<p><strong>ನವದೆಹಲಿ (ಪಿಟಿಐ/ಐಎಎನ್ಎಸ್):</strong> ವೋಟಿಗಾಗಿ ನೋಟು ಹಗರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರ ಹೆಸರನ್ನು ಎಳೆಯುವ ಮೂಲಕ ಹಿರಿಯ ನ್ಯಾಯವಾದಿ ರಾಮ್ ಜೇಠ್ಮಲಾನಿ ವಿಚಾರಣೆಯ ದಿಕ್ಕು ಬದಲಿಸಿದ್ದಾರೆ.<br /> <br /> ದೆಹಲಿ ಕೋರ್ಟ್ನಲ್ಲಿ ಸೋಮವಾರ ಅಮರ್ ಸಿಂಗ್ ಅವರ ಜಾಮೀನಿಗಾಗಿ ವಾದಿಸಿದ ಅವರು, `2008ರಲ್ಲಿ ನಡೆದ ಈ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಲಂಚ ನೀಡಿದ್ದರು~ ಎಂದು ವ್ಯತಿರಿಕ್ತ ಹೇಳಿಕೆ ನೀಡಿದರು.<br /> <br /> ಹಿಂದಿನ ವಿಚಾರಣೆಯಲ್ಲಿ (ಸೆ.12) ಅವರು, ಈ ಹಣ ಬಿಜೆಪಿಯಿಂದ ಬಂದಿರಬಹುದು ಎಂದಿದ್ದರು. ತಮ್ಮ ಪಕ್ಷ `ಕುಟುಕು ಕಾರ್ಯಾಚರಣೆ~ ನಡೆಸಿತ್ತು ಎಂಬ ಬಿಜೆಪಿ ಮುಖಂಡ ಎಲ್.ಕೆ.ಅಡ್ವಾಣಿ ಅವರ ಹೇಳಿಕೆ ಆಧರಿಸಿ ಜೇಠ್ಮಲಾನಿ ಹೀಗೆ ಹೇಳಿದ್ದರು. <br /> <br /> ಈ ನಡುವೆ ಕೋರ್ಟ್, ಅಮರ್ ಸಿಂಗ್ ಅವರ ಮಧ್ಯಂತರ ಜಾಮೀನು ಅವಧಿಯನ್ನು ಇದೇ ತಿಂಗಳ 27ರವರೆಗೆ ವಿಸ್ತರಿಸಿದೆ. <br /> <br /> `ನಾನೇನೂ ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಿಲ್ಲ. ಆದರೆ ಪಕ್ಷದ ಕೆಲವು ಪ್ರಭಾವಿ ನಾಯಕರು ಇದರ ಸೂತ್ರಧಾರರು ಎಂದು ಹೇಳುತ್ತಿದ್ದೇನೆ. ಆರೋಪಿಗಳು ನೀಡಿರುವ ಹೇಳಿಕೆಯನ್ನು ಪುರಾವೆ ಎಂದು ಪರಿಗಣಿಸಲಾಗದು. `ಕುಟುಕು ಕಾರ್ಯಾಚರಣೆ~ಯ ದೃಶ್ಯವನ್ನು ನೋಡಿದಾಗ ಅದರಲ್ಲಿ ಎಲ್ಲಿಯೂ ಯಾರ ಮುಖವೂ ಕಾಣುವುದಿಲ್ಲ. ಅಲ್ಲದೆ ಅಮರ್ ಸಿಂಗ್ ಧ್ವನಿಯೂ ಕೇಳಿಸುವುದಿಲ್ಲ. ಹಾಗಾಗಿ ಆರೋಪಿಗಳ ಹೇಳಿಕೆಗಳು ತಾಂತ್ರಿಕವಾಗಿ ಪುರಾವೆಗಳೇ ಅಲ್ಲ~ ಎಂದು ಜೇಠ್ಮಲಾನಿ ವಾದಿಸಿದರು.