<p><strong>ಮಂಡ್ಯ:</strong> ಶಾಲೆ ಆರಂಭವಾಗಿ ಎರಡು ತಿಂಗಳು ಕಳೆದಿವೆ. ಆದರೂ ಶಿಕ್ಷಕರ ಹಾಗೂ ಪಠ್ಯ ಪುಸ್ತಕದ ಕೊರತೆ ವಿದ್ಯಾರ್ಥಿಗಳನ್ನು ಕಾಡುತ್ತಿದೆ.<br /> <br /> ಜಿಲ್ಲೆಯಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ 399 ಶಿಕ್ಷಕರ ಕೊರತೆ ಇದ್ದರೆ, ಪ್ರೌಢಶಾಲಾ ವಿಭಾಗದಲ್ಲಿ 100 ಶಿಕ್ಷಕರ ಕೊರತೆ ಇದೆ. ಹೀಗಾಗಿ, ಕೆಲವು ಶಾಲೆಗಳಲ್ಲಿ ಬೋಧನೆ ಸರಿಯಾಗಿ ಆಗುತ್ತಿಲ್ಲ.<br /> <br /> ನಾಗಮಂಗಲ ತಾಲ್ಲೂಕಿನಲ್ಲಿ 138, ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ 93, ಮಂಡ್ಯ ಉತ್ತರದಲ್ಲಿ 48, ಪಾಂಡವಪುರ ತಾಲ್ಲೂಕಿನಲ್ಲಿ 46, ಮದ್ದೂರು ತಾಲ್ಲೂಕಿನಲ್ಲಿ 40 ಮಂದಿ ಪ್ರಾಥಮಿಕ ಶಾಲಾ ಶಿಕ್ಷಕರಿಲ್ಲ.<br /> <br /> ಮಂಡ್ಯ ದಕ್ಷಿಣದಲ್ಲಿ 11, ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ 16, ಮಳವಳ್ಳಿ ತಾಲ್ಲೂಕಿನಲ್ಲಿ 7 ಶಿಕ್ಷಕರ ಕೊರತೆ ಇದೆ.<br /> ಪ್ರೌಢಶಾಲಾ ವಿಭಾಗದಲ್ಲಿ 100 ಶಿಕ್ಷಕರ ಕೊರತೆ ಇದೆ. ಇಂಗ್ಲಿಷ್ ವಿಷಯಕ್ಕೆ 79, ಹಿಂದಿ ವಿಷಯಕ್ಕೆ 11, ಕನ್ನಡ ವಿಷಯಕ್ಕೆ ನಾಲ್ಕು, ಪಿಇಟಿಗೆ 3, ಗ್ರೇಡ್ ಒನ್, ಕ್ರಾಫ್ಟ್ ಹಾಗೂ ವಿಶೇಷ ಶಿಕ್ಷಕರ ವಿಭಾಗದಲ್ಲಿ ತಲಾ ಒಬ್ಬರು ಶಿಕ್ಷಕರ ಕೊರತೆ ಎದುರಿಸಲಾಗುತ್ತಿದೆ.<br /> <br /> ಪ್ರೌಢಶಾಲಾ ವಿಭಾಗದಲ್ಲಿ 153 ಶಿಕ್ಷಕರು ಹೆಚ್ಚುವರಿಯಾಗಿದ್ದಾರೆ. ಪಿಸಿಎಂ ವಿಷಯಕ್ಕೆ 80, ಕಲಾ ವಿಭಾಗದಲ್ಲಿ 53, ಸಿಬಿಝಡ್ ವಿಷಯಕ್ಕೆ 11, ಇಂಗ್ಲಿಷ್ ವಿಷಯಕ್ಕೆ ಮೂರು, ಕನ್ನಡ, ಕ್ರಾಫ್ಟ್ ಹಾಗೂ ವಿಶೇಷ ಶಿಕ್ಷಕರ ವಿಭಾಗದಲ್ಲಿ ತಲಾ ಇಬ್ಬರು ಶಿಕ್ಷಕರು ಹೆಚ್ಚುವರಿಯಾಗಿದ್ದಾರೆ.<br /> <br /> ಹೆಚ್ಚುವರಿ ಶಿಕ್ಷಕರ ಪಟ್ಟಿಯನ್ನು ಈಗಾಗಲೇ ಸಿದ್ಧಪಡಿಸಲಾಗಿತ್ತು. ಅವರಿಗೆ ಕೌನ್ಸೆಲಿಂಗ್ ಮೂಲಕ ಜಿಲ್ಲೆಯಲ್ಲಿ ಅವಶ್ಯವಿದ್ದರೆ ವರ್ಗ ಮಾಡಲಾಗುವುದು. ಇಲ್ಲದಿದ್ದರೆ ವಿಭಾಗಮಟ್ಟಕ್ಕೆ ಪಟ್ಟಿ ಕಳುಹಿಸಿಕೊಡಲಾಗುವುದು ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಡಿ. ಶಿವಕುಮಾರ್.