<p>ಮಾರತ್ಹಳ್ಳಿಯಿಂದ ಶಿವಾಜಿನಗರಕ್ಕೆ ಬಸ್ಸುಗಳ ಸಂಖ್ಯೆ ಬಹಳ ಕಡಿಮೆ. ಅದರಲ್ಲೂ ಸಂಜೆ 6.30ರ ನಂತರವಂತೂ ಬಸ್ಸುಗಳು ಸಿಗದೆ ಒದ್ದಾಟ. ವೈಟ್ಫೀಲ್ಡ್, ಮಾರತ್ಹಳ್ಳಿಯಿಂದ ಮೆಜೆಸ್ಟಿಕ್ಗೆ ಸಾಲುಗಟ್ಟಲೆ ಬಸ್ಸುಗಳು ತೆರಳುವಾಗ ಒಂದೋ ಎರಡೋ ಬೆರಳೆಣಿಕೆಯಷ್ಟು ಬಸ್ಸುಗಳು ಮಾತ್ರ ಶಿವಾಜಿನಗರ ಕಡೆ ತೆರಳುತ್ತವೆ.</p>.<p>ಹೀಗಾಗಿ ಸಂಜೆಯ ನಂತರವಂತೂ ಶಿವಾಜಿನಗರ ಕಡೆ ಹೋಗಬೇಕಾದ ಪ್ರಯಾಣಿಕರ ಸ್ಥಿತಿ ಚಿಂತಾಜನಕ. ಮಾರತ್ಹಳ್ಳಿ, ಕೋಡಿಹಳ್ಳಿ ಮತ್ತು ದೊಮ್ಮಲೂರಿನ ವಿವಿಧ ಸಂಸ್ಥೆಗಳಲ್ಲಿ ನೌಕರಿ ಮಾಡುವವರು ಈಗಿರುವ ಒಂದೆರಡು ಬಸ್ಗಳಲ್ಲೇ ಶಿವಾಜಿನಗರಕ್ಕೆ ಹೋಗಬೇಕು.</p>.<p>ಮಾರತ್ಹಳ್ಳಿಯಿಂದಲೇ ಪ್ರಯಾಣಿಕರಿಂದ ತುಂಬಿ ತುಳುಕುವ ಬಸ್ ದೊಮ್ಮಲೂರು ಬರುವ ಹೊತ್ತಿಗಂತೂ ಒಂದು ಹೆಜ್ಜೆ ಇಡಲೂ ಸ್ಥಳವಿಲ್ಲದಂತಿರುತ್ತದೆ. ಹಾಗೂ ಹೀಗೂ ಬಸ್ ಒಳಗೆ ಹತ್ತಿದರಂತೂ ಶಿವಾಜಿನಗರದವರೆಗೆ ಉಸಿರು ಬಿಗಿಹಿಡಿದುಕೊಂಡೇ ನಿಂತಿರಬೇಕಾಗುತ್ತದೆ. <br /> ಆದ್ದರಿಂದ ಸಂಬಂಧಪಟ್ಟವರು ಈ ನಿಟ್ಟಿನಲ್ಲಿ ಕ್ರಮ ಕೈಗೊಂಡು ಮಾರತ್ಹಳ್ಳಿಯಿಂದ ಶಿವಾಜಿನಗರಕ್ಕೆ ಸಂಜೆಯ ವೇಳೆ ಅಂದರೆ ಕಚೇರಿ ಬಿಡುವ ಹೊತ್ತಿಗೆ ಹೆಚ್ಚು ಬಸ್ ಸಂಚರಿಸುವಂತೆ ತುರ್ತು ಕ್ರಮ ತೆಗೆದುಕೊಳ್ಳಬೇಕೆಂದು ವಿನಂತಿ.</p>.<p>ಇಲ್ಲಿ ಇನ್ನೊಂದು ವಿಷಯ. ‘ಈಗಾಗಲೆ ಮೆಜೆಸ್ಟಿಕ್ ಕಡೆಗೆ ಸಾಕಷ್ಟು ಬಸ್ ಇವೆ. ಅದರಲ್ಲಿ ಪ್ರಯಾಣಿಸಿ ರಿಚ್ಮಂಡ್ ಸರ್ಕಲ್ನಲ್ಲಿ ಇಳಿದು ಬೇರೆ ಬಸ್ ಮೂಲಕ ಶಿವಾಜಿನಗರ ತಲುಪಿ’ ಎಂಬ ಸಿದ್ಧ ಉತ್ತರ, ಉಚಿತ ಸಲಹೆ ಬೇಡ. ಏನಿದ್ದರೂ ನೇರ ಬಸ್ ಬೇಕು’.