<p><strong>ಬೆಂಗಳೂರು: </strong>ದಿನದ ಕಾರ್ಯ ಕಲಾಪಗಳ ಪಟ್ಟಿಯಲ್ಲಿ ಚರ್ಚೆಗೆ ನಿಗದಿಯಾಗಿದ್ದ ವಿಷಯಗಳಿಗೆ ಉತ್ತರಿಸಲು ಸಂಬಂಧಿಸಿದ ಇಲಾಖೆಗಳ ಸಚಿವರಿಲ್ಲದ ಕಾರಣ ವಿಧಾನ ಪರಿಷತ್ ಕಲಾಪವನ್ನು 15 ನಿಮಿಷಗಳ ಕಾಲ ಮುಂದೂಡಿದ ಘಟನೆ ಗುರುವಾರ ನಡೆಯಿತು.<br /> <br /> ಕಾವೇರಿ ವಿಷಯವಾಗಿ ಚರ್ಚೆ ನಡೆಸಲು ಮುಖ್ಯಮಂತ್ರಿಗಳು ಸರ್ವಪಕ್ಷ ಮುಖಂಡರ ಸಭೆ ಕರೆದಿದ್ದ ಹಿನ್ನೆಲೆಯಲ್ಲಿ ಕಲಾಪ 45 ನಿಮಿಷ ವಿಳಂಬವಾಗಿ ಆರಂಭವಾಯಿತು. ಸಭೆ ಸೇರುತ್ತಿದ್ದಂತೆಯೇ ಸಭಾಪತಿ ಡಿ.ಎಚ್. ಶಂಕರಮೂರ್ತಿ ಕಲಾಪ ಆರಂಭಿಸಲು ಸನ್ನದ್ಧರಾದರು. ಆದರೆ, `ಸಚಿವರಿಲ್ಲದೆ ನಾವು ಯಾರಿಗೆ ಪ್ರಶ್ನೆ ಹಾಕುವುದು, ಉತ್ತರ ನೀಡುವವರು ಯಾರು' ಎಂದು ವಿರೋಧ ಪಕ್ಷದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.<br /> <br /> ಬಿಜೆಪಿ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ನಿಯಮ 330ರ ಅಡಿಯಲ್ಲಿ, ಸ್ಥಳೀಯ ಸಂಸ್ಥೆಗಳ ಸಬಲೀಕರಣದ ಪ್ರಸ್ತಾಪ ಮಾಡಲು ಅವಕಾಶ ಪಡೆದಿದ್ದರು. ಅಮರನಾಥ ಪಾಟೀಲ, ಹೈದರಾಬಾದ್-ಕರ್ನಾಟಕ ಭಾಗದ ನೀರಿನ ಸಮಸ್ಯೆ ಕುರಿತು ಗಮನ ಸೆಳೆಯುವ ಸೂಚನೆ ಮಂಡಿಸಿದ್ದರು. ಎರಡೂ ವಿಷಯಗಳಿಗೆ ಉತ್ತರ ನೀಡಬೇಕಾದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ಸದನಕ್ಕೆ ಗೈರು ಹಾಜರಾಗಿದ್ದರು.<br /> <br /> ಗುಟ್ಕಾ ನಿಷೇಧದ ಮೇಲೆ ನಡೆದ ಚರ್ಚೆಗೆ ಉತ್ತರ ನೀಡಬೇಕಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಸದನಕ್ಕೆ ಬಂದಿರಲಿಲ್ಲ. ಬೆಂಗಳೂರಿನ ಕಾಕ್ಸ್ಟೌನ್ನಲ್ಲಿ ಇರುವ ಆಟದ ಮೈದಾನದ ಕುರಿತು ಜೆಡಿಎಸ್ನ ಬಸವರಾಜ ಹೊರಟ್ಟಿ ಮಂಡಿಸಲಿದ್ದ ಗಮನ ಸೆಳೆಯುವ ಸೂಚನೆಗೂ ಮುಖ್ಯಮಂತ್ರಿಗಳೇ ಉತ್ತರಿಸಬೇಕಿತ್ತು.