<p>ಬಂಟ್ವಾಳ: ಬಿ.ಸಿ.ರೋಡ್ ಪೇಟೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಚತುಷ್ಪಥ ಮತ್ತು ಮೇಲ್ಸೇತುವೆ ಕಾಮಗಾರಿ ಸ್ಥಗಿತಗೊಂಡಿರುವುದರ ವಿರುದ್ಧ ಇಲ್ಲಿನ ವರ್ತಕರು ಮತ್ತೆ ಪ್ರತಿಭಟನೆಗೆ ಮುಂದಾಗಿದ್ದಾರೆ.<br /> <br /> ಕಳೆದ ಐದು ವರ್ಷಗಳ ಹಿಂದೆ ಸ್ಥಳೀಯ ಸಾಕಷ್ಟು ಮಂದಿ ಖಾಸಗಿ ಜಮೀನುದಾರರು ಮತ್ತು ವರ್ತಕರ ವಿರೋಧದ ನಡುವೆಯೂ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ಆರಂಭಗೊಂಡಿತ್ತು. ಜಿಲ್ಲೆಯಲ್ಲೇ ಗರಿಷ್ಠ ಸಂಖ್ಯೆಯಲ್ಲಿ ವಾಹನ ಓಡಾಡುವ ರಸ್ತೆ ಇದು. ಈ ಬಗ್ಗೆ ಇಲ್ಲಿನ ತಾಲ್ಲೂಕು ಪಂಚಾಯಿತಿ ಮತ್ತು ಪುರಸಭೆಯಲ್ಲಿ ಸಾಕಷ್ಟು ಬಾರಿ ಗಂಭೀರ ಚರ್ಚೆ ನಡೆದಿದ್ದರೂ ಯಾವುದೇ ಪರಿಣಾಮವಾಗಿಲ್ಲ.<br /> <br /> ಈ ನಡುವೆ ಅವೈಜ್ಞಾನಿಕ ಕ್ರಮ ಎಂಬ ಆರೋಪ ಹೊತ್ತಿರುವ `ಮೇಲ್ಸೇತುವೆ~ ಕಾಮಗಾರಿಯನ್ನು ಇರ್ಕಾನ್ ಸಂಸ್ಥೆ ಗುತ್ತಿಗೆ ವಹಿಸಿಕೊಂಡು ಆಮೆಗತಿಯಲ್ಲಿ ಕಾಮಗಾರಿ ನಡೆಸುತ್ತಿದೆ. ಆರಂಭದಲ್ಲಿ ಕಾಮಗಾರಿ ವಿಳಂಬವಾದಾಗ ಇವರು ಬಳಸುತ್ತಿದ್ದ ಕಬ್ಬಿಣದ ಪರಿಕರಗಳನ್ನು ಸ್ಥಳೀಯರು ಹರಾಜು ಮಾಡುವುದಾಗಿ ಎಚ್ಚರಿಸಿ ಬ್ಯಾನರ್ ಅಳವಡಿಸಿದ್ದರು. ಬಳಿಕ ಹಲವು ಪ್ರತಿಭಟನೆಗಳು ನಡೆದಿದ್ದವು.<br /> <br /> ಇವರ ವಿಳಂಬ ನೀತಿಯಿಂದಾಗಿ ಮುಂಬರುವ ಮಳೆಗಾಲದಲ್ಲಿ ರಸ್ತೆ ಸಂಚಾರ ಮತ್ತಷ್ಟು ಬಿಗಡಾಯಿಸಲಿದೆ ಎಂಬ ಅಭಿಪ್ರಾಯ ಇಲ್ಲಿನ ವರ್ತಕರದ್ದು. ಈಗಾಗಲೇ ಹೊಂಡಮಯ ರಸ್ತೆಯಿಂದ ಸಾಕಷ್ಟು ದೂಳು ಹಾರಾಡುತ್ತಿದ್ದು, ಮಳೆಗಾಲದಲ್ಲಿ ಕೆಸರಿನ ಎರೆಚಾಟ ಎದುರಿಸಬೇಕಾದ ಅನಿವಾರ್ತೆ ಎದುರಾಗಿದೆ. <br /> <br /> ಹಲವಾರು ಮಂದಿ ಜಿಲ್ಲಾಧಿಕಾರಿ ಮತ್ತು ಜನಪ್ರತಿನಿಧಿಗಳು ಭೇಟಿ ನೀಡಿ, `ಒಂದು ವಾರದಲ್ಲಿ ಪೂರ್ಣ~, ಒಂದು ತಿಂಗಳಲ್ಲಿ ಪೂರ್ಣ~ ಎಂಬ ಭರವಸೆಯನ್ನಷ್ಟೇ ನೀಡುತ್ತಾ ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ನಾಗರಿಕರಿಂದ ವ್ಯಕ್ತವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಂಟ್ವಾಳ: ಬಿ.ಸಿ.ರೋಡ್ ಪೇಟೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಚತುಷ್ಪಥ ಮತ್ತು ಮೇಲ್ಸೇತುವೆ ಕಾಮಗಾರಿ ಸ್ಥಗಿತಗೊಂಡಿರುವುದರ ವಿರುದ್ಧ ಇಲ್ಲಿನ ವರ್ತಕರು ಮತ್ತೆ ಪ್ರತಿಭಟನೆಗೆ ಮುಂದಾಗಿದ್ದಾರೆ.<br /> <br /> ಕಳೆದ ಐದು ವರ್ಷಗಳ ಹಿಂದೆ ಸ್ಥಳೀಯ ಸಾಕಷ್ಟು ಮಂದಿ ಖಾಸಗಿ ಜಮೀನುದಾರರು ಮತ್ತು ವರ್ತಕರ ವಿರೋಧದ ನಡುವೆಯೂ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ಆರಂಭಗೊಂಡಿತ್ತು. ಜಿಲ್ಲೆಯಲ್ಲೇ ಗರಿಷ್ಠ ಸಂಖ್ಯೆಯಲ್ಲಿ ವಾಹನ ಓಡಾಡುವ ರಸ್ತೆ ಇದು. ಈ ಬಗ್ಗೆ ಇಲ್ಲಿನ ತಾಲ್ಲೂಕು ಪಂಚಾಯಿತಿ ಮತ್ತು ಪುರಸಭೆಯಲ್ಲಿ ಸಾಕಷ್ಟು ಬಾರಿ ಗಂಭೀರ ಚರ್ಚೆ ನಡೆದಿದ್ದರೂ ಯಾವುದೇ ಪರಿಣಾಮವಾಗಿಲ್ಲ.<br /> <br /> ಈ ನಡುವೆ ಅವೈಜ್ಞಾನಿಕ ಕ್ರಮ ಎಂಬ ಆರೋಪ ಹೊತ್ತಿರುವ `ಮೇಲ್ಸೇತುವೆ~ ಕಾಮಗಾರಿಯನ್ನು ಇರ್ಕಾನ್ ಸಂಸ್ಥೆ ಗುತ್ತಿಗೆ ವಹಿಸಿಕೊಂಡು ಆಮೆಗತಿಯಲ್ಲಿ ಕಾಮಗಾರಿ ನಡೆಸುತ್ತಿದೆ. ಆರಂಭದಲ್ಲಿ ಕಾಮಗಾರಿ ವಿಳಂಬವಾದಾಗ ಇವರು ಬಳಸುತ್ತಿದ್ದ ಕಬ್ಬಿಣದ ಪರಿಕರಗಳನ್ನು ಸ್ಥಳೀಯರು ಹರಾಜು ಮಾಡುವುದಾಗಿ ಎಚ್ಚರಿಸಿ ಬ್ಯಾನರ್ ಅಳವಡಿಸಿದ್ದರು. ಬಳಿಕ ಹಲವು ಪ್ರತಿಭಟನೆಗಳು ನಡೆದಿದ್ದವು.<br /> <br /> ಇವರ ವಿಳಂಬ ನೀತಿಯಿಂದಾಗಿ ಮುಂಬರುವ ಮಳೆಗಾಲದಲ್ಲಿ ರಸ್ತೆ ಸಂಚಾರ ಮತ್ತಷ್ಟು ಬಿಗಡಾಯಿಸಲಿದೆ ಎಂಬ ಅಭಿಪ್ರಾಯ ಇಲ್ಲಿನ ವರ್ತಕರದ್ದು. ಈಗಾಗಲೇ ಹೊಂಡಮಯ ರಸ್ತೆಯಿಂದ ಸಾಕಷ್ಟು ದೂಳು ಹಾರಾಡುತ್ತಿದ್ದು, ಮಳೆಗಾಲದಲ್ಲಿ ಕೆಸರಿನ ಎರೆಚಾಟ ಎದುರಿಸಬೇಕಾದ ಅನಿವಾರ್ತೆ ಎದುರಾಗಿದೆ. <br /> <br /> ಹಲವಾರು ಮಂದಿ ಜಿಲ್ಲಾಧಿಕಾರಿ ಮತ್ತು ಜನಪ್ರತಿನಿಧಿಗಳು ಭೇಟಿ ನೀಡಿ, `ಒಂದು ವಾರದಲ್ಲಿ ಪೂರ್ಣ~, ಒಂದು ತಿಂಗಳಲ್ಲಿ ಪೂರ್ಣ~ ಎಂಬ ಭರವಸೆಯನ್ನಷ್ಟೇ ನೀಡುತ್ತಾ ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ನಾಗರಿಕರಿಂದ ವ್ಯಕ್ತವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>