<p>ಮನೆಯ ಗೋಡೆಗಳ ಮೇಲೆ ಸುಂದರವಾದ ಶಿಲ್ಪಕಲಾಕೃತಿಗಳು ಅಥವಾ ಪೇಂಟಿಂಗ್ ನಿಮ್ಮ ಮನೆಯ ಗೋಡೆಗಳನ್ನು ಅಲಂಕರಿಸಿದರೆ, ಅತಿಥಿಗಳು ಅದನ್ನು ನಿಮ್ಮ ಮುಂದೆಯೇ ಪ್ರಶಂಸಿದರೆ ಸಂತೋಷವಾಗುತ್ತದೆ. ಅಲ್ಲವೇ?</p>.<p>ಮನೆಯ ಗೋಡೆ, ಟೀಪಾಯಿ, ಕುರ್ಚಿ ಹೀಗೆ ಮನೆಯಲ್ಲಿರುವ ಎಲ್ಲ ವಸ್ತುಗಳನ್ನೂ ಸುಂದರವಾಗಿ ಸಿಂಗರಿಸುವಂತಾದರೆ, ಈ ವಯ್ಯಾರವನ್ನು ನೀವೇ ನಿಮ್ಮ ಕೈಯಾರೆ ಮಾಡುವಂತಾದರೆ, ಮನೆಯನ್ನು ಸಿಂಗರಿಸಿದ ಆನಂದ ನಿಮಗೆ ದೊರೆಯುತ್ತದೆ. ಮನೆ ಅಲಂಕರಿಸುವ ಪ್ರೀತಿ ನಿಮಗಿದ್ದರೆ ಇಲ್ಲಿ ಕೇಳಿ...</p>.<p>ಕಳೆದ ಮೂವತ್ತು ವರ್ಷಗಳಿಂದ ದೇಶದಾದ್ಯಂತ 3ಡಿ ಮ್ಯೂರಲ್ ಆರ್ಟ್ ಅಂದರೆ ಭಿತ್ತಿ ಚಿತ್ರಗಳ ಕುರಿತಾದ ತರಬೇತಿ ನೀಡುತ್ತಿರುವ ಶಿಲ್ಪಿ ಹಾಗೂ ವಿನ್ಯಾಸಗಾರ ಭರತ್ ರಾವಲ್ ಇದೀಗ ಬೆಂಗಳೂರಿನಲ್ಲಿ ಈ ಕುರಿತಾದ ಕಾರ್ಯಾಗಾರ ನಡೆಸಲಿದ್ದಾರೆ.</p>.<p>ಮ್ಯೂರಲ್ ಆರ್ಟ್ (ಭಿತ್ತಿ ಚಿತ್ರ) ನಲ್ಲಿ 3 ಡಿ ಸೆರಾಮಿಕ್, 3 ಡಿ ಸಿಪೋರೆಕ್ಸ್, 3 ಡಿ ಗ್ಲಾಸ್ ಹಾಗೂ 3 ಡಿ ಮಿಕ್ಸ್ ಮೀಡಿಯಾ ಎಂಬ ವಿಧಗಳಿವೆ. ಆಸಕ್ತರು ಇವುಗಳಲ್ಲಿ ಯಾವುದನ್ನಾದರೂ ಕಲಿಯಬಹುದು. ತರಬೇತಿಯ ಅವಧಿ 2ರಿಂದ 4 ಗಂಟೆ. ಚಿತ್ರ ಕಲಾವಿದರು, ಕುಶಲಕರ್ಮಿಗಳು, ವಿದ್ಯಾರ್ಥಿಗಳು, ಮಹಿಳೆಯರು, ಹಾಗೂ ಕಲೆಯಲ್ಲಿ ಆಸಕ್ತಿ ಉಳ್ಳವರು ಇದರಲ್ಲಿ ಭಾಗವಹಿಸಬಹುದು.</p>.