<p><strong>ಆಫ್ಘನ್: 7 ಉಗ್ರರ ಸಾವು</strong><br /> ಕಾಬೂಲ್ (ಐಎಎನ್ಎಸ್): ಆಫ್ಘಾನಿಸ್ತಾನದ ಪೂರ್ವ ಭಾಗದಲ್ಲಿ ಆಫ್ಘನ್ ಮತ್ತು ನ್ಯಾಟೊ ನೇತೃತ್ವದ ಮಿತ್ರ ಪಡೆಗಳು ಸೋಮವಾರ ನಡೆಸಿದ ಕಾರ್ಯಾಚರಣೆಯಲ್ಲಿ 7 ಉಗ್ರರು ಹತರಾಗಿದ್ದು, ಇದೇ ವೇಳೆ 32 ಜನರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.<br /> <br /> ಎರಡು ಯುದ್ಧ ಟ್ಯಾಂಕರ್, ರಾಕೆಟ್ ಸೇರಿದಂತೆ ಭಾರಿ ಪ್ರಮಾಣದಲ್ಲಿ ಸ್ಫೋಟಕಗಳನ್ನು ಭದ್ರತಾ ಪಡೆ ವಶಪಡಿಸಿಕೊಂಡಿದೆ.<br /> <br /> <strong>ಚಂಡಮಾರುತ: ಶಾಲೆಗಳಿಗೆ ರಜೆ<br /> </strong>ಮನಿಲಾ (ಎಪಿ): ಚಂಡಮಾರುತದಿಂದ ಭಾರಿ ಮಳೆ ಮತ್ತು ಬಿರುಗಾಳಿ ಬೀಸುತ್ತಿರುವುದರಿಂದ ಮುಂಜಾಗರೂಕತಾ ಕ್ರಮವಾಗಿ ಫಿಲಿಪ್ಪೀನ್ಸ್ ರಾಜಧಾನಿ ಮನಿಲಾದಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. <br /> ಹಲವು ವಿಮಾನಗಳ ಹಾರಾಟ ರದ್ದುಪಡಿಸಲಾಗಿದೆ. ನೆಸಾತ್ ಪಟ್ಟಣದಿಂದ ಮುನ್ನುಗ್ಗುತ್ತಿರುವ ಚಂಡಮಾರುತದಿಂದ ಹಲವೆಡೆ ಭಾರಿ ಮಳೆಯಾಗುತ್ತಿದೆ. ಹಾಗೂ ಭೂಕುಸಿತ ಉಂಟಾಗಿದೆ. ಪ್ರತಿ ಗಂಟೆಗೆ 215 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.<br /> <br /> <strong>ದುಬೈನಲ್ಲಿ ಭಾರತೀಯ ವಸ್ತುಗಳ ಪ್ರದರ್ಶನ</strong><br /> ದುಬೈ (ಪಿಟಿಐ): ಭಾರತದಲ್ಲಿ ಉತ್ಪಾದಿಸಿರುವ ವಸ್ತುಗಳ ಪ್ರದರ್ಶನವು ಸೆಪ್ಟೆಂಬರ್ 28ರಿಂದ ಅಕ್ಟೋಬರ್ 1ರ ವರೆಗೆ ಇಲ್ಲಿನ ಭಾರತೀಯ ವಾಣಿಜ್ಯ ಮತ್ತು ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಲಾಗಿದೆ.<br /> <br /> ಭಾರತದ 40 ಕಂಪೆನಿಗಳ ಆಹಾರ, ಗಿಡಮೂಲಿಕೆ ಮತ್ತು ಸ್ಥಳೀಯ ಉತ್ಪನ್ನಗಳನ್ನು ಪ್ರದರ್ಶನದಲ್ಲಿ ಇಡಲಾಗುವುದು. ಸಂಸದ ಮನೋಹರ್ ಗಜಾನನ ಪ್ರದರ್ಶನ ಉದ್ಘಾಟಿಸುವರು. <br /> <strong><br /> `ಭಾರತೀಯರ ಪಾತ್ರ ಮಹತ್ವದ್ದು~</strong><br /> ಹೇಗ್ (ಐಎಎನ್ಎಸ್): ಭಾರತ ಮತ್ತು ನೆದರ್ಲ್ಯಾಂಡ್ ಮಧ್ಯೆ ಸಾಂಸ್ಕೃತಿಕ ಮತ್ತು ಆರ್ಥಿಕ ಸಂಬಂಧ ವೃದ್ಧಿಯಲ್ಲಿ ಭಾರತೀಯ ಸಮುದಾಯದವರ ಪಾತ್ರ ಮಹತ್ವದ್ದಾಗಿದೆ ಎಂದು ಸಾಗರೋತ್ತರ ವ್ಯವಹಾರಗಳ ಸಚಿವ ವಯಲಾರ್ ರವಿ ತಿಳಿಸಿದ್ದಾರೆ.