<p>ಮಾಲೂರು: ಪಟ್ಟಣದ ಹೃದಯ ಭಾಗದಲ್ಲಿನ ಬಸ್ ನಿಲ್ದಾಣ ದಶಕಗಳಿಂದ ಮೂಲ ಸೌಕರ್ಯದಿಂದ ವಂಚಿತ. ಇದರ ಪರಿಣಾಮ ನಿಲ್ದಾಣ ಪ್ರಯಾಣಿಕರ ಪಾಲಿಗೆ ಶಾಪವಾಗಿದೆ. ಪ್ರಯಾಣಿಕರು ನಿಲ್ಲಲು ಇಲ್ಲಿ ಜಾಗವಿಲ್ಲ. ಎಚ್ಚರ ತಪ್ಪಿದರೆ ಬಸ್ಸುಗಳಡಿ ಸಿಲುಕುವ ಅಪಾಯವೇ ಹೆಚ್ಚಾಗಿದೆ.<br /> <br /> 1987ರಲ್ಲಿ ಅಂದಿನ ಪುರಸಭಾ ಅಧ್ಯಕ್ಷ ಎ.ನಾಗರಾಜು ಅವರ ಯತ್ನದಿಂದ ಕಾರಂಜಿ ಕಟ್ಟೆ (ಕೆರೆ) ಪುರಸಭೆ ವತಿಯಿಂದ ಬಸ್ ನಿಲ್ದಾಣ ವಾಯಿತು. <br /> <br /> 25 ವರ್ಷಕ್ಕೂ ಹೆಚ್ಚಿನ ಅವಧಿಯಲ್ಲಿ ತಾಲ್ಲೂಕಿನ ಜನಸಾಂದ್ರತೆ ಹೆಚ್ಚಾಗಿದೆ. ಆದರೆ ಅಗತ್ಯಕ್ಕನುಗುಣವಾಗಿ ನಿಲ್ದಾಣಕ್ಕೆ ಸೌಕರ್ಯ ಒದಗಿಸಲಾಗಿಲ್ಲ. ನಿಲ್ದಾಣದಲ್ಲಿ ವಿವಿಧ ರೀತಿಯ ಅಂಗಡಿಗಳೂ ಇರುವುದರಿಂದ ಪ್ರಯಾಣಿಕರಿಗೆ ನಿಲ್ಲಲು ಜಾಗವಿಲ್ಲ. ಬೆಂಗಳೂರಿಗೆ ಕೇವಲ 48 ಕಿ.ಮೀ ದೂರದಲ್ಲಿರುವ ಕಾರಣ ಜನರು ಪ್ರತಿದಿನ ಬೆಂಗಳೂರಿಗೆ ಪ್ರಯಾಣಿಸುತ್ತಾರೆ. <br /> <br /> ಶೌಚಾಲಯ, ಕುಡಿಯುವ ನೀರಿಗಾಗಿ ಪ್ರಯಾಣಿಕರು ಪರದಾಡುವ ಸ್ಥಿತಿ ಮುಂದುವರಿದಿದೆ. ಇದಕ್ಕೆ ಕಾರಣ ಶೌಚಾಲಯ ಟೆಂಡರ್ ವಿಚಾರದಲ್ಲಿ ಪುರಸಭೆಗೂ ಮತ್ತು ಟೆಂಡರ್ದಾರರಿಗೂ ಗೊಂದಲ. ಸದ್ಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ಈ ವಿವಾದದ ಹಿನ್ನೆಲೆಯಲ್ಲಿ ಬಸ್ ನಿಲ್ದಾಣದಲ್ಲಿರುವ ಶೌಚಾಲಯಕ್ಕೆ ಪುರಸಭೆ ನೀರಿನ ಸೌಲಭ್ಯ ಕಲ್ಪಿಸಿಲ್ಲ. ಹೀಗಾಗಿ ಪ್ರಯಾಣಿಕರು ಶೌಚಾಲಯ ದುರ್ನಾತ ಬೀರುತ್ತದೆ. <br /> <br /> `ಸಮಯಕ್ಕೆ ಬಾರದ ಬಸ್ಗಳಿಂದ ಕಾದು ಕಾದು ಸುಸ್ತಾದರೆ ಬಾಯಾರಿಕೆಗೆ ನೀರಿನ ಸಿಗುವುದಿಲ್ಲ. ಅನಿವಾರ್ಯ ಇದ್ದಾಗ ಬಾಟಲಿ ನೀರನ್ನು ಪಡೆಯುವ ಅನಿವಾರ್ಯವಿದೆ ಎಂಬುದು~ ಪ್ರಯಾಣಿಕ ರಾಮಣ್ಣ ಅವರ ಅಸಮಾಧಾನದ ನುಡಿ.<br /> <br /> ನಿಲ್ದಾಣಕ್ಕೆ ಹೊಂದಿಕೊಂಡಂತೆ ಇರುವ ಉದ್ಯಾನದ ಸ್ಥಳದಲ್ಲಿನ ಸೊರಗಿವೆ. ಕೆಲವು ಅಸ್ತಿತ್ವ ಕಳೆದುಕೊಂಡಿವೆ. ಈ ಉದ್ಯಾನ ಹಾಗೂ ಬಸ್ ನಿಲ್ದಾಣ ವಿಸ್ತರಣೆಗೆ ಶಾಸಕ ಎಸ್.ಎನ್.ಕೃಷ್ಣಯ್ಯಶೆಟ್ಟಿ ಅವರ ಪ್ರಯತ್ನಕ್ಕೆ ಪರಿಸರ ವಾದಿಗಳು ವಿರೋಧ ವ್ಯಕ್ತಪಡಿಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. <br /> <br /> ಇದೇ ವೇಳೆ ಉದ್ಯಾನವನವನ್ನು ಬಹಳಷ್ಟು ಮಂದಿ ಬಯಲು ಶೌಚಾಲಯವನ್ನಾಗಿ ಮಾಡಿಕೊಂಡಿದ್ದಾರೆ. ಪರಿಣಾಮ ಬಸ್ ನಿಲ್ದಾಣದಲ್ಲಿ ಎಲ್ಲೆಡೆಯೂ ದುರ್ನಾತ. ಈ ನಿಲ್ದಾಣದಲ್ಲಿ ಪ್ರತಿದಿನ 370 ರಾಜ್ಯ ಸಾರಿಗೆ ಬಸ್ಸುಗಳು ಇಲ್ಲಿ ಸಂಚರಿಸುತ್ತವೆ. 150 ಖಾಸಗಿ ಬಸ್ಗಳು ಸಂಚರಿಸುತ್ತಿವೆ. <br /> <br /> `ಸಾರಿಗೆ ನಿಯಂತ್ರಣಾ ಕೊಠಡಿಯ ಮೇಲ್ಛಾವಣಿ ಶಿಥಿಲಗೊಂಡಿದೆ. ಕಿಟಕಿ ಬಾಗಿಲುಗಳು ಕೆಲಸಕ್ಕೆ ಬಾರದಾಗಿವೆ. ಪುರಸಭೆ ಹಾಗೂ ಸಾರಿಗೆ ನಿಗಮಕ್ಕೆ ಮೂಲ ಸೌಲಭ್ಯ ಕಲ್ಪಿಸುವಂತೆ ಹಲವು ಬಾರಿ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ~ ಎಂದು ಸಂಚಾರ ನಿಯಂತ್ರಕ ಮುಕುಂದಪ್ಪ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಾಲೂರು: ಪಟ್ಟಣದ ಹೃದಯ ಭಾಗದಲ್ಲಿನ ಬಸ್ ನಿಲ್ದಾಣ ದಶಕಗಳಿಂದ ಮೂಲ ಸೌಕರ್ಯದಿಂದ ವಂಚಿತ. ಇದರ ಪರಿಣಾಮ ನಿಲ್ದಾಣ ಪ್ರಯಾಣಿಕರ ಪಾಲಿಗೆ ಶಾಪವಾಗಿದೆ. ಪ್ರಯಾಣಿಕರು ನಿಲ್ಲಲು ಇಲ್ಲಿ ಜಾಗವಿಲ್ಲ. ಎಚ್ಚರ ತಪ್ಪಿದರೆ ಬಸ್ಸುಗಳಡಿ ಸಿಲುಕುವ ಅಪಾಯವೇ ಹೆಚ್ಚಾಗಿದೆ.<br /> <br /> 1987ರಲ್ಲಿ ಅಂದಿನ ಪುರಸಭಾ ಅಧ್ಯಕ್ಷ ಎ.ನಾಗರಾಜು ಅವರ ಯತ್ನದಿಂದ ಕಾರಂಜಿ ಕಟ್ಟೆ (ಕೆರೆ) ಪುರಸಭೆ ವತಿಯಿಂದ ಬಸ್ ನಿಲ್ದಾಣ ವಾಯಿತು. <br /> <br /> 25 ವರ್ಷಕ್ಕೂ ಹೆಚ್ಚಿನ ಅವಧಿಯಲ್ಲಿ ತಾಲ್ಲೂಕಿನ ಜನಸಾಂದ್ರತೆ ಹೆಚ್ಚಾಗಿದೆ. ಆದರೆ ಅಗತ್ಯಕ್ಕನುಗುಣವಾಗಿ ನಿಲ್ದಾಣಕ್ಕೆ ಸೌಕರ್ಯ ಒದಗಿಸಲಾಗಿಲ್ಲ. ನಿಲ್ದಾಣದಲ್ಲಿ ವಿವಿಧ ರೀತಿಯ ಅಂಗಡಿಗಳೂ ಇರುವುದರಿಂದ ಪ್ರಯಾಣಿಕರಿಗೆ ನಿಲ್ಲಲು ಜಾಗವಿಲ್ಲ. ಬೆಂಗಳೂರಿಗೆ ಕೇವಲ 48 ಕಿ.