<p>ಪಿರಿಯಾಪಟ್ಟಣ: ಸಮಾರಂಭವೊಂದರಲ್ಲಿ ಊಟ ಸೇವಿಸಿದ 75ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡು ಚಿಕಿತ್ಸೆ ಪಡೆದ ಘಟನೆ ತಾಲ್ಲೂಕಿನ ಬೆಕ್ಕರೆ ಗ್ರಾಮದಲ್ಲಿ ಜರುಗಿದೆ.<br /> <br /> ಬೆಕ್ಕರೆ ಗ್ರಾಮದಲ್ಲಿನ ರವಿ ಎಂಬುವವರ ಪುತ್ರಿಯ ಆರತಿ ಕಾರ್ಯಕ್ರಮ ಭಾನುವಾರ ರಾತ್ರಿ ನಡೆದಿದ್ದು ಇದರಲ್ಲಿ ನೂರಕ್ಕೂ ಹೆಚ್ಚು ಮಂದಿ ಊಟ ಮಾಡಿದ್ದರು. ಆದರೆ, ಬೆಕ್ಕರೆ ಹಾಗೂ ಭುವನಹಳ್ಳಿ ಗ್ರಾಮದ 75ಕ್ಕೂ ಅಧಿಕ ಮಂದಿಗೆ ರಾತ್ರಿ 2ಗಂಟೆಯ ನಂತರ ವಾಂತಿ-ಭೇದಿ ಪ್ರಾರಂಭವಾಗಿದೆ.<br /> <br /> ಆದರೆ, ಬೆಳಗಿನವರೆಗೂ ಗ್ರಾಮದಲ್ಲಿಯೆ ಪ್ರಥಮ ಚಿಕಿತ್ಸೆ ಪಡೆದ ಗ್ರಾಮಸ್ಥರು ಭುವನಹಳ್ಳಿ ಹಾಗೂ ಕೋಮಲಾಪುರ ಪ್ರಾಥಮಿಕ ಕೇಂದ್ರಗಳು ಬೆಳಿಗ್ಗೆ ಬಾಗಿಲು ತೆರೆಯುತ್ತಿದ್ದಂತೆಯೇ ಒಬ್ಬೊಬ್ಬರಾಗಿ ಚಿಕಿತ್ಸೆಗಾಗಿ ಧಾವಿಸಿದರು. ಭುವನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 35 ಮಂದಿಗೆ ವೈದ್ಯ ಡಾ.ರಾಜೇಶ್ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗಿದೆ.<br /> <br /> ಇದರಲ್ಲಿ 25 ಮಂದಿಗೆ ಗುಣವಾಗಲೇ ಇಲ್ಲ. ಆದ್ದರಿಂದ ಇನ್ನುಳಿದ ಜನರನ್ನು ಸೇರಿಸಿ ಒಟ್ಟು 50ಕ್ಕೂ ಹೆಚ್ಚು ಮಂದಿಯನ್ನು ಪಿರಿಯಾಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈಗ ಇವರುಗಳ ಆರೋಗ್ಯ ಸುಧಾರಿಸುತ್ತಿದೆ.<br /> <br /> ಕಲುಷಿತ ನೀರು ಹಾಗೂ ವಿಷ ಆಹಾರ ಸೇವನೆಯಿಂದ ಈ ಘಟನೆ ಸಂಭವಿಸಿರಬಹುದು ಎಂದು ಡಾ.ರಾಜೇಶ್ ತಿಳಿಸಿದ್ದಾರೆ.ಅಸ್ವಸ್ಥರಾಗಿದ್ದ 50ಕ್ಕೂ ಹೆಚ್ಚು ಮಂದಿಗೆ ಪಿರಿಯಾಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಾಗ ಸಾಲದೇ ಇದ್ದರಿಂದ ನೆಲದ ಮೇಲೆ ಮಲಗಿಸಿ ಚಿಕಿತ್ಸೆ ನೀಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪಿರಿಯಾಪಟ್ಟಣ: ಸಮಾರಂಭವೊಂದರಲ್ಲಿ ಊಟ ಸೇವಿಸಿದ 75ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡು ಚಿಕಿತ್ಸೆ ಪಡೆದ ಘಟನೆ ತಾಲ್ಲೂಕಿನ ಬೆಕ್ಕರೆ ಗ್ರಾಮದಲ್ಲಿ ಜರುಗಿದೆ.