<br /> <br /> ಇಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣ ಉದ್ದೇಶಿಸಿ ಮಾತನಾಡಿದ ಅವರು, ಎರಡು ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧ ಬಲಗೊಳ್ಳಲು ಇಲ್ಲಿ ನೆಲೆಸಿರುವ ಭಾರತೀಯರ ಕೊಡುಗೆ ಅಪಾರವಾದದ್ದು ಎಂದು ಮುಕ್ತ ಕಂಠದಿಂದ ಪ್ರಶಂಶಿಸಿದರು.<br /> <br /> <strong>ನೇಪಾಳ ವಿಮಾನ ದುರಂತ: ಶವಪರೀಕ್ಷೆ ವಿಳಂಬ</strong><br /> ಕಠ್ಮಂಡು (ಐಎಎನ್ಎಸ್): ನೇಪಾಳದ ಕಠ್ಮಂಡು ಕಣಿವೆಯಲ್ಲಿ ಭಾನುವಾರ ವಿಮಾನ ಅಪಘಾತದಲ್ಲಿ ಮರಣ ಹೊಂದಿದ 19 ಜನರ ಶವಪರೀಕ್ಷೆ ವಿಳಂಬವಾಗಲಿದೆ ಎಂದು ಇಲ್ಲಿನ ತ್ರಿಭುವನ ಆಸ್ಪತ್ರೆಯ ಮೂಲಗಳು ತಿಳಿಸಿವೆ.<br /> <br /> ಇದರಿಂದಾಗಿ ಮೃತರ ಕುಟುಂಬಗಳು ತಮ್ಮ ಬಂಧುಗಳ ಶವಗಳನ್ನು ಪಡೆಯಲು ಸೋಮವಾರ ತಡ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಫ್ಘನ್: 7 ಉಗ್ರರ ಸಾವು</strong><br /> ಕಾಬೂಲ್ (ಐಎಎನ್ಎಸ್): ಆಫ್ಘಾನಿಸ್ತಾನದ ಪೂರ್ವ ಭಾಗದಲ್ಲಿ ಆಫ್ಘನ್ ಮತ್ತು ನ್ಯಾಟೊ ನೇತೃತ್ವದ ಮಿತ್ರ ಪಡೆಗಳು ಸೋಮವಾರ ನಡೆಸಿದ ಕಾರ್ಯಾಚರಣೆಯಲ್ಲಿ 7 ಉಗ್ರರು ಹತರಾಗಿದ್ದು, ಇದೇ ವೇಳೆ 32 ಜನರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.<br /> <br /> ಎರಡು ಯುದ್ಧ ಟ್ಯಾಂಕರ್, ರಾಕೆಟ್ ಸೇರಿದಂತೆ ಭಾರಿ ಪ್ರಮಾಣದಲ್ಲಿ ಸ್ಫೋಟಕಗಳನ್ನು ಭದ್ರತಾ ಪಡೆ ವಶಪಡಿಸಿಕೊಂಡಿದೆ.<br /> <br /> <strong>ಚಂಡಮಾರುತ: ಶಾಲೆಗಳಿಗೆ ರಜೆ<br /> </strong>ಮನಿಲಾ (ಎಪಿ): ಚಂಡಮಾರುತದಿಂದ ಭಾರಿ ಮಳೆ ಮತ್ತು ಬಿರುಗಾಳಿ ಬೀಸುತ್ತಿರುವುದರಿಂದ ಮುಂಜಾಗರೂಕತಾ ಕ್ರಮವಾಗಿ ಫಿಲಿಪ್ಪೀನ್ಸ್ ರಾಜಧಾನಿ ಮನಿಲಾದಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. <br /> ಹಲವು ವಿಮಾನಗಳ ಹಾರಾಟ ರದ್ದುಪಡಿಸಲಾಗಿದೆ. ನೆಸಾತ್ ಪಟ್ಟಣದಿಂದ ಮುನ್ನುಗ್ಗುತ್ತಿರುವ ಚಂಡಮಾರುತದಿಂದ ಹಲವೆಡೆ ಭಾರಿ ಮಳೆಯಾಗುತ್ತಿದೆ. ಹಾಗೂ ಭೂಕುಸಿತ ಉಂಟಾಗಿದೆ. ಪ್ರತಿ ಗಂಟೆಗೆ 215 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.