<br /> <br /> <strong>ಪಠ್ಯಪುಸ್ತಕಗಳಿಗೂ ಬರ</strong><br /> ಜಿಲ್ಲೆಗೆ ಒಟ್ಟು 12,53,452 ಲಕ್ಷ ಪಠ್ಯ ಪುಸ್ತಕಗಳು ಬೇಕಾಗಿದ್ದವು. ಕಳೆದ ವರ್ಷ 3 ಲಕ್ಷಕ್ಕೂ ಹೆಚ್ಚು ಪುಸ್ತಕಗಳು ಉಳಿದಿದ್ದರಿಂದ 8,62,018 ಪುಸ್ತಕಗಳ ಬೇಡಿಕೆಯನ್ನು ಸಲ್ಲಿಸಲಾಗಿತ್ತು.<br /> <br /> ಶಾಲೆಗಳಿಗೆ ಪುಸ್ತಕ ಹಂಚಿಕೆಯ ನಂತರ 1 ಲಕ್ಷದಷ್ಟು ಪುಸ್ತಕಗಳು ಉಳಿದಿವೆ. ಆದರೆ ನಾಲ್ಕನೇ ತರಗತಿಗೆ 500, ಐದನೇ ತರಗತಿಗೆ 600, ಆರನೇ ತರಗತಿಗೆ 1200, ಏಳನೇ ತರಗತಿಗೆ 1100 ಹಾಗೂ 8ನೇ ತರಗತಿಗೆ 3,200 ಪುಸ್ತಕಗಳ ಕೊರತೆ ಇದೆ. <br /> <br /> ಹೆಚ್ಚುವರಿ ಉಳಿದಿರುವ ಪುಸ್ತಕಗಳನ್ನು, ಕೊರತೆ ಇರುವ ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು ಜಿಲ್ಲೆಗಳಿಗೆ ಕಳುಹಿಸಿಕೊಡಲಾಗುತ್ತಿದೆ. ಕೊರತೆಯಾಗಿರುವ ಪುಸ್ತಕಗಳನ್ನು ಒದಗಿಸುವಂತೆ ಈಗಾಗಲೇ ಬೇಡಿಕೆ ಸಲ್ಲಿಸಲಾಗಿದೆ. ಜೊತೆಗೆ 1,47,660 ವಿದ್ಯಾರ್ಥಿಗಳಿಗೆ ಸಮವಸ್ತ್ರ ಬಂದಿವೆ. ಹಂಚಿಕೆ ನಡೆದಿದೆ ಎಂದು ಶಿವಕುಮಾರ್ ತಿಳಿಸಿದರು. <br /> <br /> ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕಬ್ಬಿಣ ಕಡಲೆಯಾಗಿರುವ ಇಂಗ್ಲಿಷ್ ವಿಷಯದಲ್ಲಿಯೇ ಹೆಚ್ಚಿನ ಪ್ರಮಾಣದ ಶಿಕ್ಷಕರ ಕೊರತೆಯನ್ನು ಜಿಲ್ಲೆಯ ವಿದ್ಯಾರ್ಥಿಗಳು ಎದುರಿಸುತ್ತಿದ್ದಾರೆ. ಭವಿಷ್ಯಕ್ಕೆ ಭದ್ರ ಅಡಿಪಾಯ ಹಾಕುವ ಪ್ರಾಥಮಿಕ ಶಾಲೆಗಳಿಗೆ 399 ಶಿಕ್ಷಕರ ಕೊರತೆ ಇರುವುದು ಪೋಷಕರನ್ನು ಆತಂಕಕ್ಕೆ ದೂಡಿದೆ.<br /> <br /> ಜಿಲ್ಲೆಗೆ ಇನ್ನು ಎಷ್ಟು ಶಿಕ್ಷಕರು ಬೇಕಾಗಿದ್ದಾರೆ ಎಂಬ ವಿವರವನ್ನು ಈಗಾಗಲೇ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ. ಬೇರೆ ವಿಷಯ ಶಿಕ್ಷಕರು, ಕೊರತೆ ಇರುವ ಶಿಕ್ಷಕರ ಪಠ್ಯವನ್ನೂ ಅಭ್ಯಾಸ ಮಾಡಿಸುತ್ತಿದ್ದಾರೆ ಎನ್ನುತ್ತಾರೆ ಅವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ:</strong> ಶಾಲೆ ಆರಂಭವಾಗಿ ಎರಡು ತಿಂಗಳು ಕಳೆದಿವೆ. ಆದರೂ ಶಿಕ್ಷಕರ ಹಾಗೂ ಪಠ್ಯ ಪುಸ್ತಕದ ಕೊರತೆ ವಿದ್ಯಾರ್ಥಿಗಳನ್ನು ಕಾಡುತ್ತಿದೆ.