<br /> <br /> `ಸಾಕಷ್ಟು ಮುಂಚಿತವಾಗಿ ಕಲಾಪಗಳ ಪಟ್ಟಿ ತಯಾರು ಮಾಡಲಾಗಿದೆ. ಯಾವ ಸಚಿವರು, ಯಾವ ಸದನದಲ್ಲಿ ಇರಬೇಕು ಎಂಬುದೂ ನಿಗದಿಯಾಗಿದೆ. ಹೀಗಿದ್ದೂ ಪರಿಷತ್ ಕಲಾಪಕ್ಕೆ ಬಾರದೆ ನಿರ್ಲಕ್ಷ್ಯ ತೋರಿದ್ದು ಏಕೆ' ಎಂದು ವಿರೋಧ ಪಕ್ಷದ ನಾಯಕ ಡಿ.ವಿ. ಸದಾನಂದಗೌಡ, ಹೊರಟ್ಟಿ ಮತ್ತಿತರರು ಆಕ್ಷೇಪ ಎತ್ತಿದರು.<br /> <br /> `ಸಚಿವರು ಬರುವವರೆಗೆ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ಸಂಬಂಧ ಚರ್ಚೆ ಮುಂದುವರಿಸಬಹುದು ಎಂದು ಸಭಾನಾಯಕ ಎಸ್.ಆರ್. ಪಾಟೀಲ ಪ್ರಸ್ತಾವ ಮುಂದಿಟ್ಟರು. ಅದಕ್ಕೆ ವಿರೋಧ ಪಕ್ಷದ ಸದಸ್ಯರು ಸಮ್ಮತಿ ಸೂಚಿಸಲಿಲ್ಲ. `ಸಚಿವರನ್ನು ಕರೆಸುತ್ತೇವೆ. ಸ್ವಲ್ಪ ಕಾಲಾವಕಾಶ ಬೇಕು. ಕೆಳ ಸದನದಲ್ಲಿ ಕಾವೇರಿ ನದಿ ನೀರಿನ ವಿಷಯವಾಗಿ ಚರ್ಚೆ ನಡೆದಿದೆ. ಮುಖ್ಯಮಂತ್ರಿಗಳು ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವರು ಅಲ್ಲಿದ್ದಾರೆ' ಎಂದು ಪಾಟೀಲ ಹೇಳಿದರು.<br /> <br /> ಸಚಿವರ ಹೇಳಿಕೆಯಿಂದ ತೃಪ್ತರಾಗದ ಬಿಜೆಪಿ ಸದಸ್ಯರು ಸದಾನಂದಗೌಡ ಅವರ ನೇತೃತ್ವದಲ್ಲಿ ಸಭಾತ್ಯಾಗ ನಡೆಸಿದರು. `ಆದಷ್ಟು ಶೀಘ್ರ ಸಚಿವರನ್ನು ಸದನಕ್ಕೆ ಕರೆಸಬೇಕು' ಎಂದು ಆಡಳಿತ ಪಕ್ಷದ ಮುಖ್ಯ ಸಚೇತಕರಿಗೆ ಸೂಚನೆ ನೀಡಿದ ಸಭಾಪತಿಗಳು, ಕಲಾಪವನ್ನು 15 ನಿಮಿಷಗಳ ಕಾಲ ಮುಂದೂಡಿದರು.<br /> <br /> ಶಂಕರಮೂರ್ತಿ ಅವರು ಸಭಾಪತಿಗಳ ಪೀಠದಿಂದ ಹೊರನಡೆದ ಬೆನ್ನ ಹಿಂದೆಯೇ ಸಚಿವ ಎಚ್.ಕೆ. ಪಾಟೀಲ ಸದನಕ್ಕೆ ಬಂದರು. `ಎರಡು ನಿಮಿಷ ಮೊದಲು ಬಂದಿದ್ದರೆ ಚೆನ್ನಾಗಿತ್ತು' ಎಂದು ಮತ್ತಿಕಟ್ಟಿ ಮತ್ತಿತರರು ಸಚಿವರಿಗೆ ತಿಳಿಸಿದರು. ನಂತರ ಕಲಾಪ ಆರಂಭವಾದಾಗ ಸಚಿವರು, ತಾವು ಸದನಕ್ಕೆ ಬರಲು ತಡವಾಗಿದ್ದಕ್ಕೆ ಕ್ಷಮೆ ಕೋರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ದಿನದ ಕಾರ್ಯ ಕಲಾಪಗಳ ಪಟ್ಟಿಯಲ್ಲಿ ಚರ್ಚೆಗೆ ನಿಗದಿಯಾಗಿದ್ದ ವಿಷಯಗಳಿಗೆ ಉತ್ತರಿಸಲು ಸಂಬಂಧಿಸಿದ ಇಲಾಖೆಗಳ ಸಚಿವರಿಲ್ಲದ ಕಾರಣ ವಿಧಾನ ಪರಿಷತ್ ಕಲಾಪವನ್ನು 15 ನಿಮಿಷಗಳ ಕಾಲ ಮುಂದೂಡಿದ ಘಟನೆ ಗುರುವಾರ ನಡೆಯಿತು.<br /> <br /> ಕಾವೇರಿ ವಿಷಯವಾಗಿ ಚರ್ಚೆ ನಡೆಸಲು ಮುಖ್ಯಮಂತ್ರಿಗಳು ಸರ್ವಪಕ್ಷ ಮುಖಂಡರ ಸಭೆ ಕರೆದಿದ್ದ ಹಿನ್ನೆಲೆಯಲ್ಲಿ ಕಲಾಪ 45 ನಿಮಿಷ ವಿಳಂಬವಾಗಿ ಆರಂಭವಾಯಿತು. ಸಭೆ ಸೇರುತ್ತಿದ್ದಂತೆಯೇ ಸಭಾಪತಿ ಡಿ.ಎಚ್. ಶಂಕರಮೂರ್ತಿ ಕಲಾಪ ಆರಂಭಿಸಲು ಸನ್ನದ್ಧರಾದರು. ಆದರೆ, `ಸಚಿವರಿಲ್ಲದೆ ನಾವು ಯಾರಿಗೆ ಪ್ರಶ್ನೆ ಹಾಕುವುದು, ಉತ್ತರ ನೀಡುವವರು ಯಾರು' ಎಂದು ವಿರೋಧ ಪಕ್ಷದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.<br /> <br /> ಬಿಜೆಪಿ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ನಿಯಮ 330ರ ಅಡಿಯಲ್ಲಿ, ಸ್ಥಳೀಯ ಸಂಸ್ಥೆಗಳ ಸಬಲೀಕರಣದ ಪ್ರಸ್ತಾಪ ಮಾಡಲು ಅವಕಾಶ ಪಡೆದಿದ್ದರು. ಅಮರನಾಥ ಪಾಟೀಲ, ಹೈದರಾಬಾದ್-ಕರ್ನಾಟಕ ಭಾಗದ ನೀರಿನ ಸಮಸ್ಯೆ ಕುರಿತು ಗಮನ ಸೆಳೆಯುವ ಸೂಚನೆ ಮಂಡಿಸಿದ್ದರು. ಎರಡೂ ವಿಷಯಗಳಿಗೆ ಉತ್ತರ ನೀಡಬೇಕಾದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ಸದನಕ್ಕೆ ಗೈರು ಹಾಜರಾಗಿದ್ದರು.<br /> <br /> ಗುಟ್ಕಾ ನಿಷೇಧದ ಮೇಲೆ ನಡೆದ ಚರ್ಚೆಗೆ ಉತ್ತರ ನೀಡಬೇಕಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಸದನಕ್ಕೆ ಬಂದಿರಲಿಲ್ಲ. ಬೆಂಗಳೂರಿನ ಕಾಕ್ಸ್ಟೌನ್ನಲ್ಲಿ ಇರುವ ಆಟದ ಮೈದಾನದ ಕುರಿತು ಜೆಡಿಎಸ್ನ ಬಸವರಾಜ ಹೊರಟ್ಟಿ ಮಂಡಿಸಲಿದ್ದ ಗಮನ ಸೆಳೆಯುವ ಸೂಚನೆಗೂ ಮುಖ್ಯಮಂತ್ರಿಗಳೇ ಉತ್ತರಿಸಬೇಕಿತ್ತು.