<p>ಶನಿವಾರಸಂತೆ: ಪಟ್ಟಣದ ಸುತ್ತಮುತ್ತಲ ಗ್ರಾಮಗಳಲ್ಲಿ ಭಾನುವಾರ ಸಂಜೆ ಗುಡುಗು ಸಿಡಿಲಿನ ಮಳೆ ಸುರಿಯಿತು. <br /> ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಮಧ್ಯಾಹ್ನ 3-30 ಗಂಟೆಗೆ ಇದ್ದಕ್ಕಿದ್ದಂತೆ ಗುಡುಗು-ಸಿಡಿಲಿನ ಆರ್ಭಟಕ್ಕೆ ಜನ ಬೆಚ್ಚಿಬಿದ್ದರು. ತಕ್ಷಣ ಮಳೆ ಜೋರಾಗಿ ಸುರಿಯತೊಡಗಿತು. <br /> <br /> ಸಂಜೆ 4.30 ರವರೆಗೆ ಸುರಿದ ಮಳೆಗೆ ಸುಡುತ್ತಿದ್ದ ಧರೆ ತಂಪಾಯಿತು. ಅರ್ಧ ಇಂಚಿಗೂ ಅಧಿಕ ಮಳೆಯಾಯಿತು.<br /> ಮಳೆಗಾಗಿ ಹಂಬಲಿಸುತ್ತಿದ್ದ ಕೃಷಿಕರಿಗೆ ಮಳೆ ಖುಷಿ ನೀಡಿತು. ಕೆಲವು ಗ್ರಾಮಗಳಲ್ಲಿ ಬೆಳೆಯಲಾಗಿರುವ ಹಸಿ ಮೆಣಸಿನಕಾಯಿ ಬೆಳೆಗೆ ಮಳೆ ಅನುಕೂಲವಾಯಿತು. ಮೂರು ನಾಲ್ಕುದಿನ ಗಿಡಗಳಿಗೆ ನೀರು ಹಾಕುವ ಶ್ರಮ ತಪ್ಪಿತು. ಆದರೆ ಈ ವರ್ಷ ಹಸಿ ಮೆಣಸಿನಕಾಯಿ ಬೆಳೆದ ರೈತರ ಸಂಖ್ಯೆಯೇ ಕಡಿಮೆಯಾಗಿದೆ.<br /> <br /> `ಬಿಸಿಲ ಧಗೆಯಿಂದ ಸುಡುತ್ತಿರುವ ಭೂಮಿಗೆ ಈ ಮಳೆ ಸಾಲದು. ಕೆಲ ತೋಟಗಳಲ್ಲಿ ಮಾತ್ರ ಕಾಫಿ ಹೂ ಅರಳಿದೆ. ಒಂದೆರೆಡು ದಿನ ಬಿಡದೆ ಮಳೆಯಾದರೆ ಅಥವಾ ವಾರದ ನಂತರ ಉತ್ತಮ ಮಳೆಯಾದರೆ ಕಾಫಿ ಬೆಳೆ ಉಳಿದೀತು. ಮಳೆಯಾಗುತ್ತಿರುವ ಲಕ್ಷಣ ಗಮನಿಸಿದರೆ ಈ ಬಾರಿ ಕಾಫಿ ಬೆಳೆಗೆ ಹೊಡೆತ ಬಿದ್ದಂತೆ ಕಾಣುತ್ತದೆ~ ಎಂದು ಕೂಜಗೇರಿ ಗ್ರಾಮದ ಬೆಳೆಗಾರ ಕೆ.ಟಿ.ಹರೀಶ್ ಅಭಿಪ್ರಾಯಪಟ್ಟರು.<br /> <br /> ಕಳೆದ ವರ್ಷ ಈ ವೇಳೆಗೆ ಉತ್ತಮ ಮಳೆಯಾಗಿತ್ತು. ಕಾಫಿ ಫಸಲು ಚೆನ್ನಾಗಿತ್ತು. ಬೆಳೆಗಾರರು ಉತ್ತಮ ಬೆಲೆಯನ್ನು ಪಡೆದಿದ್ದರು. ಆದರೆ, ಈ ವರ್ಷ ಹೂ ಅರಳುವ ಸಮಯದಲ್ಲೆ ವರುಣದೇವ ಮುನಿಸಿಕೊಂಡಂತೆ ತೋರುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶನಿವಾರಸಂತೆ: ಪಟ್ಟಣದ ಸುತ್ತಮುತ್ತಲ ಗ್ರಾಮಗಳಲ್ಲಿ ಭಾನುವಾರ ಸಂಜೆ ಗುಡುಗು ಸಿಡಿಲಿನ ಮಳೆ ಸುರಿಯಿತು. <br /> ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಮಧ್ಯಾಹ್ನ 3-30 ಗಂಟೆಗೆ ಇದ್ದಕ್ಕಿದ್ದಂತೆ ಗುಡುಗು-ಸಿಡಿಲಿನ ಆರ್ಭಟಕ್ಕೆ ಜನ ಬೆಚ್ಚಿಬಿದ್ದರು. ತಕ್ಷಣ ಮಳೆ ಜೋರಾಗಿ ಸುರಿಯತೊಡಗಿತು. <br /> <br /> ಸಂಜೆ 4.30 ರವರೆಗೆ ಸುರಿದ ಮಳೆಗೆ ಸುಡುತ್ತಿದ್ದ ಧರೆ ತಂಪಾಯಿತು. ಅರ್ಧ ಇಂಚಿಗೂ ಅಧಿಕ ಮಳೆಯಾಯಿತು.<br /> ಮಳೆಗಾಗಿ ಹಂಬಲಿಸುತ್ತಿದ್ದ ಕೃಷಿಕರಿಗೆ ಮಳೆ ಖುಷಿ ನೀಡಿತು. ಕೆಲವು ಗ್ರಾಮಗಳಲ್ಲಿ ಬೆಳೆಯಲಾಗಿರುವ ಹಸಿ ಮೆಣಸಿನಕಾಯಿ ಬೆಳೆಗೆ ಮಳೆ ಅನುಕೂಲವಾಯಿತು. ಮೂರು ನಾಲ್ಕುದಿನ ಗಿಡಗಳಿಗೆ ನೀರು ಹಾಕುವ ಶ್ರಮ ತಪ್ಪಿತು. ಆದರೆ ಈ ವರ್ಷ ಹಸಿ ಮೆಣಸಿನಕಾಯಿ ಬೆಳೆದ ರೈತರ ಸಂಖ್ಯೆಯೇ ಕಡಿಮೆಯಾಗಿದೆ.<br /> <br /> `ಬಿಸಿಲ ಧಗೆಯಿಂದ ಸುಡುತ್ತಿರುವ ಭೂಮಿಗೆ ಈ ಮಳೆ ಸಾಲದು. ಕೆಲ ತೋಟಗಳಲ್ಲಿ ಮಾತ್ರ ಕಾಫಿ ಹೂ ಅರಳಿದೆ. ಒಂದೆರೆಡು ದಿನ ಬಿಡದೆ ಮಳೆಯಾದರೆ ಅಥವಾ ವಾರದ ನಂತರ ಉತ್ತಮ ಮಳೆಯಾದರೆ ಕಾಫಿ ಬೆಳೆ ಉಳಿದೀತು. ಮಳೆಯಾಗುತ್ತಿರುವ ಲಕ್ಷಣ ಗಮನಿಸಿದರೆ ಈ ಬಾರಿ ಕಾಫಿ ಬೆಳೆಗೆ ಹೊಡೆತ ಬಿದ್ದಂತೆ ಕಾಣುತ್ತದೆ~ ಎಂದು ಕೂಜಗೇರಿ ಗ್ರಾಮದ ಬೆಳೆಗಾರ ಕೆ.ಟಿ.ಹರೀಶ್ ಅಭಿಪ್ರಾಯಪಟ್ಟರು.<br /> <br /> ಕಳೆದ ವರ್ಷ ಈ ವೇಳೆಗೆ ಉತ್ತಮ ಮಳೆಯಾಗಿತ್ತು. ಕಾಫಿ ಫಸಲು ಚೆನ್ನಾಗಿತ್ತು. ಬೆಳೆಗಾರರು ಉತ್ತಮ ಬೆಲೆಯನ್ನು ಪಡೆದಿದ್ದರು. ಆದರೆ, ಈ ವರ್ಷ ಹೂ ಅರಳುವ ಸಮಯದಲ್ಲೆ ವರುಣದೇವ ಮುನಿಸಿಕೊಂಡಂತೆ ತೋರುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>