<br /> <br /> <strong>ಆರೋಪ ನಿರಾಧಾರ:</strong> ಅಹ್ಮದ್ ಪಟೇಲ್ ವಿರುದ್ಧದ ಜೇಠ್ಮಲಾನಿ ಅವರ ಹೇಳಿಕೆಯನ್ನು ಕಾಂಗ್ರೆಸ್ ತಳ್ಳಿಹಾಕಿದೆ. `ಜೇಠ್ಮಲಾನಿ ಅವರದು ಆಧಾರರಹಿತ ಅಸಂಬದ್ಧ ಹೇಳಿಕೆ~ ಎಂದು ಅಹ್ಮದ್ ಪಟೇಲ್ ಪ್ರತಿಕ್ರಿಯಿಸಿದ್ದಾರೆ.<br /> ಆರೋಗ್ಯ ಚೇತರಿಕೆ: ಮೂತ್ರನಾಳ ಸೋಂಕಿಗಾಗಿ ಏಮ್ಸನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಮರ್ ಸಿಂಗ್ ತುಸು ಚೇತರಿಸಿಕೊಂಡಿರುವುದಾಗಿ ವೈದ್ಯರು ತಿಳಿಸಿದ್ದಾರೆ.<br /> <br /> <strong>ಕುಸಿದ ಹಿಂದೂಸ್ತಾನಿ</strong>: ಈ ಮಧ್ಯೆ, ವಿಚಾರಣೆ ವೇಳೆ ಸಹ ಆರೋಪಿ ಸುಹೇಲ್ ಹಿಂದೂಸ್ತಾನಿ ಕೋರ್ಟ್ ಹಾಲ್ನಲ್ಲಿ ಕುಸಿದುಬಿದ್ದರು. ತಕ್ಷಣವೇ ಭದ್ರತಾ ಸಿಬ್ಬಂದಿ ಅವರನ್ನು ಹೊರಗೆ ಕರೆತಂದು ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ/ಐಎಎನ್ಎಸ್):</strong> ವೋಟಿಗಾಗಿ ನೋಟು ಹಗರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರ ಹೆಸರನ್ನು ಎಳೆಯುವ ಮೂಲಕ ಹಿರಿಯ ನ್ಯಾಯವಾದಿ ರಾಮ್ ಜೇಠ್ಮಲಾನಿ ವಿಚಾರಣೆಯ ದಿಕ್ಕು ಬದಲಿಸಿದ್ದಾರೆ.<br /> <br /> ದೆಹಲಿ ಕೋರ್ಟ್ನಲ್ಲಿ ಸೋಮವಾರ ಅಮರ್ ಸಿಂಗ್ ಅವರ ಜಾಮೀನಿಗಾಗಿ ವಾದಿಸಿದ ಅವರು, `2008ರಲ್ಲಿ ನಡೆದ ಈ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಲಂಚ ನೀಡಿದ್ದರು~ ಎಂದು ವ್ಯತಿರಿಕ್ತ ಹೇಳಿಕೆ ನೀಡಿದರು.<br /> <br /> ಹಿಂದಿನ ವಿಚಾರಣೆಯಲ್ಲಿ (ಸೆ.12) ಅವರು, ಈ ಹಣ ಬಿಜೆಪಿಯಿಂದ ಬಂದಿರಬಹುದು ಎಂದಿದ್ದರು. ತಮ್ಮ ಪಕ್ಷ `ಕುಟುಕು ಕಾರ್ಯಾಚರಣೆ~ ನಡೆಸಿತ್ತು ಎಂಬ ಬಿಜೆಪಿ ಮುಖಂಡ ಎಲ್.ಕೆ.