<br /> <br /> <strong>ದುಬೈನಲ್ಲಿ ಭಾರತೀಯ ವಸ್ತುಗಳ ಪ್ರದರ್ಶನ</strong><br /> ದುಬೈ (ಪಿಟಿಐ): ಭಾರತದಲ್ಲಿ ಉತ್ಪಾದಿಸಿರುವ ವಸ್ತುಗಳ ಪ್ರದರ್ಶನವು ಸೆಪ್ಟೆಂಬರ್ 28ರಿಂದ ಅಕ್ಟೋಬರ್ 1ರ ವರೆಗೆ ಇಲ್ಲಿನ ಭಾರತೀಯ ವಾಣಿಜ್ಯ ಮತ್ತು ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಲಾಗಿದೆ.<br /> <br /> ಭಾರತದ 40 ಕಂಪೆನಿಗಳ ಆಹಾರ, ಗಿಡಮೂಲಿಕೆ ಮತ್ತು ಸ್ಥಳೀಯ ಉತ್ಪನ್ನಗಳನ್ನು ಪ್ರದರ್ಶನದಲ್ಲಿ ಇಡಲಾಗುವುದು. ಸಂಸದ ಮನೋಹರ್ ಗಜಾನನ ಪ್ರದರ್ಶನ ಉದ್ಘಾಟಿಸುವರು. <br /> <strong><br /> `ಭಾರತೀಯರ ಪಾತ್ರ ಮಹತ್ವದ್ದು~</strong><br /> ಹೇಗ್ (ಐಎಎನ್ಎಸ್): ಭಾರತ ಮತ್ತು ನೆದರ್ಲ್ಯಾಂಡ್ ಮಧ್ಯೆ ಸಾಂಸ್ಕೃತಿಕ ಮತ್ತು ಆರ್ಥಿಕ ಸಂಬಂಧ ವೃದ್ಧಿಯಲ್ಲಿ ಭಾರತೀಯ ಸಮುದಾಯದವರ ಪಾತ್ರ ಮಹತ್ವದ್ದಾಗಿದೆ ಎಂದು ಸಾಗರೋತ್ತರ ವ್ಯವಹಾರಗಳ ಸಚಿವ ವಯಲಾರ್ ರವಿ ತಿಳಿಸಿದ್ದಾರೆ.<br /> <br /> ಇಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣ ಉದ್ದೇಶಿಸಿ ಮಾತನಾಡಿದ ಅವರು, ಎರಡು ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧ ಬಲಗೊಳ್ಳಲು ಇಲ್ಲಿ ನೆಲೆಸಿರುವ ಭಾರತೀಯರ ಕೊಡುಗೆ ಅಪಾರವಾದದ್ದು ಎಂದು ಮುಕ್ತ ಕಂಠದಿಂದ ಪ್ರಶಂಶಿಸಿದರು.<br /> <br /> <strong>ನೇಪಾಳ ವಿಮಾನ ದುರಂತ: ಶವಪರೀಕ್ಷೆ ವಿಳಂಬ</strong><br /> ಕಠ್ಮಂಡು (ಐಎಎನ್ಎಸ್): ನೇಪಾಳದ ಕಠ್ಮಂಡು ಕಣಿವೆಯಲ್ಲಿ ಭಾನುವಾರ ವಿಮಾನ ಅಪಘಾತದಲ್ಲಿ ಮರಣ ಹೊಂದಿದ 19 ಜನರ ಶವಪರೀಕ್ಷೆ ವಿಳಂಬವಾಗಲಿದೆ ಎಂದು ಇಲ್ಲಿನ ತ್ರಿಭುವನ ಆಸ್ಪತ್ರೆಯ ಮೂಲಗಳು ತಿಳಿಸಿವೆ.<br /> <br /> ಇದರಿಂದಾಗಿ ಮೃತರ ಕುಟುಂಬಗಳು ತಮ್ಮ ಬಂಧುಗಳ ಶವಗಳನ್ನು ಪಡೆಯಲು ಸೋಮವಾರ ತಡ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>