<p><strong>ಪದ್ಮಶ್ರೀ ವಾಪಸ್ಗೆ ಸೂಚನೆ</strong><br /> ಹೈದರಾಬಾದ್: ದೆನಿಕೈನಾ ರೆಡಿ ತೆಲುಗು ಚಿತ್ರದ ಆರಂಭ ಫಲಕದಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ತಪ್ಪಾಗಿ ಪ್ರದರ್ಶಿಸಿರುವುದರಿಂದ ಈ ಪ್ರಶಸ್ತಿಯನ್ನು ಕೇಂದ್ರ ಸರ್ಕಾರಕ್ಕೆ ವಾಪಸ್ ಮಾಡುವಂತೆ ಆಂಧ್ರಪ್ರದೇಶ ಹೈಕೋರ್ಟ್, ಟಾಲಿವುಡ್ ನಟರಾದ ಮೋಹನ್ಬಾಬು ಮತ್ತು ಬ್ರಹ್ಮಾನಂದನ್ ಅವರಿಗೆ ಆದೇಶಿಸಿದೆ.<br /> <br /> ಪ್ರಶಸ್ತಿಯನ್ನು ದುರ್ಬಳಕೆ ಮಾಡಿಕೊಂಡಿರುವುದರಿಂದ ಪ್ರಶಸ್ತಿಯನ್ನು ಕೇಂದಕ್ಕೆ ವಾಪಸ್ ಮಾಡಿದರೆ ಅರ್ಜಿಗೆ ಸಂಬಂಧಿಸಿದ ಅಂತಿಮ ತೀರ್ಪು ನೀಡುವಾಗ ಮೃದು ಧೋರಣೆ ತಾಳಲಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ.<br /> <br /> <strong>ಸುಡಾನ್: ನೌಕರರು ವಾಪಸ್</strong><br /> ನವದೆಹಲಿ (ಪಿಟಿಐ): ಸುಡಾನ್ನಲ್ಲಿ ಗಲಭೆ ಉಲ್ಬಣಗೊಂಡಿರುವುದರಿಂದ ತೈಲ ಮತ್ತು ನೈಸರ್ಗಿಕ ಅನಿಲ ಆಯೋಗವು (ಒಎನ್ಜಿಸಿ) ದಕ್ಷಿಣ ಸುಡಾನ್ನಲ್ಲಿ ತೈಲ ತೆಗೆಯುವ ಕಾರ್ಯವನ್ನು ಸ್ಥಗಿತಗೊಳಿಸಿ ಅಲ್ಲಿರುವ ನೌಕರರನ್ನು ಭಾರತಕ್ಕೆ ವಾಪಸ್ ಕರೆಸಿಕೊಂಡಿದೆ.<br /> <br /> <strong>ನ್ಯಾಯಾಂಗ ಬಂಧನ ವಿಸ್ತರಣೆ</strong><br /> ಪಣಜಿ (ಪಿಟಿಐ): ಕಿರಿಯ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿರುವ ಆಪಾದನೆ ಎದುರಿಸುತ್ತಿರುವ ತೆಹಲ್ಕಾ ಪತ್ರಿಕೆಯ ಸ್ಥಾಪಕ ಸಂಪಾದಕ ತರುಣ್ ತೇಜ್ಪಾಲ್ ನ್ಯಾಯಾಂಗ ಬಂಧನವನ್ನು ಇಲ್ಲಿಯ ನ್ಯಾಯಾಲಯ ಮತ್ತೆ 12 ದಿನಗಳ ಕಾಲ ವಿಸ್ತರಿಸಿದೆ.<br /> <br /> <strong>ಬಾಲಕಿ ಮೇಲೆ ಅತ್ಯಾಚಾರ</strong><br /> ಕೋಲ್ಕತ್ತ (ಪಿಟಿಐ): ಟ್ಯಾಕ್ಸಿಯೊಂದರಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಇಲ್ಲಿನ ಪಾರ್ಕ್ ಸ್ಟ್ರೀಟ್ ಪ್ರದೇಶದಲ್ಲಿ ಸೋಮವಾರ ನಡೆದಿದೆ.</p>.<p>ಬಾಲಕಿಯು(13) ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿರುವಾಗ, ಆಕೆಯನ್ನು ಟ್ಯಾಕ್ಸಿಯೊಳಗೆ ಬಲವಂತವಾಗಿ ಎಳೆದುಕೊಂಡು ಅತ್ಯಾಚಾರ ಮಾಡಲಾಗಿದೆ ಎಂದು ತಿಳಿದುಬಂದಿದೆ. ಆರೋಪಿ ಮಹಮದ್ ಅನ್ವರ್ನನ್ನು ಬಂಧಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪದ್ಮಶ್ರೀ ವಾಪಸ್ಗೆ ಸೂಚನೆ</strong><br /> ಹೈದರಾಬಾದ್: ದೆನಿಕೈನಾ ರೆಡಿ ತೆಲುಗು ಚಿತ್ರದ ಆರಂಭ ಫಲಕದಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ತಪ್ಪಾಗಿ ಪ್ರದರ್ಶಿಸಿರುವುದರಿಂದ ಈ ಪ್ರಶಸ್ತಿಯನ್ನು ಕೇಂದ್ರ ಸರ್ಕಾರಕ್ಕೆ ವಾಪಸ್ ಮಾಡುವಂತೆ ಆಂಧ್ರಪ್ರದೇಶ ಹೈಕೋರ್ಟ್, ಟಾಲಿವುಡ್ ನಟರಾದ ಮೋಹನ್ಬಾಬು ಮತ್ತು ಬ್ರಹ್ಮಾನಂದನ್ ಅವರಿಗೆ ಆದೇಶಿಸಿದೆ.<br /> <br /> ಪ್ರಶಸ್ತಿಯನ್ನು ದುರ್ಬಳಕೆ ಮಾಡಿಕೊಂಡಿರುವುದರಿಂದ ಪ್ರಶಸ್ತಿಯನ್ನು ಕೇಂದಕ್ಕೆ ವಾಪಸ್ ಮಾಡಿದರೆ ಅರ್ಜಿಗೆ ಸಂಬಂಧಿಸಿದ ಅಂತಿಮ ತೀರ್ಪು ನೀಡುವಾಗ ಮೃದು ಧೋರಣೆ ತಾಳಲಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ.<br /> <br /> <strong>ಸುಡಾನ್: ನೌಕರರು ವಾಪಸ್</strong><br /> ನವದೆಹಲಿ (ಪಿಟಿಐ): ಸುಡಾನ್ನಲ್ಲಿ ಗಲಭೆ ಉಲ್ಬಣಗೊಂಡಿರುವುದರಿಂದ ತೈಲ ಮತ್ತು ನೈಸರ್ಗಿಕ ಅನಿಲ ಆಯೋಗವು (ಒಎನ್ಜಿಸಿ) ದಕ್ಷಿಣ ಸುಡಾನ್ನಲ್ಲಿ ತೈಲ ತೆಗೆಯುವ ಕಾರ್ಯವನ್ನು ಸ್ಥಗಿತಗೊಳಿಸಿ ಅಲ್ಲಿರುವ ನೌಕರರನ್ನು ಭಾರತಕ್ಕೆ ವಾಪಸ್ ಕರೆಸಿಕೊಂಡಿದೆ.<br /> <br /> <strong>ನ್ಯಾಯಾಂಗ ಬಂಧನ ವಿಸ್ತರಣೆ</strong><br /> ಪಣಜಿ (ಪಿಟಿಐ): ಕಿರಿಯ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿರುವ ಆಪಾದನೆ ಎದುರಿಸುತ್ತಿರುವ ತೆಹಲ್ಕಾ ಪತ್ರಿಕೆಯ ಸ್ಥಾಪಕ ಸಂಪಾದಕ ತರುಣ್ ತೇಜ್ಪಾಲ್ ನ್ಯಾಯಾಂಗ ಬಂಧನವನ್ನು ಇಲ್ಲಿಯ ನ್ಯಾಯಾಲಯ ಮತ್ತೆ 12 ದಿನಗಳ ಕಾಲ ವಿಸ್ತರಿಸಿದೆ.<br /> <br /> <strong>ಬಾಲಕಿ ಮೇಲೆ ಅತ್ಯಾಚಾರ</strong><br /> ಕೋಲ್ಕತ್ತ (ಪಿಟಿಐ): ಟ್ಯಾಕ್ಸಿಯೊಂದರಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಇಲ್ಲಿನ ಪಾರ್ಕ್ ಸ್ಟ್ರೀಟ್ ಪ್ರದೇಶದಲ್ಲಿ ಸೋಮವಾರ ನಡೆದಿದೆ.</p>.<p>ಬಾಲಕಿಯು(13) ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿರುವಾಗ, ಆಕೆಯನ್ನು ಟ್ಯಾಕ್ಸಿಯೊಳಗೆ ಬಲವಂತವಾಗಿ ಎಳೆದುಕೊಂಡು ಅತ್ಯಾಚಾರ ಮಾಡಲಾಗಿದೆ ಎಂದು ತಿಳಿದುಬಂದಿದೆ. ಆರೋಪಿ ಮಹಮದ್ ಅನ್ವರ್ನನ್ನು ಬಂಧಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>