<p>`ಸುಮಾರು ಮೂವತ್ತು ವರ್ಷಗಳಿಂದ ಮ್ಯೂರಲ್ ಆರ್ಟ್ಸ್ ಕಲಿಸುತ್ತ ಬಂದಿದ್ದೇನೆ. ಇಡೀ ಭಾರತದಾದ್ಯಂತ ಸುಮಾರು 6000 ವಿದ್ಯಾರ್ಥಿಗಳು ಈ ಕಲಾಕೃತಿಗಳ ಕಲಿಕೆಯಲ್ಲಿ ಆಸಕ್ತಿ ತೋರಿ ಕಲಿತಿದ್ದಾರೆ. ಅದರಲ್ಲಿ ಕೆಲವರು ಇದನ್ನೇ ವೃತ್ತಿಯನ್ನಾಗಿ ಮಾಡಿಕೊಂಡು ಬಂದಿದ್ದಾರೆ. ಈ ಕಾರ್ಯಾಗಾರವನ್ನು ವಾಣಿಜ್ಯೀಕರಣದ ಉದ್ದೇಶದಿಂದ ನಡೆಸುತ್ತಿಲ್ಲ. ಕಲೆಯನ್ನು ಆರಾಧಿಸುವವರಿಗೆ ಪ್ರೋತ್ಸಾಹ ನೀಡಲು ಈ ತರಬೇತಿ ಕಾರ್ಯಾಗಾರವನ್ನು ನಡೆಸುತ್ತಿದ್ದೇನೆ. ಈ ತರಬೇತಿಯಿಂದ ಅನೇಕ ಮಹಿಳೆಯರು ಈ ಕಲೆಯನ್ನೇ ವೃತ್ತಿಯಾಗಿಸಿಕೊಂಡು ಸ್ವಉದ್ಯೋಗ ಕಂಡುಕೊಂಡಿದ್ದಾರೆ.</p>.<p>ಯುವಜನತೆಗೆ ಕಲೆಯಲ್ಲಿ ಆಸಕ್ತಿ ಬೆಳೆಸುವುದು ಮತ್ತು ಕಲೆಯ ಮಹತ್ವವನ್ನು ತಿಳಿಸುವುದೇ ಕಾರ್ಯಾಗಾರದ ಉದ್ದೇಶವಾಗಿದೆ~.</p>.<p>`ಕಳೆದ 30 ವರ್ಷಗಳ ವೃತ್ತಿ ಪಯಣ ಸಂತಸ ತಂದಿದೆ. ಪುಣೆಯಲ್ಲಿ ಶಿಲ್ಪ ವಿನ್ಯಾಸಗಾರನಾಗಿ ಕೆಲಸ ನಿರ್ವಹಿಸುತ್ತ ಬಂದಿರುವೆ. ಅದೇ ರೀತಿ ಕಾರ್ಯಾಗಾರಗಳನ್ನು ನಡೆಸುತ್ತ ಬಂದಿದ್ದೇನೆ. ಜನರ ಪ್ರತಿಕ್ರಿಯೆಯೂ ಚೆನ್ನಾಗಿದೆ~ ಎಂದು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.</p>.<p>ಕಾರ್ಯಾಗಾರವು ಆಗಸ್ಟ್ 1ರಿಂದ 9 ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 7 ಗಂಟೆಯವರೆಗೆ ಮಹಾವೀರ ಸೇವಾ ಸದನ, ನಂ. 157, 5ನೇ ಮುಖ್ಯ ರಸ್ತೆ, ಚಾಮರಾಜಪೇಟೆ ಇಲ್ಲಿ ನಡೆಯಲಿದೆ. ಕಾರ್ಯಾಗಾರವು ಸಂಪೂರ್ಣವಾಗಿ ಉಚಿತವಾಗಿದೆ.</p>.<p>ವಿವರಗಳಿಗೆ: <a href="http://www.bharatrawal.com">www.bharatrawal.com</a> ಅಥವಾ ಮೊಬೈಲ್ ಸಂಖ್ಯೆ- 98861 70724 ಸಂಪರ್ಕಿಸಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮನೆಯ ಗೋಡೆಗಳ ಮೇಲೆ ಸುಂದರವಾದ ಶಿಲ್ಪಕಲಾಕೃತಿಗಳು ಅಥವಾ ಪೇಂಟಿಂಗ್ ನಿಮ್ಮ ಮನೆಯ ಗೋಡೆಗಳನ್ನು ಅಲಂಕರಿಸಿದರೆ, ಅತಿಥಿಗಳು ಅದನ್ನು ನಿಮ್ಮ ಮುಂದೆಯೇ ಪ್ರಶಂಸಿದರೆ ಸಂತೋಷವಾಗುತ್ತದೆ. ಅಲ್ಲವೇ?</p>.<p>ಮನೆಯ ಗೋಡೆ, ಟೀಪಾಯಿ, ಕುರ್ಚಿ ಹೀಗೆ ಮನೆಯಲ್ಲಿರುವ ಎಲ್ಲ ವಸ್ತುಗಳನ್ನೂ ಸುಂದರವಾಗಿ ಸಿಂಗರಿಸುವಂತಾದರೆ, ಈ ವಯ್ಯಾರವನ್ನು ನೀವೇ ನಿಮ್ಮ ಕೈಯಾರೆ ಮಾಡುವಂತಾದರೆ, ಮನೆಯನ್ನು ಸಿಂಗರಿಸಿದ ಆನಂದ ನಿಮಗೆ ದೊರೆಯುತ್ತದೆ. ಮನೆ ಅಲಂಕರಿಸುವ ಪ್ರೀತಿ ನಿಮಗಿದ್ದರೆ ಇಲ್ಲಿ ಕೇಳಿ...</p>.<p>ಕಳೆದ ಮೂವತ್ತು ವರ್ಷಗಳಿಂದ ದೇಶದಾದ್ಯಂತ 3ಡಿ ಮ್ಯೂರಲ್ ಆರ್ಟ್ ಅಂದರೆ ಭಿತ್ತಿ ಚಿತ್ರಗಳ ಕುರಿತಾದ ತರಬೇತಿ ನೀಡುತ್ತಿರುವ ಶಿಲ್ಪಿ ಹಾಗೂ ವಿನ್ಯಾಸಗಾರ ಭರತ್ ರಾವಲ್ ಇದೀಗ ಬೆಂಗಳೂರಿನಲ್ಲಿ ಈ ಕುರಿತಾದ ಕಾರ್ಯಾಗಾರ ನಡೆಸಲಿದ್ದಾರೆ.</p>.<p>ಮ್ಯೂರಲ್ ಆರ್ಟ್ (ಭಿತ್ತಿ ಚಿತ್ರ) ನಲ್ಲಿ 3 ಡಿ ಸೆರಾಮಿಕ್, 3 ಡಿ ಸಿಪೋರೆಕ್ಸ್, 3 ಡಿ ಗ್ಲಾಸ್ ಹಾಗೂ 3 ಡಿ ಮಿಕ್ಸ್ ಮೀಡಿಯಾ ಎಂಬ ವಿಧಗಳಿವೆ. ಆಸಕ್ತರು ಇವುಗಳಲ್ಲಿ ಯಾವುದನ್ನಾದರೂ ಕಲಿಯಬಹುದು. ತರಬೇತಿಯ ಅವಧಿ 2ರಿಂದ 4 ಗಂಟೆ. ಚಿತ್ರ ಕಲಾವಿದರು, ಕುಶಲಕರ್ಮಿಗಳು, ವಿದ್ಯಾರ್ಥಿಗಳು, ಮಹಿಳೆಯರು, ಹಾಗೂ ಕಲೆಯಲ್ಲಿ ಆಸಕ್ತಿ ಉಳ್ಳವರು ಇದರಲ್ಲಿ ಭಾಗವಹಿಸಬಹುದು.</p>.