<p><strong>ಗುಂಡ್ಲುಪೇಟೆ:</strong> ತಾಲ್ಲೂಕಿನ ಮೂಲೆಹೊಳೆ ಅರಣ್ಯದ ನಡುವೆ ಸೋಮವಾರ ಆರಂಭಗೊಂಡ ಐನೂರು ಮಾರಮ್ಮದೇವಿಯ ಜಾತ್ರಾ ಮಹೋತ್ಸವವು ಅರಣ್ಯದಂಚಿನ ಗ್ರಾಮಗಳ ಸಹಕಾರದೊಂದಿಗೆ ಎರಡು ದಿನ ಅದ್ದೂರಿಯಾಗಿ ನಡೆಯಿತು.<br /> <br /> ಬಂಡೀಪುರ ಅಭಯಾರಣ್ಯದ ವ್ಯಾಪ್ತಿಗೆ ಸೇರಿದ ಮೂಲೆಹೊಳೆ ಅರಣ್ಯದ ಐನೂರು ಮಾರಿಗುಡಿ ಅರಣ್ಯ ಶಿಬಿರದಿಂದ ಸುಮಾರು 2 ಕಿ.ಮೀ. ದೂರದಲ್ಲಿ ಐನೂರು ಮಾರಮ್ಮ ದೇವತೆಯ ದೇವಸ್ಥಾನವಿದ್ದು, ಐತಿಹಾಸಿಕ ಮಹತ್ವ ಹೊಂದಿದೆ. ಆಷಾಢ ಅಮಾವಾಸ್ಯೆಯ ನಂತರದ ಸೋಮವಾರ ಮತ್ತು ಮಂಗಳವಾರಗಳಂದು ಪ್ರತಿ ವರ್ಷ ಈ ಜಾತ್ರೆ ನಡೆಯುತ್ತದೆ. ತಾಲ್ಲೂಕಿನ ಹೊಂಗಹಳ್ಳಿ, ಹಳ್ಳದಮಾದಹಳ್ಳಿ, ಕೊಡಸೋಗೆ, ದುಂದಾಸನಪುರ ಮುಂತಾದ ಗ್ರಾಮಗಳ ಜನರು ಸೋಮವಾರ ಬೆಳಿಗ್ಗೆ ಅರಣ್ಯಕ್ಕೆ ಪ್ರವೇಶಿಸಿದರು.<br /> <br /> ನಂತರ ತಾವು ಮನೆಯಿಂದ ತಂದಿದ್ದ ಬುತ್ತಿಯನ್ನು ತಿಂದು, ನಂತರ ಕಾಡಿನ ಒಳಭಾಗದಲ್ಲಿ ಸಿಗುವ ಒಣ ಸೌದೆಯನ್ನು ಕೊಂಡೋತ್ಸವಕ್ಕಾಗಿ ಆರಿಸಿ ತಂದರು. ನಂತರ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಸಿದರು.<br /> <br /> ಇಡೀ ರಾತ್ರಿ ಪೂಜೆ, ಭಜನೆಗಳು, ಸಾಮೂಹಿಕ ಪ್ರಾರ್ಥನೆಗಳು ನಡೆದವು. ಮಂಗಳವಾರ ಬೆಳಗಿನ ಜಾವ 5.30ಕ್ಕೆ ದೇವಿಯ ತಮ್ಮಡಿಯರಾದ ಹೊಂಗಹಳ್ಳಿ ಗ್ರಾಮದ ಸಿದ್ದಪ್ಪನವರು ಕೊಂಡ ಹಾಯ್ದರು.<br /> <br /> ನಂತರ ಹರಕೆ ಹೊತ್ತ ಭಕ್ತರು ಕೊಂಡ ಹಾಯುವುದು, ಉರುಳುಸೇವೆ ಮಾಡಿ ಹರಕೆ ತೀರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಂಡ್ಲುಪೇಟೆ:</strong> ತಾಲ್ಲೂಕಿನ ಮೂಲೆಹೊಳೆ ಅರಣ್ಯದ ನಡುವೆ ಸೋಮವಾರ ಆರಂಭಗೊಂಡ ಐನೂರು ಮಾರಮ್ಮದೇವಿಯ ಜಾತ್ರಾ ಮಹೋತ್ಸವವು ಅರಣ್ಯದಂಚಿನ ಗ್ರಾಮಗಳ ಸಹಕಾರದೊಂದಿಗೆ ಎರಡು ದಿನ ಅದ್ದೂರಿಯಾಗಿ ನಡೆಯಿತು.<br /> <br /> ಬಂಡೀಪುರ ಅಭಯಾರಣ್ಯದ ವ್ಯಾಪ್ತಿಗೆ ಸೇರಿದ ಮೂಲೆಹೊಳೆ ಅರಣ್ಯದ ಐನೂರು ಮಾರಿಗುಡಿ ಅರಣ್ಯ ಶಿಬಿರದಿಂದ ಸುಮಾರು 2 ಕಿ.ಮೀ. ದೂರದಲ್ಲಿ ಐನೂರು ಮಾರಮ್ಮ ದೇವತೆಯ ದೇವಸ್ಥಾನವಿದ್ದು, ಐತಿಹಾಸಿಕ ಮಹತ್ವ ಹೊಂದಿದೆ. ಆಷಾಢ ಅಮಾವಾಸ್ಯೆಯ ನಂತರದ ಸೋಮವಾರ ಮತ್ತು ಮಂಗಳವಾರಗಳಂದು ಪ್ರತಿ ವರ್ಷ ಈ ಜಾತ್ರೆ ನಡೆಯುತ್ತದೆ. ತಾಲ್ಲೂಕಿನ ಹೊಂಗಹಳ್ಳಿ, ಹಳ್ಳದಮಾದಹಳ್ಳಿ, ಕೊಡಸೋಗೆ, ದುಂದಾಸನಪುರ ಮುಂತಾದ ಗ್ರಾಮಗಳ ಜನರು ಸೋಮವಾರ ಬೆಳಿಗ್ಗೆ ಅರಣ್ಯಕ್ಕೆ ಪ್ರವೇಶಿಸಿದರು.<br /> <br /> ನಂತರ ತಾವು ಮನೆಯಿಂದ ತಂದಿದ್ದ ಬುತ್ತಿಯನ್ನು ತಿಂದು, ನಂತರ ಕಾಡಿನ ಒಳಭಾಗದಲ್ಲಿ ಸಿಗುವ ಒಣ ಸೌದೆಯನ್ನು ಕೊಂಡೋತ್ಸವಕ್ಕಾಗಿ ಆರಿಸಿ ತಂದರು. ನಂತರ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಸಿದರು.<br /> <br /> ಇಡೀ ರಾತ್ರಿ ಪೂಜೆ, ಭಜನೆಗಳು, ಸಾಮೂಹಿಕ ಪ್ರಾರ್ಥನೆಗಳು ನಡೆದವು. ಮಂಗಳವಾರ ಬೆಳಗಿನ ಜಾವ 5.30ಕ್ಕೆ ದೇವಿಯ ತಮ್ಮಡಿಯರಾದ ಹೊಂಗಹಳ್ಳಿ ಗ್ರಾಮದ ಸಿದ್ದಪ್ಪನವರು ಕೊಂಡ ಹಾಯ್ದರು.<br /> <br /> ನಂತರ ಹರಕೆ ಹೊತ್ತ ಭಕ್ತರು ಕೊಂಡ ಹಾಯುವುದು, ಉರುಳುಸೇವೆ ಮಾಡಿ ಹರಕೆ ತೀರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>