<p>ನವದೆಹಲಿ /ಭುವನೇಶ್ವರ (ಪಿಟಿಐ): ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಯುಪಿಎ ಬೆಂಬಲಿತ ಅಭ್ಯರ್ಥಿ ಪ್ರಣವ್ ಮುಖರ್ಜಿ ಅವರು ಬುಧವಾರ ಜೆಡಿಯು ಮುಖ್ಯಸ್ಥ ಶರದ್ ಯಾದವ್ ಅವರನ್ನು ಭೇಟಿ ಮಾಡಿ ಚುನಾವಣೆಯಲ್ಲಿ ತಮಗೆ ಬೆಂಬಲ ಸೂಚಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.<br /> <br /> ಸಾಂಪ್ರದಾಯಿಕ ಬಂಗಾಳಿ ಉಡುಗೆ ಧರಿಸಿದ್ದ (ಧೋತಿ-ಕುರ್ತಾ) ಮಾಜಿ ಹಣಕಾಸು ಸಚಿವರು, ಸಂಸದೀಯ ವ್ಯವಹಾರಗಳ ಸಚಿವ ಪವನ್ ಕುಮಾರ್ ಬಾದಲ್ ಮತ್ತು ಪ್ರಧಾನಿ ಕಚೇರಿ ರಾಜ್ಯ ಖಾತೆ ಸಚಿವ ವಿ.ನಾರಾಯಣ ಸ್ವಾಮಿ ಅವರೊಂದಿಗೆ ಯಾದವ್ ಅವರ ನಿವಾಸಕ್ಕೆ ಭೇಟಿ ನೀಡಿ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದರು.<br /> <br /> `ನಮ್ಮ ಪಕ್ಷವು ಅವರಿಗೆ ಬೆಂಬಲ ನೀಡುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸಲು ಮುಖರ್ಜಿ ನನ್ನನ್ನು ಭೇಟಿ ಮಾಡಲು ಬಂದಿದ್ದರು. ಅದರ ಹೊರತಾಗಿ ಬೇರೇನೂ ಇಲ್ಲ~ ಎಂದು ಶರದ್ ಯಾದವ್ ಸುದ್ದಿಗಾರರಿಗೆ ತಿಳಿಸಿದರು.<br /> <br /> ಆದರೆ, ಮುಖರ್ಜಿ ಅವರು ಸುದ್ದಿಗಾರರೊಂದಿಗೆ ಮಾತನಾಡುವ ಗೋಜಿಗೆ ಹೋಗಲಿಲ್ಲ. `ಧನ್ಯವಾದ~ ಎಂದಷ್ಟೇ ಹೇಳಿ ತೆರಳಿದರು. ಮುಖರ್ಜಿ ಅವರ ಒಟ್ಟು ನಾಲ್ಕು ನಾಮಪತ್ರಗಳಲ್ಲಿ ಒಂದು ಪತ್ರಕ್ಕೆ ಮೊದಲ ಸೂಚಕರಾಗಿ ಶರದ್ಯಾದವ್ ಮಂಗಳವಾರವಷ್ಟೇ ಸಹಿ ಹಾಕಿದ್ದರು. <br /> <br /> ಮಾತುಕತೆ ವೇಳೆ ಸಂಸತ್ನಲ್ಲಿ ಶರದ್ಯಾದವ್ ಅವರೊಂದಿಗೆ ನಡೆಸಿದ್ದ ಕೆಲವು ವಾಗ್ವಾದದ ಘಟನೆಗಳನ್ನು ಪ್ರಣವ್ ಮುಖರ್ಜಿ ಸ್ಮರಿಸಿದರು ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ /ಭುವನೇಶ್ವರ (ಪಿಟಿಐ): ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಯುಪಿಎ ಬೆಂಬಲಿತ ಅಭ್ಯರ್ಥಿ ಪ್ರಣವ್ ಮುಖರ್ಜಿ ಅವರು ಬುಧವಾರ ಜೆಡಿಯು ಮುಖ್ಯಸ್ಥ ಶರದ್ ಯಾದವ್ ಅವರನ್ನು ಭೇಟಿ ಮಾಡಿ ಚುನಾವಣೆಯಲ್ಲಿ ತಮಗೆ ಬೆಂಬಲ ಸೂಚಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.<br /> <br /> ಸಾಂಪ್ರದಾಯಿಕ ಬಂಗಾಳಿ ಉಡುಗೆ ಧರಿಸಿದ್ದ (ಧೋತಿ-ಕುರ್ತಾ) ಮಾಜಿ ಹಣಕಾಸು ಸಚಿವರು, ಸಂಸದೀಯ ವ್ಯವಹಾರಗಳ ಸಚಿವ ಪವನ್ ಕುಮಾರ್ ಬಾದಲ್ ಮತ್ತು ಪ್ರಧಾನಿ ಕಚೇರಿ ರಾಜ್ಯ ಖಾತೆ ಸಚಿವ ವಿ.ನಾರಾಯಣ ಸ್ವಾಮಿ ಅವರೊಂದಿಗೆ ಯಾದವ್ ಅವರ ನಿವಾಸಕ್ಕೆ ಭೇಟಿ ನೀಡಿ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದರು.<br /> <br /> `ನಮ್ಮ ಪಕ್ಷವು ಅವರಿಗೆ ಬೆಂಬಲ ನೀಡುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸಲು ಮುಖರ್ಜಿ ನನ್ನನ್ನು ಭೇಟಿ ಮಾಡಲು ಬಂದಿದ್ದರು. ಅದರ ಹೊರತಾಗಿ ಬೇರೇನೂ ಇಲ್ಲ~ ಎಂದು ಶರದ್ ಯಾದವ್ ಸುದ್ದಿಗಾರರಿಗೆ ತಿಳಿಸಿದರು.<br /> <br /> ಆದರೆ, ಮುಖರ್ಜಿ ಅವರು ಸುದ್ದಿಗಾರರೊಂದಿಗೆ ಮಾತನಾಡುವ ಗೋಜಿಗೆ ಹೋಗಲಿಲ್ಲ. `ಧನ್ಯವಾದ~ ಎಂದಷ್ಟೇ ಹೇಳಿ ತೆರಳಿದರು. ಮುಖರ್ಜಿ ಅವರ ಒಟ್ಟು ನಾಲ್ಕು ನಾಮಪತ್ರಗಳಲ್ಲಿ ಒಂದು ಪತ್ರಕ್ಕೆ ಮೊದಲ ಸೂಚಕರಾಗಿ ಶರದ್ಯಾದವ್ ಮಂಗಳವಾರವಷ್ಟೇ ಸಹಿ ಹಾಕಿದ್ದರು. <br /> <br /> ಮಾತುಕತೆ ವೇಳೆ ಸಂಸತ್ನಲ್ಲಿ ಶರದ್ಯಾದವ್ ಅವರೊಂದಿಗೆ ನಡೆಸಿದ್ದ ಕೆಲವು ವಾಗ್ವಾದದ ಘಟನೆಗಳನ್ನು ಪ್ರಣವ್ ಮುಖರ್ಜಿ ಸ್ಮರಿಸಿದರು ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>