<p>ಪದವಿ ಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ತರಗತಿಗೆ ದಾಖಲಾಗುವ ಕಡೆಯ ದಿನಾಂಕವನ್ನು ಜುಲೈ 7 ರವರೆಗೆ ವಿಸ್ತರಿಸಿದೆ. ಆದರೆ ಸರ್ಕಾರಿ ಕಾಲೇಜುಗಳಲ್ಲಿ ಮಾತ್ರ ದಾಖಲಾಗಲು ಅನುಮತಿ ನೀಡಿ, ಅನುದಾನಿತ ಮತ್ತು ಅನುದಾನ ರಹಿತ ಕಾಲೇಜುಗಳಲ್ಲಿ ದಾಖಲಾತಿಗೆ ಅವಕಾಶ ನೀಡದೆ ತಾರತಮ್ಯ ಮಾಡಿದೆ. ಜತೆಗೆ ವಿದ್ಯಾರ್ಥಿಗಳಿಗೆ ಅನವಶ್ಯಕ ಖರ್ಚಿಗೂ ಕಾರಣವಾಗಿದೆ.<br /> <br /> ಇಲಾಖೆಯು ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ದಾಖಲಾತಿಗೆ ಕೇವಲ 15 ದಿನ ಸಮಯಾವಕಾಶ ನೀಡಿತ್ತು. ನಂತರದ ಒಂದು ವಾರಕ್ಕೆ 420 ರೂ ದಂಡ. <br /> <br /> ಆನಂತರದ ವಾರಕ್ಕೆ ಹಿಂದಿನ ದಂಡ 420 ರೂ. ಮತ್ತು 1400 ರೂ ಎರಡನ್ನು ಸೇರಿಸಿ ಒಟ್ಟು ದಂಡ 1820 ರೂ. ಕಟ್ಟಿ ಪ್ರವೇಶ ಪಡೆಯಲು ಅನುಮತಿ ನೀಡಿದೆ.<br /> ದಾಖಲಾತಿ ಶುಲ್ಕ ವಿದ್ಯಾರ್ಥಿನಿಯರಿಗೆ 132 ರೂ. ಆದಾಯ ಪ್ರಮಾಣ ಪತ್ರ ಕೊಟ್ಟ ವಿದ್ಯಾರ್ಥಿಗಳಿಗೆ 564 ರೂ. ಮಾತ್ರ ನೀಡಿ ಪ್ರವೇಶ ಪಡೆಯಬಹುದಿತ್ತು.<br /> <br /> ಟಿ.ಸಿ. ಅಂಕಪಟ್ಟಿ, ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಇವೆಲ್ಲವನ್ನು ಹೊಂದಿಸಿ ಕಾಲೇಜಿಗೆ 15 ದಿನಗಳೊಳಗೆ ದಾಖಲಾಗಲು ವಿದ್ಯಾರ್ಥಿಗಳು ಪರದಾಡುವಂತಾಗಿತ್ತು. ದಾಖಲಾತಿಗೆ ಸಮಯ ಕಡಿಮೆ ನೀಡಿದ್ದರಿಂದ ಬಹುಪಾಲು ವಿದ್ಯಾರ್ಥಿಗಳು ದಂಡಕಟ್ಟಿದ್ದಾರೆ. <br /> <br /> ಪ್ರವೇಶ ಶುಲ್ಕ ಕಡಿಮೆ ಇಟ್ಟು ದಂಡವನ್ನು ಮನಬಂದಂತೆ ವಿಧಿಸುವುದು ವಿದ್ಯಾರ್ಥಿಗಳ ಪೋಷಕರಿಗೆ ನುಂಗಲಾಗದ ತುತ್ತಾಗಿದೆ. ಅಪರಾಧಿಗಳಿಗೆ ನ್ಯಾಯಾಲಯದ ದಂಡವೇ ಕಡಿಮೆ ಇರುವಾಗ ಶಿಕ್ಷಣ ಇಲಾಖೆಯ ದಂಡದ ದರ ಏರಿರುವುದು ಅಚ್ಚರಿಯಾಗಿದೆ.