<p><strong>ಧಾರವಾಡ: </strong>ಅಣಸಿ-ದಾಂಡೇಲಿ ರಕ್ಷಿತಾರಣ್ಯ ವ್ಯಾಪ್ತಿಯ ಗುಂದ ಗ್ರಾಮದ ಬಳಿಯ ಕಾನೇರಿ ನದಿಯಲ್ಲಿ ಈಜಲು ಹೋದ ಧಾರವಾಡ ತಾಲ್ಲೂಕಿನ ಪುಡಕಲಕಟ್ಟಿ ಗ್ರಾಮದ ಯುವಕನೊಬ್ಬ ನೀರು ಪಾಲಾದ ಘಟನೆ ಭಾನುವಾರ ಮಧ್ಯಾಹ್ನ ಸಂಭವಿಸಿದ್ದು, ಮೃತದೇಹ ಮಂಗಳವಾರ ಘಟನೆ ನಡೆದ ಸ್ಥಳದಿಂದ 70 ಮೀಟರ್ ದೂರದಲ್ಲಿ ದೊರೆತಿದೆ. <br /> <br /> ಧಾರವಾಡ ತಾಲ್ಲೂಕಿನ ಬೇಲೂರು ಕೈಗಾರಿಕಾ ಪ್ರದೇಶದ ಕಾರ್ಖಾನೆಯ 15 ಯುವಕರು ಭಾನುವಾರ ದಾಂಡೇಲಿ ಅರಣ್ಯಕ್ಕೆ ಪಿಕ್ನಿಕ್ಗೆ ತೆರಳಿದ್ದರು. ಅವರಲ್ಲಿ ಗ್ರಾಮದ ಚಂದ್ರಗೌಡ ತಮ್ಮನಗೌಡ ದೊಡ್ಡಗೌಡ (26) ಎಂಬಾತ ಸುಮಾರು 30 ಅಡಿ ಆಳವಿದ್ದ ನೀರಿನಲ್ಲಿ ಮುಳುಗಿದ.<br /> <br /> ಸಾಕಷ್ಟು ಶೋಧ ಕಾರ್ಯ ನಡೆಸಿದರೂ ಮಂಗಳವಾರ ಬೆಳಗಿನವರೆಗೂ ಶವ ದೊರೆತಿರಲಿಲ್ಲ. 48 ಗಂಟೆಗಳ ಬಳಿಕ ಶವ ನೀರಿನ ಮೇಲ್ಭಾಗಕ್ಕೆ ಬಂದಿತು ಎಂದು ದಾಂಡೇಲಿ ಇನ್ಸ್ಪೆಕ್ಟರ್ ಕೆ.ಸಿ.ಪುರುಷೋತ್ತಮ `ಪ್ರಜಾವಾಣಿ~ಗೆ ತಿಳಿಸಿದರು.ಉಳಿದ 14 ಯುವಕರು ಸುರಕ್ಷಿತವಾಗಿದ್ದು, ಧಾರವಾಡ ನಗರ ಹಾಗೂ ಸಮೀಪದ ಗ್ರಾಮಗಳಿಗೆ ಸೇರಿದವರಾಗಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ: </strong>ಅಣಸಿ-ದಾಂಡೇಲಿ ರಕ್ಷಿತಾರಣ್ಯ ವ್ಯಾಪ್ತಿಯ ಗುಂದ ಗ್ರಾಮದ ಬಳಿಯ ಕಾನೇರಿ ನದಿಯಲ್ಲಿ ಈಜಲು ಹೋದ ಧಾರವಾಡ ತಾಲ್ಲೂಕಿನ ಪುಡಕಲಕಟ್ಟಿ ಗ್ರಾಮದ ಯುವಕನೊಬ್ಬ ನೀರು ಪಾಲಾದ ಘಟನೆ ಭಾನುವಾರ ಮಧ್ಯಾಹ್ನ ಸಂಭವಿಸಿದ್ದು, ಮೃತದೇಹ ಮಂಗಳವಾರ ಘಟನೆ ನಡೆದ ಸ್ಥಳದಿಂದ 70 ಮೀಟರ್ ದೂರದಲ್ಲಿ ದೊರೆತಿದೆ. <br /> <br /> ಧಾರವಾಡ ತಾಲ್ಲೂಕಿನ ಬೇಲೂರು ಕೈಗಾರಿಕಾ ಪ್ರದೇಶದ ಕಾರ್ಖಾನೆಯ 15 ಯುವಕರು ಭಾನುವಾರ ದಾಂಡೇಲಿ ಅರಣ್ಯಕ್ಕೆ ಪಿಕ್ನಿಕ್ಗೆ ತೆರಳಿದ್ದರು. ಅವರಲ್ಲಿ ಗ್ರಾಮದ ಚಂದ್ರಗೌಡ ತಮ್ಮನಗೌಡ ದೊಡ್ಡಗೌಡ (26) ಎಂಬಾತ ಸುಮಾರು 30 ಅಡಿ ಆಳವಿದ್ದ ನೀರಿನಲ್ಲಿ ಮುಳುಗಿದ.<br /> <br /> ಸಾಕಷ್ಟು ಶೋಧ ಕಾರ್ಯ ನಡೆಸಿದರೂ ಮಂಗಳವಾರ ಬೆಳಗಿನವರೆಗೂ ಶವ ದೊರೆತಿರಲಿಲ್ಲ. 48 ಗಂಟೆಗಳ ಬಳಿಕ ಶವ ನೀರಿನ ಮೇಲ್ಭಾಗಕ್ಕೆ ಬಂದಿತು ಎಂದು ದಾಂಡೇಲಿ ಇನ್ಸ್ಪೆಕ್ಟರ್ ಕೆ.ಸಿ.ಪುರುಷೋತ್ತಮ `ಪ್ರಜಾವಾಣಿ~ಗೆ ತಿಳಿಸಿದರು.ಉಳಿದ 14 ಯುವಕರು ಸುರಕ್ಷಿತವಾಗಿದ್ದು, ಧಾರವಾಡ ನಗರ ಹಾಗೂ ಸಮೀಪದ ಗ್ರಾಮಗಳಿಗೆ ಸೇರಿದವರಾಗಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>