<p>ಮುಳಬಾಗಲು: ಸಂಗೀತದಿಂದ ಉತ್ತಮ ಸಂಸ್ಕಾರ ದೊರೆಯುತ್ತದೆ ಎಂದು ಸುಗಮ ಸಂಗೀತ ಸಂಯೋಜಕ ಶಂಕರ್ ಶ್ಯಾನುಭೋಗ್ ಅಭಿಪ್ರಾಯ ಪಟ್ಟರು.<br /> <br /> ಪಟ್ಟಣದ ವೀರಭದ್ರನಗರದಲ್ಲಿ ಭಾನುವಾರ ಆರಂಭಗೊಂಡ ಪುರಂದರದಾಸರ ಆರಾಧನೋತ್ಸವದ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ಸಂಗೀತ ಜ್ಞಾನಕ್ಕೆ ಮಿತಿ ಇಲ್ಲ. ಆದರೆ ಈ ಕ್ಷೇತ್ರ ತನ್ನದೇ ಆದ ದೌರ್ಬಲ್ಯಗಳಿಂದ ನರಳುತ್ತಿದೆ. ಸಂಗೀತ ಸಾಧನೆ ಮಾಡಿದ ಹಲವರು ಅಹಂಕಾರಕ್ಕೆ ಬಲಿಯಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.<br /> <br /> ಪುರಂದರದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜ ತಿದ್ದುವ ಕೆಲಸ ಮಾಡಿದರು. ಕನ್ನಡದಲ್ಲಿ ದೇವರ ನಾಮ ರಚಿಸಿ, ಸಂಸ್ಕೃತದಲ್ಲಿದ್ದ ತತ್ವಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ನೆರವಾದರು ಎಂದು ಅಭಿಪ್ರಾಯಪಟ್ಟರು.<br /> <br /> ಸಂತ ಭದ್ರಗಿರಿ ಸವೋತ್ತಮ ದಾಸರು ಅಧ್ಯಕ್ಷತೆ ವಹಿಸಿದ್ದರು. ಕಲಾವಿದರಾದ ವಸಂತ ಮಾಧವಿ, ಮೂರ್ತಿ, ಶ್ರೀನಿವಾಸರಾಜು, ಅರುಣಾಚಲರೆಡ್ಡಿ, ಭೀಮರಾವ್ ಗಾಯಕವಾಡ್, ಕಷ್ಣ ಭಜನೆ ಮಂಡಳಿಯ ರಾಘವೇಂದ್ರ ನಾಯಕ್, ಚಂದ್ರಮೌಳಿ ಮುಂತಾದವರು ಭಾಗವಹಿಸಿದ್ದರು.<br /> <br /> ಎಂ.ಎ.ಜಯರಾಮರಾವ್ ನಿರೂಪಿಸಿದರು. ಎನ್.ರಾಜಾರಾವ್ ಸ್ವಾಗತಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮುಳಬಾಗಲು: ಸಂಗೀತದಿಂದ ಉತ್ತಮ ಸಂಸ್ಕಾರ ದೊರೆಯುತ್ತದೆ ಎಂದು ಸುಗಮ ಸಂಗೀತ ಸಂಯೋಜಕ ಶಂಕರ್ ಶ್ಯಾನುಭೋಗ್ ಅಭಿಪ್ರಾಯ ಪಟ್ಟರು.<br /> <br /> ಪಟ್ಟಣದ ವೀರಭದ್ರನಗರದಲ್ಲಿ ಭಾನುವಾರ ಆರಂಭಗೊಂಡ ಪುರಂದರದಾಸರ ಆರಾಧನೋತ್ಸವದ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ಸಂಗೀತ ಜ್ಞಾನಕ್ಕೆ ಮಿತಿ ಇಲ್ಲ. ಆದರೆ ಈ ಕ್ಷೇತ್ರ ತನ್ನದೇ ಆದ ದೌರ್ಬಲ್ಯಗಳಿಂದ ನರಳುತ್ತಿದೆ. ಸಂಗೀತ ಸಾಧನೆ ಮಾಡಿದ ಹಲವರು ಅಹಂಕಾರಕ್ಕೆ ಬಲಿಯಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.<br /> <br /> ಪುರಂದರದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜ ತಿದ್ದುವ ಕೆಲಸ ಮಾಡಿದರು. ಕನ್ನಡದಲ್ಲಿ ದೇವರ ನಾಮ ರಚಿಸಿ, ಸಂಸ್ಕೃತದಲ್ಲಿದ್ದ ತತ್ವಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ನೆರವಾದರು ಎಂದು ಅಭಿಪ್ರಾಯಪಟ್ಟರು.<br /> <br /> ಸಂತ ಭದ್ರಗಿರಿ ಸವೋತ್ತಮ ದಾಸರು ಅಧ್ಯಕ್ಷತೆ ವಹಿಸಿದ್ದರು. ಕಲಾವಿದರಾದ ವಸಂತ ಮಾಧವಿ, ಮೂರ್ತಿ, ಶ್ರೀನಿವಾಸರಾಜು, ಅರುಣಾಚಲರೆಡ್ಡಿ, ಭೀಮರಾವ್ ಗಾಯಕವಾಡ್, ಕಷ್ಣ ಭಜನೆ ಮಂಡಳಿಯ ರಾಘವೇಂದ್ರ ನಾಯಕ್, ಚಂದ್ರಮೌಳಿ ಮುಂತಾದವರು ಭಾಗವಹಿಸಿದ್ದರು.<br /> <br /> ಎಂ.ಎ.ಜಯರಾಮರಾವ್ ನಿರೂಪಿಸಿದರು. ಎನ್.ರಾಜಾರಾವ್ ಸ್ವಾಗತಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>