<br /> <br /> `ಸಾಕಷ್ಟು ಮುಂಚಿತವಾಗಿ ಕಲಾಪಗಳ ಪಟ್ಟಿ ತಯಾರು ಮಾಡಲಾಗಿದೆ. ಯಾವ ಸಚಿವರು, ಯಾವ ಸದನದಲ್ಲಿ ಇರಬೇಕು ಎಂಬುದೂ ನಿಗದಿಯಾಗಿದೆ. ಹೀಗಿದ್ದೂ ಪರಿಷತ್ ಕಲಾಪಕ್ಕೆ ಬಾರದೆ ನಿರ್ಲಕ್ಷ್ಯ ತೋರಿದ್ದು ಏಕೆ' ಎಂದು ವಿರೋಧ ಪಕ್ಷದ ನಾಯಕ ಡಿ.ವಿ. ಸದಾನಂದಗೌಡ, ಹೊರಟ್ಟಿ ಮತ್ತಿತರರು ಆಕ್ಷೇಪ ಎತ್ತಿದರು.<br /> <br /> `ಸಚಿವರು ಬರುವವರೆಗೆ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ಸಂಬಂಧ ಚರ್ಚೆ ಮುಂದುವರಿಸಬಹುದು ಎಂದು ಸಭಾನಾಯಕ ಎಸ್.ಆರ್. ಪಾಟೀಲ ಪ್ರಸ್ತಾವ ಮುಂದಿಟ್ಟರು. ಅದಕ್ಕೆ ವಿರೋಧ ಪಕ್ಷದ ಸದಸ್ಯರು ಸಮ್ಮತಿ ಸೂಚಿಸಲಿಲ್ಲ. `ಸಚಿವರನ್ನು ಕರೆಸುತ್ತೇವೆ. ಸ್ವಲ್ಪ ಕಾಲಾವಕಾಶ ಬೇಕು. ಕೆಳ ಸದನದಲ್ಲಿ ಕಾವೇರಿ ನದಿ ನೀರಿನ ವಿಷಯವಾಗಿ ಚರ್ಚೆ ನಡೆದಿದೆ. ಮುಖ್ಯಮಂತ್ರಿಗಳು ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವರು ಅಲ್ಲಿದ್ದಾರೆ' ಎಂದು ಪಾಟೀಲ ಹೇಳಿದರು.<br /> <br /> ಸಚಿವರ ಹೇಳಿಕೆಯಿಂದ ತೃಪ್ತರಾಗದ ಬಿಜೆಪಿ ಸದಸ್ಯರು ಸದಾನಂದಗೌಡ ಅವರ ನೇತೃತ್ವದಲ್ಲಿ ಸಭಾತ್ಯಾಗ ನಡೆಸಿದರು. `ಆದಷ್ಟು ಶೀಘ್ರ ಸಚಿವರನ್ನು ಸದನಕ್ಕೆ ಕರೆಸಬೇಕು' ಎಂದು ಆಡಳಿತ ಪಕ್ಷದ ಮುಖ್ಯ ಸಚೇತಕರಿಗೆ ಸೂಚನೆ ನೀಡಿದ ಸಭಾಪತಿಗಳು, ಕಲಾಪವನ್ನು 15 ನಿಮಿಷಗಳ ಕಾಲ ಮುಂದೂಡಿದರು.<br /> <br /> ಶಂಕರಮೂರ್ತಿ ಅವರು ಸಭಾಪತಿಗಳ ಪೀಠದಿಂದ ಹೊರನಡೆದ ಬೆನ್ನ ಹಿಂದೆಯೇ ಸಚಿವ ಎಚ್.ಕೆ. ಪಾಟೀಲ ಸದನಕ್ಕೆ ಬಂದರು. `ಎರಡು ನಿಮಿಷ ಮೊದಲು ಬಂದಿದ್ದರೆ ಚೆನ್ನಾಗಿತ್ತು' ಎಂದು ಮತ್ತಿಕಟ್ಟಿ ಮತ್ತಿತರರು ಸಚಿವರಿಗೆ ತಿಳಿಸಿದರು. ನಂತರ ಕಲಾಪ ಆರಂಭವಾದಾಗ ಸಚಿವರು, ತಾವು ಸದನಕ್ಕೆ ಬರಲು ತಡವಾಗಿದ್ದಕ್ಕೆ ಕ್ಷಮೆ ಕೋರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>