<br /> <br /> ಜಿಲ್ಲೆಯಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ 399 ಶಿಕ್ಷಕರ ಕೊರತೆ ಇದ್ದರೆ, ಪ್ರೌಢಶಾಲಾ ವಿಭಾಗದಲ್ಲಿ 100 ಶಿಕ್ಷಕರ ಕೊರತೆ ಇದೆ. ಹೀಗಾಗಿ, ಕೆಲವು ಶಾಲೆಗಳಲ್ಲಿ ಬೋಧನೆ ಸರಿಯಾಗಿ ಆಗುತ್ತಿಲ್ಲ.<br /> <br /> ನಾಗಮಂಗಲ ತಾಲ್ಲೂಕಿನಲ್ಲಿ 138, ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ 93, ಮಂಡ್ಯ ಉತ್ತರದಲ್ಲಿ 48, ಪಾಂಡವಪುರ ತಾಲ್ಲೂಕಿನಲ್ಲಿ 46, ಮದ್ದೂರು ತಾಲ್ಲೂಕಿನಲ್ಲಿ 40 ಮಂದಿ ಪ್ರಾಥಮಿಕ ಶಾಲಾ ಶಿಕ್ಷಕರಿಲ್ಲ.<br /> <br /> ಮಂಡ್ಯ ದಕ್ಷಿಣದಲ್ಲಿ 11, ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ 16, ಮಳವಳ್ಳಿ ತಾಲ್ಲೂಕಿನಲ್ಲಿ 7 ಶಿಕ್ಷಕರ ಕೊರತೆ ಇದೆ.<br /> ಪ್ರೌಢಶಾಲಾ ವಿಭಾಗದಲ್ಲಿ 100 ಶಿಕ್ಷಕರ ಕೊರತೆ ಇದೆ. ಇಂಗ್ಲಿಷ್ ವಿಷಯಕ್ಕೆ 79, ಹಿಂದಿ ವಿಷಯಕ್ಕೆ 11, ಕನ್ನಡ ವಿಷಯಕ್ಕೆ ನಾಲ್ಕು, ಪಿಇಟಿಗೆ 3, ಗ್ರೇಡ್ ಒನ್, ಕ್ರಾಫ್ಟ್ ಹಾಗೂ ವಿಶೇಷ ಶಿಕ್ಷಕರ ವಿಭಾಗದಲ್ಲಿ ತಲಾ ಒಬ್ಬರು ಶಿಕ್ಷಕರ ಕೊರತೆ ಎದುರಿಸಲಾಗುತ್ತಿದೆ.<br /> <br /> ಪ್ರೌಢಶಾಲಾ ವಿಭಾಗದಲ್ಲಿ 153 ಶಿಕ್ಷಕರು ಹೆಚ್ಚುವರಿಯಾಗಿದ್ದಾರೆ. ಪಿಸಿಎಂ ವಿಷಯಕ್ಕೆ 80, ಕಲಾ ವಿಭಾಗದಲ್ಲಿ 53, ಸಿಬಿಝಡ್ ವಿಷಯಕ್ಕೆ 11, ಇಂಗ್ಲಿಷ್ ವಿಷಯಕ್ಕೆ ಮೂರು, ಕನ್ನಡ, ಕ್ರಾಫ್ಟ್ ಹಾಗೂ ವಿಶೇಷ ಶಿಕ್ಷಕರ ವಿಭಾಗದಲ್ಲಿ ತಲಾ ಇಬ್ಬರು ಶಿಕ್ಷಕರು ಹೆಚ್ಚುವರಿಯಾಗಿದ್ದಾರೆ.<br /> <br /> ಹೆಚ್ಚುವರಿ ಶಿಕ್ಷಕರ ಪಟ್ಟಿಯನ್ನು ಈಗಾಗಲೇ ಸಿದ್ಧಪಡಿಸಲಾಗಿತ್ತು. ಅವರಿಗೆ ಕೌನ್ಸೆಲಿಂಗ್ ಮೂಲಕ ಜಿಲ್ಲೆಯಲ್ಲಿ ಅವಶ್ಯವಿದ್ದರೆ ವರ್ಗ ಮಾಡಲಾಗುವುದು. ಇಲ್ಲದಿದ್ದರೆ ವಿಭಾಗಮಟ್ಟಕ್ಕೆ ಪಟ್ಟಿ ಕಳುಹಿಸಿಕೊಡಲಾಗುವುದು ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಡಿ. ಶಿವಕುಮಾರ್.