಿದ್ದಾರೆ.<br /> <br /> ಕಳೆದ ವಾರ `ವಿಷ್ಣು~ ಚಿತ್ರದ ಗೀತೆಗಳ ಧ್ವನಿಮುದ್ರಿಕೆಯ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅಭಿಜಿತ್ ತಮ್ಮ ಕನಸು ಕನವರಿಕೆಗಳನ್ನು ಹಂಚಿಕೊಂಡರು. ತೆರೆಗೆ ಸಿದ್ಧವಾಗಿರುವ ಸಿನಿಮಾಗಳ ಉಬ್ಬರ ನವೆಂಬರ್ ಮಧ್ಯದ ವೇಳೆಗೆ ಒಂದು ಹದಕ್ಕೆ ಬರಬಹುದು. ಆಗ ತಮ್ಮ ಚಿತ್ರದ ಬಿಡುಗಡೆ ಸುರಳೀತವಾಗಬಹುದು ಎನ್ನುವ ಲೆಕ್ಕಾಚಾರ ಅವರದ್ದು.<br /> <br /> ಈ ಚಿತ್ರ ಅವರ ಆತ್ಮವಿಶ್ವಾಸವನ್ನು ಇಮ್ಮಡಿ ಮುಮ್ಮಡಿಗೊಳಿಸಿದ್ದು, ಇನ್ನುಮುಂದೆ ವರ್ಷಕ್ಕೊಂದು ಚಿತ್ರ ನಿರ್ಮಿಸುವ ಸಂಕಲ್ಪಕ್ಕೆ ಕಾರಣವಾಗಿದೆಯಂತೆ. ಹಾಂ, ಅವರ ಮುಂದಿನ ಪ್ರಯತ್ನ `ಕಲಾತ್ಮಕ ಚಿತ್ರ~ವಂತೆ!<br /> <br /> ಅತಿಥಿಯಾಗಿ ಧ್ವನಿಮುದ್ರಿಕೆ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ನಿರ್ಮಾಪಕ ಬಿ.ಎನ್. ಗಂಗಾಧರ್ `ವಿಷ್ಣು ಬಳಗ~ಕ್ಕೆ ಶುಭಕೋರಿದರು. ಕನ್ನಡ ಚಿತ್ರಗಳಿಗೆ ಮಾರಕವಾಗಿರುವ ಪರಭಾಷಾ ಚಿತ್ರಗಳ ಮೇಲೆ ನಿಯಂತ್ರಣ ಹೇರಬೇಕು ಎಂದು ಆಗ್ರಹಿಸಿದರು. <br /> <br /> ಚಿತ್ರದ ನಾಯಕಿ ಕ್ಯಾಥರೀನ್ ಅವರಿಗೆ ಒಳ್ಳೆಯ ಚಿತ್ರ ಹಾಗೂ ಚಿತ್ರತಂಡದ ಜೊತೆಗೆ ಭಾಗಿಯಾದ ಖುಷಿ. `ವೃತ್ತಿಜೀವನದಲ್ಲಿ ಇದೊಂದು ಅವಿಸ್ಮರಣೀಯ ಅನುಭವ~ ಎಂದಾಕೆ ಭಾವುಕರಾದರು. <br /> <br /> ಈ ಚಿತ್ರದಲ್ಲಿ ಹೊಸ ಗೀತರಚನೆಕಾರರು ಹಾಗೂ ಸ್ಥಳೀಯ ಗಾಯಕರಿಗೆ ಅವಕಾಶ ನೀಡಿರುವುದಾಗಿ ಸಂಗೀತ ನಿರ್ದೇಶಕ ಎಂ.ಎನ್. ಕೃಪಾಕರ್ ಹೇಳಿದರು. ತಮ್ಮ ಈ ಸಂಗೀತ ಪ್ರಯೋಗ ಕೇಳುಗರಿಗೆ ಇಷ್ಟವಾಗಬಹುದು ಎನ್ನುವುದು ಅವರ ನಂಬಿಕೆ. <br /> <br /> ನಿರ್ಮಾಪಕ ಉಮೇಶ್ ಬಣಕಾರ್, ಅಕ್ಷಯ್ ಆಡಿಯೋದ ಟಿ.ಪಿ.ಸಿದ್ಧರಾಜು, ಛಾಯಾಗ್ರಾಹಕ ಮನೋಹರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. `ವಿಷ್ಣು ಗೆಲ್ಲಲಿ~ ಎನ್ನುವುದು ಎಲ್ಲರ ಹಾರೈಕೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>