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಾರತ್ಹಳ್ಳಿಯಿಂದ ಶಿವಾಜಿನಗರಕ್ಕೆ ಬಸ್ಸುಗಳ ಸಂಖ್ಯೆ ಬಹಳ ಕಡಿಮೆ. ಅದರಲ್ಲೂ ಸಂಜೆ 6.30ರ ನಂತರವಂತೂ ಬಸ್ಸುಗಳು ಸಿಗದೆ ಒದ್ದಾಟ. ವೈಟ್ಫೀಲ್ಡ್, ಮಾರತ್ಹಳ್ಳಿಯಿಂದ ಮೆಜೆಸ್ಟಿಕ್ಗೆ ಸಾಲುಗಟ್ಟಲೆ ಬಸ್ಸುಗಳು ತೆರಳುವಾಗ ಒಂದೋ ಎರಡೋ ಬೆರಳೆಣಿಕೆಯಷ್ಟು ಬಸ್ಸುಗಳು ಮಾತ್ರ ಶಿವಾಜಿನಗರ ಕಡೆ ತೆರಳುತ್ತವೆ.</p>.<p>ಹೀಗಾಗಿ ಸಂಜೆಯ ನಂತರವಂತೂ ಶಿವಾಜಿನಗರ ಕಡೆ ಹೋಗಬೇಕಾದ ಪ್ರಯಾಣಿಕರ ಸ್ಥಿತಿ ಚಿಂತಾಜನಕ. ಮಾರತ್ಹಳ್ಳಿ, ಕೋಡಿಹಳ್ಳಿ ಮತ್ತು ದೊಮ್ಮಲೂರಿನ ವಿವಿಧ ಸಂಸ್ಥೆಗಳಲ್ಲಿ ನೌಕರಿ ಮಾಡುವವರು ಈಗಿರುವ ಒಂದೆರಡು ಬಸ್ಗಳಲ್ಲೇ ಶಿವಾಜಿನಗರಕ್ಕೆ ಹೋಗಬೇಕು.</p>.<p>ಮಾರತ್ಹಳ್ಳಿಯಿಂದಲೇ ಪ್ರಯಾಣಿಕರಿಂದ ತುಂಬಿ ತುಳುಕುವ ಬಸ್ ದೊಮ್ಮಲೂರು ಬರುವ ಹೊತ್ತಿಗಂತೂ ಒಂದು ಹೆಜ್ಜೆ ಇಡಲೂ ಸ್ಥಳವಿಲ್ಲದಂತಿರುತ್ತದೆ. ಹಾಗೂ ಹೀಗೂ ಬಸ್ ಒಳಗೆ ಹತ್ತಿದರಂತೂ ಶಿವಾಜಿನಗರದವರೆಗೆ ಉಸಿರು ಬಿಗಿಹಿಡಿದುಕೊಂಡೇ ನಿಂತಿರಬೇಕಾಗುತ್ತದೆ. <br /> ಆದ್ದರಿಂದ ಸಂಬಂಧಪಟ್ಟವರು ಈ ನಿಟ್ಟಿನಲ್ಲಿ ಕ್ರಮ ಕೈಗೊಂಡು ಮಾರತ್ಹಳ್ಳಿಯಿಂದ ಶಿವಾಜಿನಗರಕ್ಕೆ ಸಂಜೆಯ ವೇಳೆ ಅಂದರೆ ಕಚೇರಿ ಬಿಡುವ ಹೊತ್ತಿಗೆ ಹೆಚ್ಚು ಬಸ್ ಸಂಚರಿಸುವಂತೆ ತುರ್ತು ಕ್ರಮ ತೆಗೆದುಕೊಳ್ಳಬೇಕೆಂದು ವಿನಂತಿ.</p>.<p>ಇಲ್ಲಿ ಇನ್ನೊಂದು ವಿಷಯ. ‘ಈಗಾಗಲೆ ಮೆಜೆಸ್ಟಿಕ್ ಕಡೆಗೆ ಸಾಕಷ್ಟು ಬಸ್ ಇವೆ. ಅದರಲ್ಲಿ ಪ್ರಯಾಣಿಸಿ ರಿಚ್ಮಂಡ್ ಸರ್ಕಲ್ನಲ್ಲಿ ಇಳಿದು ಬೇರೆ ಬಸ್ ಮೂಲಕ ಶಿವಾಜಿನಗರ ತಲುಪಿ’ ಎಂಬ ಸಿದ್ಧ ಉತ್ತರ, ಉಚಿತ ಸಲಹೆ ಬೇಡ. ಏನಿದ್ದರೂ ನೇರ ಬಸ್ ಬೇಕು’.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>