<p>`ಸುಮಾರು ಮೂವತ್ತು ವರ್ಷಗಳಿಂದ ಮ್ಯೂರಲ್ ಆರ್ಟ್ಸ್ ಕಲಿಸುತ್ತ ಬಂದಿದ್ದೇನೆ. ಇಡೀ ಭಾರತದಾದ್ಯಂತ ಸುಮಾರು 6000 ವಿದ್ಯಾರ್ಥಿಗಳು ಈ ಕಲಾಕೃತಿಗಳ ಕಲಿಕೆಯಲ್ಲಿ ಆಸಕ್ತಿ ತೋರಿ ಕಲಿತಿದ್ದಾರೆ. ಅದರಲ್ಲಿ ಕೆಲವರು ಇದನ್ನೇ ವೃತ್ತಿಯನ್ನಾಗಿ ಮಾಡಿಕೊಂಡು ಬಂದಿದ್ದಾರೆ. ಈ ಕಾರ್ಯಾಗಾರವನ್ನು ವಾಣಿಜ್ಯೀಕರಣದ ಉದ್ದೇಶದಿಂದ ನಡೆಸುತ್ತಿಲ್ಲ. ಕಲೆಯನ್ನು ಆರಾಧಿಸುವವರಿಗೆ ಪ್ರೋತ್ಸಾಹ ನೀಡಲು ಈ ತರಬೇತಿ ಕಾರ್ಯಾಗಾರವನ್ನು ನಡೆಸುತ್ತಿದ್ದೇನೆ. ಈ ತರಬೇತಿಯಿಂದ ಅನೇಕ ಮಹಿಳೆಯರು ಈ ಕಲೆಯನ್ನೇ ವೃತ್ತಿಯಾಗಿಸಿಕೊಂಡು ಸ್ವಉದ್ಯೋಗ ಕಂಡುಕೊಂಡಿದ್ದಾರೆ.</p>.<p>ಯುವಜನತೆಗೆ ಕಲೆಯಲ್ಲಿ ಆಸಕ್ತಿ ಬೆಳೆಸುವುದು ಮತ್ತು ಕಲೆಯ ಮಹತ್ವವನ್ನು ತಿಳಿಸುವುದೇ ಕಾರ್ಯಾಗಾರದ ಉದ್ದೇಶವಾಗಿದೆ~.</p>.<p>`ಕಳೆದ 30 ವರ್ಷಗಳ ವೃತ್ತಿ ಪಯಣ ಸಂತಸ ತಂದಿದೆ. ಪುಣೆಯಲ್ಲಿ ಶಿಲ್ಪ ವಿನ್ಯಾಸಗಾರನಾಗಿ ಕೆಲಸ ನಿರ್ವಹಿಸುತ್ತ ಬಂದಿರುವೆ. ಅದೇ ರೀತಿ ಕಾರ್ಯಾಗಾರಗಳನ್ನು ನಡೆಸುತ್ತ ಬಂದಿದ್ದೇನೆ. ಜನರ ಪ್ರತಿಕ್ರಿಯೆಯೂ ಚೆನ್ನಾಗಿದೆ~ ಎಂದು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.</p>.<p>ಕಾರ್ಯಾಗಾರವು ಆಗಸ್ಟ್ 1ರಿಂದ 9 ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 7 ಗಂಟೆಯವರೆಗೆ ಮಹಾವೀರ ಸೇವಾ ಸದನ, ನಂ. 157, 5ನೇ ಮುಖ್ಯ ರಸ್ತೆ, ಚಾಮರಾಜಪೇಟೆ ಇಲ್ಲಿ ನಡೆಯಲಿದೆ. ಕಾರ್ಯಾಗಾರವು ಸಂಪೂರ್ಣವಾಗಿ ಉಚಿತವಾಗಿದೆ.</p>.<p>ವಿವರಗಳಿಗೆ: <a href="http://www.bharatrawal.com">www.bharatrawal.com</a> ಅಥವಾ ಮೊಬೈಲ್ ಸಂಖ್ಯೆ- 98861 70724 ಸಂಪರ್ಕಿಸಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>