<br /> <br /> ಬೆಕ್ಕರೆ ಗ್ರಾಮದಲ್ಲಿನ ರವಿ ಎಂಬುವವರ ಪುತ್ರಿಯ ಆರತಿ ಕಾರ್ಯಕ್ರಮ ಭಾನುವಾರ ರಾತ್ರಿ ನಡೆದಿದ್ದು ಇದರಲ್ಲಿ ನೂರಕ್ಕೂ ಹೆಚ್ಚು ಮಂದಿ ಊಟ ಮಾಡಿದ್ದರು. ಆದರೆ, ಬೆಕ್ಕರೆ ಹಾಗೂ ಭುವನಹಳ್ಳಿ ಗ್ರಾಮದ 75ಕ್ಕೂ ಅಧಿಕ ಮಂದಿಗೆ ರಾತ್ರಿ 2ಗಂಟೆಯ ನಂತರ ವಾಂತಿ-ಭೇದಿ ಪ್ರಾರಂಭವಾಗಿದೆ.<br /> <br /> ಆದರೆ, ಬೆಳಗಿನವರೆಗೂ ಗ್ರಾಮದಲ್ಲಿಯೆ ಪ್ರಥಮ ಚಿಕಿತ್ಸೆ ಪಡೆದ ಗ್ರಾಮಸ್ಥರು ಭುವನಹಳ್ಳಿ ಹಾಗೂ ಕೋಮಲಾಪುರ ಪ್ರಾಥಮಿಕ ಕೇಂದ್ರಗಳು ಬೆಳಿಗ್ಗೆ ಬಾಗಿಲು ತೆರೆಯುತ್ತಿದ್ದಂತೆಯೇ ಒಬ್ಬೊಬ್ಬರಾಗಿ ಚಿಕಿತ್ಸೆಗಾಗಿ ಧಾವಿಸಿದರು. ಭುವನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 35 ಮಂದಿಗೆ ವೈದ್ಯ ಡಾ.ರಾಜೇಶ್ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗಿದೆ.<br /> <br /> ಇದರಲ್ಲಿ 25 ಮಂದಿಗೆ ಗುಣವಾಗಲೇ ಇಲ್ಲ. ಆದ್ದರಿಂದ ಇನ್ನುಳಿದ ಜನರನ್ನು ಸೇರಿಸಿ ಒಟ್ಟು 50ಕ್ಕೂ ಹೆಚ್ಚು ಮಂದಿಯನ್ನು ಪಿರಿಯಾಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈಗ ಇವರುಗಳ ಆರೋಗ್ಯ ಸುಧಾರಿಸುತ್ತಿದೆ.<br /> <br /> ಕಲುಷಿತ ನೀರು ಹಾಗೂ ವಿಷ ಆಹಾರ ಸೇವನೆಯಿಂದ ಈ ಘಟನೆ ಸಂಭವಿಸಿರಬಹುದು ಎಂದು ಡಾ.ರಾಜೇಶ್ ತಿಳಿಸಿದ್ದಾರೆ.ಅಸ್ವಸ್ಥರಾಗಿದ್ದ 50ಕ್ಕೂ ಹೆಚ್ಚು ಮಂದಿಗೆ ಪಿರಿಯಾಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಾಗ ಸಾಲದೇ ಇದ್ದರಿಂದ ನೆಲದ ಮೇಲೆ ಮಲಗಿಸಿ ಚಿಕಿತ್ಸೆ ನೀಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>