ವೇಶ್ಯೆಯಿಂದ ಭಾರತೀಯರ ದರೋಡೆ
ಕ್ವಾಲಾಲಂಪುರ, (ಪಿಟಿಐ): ಥಾಯ್ಲೆಂಡ್ನ ಪಟ್ಟಾಯ ನಗರದಲ್ಲಿ ಐವರು ಭಾರತೀಯ ಪ್ರವಾಸಿಗರನ್ನು ಅವರು ಗೊತ್ತು ಮಾಡಿಕೊಂಡಿದ್ದ ವೇಶ್ಯೆಯೊಬ್ಬಳು ಮತ್ತು ಬರಿಸಿ ದರೋಡೆ ಮಾಡಿದ ಘಟನೆ ನಡೆದಿದೆ.
ಐವರಲ್ಲಿ ನಾಲ್ವರು ಪಾನಮತ್ತರಾಗಿದ್ದರು. ಪ್ರಜ್ಞೆ ಕಳೆದುಕೊಂಡಿದ್ದ ಮನ್ದೀಪ್ ಸಿಂಗ್ ಎಂಬಾತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಂದು ಲೋಟ ಮದ್ಯ ಹಾಗೂ ಬಳಸಿದ್ದ ಕಾಂಡೋಮ್ ಕೋಣೆಯಲ್ಲಿ ಸಿಕ್ಕಿದೆ. ಸಮುದ್ರ ತೀರದ ಪ್ರಸಿದ್ಧ ರೆಸಾರ್ಟ್ನಲ್ಲಿ ವೇಶ್ಯೆ ಈ ಪ್ರವಾಸಿಗರನ್ನು ಭೇಟಿ ಮಾಡಿದ್ದಳು. ಮತ್ತು ಬರಿಸುವ ಮದ್ಯ ನೀಡಿ ಅವರೆಲ್ಲರೂ ಪ್ರಜ್ಞೆ ಕಳೆದುಕೊಂಡ ಕೂಡಲೇ ಹಣದ ಚೀಲದೊಂದಿಗೆ ಪರಾರಿಯಾಗಿದ್ದಳು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.