<p> ಸರ್ಕಾರಿ ಶಾಲೆಗಳ ಶಿಕ್ಷಕರ ವರ್ಗಾವಣೆ ನಿಯಮಗಳನ್ನು ನೋಡಿದರೆ ನಿರುದ್ಯೋಗಿಗಳನ್ನು ಮದುವೆಯಾಗುವುದೇ ಅಪರಾಧ ಎನ್ನುವಂತಾಗಿದೆ. <br /> <br /> ಪತಿ- ಪತ್ನಿಯರು ಒಂದೇ ಕಡೆ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡುವ ಭರದಲ್ಲಿ ಶಿಕ್ಷಣ ಇಲಾಖೆ ಉಳಿದ ಶಿಕ್ಷಕರು ವರ್ಗಾವಣೆಗೆ ಅನರ್ಹರು ಎಂಬ ಧೋರಣೆ ತಾಳಿದೆ. ಸರ್ಕಾರಿ ನೌಕರಿಯಲ್ಲಿರುವ ಶಿಕ್ಷಕ, ಶಿಕ್ಷಕಿಯರು ನಿರುದ್ಯೋಗಿಗಳನ್ನು ವಿವಾಹವಾಗಲು ಹಿಂದೇಟು ಹಾಕುವಂಥ ವಾತಾವರಣ ಇದೆ.<br /> <br /> ಪತಿ-ಪತ್ನಿ ಒಂದೇ ಊರಿನಲ್ಲಿ ಇರಬಹುದೆಂಬ ನಿಯಮದ ಅಡಿಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಎರಡೇ ವರ್ಷಗಳಲ್ಲಿ ವರ್ಗಾವಣೆಗಳು ಆಗುತ್ತಿವೆ. ಕೆಲವು ಶಿಕ್ಷಕರು 15-20 ವರ್ಷಗಳ ಸೇವಾ ಹಿರಿತನ ಹೊಂದಿದ್ದರೂ ಅವರಿಗೆ ವರ್ಗಾವಣೆ ನಿರಾಕರಿಸಲಾಗುತ್ತಿದೆ. <br /> <br /> ಕೆಲ ಶಿಕ್ಷಕರು ನಿವೃತ್ತಿ ತನಕ ಒಂದೇ ಶಾಲೆಯಲ್ಲಿ ಇರಬೇಕಾದ ಪರಿಸ್ಥಿತಿ ಇದೆ. ಕನಿಷ್ಠ ಐದು ವರ್ಷಕ್ಕೊಮ್ಮೆಯಾದರೂ ಶಿಕ್ಷಕರನ್ನು ಕಡ್ಡಾಯವಾಗಿ ವರ್ಗಾವಣೆ ಮಾಡುವಂತಿರಬೇಕು.<br /> <br /> ಇದರಿಂದ ಅವರಿಗೆ ಉತ್ಸಾಹದಿಂದ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಶಿಕ್ಷಕರ ಸೇವಾ ಹಿರಿತನ ಹಾಗೂ ಮಾನವೀಯ ಕಾರಣಗಳ ಆಧಾರದ ಮೇಲೆ ವರ್ಗಾವಣೆಗೆ ಅವಕಾಶ ಕಲ್ಪಿಸಲು ಈಗಿನ ನಿಮಯಗಳನ್ನು ಸರ್ಕಾರ ಪರಿಷ್ಕರಿಸಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p> ಸರ್ಕಾರಿ ಶಾಲೆಗಳ ಶಿಕ್ಷಕರ ವರ್ಗಾವಣೆ ನಿಯಮಗಳನ್ನು ನೋಡಿದರೆ ನಿರುದ್ಯೋಗಿಗಳನ್ನು ಮದುವೆಯಾಗುವುದೇ ಅಪರಾಧ ಎನ್ನುವಂತಾಗಿದೆ. <br /> <br /> ಪತಿ- ಪತ್ನಿಯರು ಒಂದೇ ಕಡೆ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡುವ ಭರದಲ್ಲಿ ಶಿಕ್ಷಣ ಇಲಾಖೆ ಉಳಿದ ಶಿಕ್ಷಕರು ವರ್ಗಾವಣೆಗೆ ಅನರ್ಹರು ಎಂಬ ಧೋರಣೆ ತಾಳಿದೆ. ಸರ್ಕಾರಿ ನೌಕರಿಯಲ್ಲಿರುವ ಶಿಕ್ಷಕ, ಶಿಕ್ಷಕಿಯರು ನಿರುದ್ಯೋಗಿಗಳನ್ನು ವಿವಾಹವಾಗಲು ಹಿಂದೇಟು ಹಾಕುವಂಥ ವಾತಾವರಣ ಇದೆ.<br /> <br /> ಪತಿ-ಪತ್ನಿ ಒಂದೇ ಊರಿನಲ್ಲಿ ಇರಬಹುದೆಂಬ ನಿಯಮದ ಅಡಿಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಎರಡೇ ವರ್ಷಗಳಲ್ಲಿ ವರ್ಗಾವಣೆಗಳು ಆಗುತ್ತಿವೆ. ಕೆಲವು ಶಿಕ್ಷಕರು 15-20 ವರ್ಷಗಳ ಸೇವಾ ಹಿರಿತನ ಹೊಂದಿದ್ದರೂ ಅವರಿಗೆ ವರ್ಗಾವಣೆ ನಿರಾಕರಿಸಲಾಗುತ್ತಿದೆ. <br /> <br /> ಕೆಲ ಶಿಕ್ಷಕರು ನಿವೃತ್ತಿ ತನಕ ಒಂದೇ ಶಾಲೆಯಲ್ಲಿ ಇರಬೇಕಾದ ಪರಿಸ್ಥಿತಿ ಇದೆ. ಕನಿಷ್ಠ ಐದು ವರ್ಷಕ್ಕೊಮ್ಮೆಯಾದರೂ ಶಿಕ್ಷಕರನ್ನು ಕಡ್ಡಾಯವಾಗಿ ವರ್ಗಾವಣೆ ಮಾಡುವಂತಿರಬೇಕು.<br /> <br /> ಇದರಿಂದ ಅವರಿಗೆ ಉತ್ಸಾಹದಿಂದ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಶಿಕ್ಷಕರ ಸೇವಾ ಹಿರಿತನ ಹಾಗೂ ಮಾನವೀಯ ಕಾರಣಗಳ ಆಧಾರದ ಮೇಲೆ ವರ್ಗಾವಣೆಗೆ ಅವಕಾಶ ಕಲ್ಪಿಸಲು ಈಗಿನ ನಿಮಯಗಳನ್ನು ಸರ್ಕಾರ ಪರಿಷ್ಕರಿಸಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>