<p>‘ಅನ್ಯಧರ್ಮ ಸೇರ್ಪಡೆ: ಶಾಪ ನಿಶ್ಚಿತ’ (ಜ.26) ಎಂಬ ಸಂದೇಶ ಸಾರಿದ ಪೇಜಾವರ ಶ್ರೀಗಳ ಮಾತು ದಿಗ್ಭ್ರಮೆಗೊಳಿಸಿದೆ. ತಲೆ ತಲಾಂತರದಿಂದ (ಇಂದಿಗೂ) ಅನುಭವಿಸಿದ ಅವಮಾನ, ದಬ್ಬಾಳಿಕೆ. ಶೋಷಣೆಗಳು ನಿರಂತರವಾಗಿ ನಡೆದು ಬಂದಿರುವುದು ಶ್ರೀಗಳಿಗೆ ತಿಳಿಯದ ಸಂಗತಿಯೇನಲ್ಲ.<br /> <br /> ಅಸ್ಪೃಶ್ಯತೆ ಅವಮಾನದ ನೋವನ್ನು ಮೌನವಾಗಿ ಅನುಭವಿಸುತ್ತಾ ಅತ್ತವರೆಷ್ಟೊ ಬೆಂಕಿಯಲ್ಲಿ ಬೆಂದವರೆಷ್ಟೊ? ಇಷ್ಟೆಲ್ಲ ಆದರೂ ಇನ್ನೂ ಅದೇ ಧರ್ಮದ ಶೋಷಣೆಯನ್ನೆ ಒಪ್ಪಿಕೊಳ್ಳಿ ಎಂದರ್ಥವೆ? <br /> <br /> ನಿಜಕ್ಕೂ ಇವರ ಮನೋಧರ್ಮ ಹೇಗಿದೆ ಎಂಬುದನ್ನು ಗಮನಿಸಿದಾಗ ಆಶ್ಚರ್ಯವಾಗುತ್ತಿದೆ. ಧರ್ಮದಲ್ಲಿರುವ ಶೋಷಣೆಯನ್ನು ತಿದ್ದಲಾರದೆ ಅನ್ಯಧರ್ಮ ಸೇರ್ಪಡೆ ಬೇಡ ಎಂಬುದೆಷ್ಟು ಸಮಂಜಸ.<br /> <br /> ‘ನಮಗೆ ಮತಾಂತರದಿಂದ ಸ್ವಾತಂತ್ರ್ಯ ಸಿಕ್ಕುವುದಾದರೆ ಹಿಂದೂ ಧರ್ಮದ ಸುಧಾರಣೆ ಹೊಣೆಗಾರಿಕೆಯನ್ನು ನಾವೇಕೆ ಹೊರಬೇಕು ಎಂದು ಡಾ. ಬಿ.ಆರ್. ಅಂಬೇಡ್ಕರ್ ಹೇಳಿದ್ದುಂಟು. ಇಂದಿಗೂ ಹಳ್ಳಿಗಳಲ್ಲಿ ದೇವಾಲಯಗಳಿಗೆ ಪ್ರವೇಶವಿಲ್ಲ. ಆಧ್ಯಾತ್ಮಿಕ ಹಕ್ಕು ಧರ್ಮದ ಕಗ್ಗಂಟಲ್ಲೆ ಇದೆ. <br /> ಅನ್ಯಧರ್ಮದ ಸೇರ್ಪಡೆಯಿಂದ ಶಾಪ ಹೊಂದುವುದಾದರೆ ಶೋಷಣೆ ಮಾಡುವವರಿಗೆ ಶಾಪದಿಂದ ವಿಮುಕ್ತಿ ಸಿಗುವುದೇ?!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಅನ್ಯಧರ್ಮ ಸೇರ್ಪಡೆ: ಶಾಪ ನಿಶ್ಚಿತ’ (ಜ.26) ಎಂಬ ಸಂದೇಶ ಸಾರಿದ ಪೇಜಾವರ ಶ್ರೀಗಳ ಮಾತು ದಿಗ್ಭ್ರಮೆಗೊಳಿಸಿದೆ. ತಲೆ ತಲಾಂತರದಿಂದ (ಇಂದಿಗೂ) ಅನುಭವಿಸಿದ ಅವಮಾನ, ದಬ್ಬಾಳಿಕೆ. ಶೋಷಣೆಗಳು ನಿರಂತರವಾಗಿ ನಡೆದು ಬಂದಿರುವುದು ಶ್ರೀಗಳಿಗೆ ತಿಳಿಯದ ಸಂಗತಿಯೇನಲ್ಲ.<br /> <br /> ಅಸ್ಪೃಶ್ಯತೆ ಅವಮಾನದ ನೋವನ್ನು ಮೌನವಾಗಿ ಅನುಭವಿಸುತ್ತಾ ಅತ್ತವರೆಷ್ಟೊ ಬೆಂಕಿಯಲ್ಲಿ ಬೆಂದವರೆಷ್ಟೊ? ಇಷ್ಟೆಲ್ಲ ಆದರೂ ಇನ್ನೂ ಅದೇ ಧರ್ಮದ ಶೋಷಣೆಯನ್ನೆ ಒಪ್ಪಿಕೊಳ್ಳಿ ಎಂದರ್ಥವೆ? <br /> <br /> ನಿಜಕ್ಕೂ ಇವರ ಮನೋಧರ್ಮ ಹೇಗಿದೆ ಎಂಬುದನ್ನು ಗಮನಿಸಿದಾಗ ಆಶ್ಚರ್ಯವಾಗುತ್ತಿದೆ. ಧರ್ಮದಲ್ಲಿರುವ ಶೋಷಣೆಯನ್ನು ತಿದ್ದಲಾರದೆ ಅನ್ಯಧರ್ಮ ಸೇರ್ಪಡೆ ಬೇಡ ಎಂಬುದೆಷ್ಟು ಸಮಂಜಸ.<br /> <br /> ‘ನಮಗೆ ಮತಾಂತರದಿಂದ ಸ್ವಾತಂತ್ರ್ಯ ಸಿಕ್ಕುವುದಾದರೆ ಹಿಂದೂ ಧರ್ಮದ ಸುಧಾರಣೆ ಹೊಣೆಗಾರಿಕೆಯನ್ನು ನಾವೇಕೆ ಹೊರಬೇಕು ಎಂದು ಡಾ. ಬಿ.ಆರ್. ಅಂಬೇಡ್ಕರ್ ಹೇಳಿದ್ದುಂಟು. ಇಂದಿಗೂ ಹಳ್ಳಿಗಳಲ್ಲಿ ದೇವಾಲಯಗಳಿಗೆ ಪ್ರವೇಶವಿಲ್ಲ. ಆಧ್ಯಾತ್ಮಿಕ ಹಕ್ಕು ಧರ್ಮದ ಕಗ್ಗಂಟಲ್ಲೆ ಇದೆ. <br /> ಅನ್ಯಧರ್ಮದ ಸೇರ್ಪಡೆಯಿಂದ ಶಾಪ ಹೊಂದುವುದಾದರೆ ಶೋಷಣೆ ಮಾಡುವವರಿಗೆ ಶಾಪದಿಂದ ವಿಮುಕ್ತಿ ಸಿಗುವುದೇ?!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>