<p>ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟ ಶಿಕ್ಷಣ ತರಲು ನಾನಾ ಯೋಜನೆ ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಳ್ಳುತ್ತಿದೆ. ಶಿಕ್ಷಕರಿಗೆ ನಾನಾ ರೀತಿಯ ತರಬೇತಿಗಳು ಹಾಗೂ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ. <br /> <br /> ಇಷ್ಟಾದರೂ ಸರ್ಕಾರಿ ಶಾಲೆಗಳಲ್ಲಿ ನಿರೀಕ್ಷಿತ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ಇದಕ್ಕೆ ಕಾರಣ ಶಿಕ್ಷಕರಲ್ಲಿಯ ನಿರುತ್ಸಾಹ, ಸಮರ್ಪಣಾ ಮನೋಭಾವದ ಕೊರತೆ ಮತ್ತು ನಿಷ್ಕ್ರಿಯತೆ.<br /> <br /> ಬೋಧನಾ ವಿಧಾನದಲ್ಲಿ ಸುಧಾರಣೆ, ಗುಣಮಟ್ಟದ ಶಿಕ್ಷಣ ಹಾಗೂ ಶಾಲೆಗಳಲ್ಲಿ ಒಳ್ಳೆಯ ಕಲಿಕಾ ವಾತಾವರಣ ಸೃಷ್ಟಿಸಲು ಶಿಕ್ಷಕರನ್ನು ಒಂದು ನಿಗದಿತ ಸೇವಾ ಅವಧಿಯ ನಂತರ ಕಡ್ಡಾಯವಾಗಿ ವರ್ಗಾವಣೆ ಮಾಡಬೇಕು. <br /> <br /> ಒಂದು ಶಾಲೆಯಲ್ಲಿ ಒಬ್ಬ ಶಿಕ್ಷಕರಿಗೆ ಗರಿಷ್ಠ ಸೇವಾವಧಿ ನಿಗದಿ ಪಡಿಸಬೇಕು. ಈ ರೀತಿಯಾಗಿ ವರ್ಗಾವಣೆ ಕಡ್ಡಾಯ ಮಾಡುವುದರಿಂದ ಶಿಕ್ಷಕರಲ್ಲಿ ದಕ್ಷತೆ, ಉತ್ಸಾಹ ಹೆಚ್ಚಾಗುತ್ತದೆ. ಅವರು ಶಾಲೆಗೆ ಚಲನಶೀಲತೆಯನ್ನು ತರುತ್ತಾರೆ.<br /> <br /> ಶಿಕ್ಷಕರಲ್ಲಿ ಸೀನಿಯರ್, ಜೂನಿಯರ್ ಎಂಬ ಭೇದ ಭಾವ ತೊಲಗಿ ಶಾಲೆಗಳು ಕ್ರಿಯಾಶೀಲವಾಗುತ್ತವೆ. ಶಿಕ್ಷಣದ ಗುಣಮಟ್ಟ ಸುಧಾರಿಸುತ್ತದೆ. ಸರ್ಕಾರ ಈ ನಿಟ್ಟಿನಲ್ಲಿಯೂ ಚಿಂತನೆ ನಡೆಸಲಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟ ಶಿಕ್ಷಣ ತರಲು ನಾನಾ ಯೋಜನೆ ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಳ್ಳುತ್ತಿದೆ. ಶಿಕ್ಷಕರಿಗೆ ನಾನಾ ರೀತಿಯ ತರಬೇತಿಗಳು ಹಾಗೂ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ. <br /> <br /> ಇಷ್ಟಾದರೂ ಸರ್ಕಾರಿ ಶಾಲೆಗಳಲ್ಲಿ ನಿರೀಕ್ಷಿತ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ಇದಕ್ಕೆ ಕಾರಣ ಶಿಕ್ಷಕರಲ್ಲಿಯ ನಿರುತ್ಸಾಹ, ಸಮರ್ಪಣಾ ಮನೋಭಾವದ ಕೊರತೆ ಮತ್ತು ನಿಷ್ಕ್ರಿಯತೆ.<br /> <br /> ಬೋಧನಾ ವಿಧಾನದಲ್ಲಿ ಸುಧಾರಣೆ, ಗುಣಮಟ್ಟದ ಶಿಕ್ಷಣ ಹಾಗೂ ಶಾಲೆಗಳಲ್ಲಿ ಒಳ್ಳೆಯ ಕಲಿಕಾ ವಾತಾವರಣ ಸೃಷ್ಟಿಸಲು ಶಿಕ್ಷಕರನ್ನು ಒಂದು ನಿಗದಿತ ಸೇವಾ ಅವಧಿಯ ನಂತರ ಕಡ್ಡಾಯವಾಗಿ ವರ್ಗಾವಣೆ ಮಾಡಬೇಕು. <br /> <br /> ಒಂದು ಶಾಲೆಯಲ್ಲಿ ಒಬ್ಬ ಶಿಕ್ಷಕರಿಗೆ ಗರಿಷ್ಠ ಸೇವಾವಧಿ ನಿಗದಿ ಪಡಿಸಬೇಕು. ಈ ರೀತಿಯಾಗಿ ವರ್ಗಾವಣೆ ಕಡ್ಡಾಯ ಮಾಡುವುದರಿಂದ ಶಿಕ್ಷಕರಲ್ಲಿ ದಕ್ಷತೆ, ಉತ್ಸಾಹ ಹೆಚ್ಚಾಗುತ್ತದೆ. ಅವರು ಶಾಲೆಗೆ ಚಲನಶೀಲತೆಯನ್ನು ತರುತ್ತಾರೆ.<br /> <br /> ಶಿಕ್ಷಕರಲ್ಲಿ ಸೀನಿಯರ್, ಜೂನಿಯರ್ ಎಂಬ ಭೇದ ಭಾವ ತೊಲಗಿ ಶಾಲೆಗಳು ಕ್ರಿಯಾಶೀಲವಾಗುತ್ತವೆ. ಶಿಕ್ಷಣದ ಗುಣಮಟ್ಟ ಸುಧಾರಿಸುತ್ತದೆ. ಸರ್ಕಾರ ಈ ನಿಟ್ಟಿನಲ್ಲಿಯೂ ಚಿಂತನೆ ನಡೆಸಲಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>