<br /> <br /> <strong>ಪಠ್ಯಪುಸ್ತಕಗಳಿಗೂ ಬರ</strong><br /> ಜಿಲ್ಲೆಗೆ ಒಟ್ಟು 12,53,452 ಲಕ್ಷ ಪಠ್ಯ ಪುಸ್ತಕಗಳು ಬೇಕಾಗಿದ್ದವು. ಕಳೆದ ವರ್ಷ 3 ಲಕ್ಷಕ್ಕೂ ಹೆಚ್ಚು ಪುಸ್ತಕಗಳು ಉಳಿದಿದ್ದರಿಂದ 8,62,018 ಪುಸ್ತಕಗಳ ಬೇಡಿಕೆಯನ್ನು ಸಲ್ಲಿಸಲಾಗಿತ್ತು.<br /> <br /> ಶಾಲೆಗಳಿಗೆ ಪುಸ್ತಕ ಹಂಚಿಕೆಯ ನಂತರ 1 ಲಕ್ಷದಷ್ಟು ಪುಸ್ತಕಗಳು ಉಳಿದಿವೆ. ಆದರೆ ನಾಲ್ಕನೇ ತರಗತಿಗೆ 500, ಐದನೇ ತರಗತಿಗೆ 600, ಆರನೇ ತರಗತಿಗೆ 1200, ಏಳನೇ ತರಗತಿಗೆ 1100 ಹಾಗೂ 8ನೇ ತರಗತಿಗೆ 3,200 ಪುಸ್ತಕಗಳ ಕೊರತೆ ಇದೆ. <br /> <br /> ಹೆಚ್ಚುವರಿ ಉಳಿದಿರುವ ಪುಸ್ತಕಗಳನ್ನು, ಕೊರತೆ ಇರುವ ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು ಜಿಲ್ಲೆಗಳಿಗೆ ಕಳುಹಿಸಿಕೊಡಲಾಗುತ್ತಿದೆ. ಕೊರತೆಯಾಗಿರುವ ಪುಸ್ತಕಗಳನ್ನು ಒದಗಿಸುವಂತೆ ಈಗಾಗಲೇ ಬೇಡಿಕೆ ಸಲ್ಲಿಸಲಾಗಿದೆ. ಜೊತೆಗೆ 1,47,660 ವಿದ್ಯಾರ್ಥಿಗಳಿಗೆ ಸಮವಸ್ತ್ರ ಬಂದಿವೆ. ಹಂಚಿಕೆ ನಡೆದಿದೆ ಎಂದು ಶಿವಕುಮಾರ್ ತಿಳಿಸಿದರು. <br /> <br /> ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕಬ್ಬಿಣ ಕಡಲೆಯಾಗಿರುವ ಇಂಗ್ಲಿಷ್ ವಿಷಯದಲ್ಲಿಯೇ ಹೆಚ್ಚಿನ ಪ್ರಮಾಣದ ಶಿಕ್ಷಕರ ಕೊರತೆಯನ್ನು ಜಿಲ್ಲೆಯ ವಿದ್ಯಾರ್ಥಿಗಳು ಎದುರಿಸುತ್ತಿದ್ದಾರೆ. ಭವಿಷ್ಯಕ್ಕೆ ಭದ್ರ ಅಡಿಪಾಯ ಹಾಕುವ ಪ್ರಾಥಮಿಕ ಶಾಲೆಗಳಿಗೆ 399 ಶಿಕ್ಷಕರ ಕೊರತೆ ಇರುವುದು ಪೋಷಕರನ್ನು ಆತಂಕಕ್ಕೆ ದೂಡಿದೆ.<br /> <br /> ಜಿಲ್ಲೆಗೆ ಇನ್ನು ಎಷ್ಟು ಶಿಕ್ಷಕರು ಬೇಕಾಗಿದ್ದಾರೆ ಎಂಬ ವಿವರವನ್ನು ಈಗಾಗಲೇ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ. ಬೇರೆ ವಿಷಯ ಶಿಕ್ಷಕರು, ಕೊರತೆ ಇರುವ ಶಿಕ್ಷಕರ ಪಠ್ಯವನ್ನೂ ಅಭ್ಯಾಸ ಮಾಡಿಸುತ್ತಿದ್ದಾರೆ ಎನ್ನುತ್ತಾರೆ ಅವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>