<p><strong>ಶಿವಮೊಗ್ಗ:</strong> ಪ್ರತಿಯೊಬ್ಬ ವ್ಯಕ್ತಿಗೂ ಸಂಸ್ಕಾರ ಇದ್ದಾಗ ಮಾತ್ರ ಸಮಾಜದ ಅಭಿವೃದ್ಧಿ ಹಾಗೂ ಜವಾಬ್ದಾರಿ ನಿರ್ವಹಿಸಲು ಸಾಧ್ಯ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಜಂಟಿ ಕಾರ್ಯದರ್ಶಿ ಅಬಸೆ ದಿನೇಶ್ ಕುಮಾರ್ ಜೋಶಿ ಹೇಳಿದರು.<br /> <br /> ಇಲ್ಲಿನ ವಿನೋಬ ನಗರದ ವಿಪ್ರ ಟ್ರಸ್ಟ್ ಸಭಾಂಗಣದಲ್ಲಿ ಭಾನುವಾರ ನಡೆದ `ಅಭಿನಂದನಾ ಮತ್ತು ಪ್ರತಿಭಾ ಪುರಸ್ಕಾರ~ ಸಮಾರಂಭದಲ್ಲಿ ಅವರು ಮಾತನಾಡಿದರು.ಯಾವುದೇ ವ್ಯಕ್ತಿ ತಾನು ಬೆಳೆದು ಬಂದ ಸಮಾಜಕ್ಕೆ ಮತ್ತು ನಾವು ಪ್ರತಿನಿಧಿಸುವ ಸಮುದಾಯಕ್ಕೆ ಏನಾದರೂ ಕೊಡುಗೆ ನೀಡಬೇಕು. ಆದರೆ, ಇಂದಿನ ಯುವ ಸಮುದಾಯ ಇವೆಲ್ಲವುಗಳಿಂದ ದೂರ ಸರಿದು ವಿದೇಶದತ್ತ ಮುಖ ಮಾಡಿದೆ ಎಂದರು.<br /> <br /> ಇಂದಿನ ತಂತ್ರಜ್ಞಾನ ಯುಗದ ಜನರಲ್ಲಿ ವಿದೇಶಿ ವ್ಯಾಮೋಹ, ಸ್ವಾರ್ಥ ಮನೆ ಮಾಡಿದ್ದು, ತಾವು ಎಂಜಿನಿಯರ್, ಡಾಕ್ಟರ್ ಆಗಬೇಕು ಎಂಬಂತಹ ಕನಸುಗಳನ್ನೇ ಕಾಣುತ್ತಾರೆ. <br /> <br /> ಆದರೆ, ತಮ್ಮ ಕನಸಿನ ಗುರಿ ಮುಟ್ಟಿದ ನಂತರ ಸಮಾಜವನ್ನು ಕಡೆಗಣಿಸುವ ಪರಿಪಾಠ ಬೆಳೆಯುತ್ತಿರುವುದು ಮಾತ್ರ ವಿಷಾದನೀಯ ಸಂಗತಿ ಎಂದರು.ವ್ಯಕ್ತಿಯ ಬೆಳವಣಿಗೆಯಲ್ಲಿ ಆತನ ಸಮುದಾಯದ ಕೊಡುಗೆ ಸಹ ಇರುತ್ತದೆ. ಹಾಗಾಗಿ, ಪ್ರತಿಯೊಬ್ಬರು ಸಮುದಾಯಕ್ಕೆ ಕಿಂಚಿತ್ತಾದರೂ ಸೇವೆ ಸಲ್ಲಿಸಬೇಕು ಎಂದು ನುಡಿದರು.<br /> <br /> ಇತಿಹಾಸ ಸಂಶೋಧಕ ಕೆಳದಿ ಗುಂಡಾ ಜೋಯಿಸ್, ಪತ್ರಕರ್ತ ಎ.ಆರ್. ರಘುರಾಂ, ಸಮಾಜ ಸೇವಕಿ ಮೂಕಾಂಬಿಕಾ ಅವರನ್ನು ಸನ್ಮಾನಿಸಲಾಯಿತು. ವಿಪ್ರ ಟ್ರಸ್ಟ್ ಉಪಾಧ್ಯಕ್ಷ ಗೋವಿಂದ ಸ್ವಾಮಿ, ಟ್ರಸ್ಟಿಗಳಾದ ಸಚ್ಚಿದಾನಂದ ಮೂರ್ತಿ, ಗೋಪಾಲ್, ನರಸಿಂಹಮೂರ್ತಿ, ಮಾಧವಾಚಾರ್, ನಾರಾಯಣ ಮೂರ್ತಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ:</strong> ಪ್ರತಿಯೊಬ್ಬ ವ್ಯಕ್ತಿಗೂ ಸಂಸ್ಕಾರ ಇದ್ದಾಗ ಮಾತ್ರ ಸಮಾಜದ ಅಭಿವೃದ್ಧಿ ಹಾಗೂ ಜವಾಬ್ದಾರಿ ನಿರ್ವಹಿಸಲು ಸಾಧ್ಯ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಜಂಟಿ ಕಾರ್ಯದರ್ಶಿ ಅಬಸೆ ದಿನೇಶ್ ಕುಮಾರ್ ಜೋಶಿ ಹೇಳಿದರು.<br /> <br /> ಇಲ್ಲಿನ ವಿನೋಬ ನಗರದ ವಿಪ್ರ ಟ್ರಸ್ಟ್ ಸಭಾಂಗಣದಲ್ಲಿ ಭಾನುವಾರ ನಡೆದ `ಅಭಿನಂದನಾ ಮತ್ತು ಪ್ರತಿಭಾ ಪುರಸ್ಕಾರ~ ಸಮಾರಂಭದಲ್ಲಿ ಅವರು ಮಾತನಾಡಿದರು.ಯಾವುದೇ ವ್ಯಕ್ತಿ ತಾನು ಬೆಳೆದು ಬಂದ ಸಮಾಜಕ್ಕೆ ಮತ್ತು ನಾವು ಪ್ರತಿನಿಧಿಸುವ ಸಮುದಾಯಕ್ಕೆ ಏನಾದರೂ ಕೊಡುಗೆ ನೀಡಬೇಕು. ಆದರೆ, ಇಂದಿನ ಯುವ ಸಮುದಾಯ ಇವೆಲ್ಲವುಗಳಿಂದ ದೂರ ಸರಿದು ವಿದೇಶದತ್ತ ಮುಖ ಮಾಡಿದೆ ಎಂದರು.<br /> <br /> ಇಂದಿನ ತಂತ್ರಜ್ಞಾನ ಯುಗದ ಜನರಲ್ಲಿ ವಿದೇಶಿ ವ್ಯಾಮೋಹ, ಸ್ವಾರ್ಥ ಮನೆ ಮಾಡಿದ್ದು, ತಾವು ಎಂಜಿನಿಯರ್, ಡಾಕ್ಟರ್ ಆಗಬೇಕು ಎಂಬಂತಹ ಕನಸುಗಳನ್ನೇ ಕಾಣುತ್ತಾರೆ. <br /> <br /> ಆದರೆ, ತಮ್ಮ ಕನಸಿನ ಗುರಿ ಮುಟ್ಟಿದ ನಂತರ ಸಮಾಜವನ್ನು ಕಡೆಗಣಿಸುವ ಪರಿಪಾಠ ಬೆಳೆಯುತ್ತಿರುವುದು ಮಾತ್ರ ವಿಷಾದನೀಯ ಸಂಗತಿ ಎಂದರು.ವ್ಯಕ್ತಿಯ ಬೆಳವಣಿಗೆಯಲ್ಲಿ ಆತನ ಸಮುದಾಯದ ಕೊಡುಗೆ ಸಹ ಇರುತ್ತದೆ. ಹಾಗಾಗಿ, ಪ್ರತಿಯೊಬ್ಬರು ಸಮುದಾಯಕ್ಕೆ ಕಿಂಚಿತ್ತಾದರೂ ಸೇವೆ ಸಲ್ಲಿಸಬೇಕು ಎಂದು ನುಡಿದರು.<br /> <br /> ಇತಿಹಾಸ ಸಂಶೋಧಕ ಕೆಳದಿ ಗುಂಡಾ ಜೋಯಿಸ್, ಪತ್ರಕರ್ತ ಎ.ಆರ್. ರಘುರಾಂ, ಸಮಾಜ ಸೇವಕಿ ಮೂಕಾಂಬಿಕಾ ಅವರನ್ನು ಸನ್ಮಾನಿಸಲಾಯಿತು. ವಿಪ್ರ ಟ್ರಸ್ಟ್ ಉಪಾಧ್ಯಕ್ಷ ಗೋವಿಂದ ಸ್ವಾಮಿ, ಟ್ರಸ್ಟಿಗಳಾದ ಸಚ್ಚಿದಾನಂದ ಮೂರ್ತಿ, ಗೋಪಾಲ್, ನರಸಿಂಹಮೂರ್ತಿ, ಮಾಧವಾಚಾರ್, ನಾರಾಯಣ ಮೂರ್ತಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>