<p><strong>ಉಡುಪಿ:</strong> ಜ್ಞಾನಮೂಲವೆಂದು ಹೇಳುವ ವೇದವಿದ್ಯೆಯ ದೊಡ್ಡ ನಿಧಿಯೇ ನಮಗೆ ಲಭ್ಯವಿದ್ದರೂ ಕೂಡ ಅದನ್ನು ಅರ್ಥಮಾಡಿಕೊಂಡು ಸಮರ್ಥವಾಗಿ ಬಳಸುವ ಕಾರ್ಯ ನಡೆಯದೇ ಪರಿತಪಿಸುವಂತಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಇಲ್ಲಿ ಹೇಳಿದರು.<br /> <br /> ಪುತ್ತಿಗೆ ಮಠದ ವಾದಿರಾಜ ಸಂಶೋಧನ ಕೇಂದ್ರ, ಸುರತ್ಕಲ್ನ ಫೌಂಡೇಷನ್ ಫಾರ್ ಇಂಡಿಯನ್ ಸೈಂಟಿಫಿಕ್ ಹೆರಿಟೇಜ್ ಸಹಯೋಗದಲ್ಲಿ ಅಂಬಲಪಾಡಿಯಲ್ಲಿ ಭಾನುವಾರ ನಡೆದ ಮೂರು ದಿನಗಳ ವೇದಗಳ ರಹಸ್ಯ ಅನ್ವೇಷಣೆ ಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.<br /> <br /> ವೇದಗಳಲ್ಲಿ ಎಲ್ಲವೂ ಅಡಗಿದೆ. ಜ್ಞಾನಮೂಲವಾದ ವೇದದ ಸಾರವನ್ನು ಅರಿಯುವ ಕೆಲಸ ನಡೆಯಬೇಕು. ಅದರಲ್ಲಿನ ಜ್ಞಾನ ಶೋಧಿಸಿ ಅದರ ಪ್ರಯೋಜನ ಪಡೆದುಕೊಳ್ಳುವ ಮೂಲಕ ನಮ್ಮ ರಾಷ್ಟ್ರ ಇನ್ನಷ್ಟು ಮುಂದುವರಿಯುವಂತಾಗಬೇಕು ಎಂದರು.<br /> <br /> ಮಂತ್ರಾಲಯದ ಗುರುಸಾರ್ವಭೌಮ ವಿದ್ಯಾಪೀಠದ ಕುಲಪತಿ ಡಾ.ವಿ.ಆರ್.ಪಂಚಮುಖಿ ಮಾತನಾಡಿ, ವೇದಗಳನ್ನು ಆದ್ಯತೆ ಮೇರೆಗೆ ಅಧ್ಯಯನ ಮಾಡುವ ಆಸಕ್ತರನ್ನು ಒಂದೆಡೆ ಸೇರಿಸಿ ಒಕ್ಕೂಟ ರಚಿಸಿಕೊಂಡು ವೇದಗಳಲ್ಲಿ ಅಡಗಿರುವ ಜ್ಞಾನವನ್ನು ಸಮಾಜಮುಖಿಯಾಗಿಸುವ ಪ್ರಯತ್ನ ನಡೆಯಲಿ ಎಂದರು. <br /> <br /> ಸಮ್ಮೇಳನದ ರೂವಾರಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರು ಮಾತನಾಡಿ, ವಿಶ್ವಶಾಂತಿಗಾಗಿ ವೇದವಿದ್ಯೆಯ ಅಧ್ಯಯನ ನಡೆಯಬೇಕು ಎಂದರು. ಅಲ್ಲದೇ ವೇದಾಧ್ಯಯನ ವಿದ್ವಾಂಸರ ವೆಬ್ಸೈಟ್ ರೂಪಿಸುವ ಭರವಸೆ ನೀಡಿದರು. ಹೈದರಾಬಾದ್ ವಿದ್ವಾಂಸ ಪ್ರೊ.ಕೆ.ವಿ.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು.<br /> <br /> ನವದೆಹಲಿಯ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ರಿಜಿಸ್ಟ್ರಾರ್ ಡಾ.ರಾಮಾನುಜ ದೇವನಾಥನ್, ಭೀಮನ ಕಟ್ಟೆ ಮಠದ ರಘುಮಾನ್ಯ ತೀರ್ಥರು, ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ.ವಿಜಯ ಬಲ್ಲಾಳ್, ಮುಂಬೈ ಧರ್ಮ ಪ್ರತಿಷ್ಠಾನ ಅಧ್ಯಕ್ಷ ಸುಧೀರ್ ಶೆಟ್ಟಿ, ಸಮ್ಮೇಳನ ಸಮನ್ವಯಕಾರ ಡಾ.ಎಂ.ಎನ್.ವೆಂಕಟೇಶ್, ಗೋಪಾಲಾಚಾರ್ಯ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ:</strong> ಜ್ಞಾನಮೂಲವೆಂದು ಹೇಳುವ ವೇದವಿದ್ಯೆಯ ದೊಡ್ಡ ನಿಧಿಯೇ ನಮಗೆ ಲಭ್ಯವಿದ್ದರೂ ಕೂಡ ಅದನ್ನು ಅರ್ಥಮಾಡಿಕೊಂಡು ಸಮರ್ಥವಾಗಿ ಬಳಸುವ ಕಾರ್ಯ ನಡೆಯದೇ ಪರಿತಪಿಸುವಂತಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಇಲ್ಲಿ ಹೇಳಿದರು.<br /> <br /> ಪುತ್ತಿಗೆ ಮಠದ ವಾದಿರಾಜ ಸಂಶೋಧನ ಕೇಂದ್ರ, ಸುರತ್ಕಲ್ನ ಫೌಂಡೇಷನ್ ಫಾರ್ ಇಂಡಿಯನ್ ಸೈಂಟಿಫಿಕ್ ಹೆರಿಟೇಜ್ ಸಹಯೋಗದಲ್ಲಿ ಅಂಬಲಪಾಡಿಯಲ್ಲಿ ಭಾನುವಾರ ನಡೆದ ಮೂರು ದಿನಗಳ ವೇದಗಳ ರಹಸ್ಯ ಅನ್ವೇಷಣೆ ಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.<br /> <br /> ವೇದಗಳಲ್ಲಿ ಎಲ್ಲವೂ ಅಡಗಿದೆ. ಜ್ಞಾನಮೂಲವಾದ ವೇದದ ಸಾರವನ್ನು ಅರಿಯುವ ಕೆಲಸ ನಡೆಯಬೇಕು. ಅದರಲ್ಲಿನ ಜ್ಞಾನ ಶೋಧಿಸಿ ಅದರ ಪ್ರಯೋಜನ ಪಡೆದುಕೊಳ್ಳುವ ಮೂಲಕ ನಮ್ಮ ರಾಷ್ಟ್ರ ಇನ್ನಷ್ಟು ಮುಂದುವರಿಯುವಂತಾಗಬೇಕು ಎಂದರು.<br /> <br /> ಮಂತ್ರಾಲಯದ ಗುರುಸಾರ್ವಭೌಮ ವಿದ್ಯಾಪೀಠದ ಕುಲಪತಿ ಡಾ.ವಿ.ಆರ್.ಪಂಚಮುಖಿ ಮಾತನಾಡಿ, ವೇದಗಳನ್ನು ಆದ್ಯತೆ ಮೇರೆಗೆ ಅಧ್ಯಯನ ಮಾಡುವ ಆಸಕ್ತರನ್ನು ಒಂದೆಡೆ ಸೇರಿಸಿ ಒಕ್ಕೂಟ ರಚಿಸಿಕೊಂಡು ವೇದಗಳಲ್ಲಿ ಅಡಗಿರುವ ಜ್ಞಾನವನ್ನು ಸಮಾಜಮುಖಿಯಾಗಿಸುವ ಪ್ರಯತ್ನ ನಡೆಯಲಿ ಎಂದರು. <br /> <br /> ಸಮ್ಮೇಳನದ ರೂವಾರಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರು ಮಾತನಾಡಿ, ವಿಶ್ವಶಾಂತಿಗಾಗಿ ವೇದವಿದ್ಯೆಯ ಅಧ್ಯಯನ ನಡೆಯಬೇಕು ಎಂದರು. ಅಲ್ಲದೇ ವೇದಾಧ್ಯಯನ ವಿದ್ವಾಂಸರ ವೆಬ್ಸೈಟ್ ರೂಪಿಸುವ ಭರವಸೆ ನೀಡಿದರು. ಹೈದರಾಬಾದ್ ವಿದ್ವಾಂಸ ಪ್ರೊ.ಕೆ.ವಿ.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು.<br /> <br /> ನವದೆಹಲಿಯ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ರಿಜಿಸ್ಟ್ರಾರ್ ಡಾ.ರಾಮಾನುಜ ದೇವನಾಥನ್, ಭೀಮನ ಕಟ್ಟೆ ಮಠದ ರಘುಮಾನ್ಯ ತೀರ್ಥರು, ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ.ವಿಜಯ ಬಲ್ಲಾಳ್, ಮುಂಬೈ ಧರ್ಮ ಪ್ರತಿಷ್ಠಾನ ಅಧ್ಯಕ್ಷ ಸುಧೀರ್ ಶೆಟ್ಟಿ, ಸಮ್ಮೇಳನ ಸಮನ್ವಯಕಾರ ಡಾ.ಎಂ.ಎನ್.ವೆಂಕಟೇಶ್, ಗೋಪಾಲಾಚಾರ್ಯ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>