<br /> <br /> ಅದರ ಜತೆಗೆ ಮೂರನೇ ಬಾರಿಗೆ ದಿನಾಂಕ ವಿಸ್ತರಿಸಿರುವ ಇಲಾಖೆ, ವಿದ್ಯಾರ್ಥಿಗಳು ದಾಖಲಾಗಲು ಸರ್ಕಾರಿ ಕಾಲೇಜಿನಲ್ಲಿ ಮಾತ್ರ ಅವಕಾಶಕೊಟ್ಟು ಮಲತಾಯಿ ಧೋರಣೆ ತಾಳಿದೆ. <br /> <br /> ಅಷ್ಟೇ ಅಲ್ಲದೆ ದಂಡ ಕಟ್ಟಿ ಸರ್ಕಾರಿ ಕಾಲೇಜಿನಲ್ಲಿ ದಾಖಲಾಗಿ, ಕಾಲೇಜು ವರ್ಗಾವಣೆಗೆ ಮತ್ತೆ 1000 ರೂ. ಪಾವತಿಸಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದೆ. ದಿನಾಂಕ ವಿಸ್ತರಿಸಿದಾಗ ದಾಖಲಾಗಲು ಎಲ್ಲಾ ಕಾಲೇಜಿಗೆ ಅವಕಾಶ ನೀಡಿದ್ದರೆ, ವಿದ್ಯಾರ್ಥಿಗಳಿಗೆ ಒಂದು ಹೊರೆ ಬೀಳುತ್ತಿತ್ತು. <br /> <br /> ಈಗ ಎರಡು ಮೂರು ಹೊರೆ ಬಿದ್ದಿದೆ. ಒಂದು ತಿಂಗಳಲ್ಲಿ ಕಾಲೇಜು ದಾಖಲಾತಿಗೆ ಇಲಾಖೆ ಇಷ್ಟೊಂದು ಕಷ್ಟವನ್ನು ತಂದಿಟ್ಟಿರುವುದು ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚಿಸಿದೆ. <br /> <br /> ರಾಜ್ಯಾದ್ಯಂತ ಬರ ಇದೆ. ದಾಖಲಾತಿಗೆ ಅಗತ್ಯ ಪ್ರಮಾಣಪತ್ರಗಳನ್ನು ಪಡೆಯುವಲ್ಲಿ ಸಮಯ ಬೇಕಾಗಿರುತ್ತದೆ. ಜನಸಾಮಾನ್ಯರ ತಿಳಿವಳಿಕೆ, ಆರ್ಥಿಕ ಪರಿಸ್ಥಿತಿ ಭಿನ್ನವಾಗಿರುತ್ತದೆ. ಇವೆಲ್ಲವನ್ನು ಇಲಾಖೆ ಗಮನದಲ್ಲಿಟ್ಟುಕೊಂಡು ದಾಖಲಾತಿಗೆ 15 ದಿನಗಳ ಬದಲು ಒಂದು ತಿಂಗಳು ಸಮಯ ನೀಡಿದ್ದರೆ ಪೋಷಕರಿಗೆ ಆರ್ಥಿಕ ಹೊರೆ ಬೀಳುತ್ತಿರಲಿಲ್ಲ. <br /> <br /> ಶಿಕ್ಷಣ ಸಚಿವರು ಇಲಾಖೆಯ ಈ ದಂಡದ ನೀತಿಯನ್ನು ರದ್ದು ಪಡಿಸಿ, ವಸೂಲಿ ಮಾಡಿರುವ ದಂಡವನ್ನು ಪೋಷಕರಿಗೆ ಹಿಂತಿರುಗಿಸಬೇಕು. ಎಲ್ಲಾ ಕಾಲೇಜುಗಳಲ್ಲಿ ದಾಖಲಾತಿಗೆ ಅನುಮತಿ ನೀಡಬೇಕು ಹಾಗೂ ವಿದ್ಯಾರ್ಥಿ ಸ್ನೇಹಿ ನಿಯಮ ಪಾಲಿಸಲು ಅಧಿಕಾರಿಗಳಿಗೆ ಸೂಚಿಸಲು ಮುಂದಾಗಲಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪದವಿ ಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ತರಗತಿಗೆ ದಾಖಲಾಗುವ ಕಡೆಯ ದಿನಾಂಕವನ್ನು ಜುಲೈ 7 ರವರೆಗೆ ವಿಸ್ತರಿಸಿದೆ. ಆದರೆ ಸರ್ಕಾರಿ ಕಾಲೇಜುಗಳಲ್ಲಿ ಮಾತ್ರ ದಾಖಲಾಗಲು ಅನುಮತಿ ನೀಡಿ, ಅನುದಾನಿತ ಮತ್ತು ಅನುದಾನ ರಹಿತ ಕಾಲೇಜುಗಳಲ್ಲಿ ದಾಖಲಾತಿಗೆ ಅವಕಾಶ ನೀಡದೆ ತಾರತಮ್ಯ ಮಾಡಿದೆ. ಜತೆಗೆ ವಿದ್ಯಾರ್ಥಿಗಳಿಗೆ ಅನವಶ್ಯಕ ಖರ್ಚಿಗೂ ಕಾರಣವಾಗಿದೆ.<br /> <br /> ಇಲಾಖೆಯು ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ದಾಖಲಾತಿಗೆ ಕೇವಲ 15 ದಿನ ಸಮಯಾವಕಾಶ ನೀಡಿತ್ತು. ನಂತರದ ಒಂದು ವಾರಕ್ಕೆ 420 ರೂ ದಂಡ. <br /> <br /> ಆನಂತರದ ವಾರಕ್ಕೆ ಹಿಂದಿನ ದಂಡ 420 ರೂ. ಮತ್ತು 1400 ರೂ ಎರಡನ್ನು ಸೇರಿಸಿ ಒಟ್ಟು ದಂಡ 1820 ರೂ. ಕಟ್ಟಿ ಪ್ರವೇಶ ಪಡೆಯಲು ಅನುಮತಿ ನೀಡಿದೆ.<br /> ದಾಖಲಾತಿ ಶುಲ್ಕ ವಿದ್ಯಾರ್ಥಿನಿಯರಿಗೆ 132 ರೂ. ಆದಾಯ ಪ್ರಮಾಣ ಪತ್ರ ಕೊಟ್ಟ ವಿದ್ಯಾರ್ಥಿಗಳಿಗೆ 564 ರೂ. ಮಾತ್ರ ನೀಡಿ ಪ್ರವೇಶ ಪಡೆಯಬಹುದಿತ್ತು.<br /> <br /> ಟಿ.ಸಿ. ಅಂಕಪಟ್ಟಿ, ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಇವೆಲ್ಲವನ್ನು ಹೊಂದಿಸಿ ಕಾಲೇಜಿಗೆ 15 ದಿನಗಳೊಳಗೆ ದಾಖಲಾಗಲು ವಿದ್ಯಾರ್ಥಿಗಳು ಪರದಾಡುವಂತಾಗಿತ್ತು. ದಾಖಲಾತಿಗೆ ಸಮಯ ಕಡಿಮೆ ನೀಡಿದ್ದರಿಂದ ಬಹುಪಾಲು ವಿದ್ಯಾರ್ಥಿಗಳು ದಂಡಕಟ್ಟಿದ್ದಾರೆ. <br /> <br /> ಪ್ರವೇಶ ಶುಲ್ಕ ಕಡಿಮೆ ಇಟ್ಟು ದಂಡವನ್ನು ಮನಬಂದಂತೆ ವಿಧಿಸುವುದು ವಿದ್ಯಾರ್ಥಿಗಳ ಪೋಷಕರಿಗೆ ನುಂಗಲಾಗದ ತುತ್ತಾಗಿದೆ. ಅಪರಾಧಿಗಳಿಗೆ ನ್ಯಾಯಾಲಯದ ದಂಡವೇ ಕಡಿಮೆ ಇರುವಾಗ ಶಿಕ್ಷಣ ಇಲಾಖೆಯ ದಂಡದ ದರ ಏರಿರುವುದು ಅಚ್ಚರಿಯಾಗಿದೆ.