<p><strong>ಮುಂಬೈ (ಪಿಟಿಐ):</strong> ಶುಕ್ರವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು 53 ಅಂಶಗಳಷ್ಟು ಚೇತರಿಕೆ ಕಂಡಿದ್ದು, 17,636 ಅಂಶಗಳಿಗೆ ಏರಿಕೆ ಪಡೆದಿದೆ. <br /> <br /> ಜಾಗತಿಕ ಷೇರುಪೇಟೆಗಳು ಚೇತರಿಸಿಕೊಂಡಿರುವುದು ಮತ್ತು `ಒಎನ್ಜಿಸಿ~ ಷೇರು ವಿಕ್ರಯದ ಮೂಲಕ ಮರಳಿರುವ ವಿಶ್ವಾಸವು ಪೇಟೆಗೆ ಬಲ ತುಂಬಿವೆ. ದಿನದ ವಹಿವಾಟಿನಲ್ಲಿ ಐಸಿಐಸಿಐ ಬ್ಯಾಂಕ್ ಮತ್ತು ಲಾರ್ಸನ್ ಅಂಡ್ ಟುಬ್ರೊ ಗರಿಷ್ಠ ಲಾಭ ಮಾಡಿಕೊಂಡವು. ಬ್ಯಾಂಕಿಂಗ್, ರಿಯಾಲ್ಟಿ, ಫಾರ್ಮಸಿ ಕಂಪೆನಿಗಳ ಷೇರುಗಳ ಖರೀದಿ ಒತ್ತಡ ಕಂಡುಬಂತು. <br /> <br /> `ಎಲ್ಅಂಡ್ಟಿ~ ಸುಮಾರು ರೂ.1,300 ಕೋಟಿ ಮೊತ್ತದ ಗುತ್ತಿಗೆ ಪಡೆದುಕೊಂಡ ಹಿನ್ನೆಲೆಯಲ್ಲಿ ಶುಕ್ರವಾರ ಕಂಪೆನಿಯ ಷೇರುಗಳು ಶೇ 1.66ರಷ್ಟು ಏರಿಕೆ ಕಂಡವು. ರಾಷ್ಟ್ರೀಯ ಷೇರು ಸೂಚ್ಯಂಕ `ನಿಫ್ಟಿ~ ಕೂಡ 19 ಅಂಶಗಳಷ್ಟು ಏರಿಕೆ ಪಡೆದು, 5,359 ಅಂಶಗಳಿಗೆ ವಾರಾಂತ್ಯದ ವಹಿವಾಟು ಕೊನೆಗೊಳಿಸಿತು. <br /> <br /> `ಚುನಾವಣಾ ಫಲಿತಾಂಶ, `ಆರ್ಬಿಐ~ ವಿತ್ತೀಯ ಪರಾಮರ್ಶೆ, ಕೇಂದ್ರ ಬಜೆಟ್ ಸೇರಿದಂತೆ ಹಲವು ಸಂಗತಿಗಳು ಈ ತಿಂಗಳು ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಬೀರಲಿವೆ~ ಎಂದು ತಜ್ಞರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ (ಪಿಟಿಐ):</strong> ಶುಕ್ರವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು 53 ಅಂಶಗಳಷ್ಟು ಚೇತರಿಕೆ ಕಂಡಿದ್ದು, 17,636 ಅಂಶಗಳಿಗೆ ಏರಿಕೆ ಪಡೆದಿದೆ. <br /> <br /> ಜಾಗತಿಕ ಷೇರುಪೇಟೆಗಳು ಚೇತರಿಸಿಕೊಂಡಿರುವುದು ಮತ್ತು `ಒಎನ್ಜಿಸಿ~ ಷೇರು ವಿಕ್ರಯದ ಮೂಲಕ ಮರಳಿರುವ ವಿಶ್ವಾಸವು ಪೇಟೆಗೆ ಬಲ ತುಂಬಿವೆ. ದಿನದ ವಹಿವಾಟಿನಲ್ಲಿ ಐಸಿಐಸಿಐ ಬ್ಯಾಂಕ್ ಮತ್ತು ಲಾರ್ಸನ್ ಅಂಡ್ ಟುಬ್ರೊ ಗರಿಷ್ಠ ಲಾಭ ಮಾಡಿಕೊಂಡವು. ಬ್ಯಾಂಕಿಂಗ್, ರಿಯಾಲ್ಟಿ, ಫಾರ್ಮಸಿ ಕಂಪೆನಿಗಳ ಷೇರುಗಳ ಖರೀದಿ ಒತ್ತಡ ಕಂಡುಬಂತು. <br /> <br /> `ಎಲ್ಅಂಡ್ಟಿ~ ಸುಮಾರು ರೂ.1,300 ಕೋಟಿ ಮೊತ್ತದ ಗುತ್ತಿಗೆ ಪಡೆದುಕೊಂಡ ಹಿನ್ನೆಲೆಯಲ್ಲಿ ಶುಕ್ರವಾರ ಕಂಪೆನಿಯ ಷೇರುಗಳು ಶೇ 1.66ರಷ್ಟು ಏರಿಕೆ ಕಂಡವು. ರಾಷ್ಟ್ರೀಯ ಷೇರು ಸೂಚ್ಯಂಕ `ನಿಫ್ಟಿ~ ಕೂಡ 19 ಅಂಶಗಳಷ್ಟು ಏರಿಕೆ ಪಡೆದು, 5,359 ಅಂಶಗಳಿಗೆ ವಾರಾಂತ್ಯದ ವಹಿವಾಟು ಕೊನೆಗೊಳಿಸಿತು. <br /> <br /> `ಚುನಾವಣಾ ಫಲಿತಾಂಶ, `ಆರ್ಬಿಐ~ ವಿತ್ತೀಯ ಪರಾಮರ್ಶೆ, ಕೇಂದ್ರ ಬಜೆಟ್ ಸೇರಿದಂತೆ ಹಲವು ಸಂಗತಿಗಳು ಈ ತಿಂಗಳು ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಬೀರಲಿವೆ~ ಎಂದು ತಜ್ಞರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>