ಮೀ ದೂರದಲ್ಲಿರುವ ಕಾರಣ ಜನರು ಪ್ರತಿದಿನ ಬೆಂಗಳೂರಿಗೆ ಪ್ರಯಾಣಿಸುತ್ತಾರೆ. <br /> <br /> ಶೌಚಾಲಯ, ಕುಡಿಯುವ ನೀರಿಗಾಗಿ ಪ್ರಯಾಣಿಕರು ಪರದಾಡುವ ಸ್ಥಿತಿ ಮುಂದುವರಿದಿದೆ. ಇದಕ್ಕೆ ಕಾರಣ ಶೌಚಾಲಯ ಟೆಂಡರ್ ವಿಚಾರದಲ್ಲಿ ಪುರಸಭೆಗೂ ಮತ್ತು ಟೆಂಡರ್ದಾರರಿಗೂ ಗೊಂದಲ. ಸದ್ಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ಈ ವಿವಾದದ ಹಿನ್ನೆಲೆಯಲ್ಲಿ ಬಸ್ ನಿಲ್ದಾಣದಲ್ಲಿರುವ ಶೌಚಾಲಯಕ್ಕೆ ಪುರಸಭೆ ನೀರಿನ ಸೌಲಭ್ಯ ಕಲ್ಪಿಸಿಲ್ಲ. ಹೀಗಾಗಿ ಪ್ರಯಾಣಿಕರು ಶೌಚಾಲಯ ದುರ್ನಾತ ಬೀರುತ್ತದೆ. <br /> <br /> `ಸಮಯಕ್ಕೆ ಬಾರದ ಬಸ್ಗಳಿಂದ ಕಾದು ಕಾದು ಸುಸ್ತಾದರೆ ಬಾಯಾರಿಕೆಗೆ ನೀರಿನ ಸಿಗುವುದಿಲ್ಲ. ಅನಿವಾರ್ಯ ಇದ್ದಾಗ ಬಾಟಲಿ ನೀರನ್ನು ಪಡೆಯುವ ಅನಿವಾರ್ಯವಿದೆ ಎಂಬುದು~ ಪ್ರಯಾಣಿಕ ರಾಮಣ್ಣ ಅವರ ಅಸಮಾಧಾನದ ನುಡಿ.<br /> <br /> ನಿಲ್ದಾಣಕ್ಕೆ ಹೊಂದಿಕೊಂಡಂತೆ ಇರುವ ಉದ್ಯಾನದ ಸ್ಥಳದಲ್ಲಿನ ಸೊರಗಿವೆ. ಕೆಲವು ಅಸ್ತಿತ್ವ ಕಳೆದುಕೊಂಡಿವೆ. ಈ ಉದ್ಯಾನ ಹಾಗೂ ಬಸ್ ನಿಲ್ದಾಣ ವಿಸ್ತರಣೆಗೆ ಶಾಸಕ ಎಸ್.ಎನ್.ಕೃಷ್ಣಯ್ಯಶೆಟ್ಟಿ ಅವರ ಪ್ರಯತ್ನಕ್ಕೆ ಪರಿಸರ ವಾದಿಗಳು ವಿರೋಧ ವ್ಯಕ್ತಪಡಿಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. <br /> <br /> ಇದೇ ವೇಳೆ ಉದ್ಯಾನವನವನ್ನು ಬಹಳಷ್ಟು ಮಂದಿ ಬಯಲು ಶೌಚಾಲಯವನ್ನಾಗಿ ಮಾಡಿಕೊಂಡಿದ್ದಾರೆ. ಪರಿಣಾಮ ಬಸ್ ನಿಲ್ದಾಣದಲ್ಲಿ ಎಲ್ಲೆಡೆಯೂ ದುರ್ನಾತ. ಈ ನಿಲ್ದಾಣದಲ್ಲಿ ಪ್ರತಿದಿನ 370 ರಾಜ್ಯ ಸಾರಿಗೆ ಬಸ್ಸುಗಳು ಇಲ್ಲಿ ಸಂಚರಿಸುತ್ತವೆ. 150 ಖಾಸಗಿ ಬಸ್ಗಳು ಸಂಚರಿಸುತ್ತಿವೆ. <br /> <br /> `ಸಾರಿಗೆ ನಿಯಂತ್ರಣಾ ಕೊಠಡಿಯ ಮೇಲ್ಛಾವಣಿ ಶಿಥಿಲಗೊಂಡಿದೆ. ಕಿಟಕಿ ಬಾಗಿಲುಗಳು ಕೆಲಸಕ್ಕೆ ಬಾರದಾಗಿವೆ. ಪುರಸಭೆ ಹಾಗೂ ಸಾರಿಗೆ ನಿಗಮಕ್ಕೆ ಮೂಲ ಸೌಲಭ್ಯ ಕಲ್ಪಿಸುವಂತೆ ಹಲವು ಬಾರಿ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ~ ಎಂದು ಸಂಚಾರ ನಿಯಂತ್ರಕ ಮುಕುಂದಪ್ಪ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>