<br /> <br /> ಅದರ ಜತೆಗೆ ಮೂರನೇ ಬಾರಿಗೆ ದಿನಾಂಕ ವಿಸ್ತರಿಸಿರುವ ಇಲಾಖೆ, ವಿದ್ಯಾರ್ಥಿಗಳು ದಾಖಲಾಗಲು ಸರ್ಕಾರಿ ಕಾಲೇಜಿನಲ್ಲಿ ಮಾತ್ರ ಅವಕಾಶಕೊಟ್ಟು ಮಲತಾಯಿ ಧೋರಣೆ ತಾಳಿದೆ. <br /> <br /> ಅಷ್ಟೇ ಅಲ್ಲದೆ ದಂಡ ಕಟ್ಟಿ ಸರ್ಕಾರಿ ಕಾಲೇಜಿನಲ್ಲಿ ದಾಖಲಾಗಿ, ಕಾಲೇಜು ವರ್ಗಾವಣೆಗೆ ಮತ್ತೆ 1000 ರೂ. ಪಾವತಿಸಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದೆ. ದಿನಾಂಕ ವಿಸ್ತರಿಸಿದಾಗ ದಾಖಲಾಗಲು ಎಲ್ಲಾ ಕಾಲೇಜಿಗೆ ಅವಕಾಶ ನೀಡಿದ್ದರೆ, ವಿದ್ಯಾರ್ಥಿಗಳಿಗೆ ಒಂದು ಹೊರೆ ಬೀಳುತ್ತಿತ್ತು. <br /> <br /> ಈಗ ಎರಡು ಮೂರು ಹೊರೆ ಬಿದ್ದಿದೆ. ಒಂದು ತಿಂಗಳಲ್ಲಿ ಕಾಲೇಜು ದಾಖಲಾತಿಗೆ ಇಲಾಖೆ ಇಷ್ಟೊಂದು ಕಷ್ಟವನ್ನು ತಂದಿಟ್ಟಿರುವುದು ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚಿಸಿದೆ. <br /> <br /> ರಾಜ್ಯಾದ್ಯಂತ ಬರ ಇದೆ. ದಾಖಲಾತಿಗೆ ಅಗತ್ಯ ಪ್ರಮಾಣಪತ್ರಗಳನ್ನು ಪಡೆಯುವಲ್ಲಿ ಸಮಯ ಬೇಕಾಗಿರುತ್ತದೆ. ಜನಸಾಮಾನ್ಯರ ತಿಳಿವಳಿಕೆ, ಆರ್ಥಿಕ ಪರಿಸ್ಥಿತಿ ಭಿನ್ನವಾಗಿರುತ್ತದೆ. ಇವೆಲ್ಲವನ್ನು ಇಲಾಖೆ ಗಮನದಲ್ಲಿಟ್ಟುಕೊಂಡು ದಾಖಲಾತಿಗೆ 15 ದಿನಗಳ ಬದಲು ಒಂದು ತಿಂಗಳು ಸಮಯ ನೀಡಿದ್ದರೆ ಪೋಷಕರಿಗೆ ಆರ್ಥಿಕ ಹೊರೆ ಬೀಳುತ್ತಿರಲಿಲ್ಲ. <br /> <br /> ಶಿಕ್ಷಣ ಸಚಿವರು ಇಲಾಖೆಯ ಈ ದಂಡದ ನೀತಿಯನ್ನು ರದ್ದು ಪಡಿಸಿ, ವಸೂಲಿ ಮಾಡಿರುವ ದಂಡವನ್ನು ಪೋಷಕರಿಗೆ ಹಿಂತಿರುಗಿಸಬೇಕು. ಎಲ್ಲಾ ಕಾಲೇಜುಗಳಲ್ಲಿ ದಾಖಲಾತಿಗೆ ಅನುಮತಿ ನೀಡಬೇಕು ಹಾಗೂ ವಿದ್ಯಾರ್ಥಿ ಸ್ನೇಹಿ ನಿಯಮ ಪಾಲಿಸಲು ಅಧಿಕಾರಿಗಳಿಗೆ ಸೂಚಿಸಲು ಮುಂದಾಗಲಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>