ಅಡ್ವಾಣಿ ಅವರ ಹೇಳಿಕೆ ಆಧರಿಸಿ ಜೇಠ್ಮಲಾನಿ ಹೀಗೆ ಹೇಳಿದ್ದರು. <br /> <br /> ಈ ನಡುವೆ ಕೋರ್ಟ್, ಅಮರ್ ಸಿಂಗ್ ಅವರ ಮಧ್ಯಂತರ ಜಾಮೀನು ಅವಧಿಯನ್ನು ಇದೇ ತಿಂಗಳ 27ರವರೆಗೆ ವಿಸ್ತರಿಸಿದೆ. <br /> <br /> `ನಾನೇನೂ ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಿಲ್ಲ. ಆದರೆ ಪಕ್ಷದ ಕೆಲವು ಪ್ರಭಾವಿ ನಾಯಕರು ಇದರ ಸೂತ್ರಧಾರರು ಎಂದು ಹೇಳುತ್ತಿದ್ದೇನೆ. ಆರೋಪಿಗಳು ನೀಡಿರುವ ಹೇಳಿಕೆಯನ್ನು ಪುರಾವೆ ಎಂದು ಪರಿಗಣಿಸಲಾಗದು. `ಕುಟುಕು ಕಾರ್ಯಾಚರಣೆ~ಯ ದೃಶ್ಯವನ್ನು ನೋಡಿದಾಗ ಅದರಲ್ಲಿ ಎಲ್ಲಿಯೂ ಯಾರ ಮುಖವೂ ಕಾಣುವುದಿಲ್ಲ. ಅಲ್ಲದೆ ಅಮರ್ ಸಿಂಗ್ ಧ್ವನಿಯೂ ಕೇಳಿಸುವುದಿಲ್ಲ. ಹಾಗಾಗಿ ಆರೋಪಿಗಳ ಹೇಳಿಕೆಗಳು ತಾಂತ್ರಿಕವಾಗಿ ಪುರಾವೆಗಳೇ ಅಲ್ಲ~ ಎಂದು ಜೇಠ್ಮಲಾನಿ ವಾದಿಸಿದರು.<br /> <br /> <strong>ಆರೋಪ ನಿರಾಧಾರ:</strong> ಅಹ್ಮದ್ ಪಟೇಲ್ ವಿರುದ್ಧದ ಜೇಠ್ಮಲಾನಿ ಅವರ ಹೇಳಿಕೆಯನ್ನು ಕಾಂಗ್ರೆಸ್ ತಳ್ಳಿಹಾಕಿದೆ. `ಜೇಠ್ಮಲಾನಿ ಅವರದು ಆಧಾರರಹಿತ ಅಸಂಬದ್ಧ ಹೇಳಿಕೆ~ ಎಂದು ಅಹ್ಮದ್ ಪಟೇಲ್ ಪ್ರತಿಕ್ರಿಯಿಸಿದ್ದಾರೆ.<br /> ಆರೋಗ್ಯ ಚೇತರಿಕೆ: ಮೂತ್ರನಾಳ ಸೋಂಕಿಗಾಗಿ ಏಮ್ಸನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಮರ್ ಸಿಂಗ್ ತುಸು ಚೇತರಿಸಿಕೊಂಡಿರುವುದಾಗಿ ವೈದ್ಯರು ತಿಳಿಸಿದ್ದಾರೆ.<br /> <br /> <strong>ಕುಸಿದ ಹಿಂದೂಸ್ತಾನಿ</strong>: ಈ ಮಧ್ಯೆ, ವಿಚಾರಣೆ ವೇಳೆ ಸಹ ಆರೋಪಿ ಸುಹೇಲ್ ಹಿಂದೂಸ್ತಾನಿ ಕೋರ್ಟ್ ಹಾಲ್ನಲ್ಲಿ ಕುಸಿದುಬಿದ್ದರು. ತಕ್ಷಣವೇ ಭದ್ರತಾ ಸಿಬ್ಬಂದಿ ಅವರನ್ನು ಹೊರಗೆ ಕರೆತಂದು ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>