<p><strong>ಬೆಂಗಳೂರು: `</strong>ಆರಂಭದ ದಿನಗಳಲ್ಲಿ ವ್ಯಾಕ್ಯುಮ್ ಸಲಕರಣೆಗಳ ತಯಾರಿಕೆಯ ಕಂಪೆನಿಯ ನಿರ್ವಹಣೆ ಬಹಳ ತ್ರಾಸದಾಯಕವಾಗಿತ್ತು. ಜತೆಗೆ ಮಾನವ ಸಂಪನ್ಮೂಲ ಕೊರತೆಯೂ ಕಾಡಿತ್ತು~ ಎಂದು ಹಿಂಡ್ ಹೈ ವ್ಯಾಕುಮ್ ಕಂಪೆನಿಯ ಮುಖ್ಯಸ್ಥ ಎಸ್.ವಿ.ನರಸಯ್ಯ ನೆನಪಿಸಿಕೊಂಡರು.<br /> <br /> ರೋಟರಿ ಬೆಂಗಳೂರು ಸಂಸ್ಥೆಯು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೋಟರಿ ಪಯೋನಿರ್ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.ಹೊಸ ತಂತ್ರಜ್ಞಾನ ಮತ್ತು ಸವಾಲುಗಳನ್ನು ಅಳವಡಿಸಿಕೊಳ್ಳುವಲ್ಲಿ ಕಂಪೆನಿ ಯಶಸ್ವಿಯಾಗಿದೆ. ಅಮೆರಿಕ, ಜರ್ಮನಿ, ಬ್ರೆಜಿಲ್ ವಿದೇಶ ಮಾರುಕಟ್ಟೆಯಲ್ಲಿ ಕಂಪೆನಿಯ ವ್ಯಾಕ್ಯುಮ್ ಸಲಕರಣೆಗಳು ಅಸ್ತಿತ್ವವನ್ನು ಪಡೆದುಕೊಂಡಿದೆ~ ಎಂದು ಹೇಳಿದರು.<br /> <br /> `ಕಂಪೆನಿಯಲ್ಲಿ ತಯಾರಾದ ವ್ಯಾಕ್ಯುಮ್ ಸಲಕರಣೆಗಳನ್ನು ಹೆಚ್ಚು ಸಂಶೋಧನೆಗೆ ಒಳಪಡಿಸಿ ಅದರ ನ್ಯೂನ್ಯತೆಗಳನ್ನು ಸರಿಪಡಿಸಲಾಯಿತು. ಆ ಮೂಲಕ ಮಾರುಕಟ್ಟೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲಾಯಿತು~ ಎಂದು ಹೇಳಿದರು.ರೋಟರಿ ಜಿಲ್ಲಾ ಗರ್ವನರ್ ಆರ್.ಬದರಿಪ್ರಸಾದ್, ಡಾ.ಮಧುರಾ ಎಂ.ಛತ್ರಪತಿ, ಎಂ.ಕೆ.ಪಾಂಡುರಂಗ ಶೆಟ್ಟಿ, ಅರುಣಾ ದಾಸ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: `</strong>ಆರಂಭದ ದಿನಗಳಲ್ಲಿ ವ್ಯಾಕ್ಯುಮ್ ಸಲಕರಣೆಗಳ ತಯಾರಿಕೆಯ ಕಂಪೆನಿಯ ನಿರ್ವಹಣೆ ಬಹಳ ತ್ರಾಸದಾಯಕವಾಗಿತ್ತು. ಜತೆಗೆ ಮಾನವ ಸಂಪನ್ಮೂಲ ಕೊರತೆಯೂ ಕಾಡಿತ್ತು~ ಎಂದು ಹಿಂಡ್ ಹೈ ವ್ಯಾಕುಮ್ ಕಂಪೆನಿಯ ಮುಖ್ಯಸ್ಥ ಎಸ್.ವಿ.ನರಸಯ್ಯ ನೆನಪಿಸಿಕೊಂಡರು.<br /> <br /> ರೋಟರಿ ಬೆಂಗಳೂರು ಸಂಸ್ಥೆಯು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೋಟರಿ ಪಯೋನಿರ್ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.ಹೊಸ ತಂತ್ರಜ್ಞಾನ ಮತ್ತು ಸವಾಲುಗಳನ್ನು ಅಳವಡಿಸಿಕೊಳ್ಳುವಲ್ಲಿ ಕಂಪೆನಿ ಯಶಸ್ವಿಯಾಗಿದೆ. ಅಮೆರಿಕ, ಜರ್ಮನಿ, ಬ್ರೆಜಿಲ್ ವಿದೇಶ ಮಾರುಕಟ್ಟೆಯಲ್ಲಿ ಕಂಪೆನಿಯ ವ್ಯಾಕ್ಯುಮ್ ಸಲಕರಣೆಗಳು ಅಸ್ತಿತ್ವವನ್ನು ಪಡೆದುಕೊಂಡಿದೆ~ ಎಂದು ಹೇಳಿದರು.<br /> <br /> `ಕಂಪೆನಿಯಲ್ಲಿ ತಯಾರಾದ ವ್ಯಾಕ್ಯುಮ್ ಸಲಕರಣೆಗಳನ್ನು ಹೆಚ್ಚು ಸಂಶೋಧನೆಗೆ ಒಳಪಡಿಸಿ ಅದರ ನ್ಯೂನ್ಯತೆಗಳನ್ನು ಸರಿಪಡಿಸಲಾಯಿತು. ಆ ಮೂಲಕ ಮಾರುಕಟ್ಟೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲಾಯಿತು~ ಎಂದು ಹೇಳಿದರು.ರೋಟರಿ ಜಿಲ್ಲಾ ಗರ್ವನರ್ ಆರ್.ಬದರಿಪ್ರಸಾದ್, ಡಾ.ಮಧುರಾ ಎಂ.ಛತ್ರಪತಿ, ಎಂ.ಕೆ.ಪಾಂಡುರಂಗ ಶೆಟ್ಟಿ, ಅರುಣಾ ದಾಸ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>